ಇಂದಿನ ಗ್ರಹಬಲ: ಈ ರಾಶಿಯವರಿಂದು ಉತ್ತಮ ಧಾರ್ಮಿಕ ನಡವಳಿಕೆಯಿಂದಾಗಿ ಜನ ಸಂಪರ್ಕ ಗಳಿಸುವಿರಿ
Team Udayavani, Feb 13, 2021, 7:47 AM IST
13-02-2021
ಮೇಷ: ಮಾನಸಿಕವಾಗಿ ದುರ್ಬಲರಾಗಿ ಭಾವೋದ್ರೇಕಕ್ಕೆ ಅನಾವಶ್ಯಕವಾಗಿ ವಶವಾಗುತ್ತೀರಿ. ಅತಿಯಾದ ವಿಶ್ವಾಸವನ್ನು ತೋರಿಸುವುದು ಮುಖ್ಯವಲ್ಲ. ಕೈಗೊಳ್ಳುವ ಕೆಲಸಕಾರ್ಯಗಳಲ್ಲಿ ವೈಪರೀತ್ಯ ಹೆಚ್ಚು. ಮನಸ್ಸನ್ನು ಸರಿಯಾಗಿಟ್ಟುಕೊಳ್ಳಿ.
ವೃಷಭ: ಉತ್ತಮ ಸಂಸ್ಕಾರವನ್ನು ಹೊಂದಿ ಸಾತ್ವಿಕ ಮೇಧಾಶಕ್ತಿಯನ್ನು ಹೊಂದಿರುವ ನಿಮಗೆ ಜೀವನದಲ್ಲಿ ಹತ್ತು ಹಲವು ಬಗೆಯ ಕಷ್ಟಗಳು ಎದುರಾದಾವು. ಆದರೆ ಎದೆಗುಂದದಿರಿ. ವಿಶ್ವಾಸ, ಆತ್ಮಸ್ಥೈರ್ಯವು ನಿಮ್ಮನ್ನು ಮುನ್ನಡೆಸೀತು.
ಮಿಥುನ: ಮಾನಸಿಕವಾಗಿ ಪ್ರಬುದ್ಧರಾದ ನೀವು, ವಿದ್ಯಾರ್ಜನೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ನಿಮಗೆ ಹೆಚ್ಚಿನ ವಿದ್ಯೆಯು ತಗಲುವ ಭಾಗ್ಯವಿದೆ. ಉತ್ತಮ, ಭವ್ಯ ಭವಿಷ್ಯಕ್ಕಾಗಿ ಎದುರು ನೋಡುವಿರಿ. ಆರೋಗ್ಯವು ಉತ್ತಮವಿದೆ.
ಕರ್ಕ: ಸಂಕಷ್ಟದಲ್ಲಿರುವವರಿಗೆ ಸಹಕಾರ, ಸಹಾಯ ನೀಡುವ ನಿಮಗೆ ಕೆಲವು ಸಮಸ್ಯೆಗಳು ಕಾಡುತ್ತಿರುತ್ತದೆ. ಆದರೆ ಸಮಸ್ಯೆ ಹೇಗೆ ಬರುವುದೋ ಹಾಗೇ ಹಿಂತಿರುಗಲಿದೆ. ಮಕ್ಕಳ ವಿದ್ಯೆಯ ಬಗ್ಗೆ ಹೆಚ್ಚಿನ ಚಿಂತೆ ಮಾಡದಿರಿ.
ಸಿಂಹ: ವಿಪರೀತ ಆತ್ಮಾಭಿಮಾನ ಹಾಗೂ ಆತ್ಮಸ್ಥೈರ್ಯ ದಿಂದ ಬೃಹತ್ ಕಾರ್ಯಗಳನ್ನು ಏಕಾಂಗಿಯಾಗಿ ಮಾಡಲು ಯತ್ನಿಸುವಿರಿ. ಅದರಲ್ಲಿ ಜಯ ಗಳಿಸುವಿರಿ. ಕೆಲವೊಮ್ಮೆ ಕಷ್ಟಗಳನ್ನು ಎದುರಿಸಿ ಕುಗ್ಗಿ ಹೋಗುವಿರಿ. ಎದೆಗುಂದದಿರಿ.
ಕನ್ಯಾ: ಉತ್ತಮ ಧಾರ್ಮಿಕ ನಡವಳಿಕೆಯಿಂದಾಗಿ ಜನ ಸಂಪರ್ಕ ಗಳಿಸುವಿರಿ. ಅತ್ಯಂತ ಕಡಿಮೆ ಗೆಳೆಯರನ್ನು ಹೊಂದಿರುವ ನಿಮಗೆ ಯಾರ ಮೇಲೂ ವಿಶ್ವಾಸವಿರದು. ಸಂಶಯಪ್ರವೃತ್ತಿಯಿಂದ ಕೆಡುವಿರಿ. ಜಾಗ್ರತೆ ಮಾಡಿರಿ.
