ಈ ರಾಶಿಯವರಿಗಿಂದು ಜೀವನ ಶೈಲಿಯು ಬದಲಾಗುವ ಪ್ರಸಂಗ ಕಂಡು ಬಂದೀತು!


Team Udayavani, Jun 5, 2021, 7:22 AM IST

ಈ ರಾಶಿಯವರಿಗಿಂದು ಜೀವನ ಶೈಲಿಯು ಬದಲಾಗುವ ಪ್ರಸಂಗ ಕಂಡು ಬಂದೀತು!

5-6-2021

ಮೇಷ: ಸಾಂಸಾರಿಕವಾಗಿ ಸಂಬಂಧಗಳು ಸಡಿಲಗೊಳ್ಳಲಿವೆ. ಪ್ರಬುದ್ಧರಾಗಿ ಚಿಂತಿಸಬೇಕಾಗುತ್ತದೆ. ವೃತ್ತಿರಂಗದಲ್ಲಿ ದಿನಗಳು ಸರಾಗವಾಗಿ ನಡೆದು ಹೋದರೂ ಕಿರಿಕಿರಿ ತಪ್ಪಲಾರದು. ವಿದ್ಯಾರ್ಥಿಗಳು, ನಿರುದ್ಯೋಗಿಗಳು ಚಿಂತಿಸಬೇಕಾಗುತ್ತದೆ.

ವೃಷಭ: ನಿಮಗೆ ಮಹತ್ವದ ದಿನಗಳಿವು. ಪ್ರೀತಿಪಾತ್ರರೊಂದಿಗೆ ಆತ್ಮೀಯವಾಗಿ ದಿನ ಕಳೆಯುವಂತಾದೀತು. ವೃತ್ತಿರಂಗದಲ್ಲಿ ನಾನಾ ರೀತಿಯಲ್ಲಿ ಸಮಸ್ಯೆಗಳು ತೋರಿಬಂದರೂ ಎದುರಿಸುವ ಛಾತಿ ನಿಮಗಿರುತ್ತದೆ. ವಿಶ್ವಾಸದಿಂದಿರಿ.

ಮಿಥುನ: ಗ್ರಹಗತಿಗಳು ನಿಮಗೆ ಪೂರಕವಾಗಿರುತ್ತದೆ. ಎಲ್ಲಾ ರೀತಿಯಲ್ಲಿ ಮುನ್ನಡೆ ಕಂಡುಬರುವುದು. ಆದರೆ ಅದನ್ನು ಗಿಟ್ಟಿಸಿಕೊಳ್ಳುವ ಯೋಗ ನಿಮಗೆ ಬೇಕು. ಖಾಸಗಿ ಬದುಕಿನಲ್ಲಿ ಸಣ್ಣಪುಟ್ಟ ನಿರಾಸೆಗಳು ಕಂಡುಬರಲಿದೆ.

ಕರ್ಕ: ಜೀವನ ಶೈಲಿಯು ಬದಲಾಗುವ ಪ್ರಸಂಗ ಕಂಡು ಬಂದೀತು. ನಿವೇಶನ ಖರೀದಿಯ ಕುರಿತು ಮಾತುಕತೆ ಈಗ ಬೇಡ. ನಿಮ್ಮ ಅಭಿವೃದ್ಧಿಗೆ ಪೂರಕವಾಗುವ ವಾತಾವರಣ ಕಂಡುಬರುತಿದೆ. ಸಾಮಾಜಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ.

ಸಿಂಹ: ಆಸಕ್ತಿದಾಯಕ ವ್ಯಕ್ತಿಗಳಿಂದ ಅನುಕೂಲದಾಯಕ ಕೆಲಸವಾಗಲಿದೆ. ಎಲ್ಲ ಕೆಲಸಕಾರ್ಯಗಳಲ್ಲಿ ಮುನ್ನಡೆಯಾದಾಗ ಯೋಜನೆಗಳನ್ನು ರೂಪಿಸಿರಿ. ಮೇಲಾಧಿಕಾರಿಗಳಿಂದ ಪ್ರಶಂಸೆ ಸಲ್ಲಲಿದೆ. ಭಡ್ತಿಯ ಸಂಭವವೂ ಇದೆ.

ಕನ್ಯಾ: ಸಾಂಸಾರಿಕ ಸಂಬಂಧಗಳು ನೀವು ಬಯಸಿದಂತೆ ಗಟ್ಟಿಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಗೆಳೆಯರಿಂದ ನೆರವು ಕಂಡು ಬರಲಿದೆ. ಆಸಕ್ತಿದಾಯಕ ವ್ಯಕ್ತಿಗಳಿಂದ ಅನುಕೂಲದಾಯಕ ಕೆಲಸವು ಆಗಲಿದೆ. ದೃಢ ಹೆಜ್ಜೆ ಇಟ್ಟು ಮುನ್ನಡೆಯಿರಿ.

