Daily Horoscope: ಮನೋಬಲ ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿರಿ
Team Udayavani, Feb 20, 2024, 7:44 AM IST
ಮೇಷ: ಏಕಕಾಲದಲ್ಲಿ ಅನೇಕ ಬಗೆಯ ಕಾರ್ಯ ಗಳ ಒತ್ತಡ. ಉದ್ಯೋಗಸ್ಥರ ಮುನ್ನಡೆಗೆ ಯಾವುದೇ ಅಡ್ಡಿಯಿಲ್ಲ.ಸ್ವಂತ ವ್ಯವಹಾರಸ್ಥರಿಗೆ ಗ್ರಾಹಕರ ಅಪೇಕ್ಷೆಗಳ ಈಡೇರಿಕೆಯ ಸಮಸ್ಯೆ. ಆಪ್ತರಿಂದ ಅಪೇಕ್ಷಿತ ನೆರವು ವಿಳಂಬ. ಮನೆಯಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ.
ವೃಷಭ: ಉದ್ಯೋಗಸ್ಥರಿಗೆ ನೆಮ್ಮದಿಯ ದಿನ. ವ್ಯವಹಾರ ಕ್ಷೇತ್ರದಲ್ಲಿ ಕೊಂಚ ಕಿರಿಕಿರಿಯಾದರೂ ಆದಾಯಕ್ಕೆ ಕೊರತೆಯಾಗದು. ಹೊಸ ಗ್ರಾಹಕರು ಸಂಪರ್ಕಕ್ಕೆ ಬರುವ ನಿರೀಕ್ಷೆಯಿದೆ. ವ್ಯವಹಾರ ಕ್ಷೇತ್ರ ವಿಸ್ತರಣೆಗೆ ಚಿಂತನೆ.
ಮಿಥುನ: ಮನೋಬಲವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿರಿ. ಗುರುಕೃಪೆ ಹಾಗೂ ದೈವಾನುಗ್ರಹ ಉತ್ತಮ. ಉದ್ಯೋಗದಲ್ಲಿ ಆದಾಯ ಸ್ಥಿರ. ವ್ಯವಹಾರದಲ್ಲಿ ಪುಟ್ಟ ಏರುಪೇರುಗಳಾಗಬಹುದಾದರೂ ಆತಂಕ ಗೊಳ್ಳಬೇಕಾದ ಪ್ರಮೇಯವಿಲ್ಲ.
ಕರ್ಕಾಟಕ: ಮನೆಯಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ. ಉದ್ಯೋಗಸ್ಥರಿಗೆ ನೆಮ್ಮದಿಯ ದಿನ. ವ್ಯವಹಾರಸ್ಥರ ಪ್ರಗತಿ ನಿಧಾನವಾದರೂ ಸ್ಥಿರವಾದ ಆದಾಯಕ್ಕೆ ಕೊರತೆಯಾಗದು. ಸರಕಾರಿ ನೌಕರರ ಉದ್ಯೋಗದಲ್ಲಿ ಏರುಪೇರು.
ಸಿಂಹ: ಹಿರಿಯರು ತಮ್ಮ ಆರೋಗ್ಯದ ಕಡೆಗೆ ತಾವೇ ಗಮನ ಹರಿಸುವುದು ಅಗತ್ಯ. ನಿತ್ಯದ ಜಂಜಾಟಗಳಿಗೆ ಸ್ವಲ್ಪ ವಿರಾಮ ಸಿಕ್ಕಿದಂತೆ ಅನಿಸಿದರೂ ಕ್ರಿಯೆಯಲ್ಲಿರುವುದು ಅನಿವಾರ್ಯ. ದೂರದ ಆಪ್ತರಿಗೆ ಸಹಾಯ ಮಾಡುವ ಅವಕಾಶ.
ಕನ್ಯಾ: ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಪ್ರಾಪ್ತಿ. ಸ್ವಯಂ ಉದ್ಯೋಗಿಗಳಿಗೆ ಮಂದಗತಿಯ ಪ್ರಗತಿ.ರಾಜಕೀಯ ರಂಗಕ್ಕೆ ಪ್ರವೇಶಿಸಲು ಆಸಕ್ತಿ. ಆರ್ಥಿಕ ಮುಗ್ಗಟ್ಟಿಗೆ ತಾತ್ಕಾಲಿಕ ಪರಿಹಾರ. ತಪ್ಪು ಸಲಹೆ ನೀಡುವವರ ಬಗ್ಗೆ ಎಚ್ಚರ.