ತುಲಾ: ಚುರುಕು ಗ್ರಹಣಶಕ್ತಿ ಹೊಂದಿರುವ ನೀವು ಬೇಡದ ವಿಚಾರಗಳನ್ನು ಮನಸ್ಸಿಗೆ ತಂದುಕೊಂಡು ಮಾನಸಿಕವಾಗಿ ಪರದಾಡುವಿರಿ. ಪ್ರತಿಯೊಂದನ್ನೂ ತೂಗಿ ಅಳೆಯುವ ಪ್ರವೃತ್ತಿ ಬಿಟ್ಟುಬಿಡಿರಿ. ಸಾವಕಾಶವಾಗಿ ಇದ್ದರೆ ಉತ್ತಮ.
ವೃಶ್ಚಿಕ: ಜೀವನದಲ್ಲಿ ಉತ್ತೇಜನವನ್ನು ಕೊಡದಿದ್ದರೆ ಆಕಾಶವೇ ತಲೆ ಮೇಲೆ ಬಿದ್ದಂತೆ ಕೈಕಟ್ಟಿ ಕುಳಿತು ಕೊಳ್ಳದಿರಿ. ಹಾಗೂ ಮಾನಸಿಕವಾಗಿ ಕುಗ್ಗದಿರಿ. ಉತ್ಸಾಹದಿಂದ ಮುನ್ನಡೆದರೆ ಕಾರ್ಯಸಿದ್ಧಿಯಾಗಲಿದೆ. ಶುಭವಾರ್ತೆ ಇದೆ.
ಧನು: ವಿವಾಹದ ನಂತರ ನಿಮಗೆ ಎಲ್ಲಾ ರೀತಿಯ ಸಕಲ ಸೌಭಾಗ್ಯಗಳ ಯೋಗ ಮೂಡಿ ಬಂದು ದೈವಾನುಗ್ರಹವಾಗಲಿದೆ. ಪತ್ನಿಯ ಉದ್ಯೋಗದ ತಲೆಬಿಸಿಯು ಕಡಿಮೆಯಾಗಲಿದೆ. ಉತ್ತಮ ನಿರೀಕ್ಷೆಯನ್ನು ಮಾಡಿರಿ.
ಮಕರ: ಎಲ್ಲವನ್ನು ಸಮಭಾವದಿಂದ ಸ್ವಿಕರಿಸಿದ್ದಲ್ಲಿ ನೀವು ಧನ್ಯರಾದೀರಿ. ಇಲ್ಲದಿದ್ದಲ್ಲಿ ತಲೆಬಿಸಿ ತಪ್ಪದು. ನಿಮ್ಮ ಎಣಿಕೆಗೆ ವಿರೋಧವಾಗಿ ನಡೆಯುವುದರಿಂದ ಆಶಾಭಂಗದ ಅನುಭವವಾದೀತು. ಚಿಂತಿಸದೆ ಮುನ್ನಡೆಯಿರಿ.
ಕುಂಭ: ಮಕ್ಕಳ ಮೇಧಾಶಕ್ತಿಯಲ್ಲಿ ಅಪಾರ ನೀರೀಕ್ಷೆ ಇಟ್ಟುಕೊಂಡ ನಿಮಗೆ ಆಶಾಭಂಗವಾದೀತು. ಸಕಾಲಕ್ಕೆ ಮಿತ್ರರ ಸಹಾಯ ಒದಗಿ ಬಂದೀತು. ದ್ರವ್ಯ ವಸ್ತುಗಳ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದ್ದರೂ ಅಷ್ಟೇ ಖರ್ಚಿದೆ.
ಮೀನ: ವ್ಯವಹಾರದಲ್ಲಿ ಹೆಚ್ಚಿನ ಲಾಭ ಬಂದರೂ ವಂಚನೆಗೆ ಅವಕಾಶ ತಂದೀತು. ಯಾವುದೇ ವಿಚಾರದಲ್ಲಿ ಕಾದು ನೋಡುವ ಪ್ರವೃತ್ತಿ ರೂಢಿಸಿಕೊಳ್ಳಿರಿ. ತಟ್ಟನೆ ಯಾವುದಕ್ಕೂ ಉತ್ತರಿಸದಿರಿ. ಉದ್ವೇಗವು ನಿಮಗೆ ಒಳ್ಳೆಯದಲ್ಲ
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?