ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಅಷ್ಟಮದ ರಾಹು ನಾನಾ ರೀತಿಯ ಕಿರಿಕಿರಿಗೆ ಕಾರಣನಾದಾನು.
Team Udayavani, Feb 27, 2021, 7:40 AM IST
27-02-2021
ಮೇಷ: ವೃತ್ತಿರಂಗದಲ್ಲಿ ಆಗಾಗ ಭಿನ್ನಾಭಿಪ್ರಾಯಗಳು ಕಂಡುಬಂದಾವು. ತಾಳ್ಮೆ ಸಂಯಮದಿಂದ ಬಗೆಹರಿಸಿ ಕೊಳ್ಳಿರಿ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಕಂಡುಬಂದೀತು.
ವೃಷಭ: ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ. ಶುಭ ಮಂಗಲ ಕಾರ್ಯಗಳಿಂದ ಮನಸ್ಸಿಗೆ ಶಾಂತಿ, ಸಮಾಧಾನವು ದೊರಕಲಿದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲವು ದೊರಕಲಿದೆ. ಆರ್ಥಿಕವಾಗಿ ಖರ್ಚುವೆಚ್ಚಗಳೇ ಹೆಚ್ಚಾಗಿರುತ್ತವೆ.
ಮಿಥುನ: ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸಿರಿ. ವೃತ್ತಿರಂಗದಲ್ಲಿ ಒತ್ತಡಗಳಿಂದ ಸಮಾಧಾನವು ಸಿಗಲಾರದು. ಶುಭ ಮಂಗಲ ಕಾರ್ಯಗಳ ಚಿಂತನೆ ಮುಂದೂಡಲಿವೆ. ದೈಹಿಕವಾಗಿ ಹೆಚ್ಚಿನ ಗಮನಹರಿಸಿರಿ. ದಿನಾಂತ್ಯ ಅತಿಥಿಗಳು ಬಂದಾರು.
ಕರ್ಕ: ದೇವತಾನುಗ್ರಹದಿಂದ ನಿರೀಕ್ಷಿತ ಕಾರ್ಯಸಾಧನೆಯಾದೀತು. ವಿದ್ಯಾರ್ಥಿಗಳು ತಮ್ಮ ಪರಿಶ್ರಮಕ್ಕೆ ತಕ್ಕ ಫಲವನ್ನು ಪಡೆಯಲಿದ್ದಾರೆ. ಕಾರ್ಮಿಕ ವರ್ಗದವರಿಗೆ ಉತ್ತಮ ಫಲವಿದೆ. ವಾಹನ ಸಂಚಾರದಲ್ಲಿ ಜಾಗ್ರತೆ ವಹಿಸಿರಿ. ಶುಭವಿದೆ.
ಸಿಂಹ: ಉದ್ಯೋಗ ವ್ಯವಹಾರದಲ್ಲಿ ಮುನ್ನಡೆ ಇರುತ್ತದೆ. ಮನೆಯಲ್ಲಿ ಶುಭಮಂಗಲ ಕಾರ್ಯಗಳು ನಡೆಯಲಿವೆ. ಜಾಗ ಯಾ ನಿವೇಶನ ಖರೀದಿಗೆ ಈಗ ಉತ್ತಮ ಕಾಲವಾಗಿದೆ. ಆರ್ಥಿಕವಾಗಿ ಎಷ್ಟು ದುಡಿದರೂ ಸಾಲದೆಂಬಂತಿರುತ್ತದೆ.
ಕನ್ಯಾ: ಉದ್ಯೋಗಸ್ಥರಿಗೆ ಅಡೆತಡೆಗಳು ಕಂಡುಬಂದಾವು. ಸಾಂಸಾರಿಕವಾಗಿ ನೆಮ್ಮದಿಯ ಜೀವನವಿರುತ್ತದೆ. ಉದ್ಯೋಗಸ್ಥ ಮಹಿಳೆಯರಿಗೆ ಮುಂಭಡ್ತಿ ಯೋಗವಿದೆ. ಕೋರ್ಟುಕಚೇರಿಯ ಕಾರ್ಯಭಾಗದಲ್ಲಿ ಹಿನ್ನಡೆ ಕಂಡುಬರಲಿದೆ.