ತುಲಾ: ಕಾಗದದ ಹುಲಿಗಳಿಗೆ ಹೆದರಬೇಡಿ. ಸ್ವಾವಲಂಬನೆ ಸಾಧಿಸುವ ಗುರಿ ಗಟ್ಟಿಯಾಗಿದ್ದರೆ ಯಶಸ್ಸು ಖಂಡಿತ. ಅನಿರೀಕ್ಷಿತ ಧನಪ್ರಾಪ್ತಿಯ ಯೋಗವಿದೆ. ಉದ್ಯೋಗಸ್ಥರಿಗೆ ತಾತ್ಕಾಲಿಕ ನೆಮ್ಮದಿ. ಕಟ್ಟಡ ನಿರ್ಮಾಣ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ.
ವೃಶ್ಚಿಕ: ಆರೋಗ್ಯ ಸುಧಾರಣೆ.ಹೊಸ ಕಾರ್ಯಕ್ಷೇತ್ರದ ಅನ್ವೇಷಣೆಯಲ್ಲಿ ಯಶಸ್ಸು. ದೂರದ ಬಂಧುಗಳ ಅನಿರೀಕ್ಷಿತ ಆಗಮನ. ನೂತನ ವಸ್ತ್ರ, ಆಭರಣ ಖರೀದಿಯ ಸಂಭ್ರಮ. ಬಂಧು ವರ್ಗದಲ್ಲಿ ಶುಭಕಾರ್ಯದ ತಯಾರಿ.
ಧನು: ಕಾಲೆಳೆಯಲು ಕಾಯುತ್ತಿರುವ ಶಕ್ತಿಗಳ ಬಗ್ಗೆ ಎಚ್ಚರ. ಜಾಣ್ಮೆ, ತಾಳ್ಮೆಗಳಿಂದ ವ್ಯವಹರಿಸಿದರೆ ಯಶಸ್ಸು ಖಂಡಿತ. ಹೊಸ ಪಾಲುದಾರಿಕೆ ವ್ಯವಹಾರಗಳಲ್ಲಿ ಆಸಕ್ತಿ ತೋರದಿರಿ. ಸಂಗೀತ ಶ್ರವಣದ ಮೂಲಕ ಶಾಂತಿಯನ್ನು ಅನುಭವಿಸಿರಿ.
ಮಕರ: ಅಪೇಕ್ಷಿತ ಕಾರ್ಯ ನಿಧಾನವಾದರೂ ಯಶಸ್ಸು ಖಂಡಿತ.ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದ ಒತ್ತಡ.ಸಹೋದ್ಯೋಗಿಗಳಿಂದ ಸಹಕಾರ. ನಿಗದಿತ ಸಮಯದಲ್ಲಿ ನಿರೀಕ್ಷಿತ ಗುರಿ ಮುಟ್ಟುವ ತರಾತುರಿ.
ಕುಂಭ: ಸದಾ ಚಟುವಟಿಕೆಯಲ್ಲಿರುವವರನ್ನು ಕೈಬೀಸಿ ಕರೆಯುವ ಅವಕಾಶಗಳ ಸರಮಾಲೆ. ನಿಯಮ ಪಾಲನೆಯ ಮೂಲಕ ಆರೋಗ್ಯ ರಕ್ಷಣೆಗೆ ಮುಂದಾಗಿ. ನೀವು ಆರಾಧಿಸುವ ದೇವರ ಕೃಪೆಯಿಂದ ದೀರ್ಘಕಾಲದ ಸಮಸ್ಯೆಯೊಂದರಿಂದ ಮುಕಿ.
ಮೀನ: ಬೆಟ್ಟದಂತೆ ಭಾಸವಾಗುವ ಸಮಸ್ಯೆಗಳು ಆಶ್ಚರ್ಯವಾಗುವಂತೆ ಮಾಯವಾಗುತ್ತವೆ. ಅಚಲ ನಿಷ್ಠೆಯ ಧ್ಯಾನದಿಂದ ಕಾರ್ಯಗಳು ಸುಗಮ. ಉದ್ಯೋಗಸ್ಥರಿಗೆ ತಾತ್ಕಾಲಿಕ ವಿರಾಮ. ಸ್ವಂತ ವ್ಯವಹಾರ ನಡೆಸುತ್ತಿರುವವರಿಗೆ ಮುಂದಿನ ಕಾರ್ಯದ ಪೂರ್ವಸಿದ್ಧತೆಗಳ ಚಿಂತೆ.ಸಂಸಾರದಲ್ಲಿ ನೆಮ್ಮದಿ ಹಿರಿಯರ ಆರೋಗ್ಯ ಸ್ಥಿರ. ಮಕ್ಕಳಿಗೆ ಸಂಭ್ರಮದ ವಾತಾವರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ
Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