ತುಲಾ: ಇತರರೊಂದಿಗೆ ವ್ಯವಹರಿಸುವಾಗ ಹೆಚ್ಚಿನ ಎಚ್ಚರಿಕೆ ಇಟ್ಟಲ್ಲಿ ತಪ್ಪುಗಳು ನಡೆಯದಾದಾವು. ದುಡುಕಿ ತಪ್ಪು ಹೆಜ್ಜೆ ಇಟ್ಟಲ್ಲಿ ಪ್ರತಿಕೂಲ ಪರಿಣಾಮವು ಉಂಟಾಗಲಿದೆ. ವೃತ್ತಿರಂಗದಲ್ಲಿ ಸಹನೆಯಿಂದ ಮುನ್ನಡೆಯಬೇಕು .

ವೃಶ್ಚಿಕ: ಪ್ರಮುಖ ವಿಷಯಗಳಲ್ಲಿ ನಿರ್ಧರಿಸುವ ಹಾಗೂ ವ್ಯಕ್ತಪಡಿಸುವುದರಲ್ಲಿ ಹಿಂಜರಿಕೆ ಮಾಡದಿರಿ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಉದಾಸೀನತೆಯನ್ನು ಬಿಡತಕ್ಕದ್ದು. ಕೌಟುಂಬಿಕವಾಗಿ ಯಾರೊಂದಿಗೂ ಸಂಘರ್ಷ ಬೇಡ.

ಧನು: ಅವಿವಾಹಿತರಿಗೆ ಆಗಾಗ ಹಿನ್ನಡೆ ತೋರಿಬಂದು ನಿರಾಶೆ ಮನೋಭಾವದಿಂದ ಮನಸ್ಸು ಮುದುಡಲಿದೆ. ಮಾನಸಿಕ ಚಿಂತನೆ ಹೆಚ್ಚು ಮಾಡದಿರಿ. ಧನಾತ್ಮಕವಾಗಿ ಆಲೋಚನೆ ಮಾಡಿರಿ. ಫ‌ಲಿತಾಂಶವು ಉತ್ತಮವಾಗಿರುತ್ತದೆ.

ಮಕರ: ಒಮ್ಮೊಮ್ಮೆ ಅತೀಯಾದ ವ್ಯಾಮೋಹವು  ಮಕ್ಕಳ ಬುದ್ಧಿಯನ್ನು ಕೆಡಿಸಲಿದೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ? ಎನ್ನುವಂತಾದೀತು. ಕೋಪದ ಕೈಗೆ ಬುದ್ಧಿ ಕೊಡದಿರಿ. ಕಾರ್ಯ ಒತ್ತಡದಿಂದ ಅಸಹನೆ ಕಾಡಬಹುದು.

ಕುಂಭ: ಚಿಂತೆಯು ಅತಿಯಾಗಿ ಮನಸ್ಸನ್ನು ಕಾಡಲಿದೆ. ಕೌಟುಂಬಿಕವಾಗಿ ಸಮಾಧಾನ, ವ್ಯವಧಾನ ಇಲ್ಲದ ವಾತಾವರಣವು ಕಂಡು ಬರಲಿದೆ. ಹಲವು ತೊಡಕುಗಳು ಕಂಡುಬಂದರೂ ನಿಧಾನವಾಗಿ ಎಲ್ಲವೂ ತಿಳಿಯಾದೀತು.

ಮೀನ: ಕಾರ್ಯರಂಗದಲ್ಲಿ ನೀವು ಹೊಂದಿರುವ ದೂರದೃಷ್ಟಿ ನಿಮ್ಮ ನೆರವಿಗೆ ಬರಲಿದೆ. ವಿರೋಧಿಗಳನ್ನು ಎದುರಿಸುವಾಗ ನಿಮ್ಮ ನಿಲುವು ದೃಢವಾಗಿರಲಿ. ಸ್ನೇಹಿತರೊಂದಿಗೆ ಜಗಳಕ್ಕೆ ಕಾರಣರಾಗದಿರಿ. ಆಕಸ್ಮಿಕ ಧನಾಗಮನವಿದೆ

 

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

1

Daily Horoscope: ಈ ರಾಶಿ ಅವರಿಗಿಂದು ಶುಭಫ‌ಲಗಳ ದಿನ

14

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.