ತುಲಾ: ಈಗ ನಿಮಗೆ ಮಿಶ್ರಫಲದಾಯಕ ವಾತಾವರಣ. ಅಷ್ಟಮದ ರಾಹು ನಾನಾ ರೀತಿಯ ಕಿರಿಕಿರಿಗೆ ಕಾರಣನಾದಾನು. ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಇರುತ್ತದೆ. ದೈಹಿಕ ವಾಗಿ ಆರೋಗ್ಯದ ಬಗ್ಗೆ ಗಮನಹರಿಸಿರಿ. ವಿದ್ಯಾರ್ಥಿಗಳಿಗೆ ಅಶುಭ.
ವೃಶ್ಚಿಕ: ಅಡೆತಡೆಗಳಿಂದ ಕಾರ್ಯಸಾಧನೆಯಾಗಲಿದೆ. ಮನೆಯ ವಾತಾವರಣ, ಸಾಂಸಾರಿಕ ಜೀವನ ಉತ್ತಮವಿರುತ್ತದೆ. ಕೂಲಿ ಕಾರ್ಮಿಕರಿಗೆ ಉತ್ತಮ ಆದಾಯವಿರುತ್ತದೆ. ರೈತ ವರ್ಗದವರಿಗೂ ಉತ್ತಮ ಫಲ ದೊರಕೀತು.
ಧನು: ವೃತ್ತಿರಂಗದಲ್ಲಿ ಮುನ್ನಡೆಯ ದಿನಗಳಿವು. ಆದರೂ ಹಿರಿಯ ಅಧಿಕಾರಿಗಳ ಕಿರಿಕಿರಿ ಮನಸ್ಸನ್ನು ನೋಯಿಸಲಿದೆ. ವಿದ್ಯಾರ್ಥಿಗಳು ವಿದ್ಯಾಸಂಪನ್ನರಾದಾರು. ಉತ್ತಮ ಫಲಿತಾಂಶವನ್ನು ಪಡೆಯಲಿದ್ದಾರೆ. ದೂರ ಸಂಚಾರವಿದೆ.
ಮಕರ: ಅನಿರೀಕ್ಷಿತವಾಗಿ ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ. ನ್ಯಾಯಾಲಯದ ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿ ಯಶಸ್ಸು ಪಡೆಯಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಗಮನಹರಿಸಬೇಕಾದೀತು. ಕಿರು ಸಂಚಾರವಿದೆ.
ಕುಂಭ:ಕೆಲಸ ಕಾರ್ಯಗಳು ನಿರೀಕ್ಷಿತ ರೀತಿಯಲ್ಲಿ ಆಗಲಾರದು. ಸಾಂಸಾರಿಕ ಜೀವನವು ಅಸ್ತವ್ಯಸ್ತ ವಾದೀತು. ಕ್ರೀಡಾಗಾರರಿಗೆ ಯಶಸ್ಸು ಕಂಡುಬರಲಿದೆ. ದೂರ ಸಂಚಾರದಲ್ಲಿ ಆರೋಗ್ಯ ಕೆಡಲಿದೆ. ವಿದ್ಯಾರ್ಥಿಗಳಿಗೆ ಯಶಸ್ಸಿದೆ.
ಮೀನ: ಆಗಾಗ ಅಡೆತಡೆಗಳಿಗೆ ನಿಮ್ಮ ಉದಾಸೀನವೇ ಕಾರಣವಾಗಲಿದೆ. ಬಂದ ಅವಕಾಶವನ್ನು ಪಡೆದು ಕೊಳ್ಳಿರಿ. ಅನಿರೀಕ್ಷಿತ ದೂರ ಸಂಚಾರದ ಯೋಗವಿದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಹೊಂದಲಿದ್ದಾರೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?