Daily Horoscope: ಉದ್ಯೋಗದಲ್ಲಿ ದಿನಕ್ಕೊಂದು ಹೊಸ ಜವಾಬ್ದಾರಿ, ಮೇಲಧಿಕಾರಿಗಳ ಮೆಚ್ಚುಗೆ


Team Udayavani, Feb 9, 2024, 7:27 AM IST

1-24-friday

ಮೇಷ: ಒಂದೇ ಕ್ಷೇತ್ರದಲ್ಲಿ ಶ್ರಮವನ್ನು ಕೇಂದ್ರೀಕರಿಸುವುದರಿಂದ ನೂರಕ್ಕೆ ನೂರು ಯಶಸ್ಸು. ಹಳೆಯ ಸಮಸ್ಯೆ ಸುಲಭದಲ್ಲಿ ನಿವಾರಣೆ. ಉದ್ಯಮ ಅಭಿವೃದ್ಧಿಯ ವಿತ್ತ ಸಂಸ್ಥೆಯ ಪರ್ಯಾಪ್ತ ನೆರವು. ಕುಟುಂಬದ ಹಿರಿಯರ ಸಮ್ಮಿಲನ.

ವೃಷಭ: ನಿಧಾನಗತಿಯಲ್ಲಿ ಕಾರ್ಯ ಮುಂದುವರಿಸುವುದರಿಂದ ಯಶಸ್ಸು ಪ್ರಾಪ್ತಿ. ಹಿತಶತ್ರುಗಳ ಬಾಧೆಯಿಂದ ಪಾರಾಗುವ ಮಾರ್ಗವನ್ನು ಹುಡುಕಿ. ಉದ್ಯೋಗ ಸ್ಥಾನದಲ್ಲಿ ಗೌರವದ ನೆಲೆ. ಉದ್ಯಮದಲ್ಲಿ ಪೈಪೋಟಿಯ ಸಮಸ್ಯೆ.

ಮಿಥುನ: ಸಂಸಾರದ ಸಂಬಂಧಗಳ ನಡುವೆ ಸಮತೋಲನ‌ವನ್ನು ಕಾಯ್ದುಕೊಳ್ಳುವ ಪ್ರಯತ್ನ. ಉದ್ಯೋಗದ ಸಮರ್ಪಕ ನಿರ್ವಹಣೆಗೆ ಮುಂದಾಗುವಿರಿ. ಆಪ್ತಮಿತ್ರರೊಡನೆ ಸಮಾಲೋಚನೆಯಿಂದ ಸಮಾಧಾನ. ಗೃಹಿಣಿಯರ ಉದ್ಯಮ ಪ್ರಗತಿ.

ಕರ್ಕಾಟಕ: ಹೊಸ ಹೊಸ ಚಿಂತೆಗಳನ್ನು ಸೃಷ್ಟಿಸುವುದನ್ನು ಬಿಡಿ. ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆಯ ವಾತಾವರಣ. ಕಾರ್ಯತತ್ಪರತೆಗೆ ಶ್ಲಾಘನೆ. ಉದ್ಯಮ ವಿಸ್ತರಣೆಗೆ ಚಿಂತನೆ. ಸಂಸಾರ ನಿರ್ವಹಣೆ ಸುಗಮ. ಮನೆಗೆ ಬಂದ ನೆಂಟರಿಗೆ ಹರ್ಷ.

ಸಿಂಹ: ನಡೆದು ಬಂದ ದಾರಿಯ ಅವಲೋಕನ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಸ್ವಂತ ಉದ್ಯಮ ಇನ್ನಷ್ಟು ಮುನ್ನಡೆ. ನೌಕರ ವೃಂದಕ್ಕೆ ಸಂತೃಪ್ತಿ. ಸಾಹಿತ್ಯಾಸಕ್ತರಿಗೆ ಸಂತೋಷ. ಹೊಸ ವಿದ್ಯೆಯನ್ನು ಕಲಿಯುವ ಹುಮ್ಮಸ್ಸು. ಕುಟುಂಬ ಕಲಹ ಪರಿಹಾರ.

ಕನ್ಯಾ: ಬದುಕಿನ ಜಂಜಾಟಗಳ ನಡುವೆ ಆನಂದ ವನ್ನು ಅರಸುವ ಪ್ರಯತ್ನ. ಹೊಸ ವ್ಯಕ್ತಿಗಳ ಪರಿಚಯ. ಉದ್ಯೋಗ ಸ್ಥಳದಲ್ಲಿ ಸ್ಥಿರ ಪರಿಸ್ಥಿತಿ. ಉದ್ಯಮ ಅಭಿವೃದ್ಧಿಗೆ ವಿತ್ತ ಸಂಸ್ಥೆಗಳ ನೆರವು. ತಳಮಳ ತೊಲಗಿಸಲು ಧ್ಯಾನ ಮಾರ್ಗದ ಅನುಸರಣೆ.

ತುಲಾ: ನೆಮ್ಮದಿ ಹುಡುಕುವ ಯತ್ನದಲ್ಲಿ ಯಶಸ್ವಿಯಾಗಿದ್ದೀರಿ. ಉದ್ಯೋಗದಲ್ಲಿ ಪ್ರತಿಭೆಗೆ ಗೌರವ ಸಲ್ಲಿಕೆ. ಹೊಸ ಸಹೋದ್ಯೋಗಿಗಳ ಸೇರ್ಪಡೆ. ಸರಕಾರಿ ನೌಕರರಿಗೆ ವರ್ಗಾವಣೆಯ ಚಿಂತೆ. ದೇವತಾರ್ಚನೆಯಿಂದ ಇಷ್ಟಾರ್ಥ ಸಿದ್ಧಿಗೆ ಪ್ರಯತ್ನ.

ವೃಶ್ಚಿಕ: ಪಾಲಿಗೆ ಬಂದ ಪಂಚಾಮೃತವನ್ನು ಸವಿಯುವ ಆನಂದ. ಉದ್ಯೋಗದಲ್ಲಿ ವೇತನ ವೃದ್ಧಿ. ಉದ್ಯಮದ ಕಾರ್ಯವ್ಯಾಪ್ತಿ ವಿಸ್ತರಣೆಗೆ ಹೊಸ ನೌಕರರ ಸೇರ್ಪಡೆ. ವೇತನ ವಿವಾದ ಪರಿಹಾರ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ, ವಿತರಕರಿಗೆ ಲಾಭ.

ಧನು: ನೋವುಗಳ ನಡುವೆ ನಲಿವಿನ ಅರಸುವಿಕೆಯಲ್ಲಿ ಉಳಿದವರಿಗೆ ಮಾದರಿಯಾಗಿದ್ದೀರಿ. ಉದ್ಯೋಗಿಗಳಿಗೆ ಗುರುಸ್ಥಾನ ಪ್ರಾಪ್ತಿ. ಕೃಷಿಯಲ್ಲಿ ಹೊಸ ಪ್ರಯೋಗ. ತರಕಾರಿ, ಹಣ್ಣು ವ್ಯಾಪಾರಿಗಳಿಗೆ ಲಾಭ ಮಧ್ಯಮ. ದೇವತಾ ಕ್ಷೇತ್ರಕ್ಕೆ ಅವಸರದ ಭೇಟಿ.

ಮಕರ: ಪರರ ನೋವನ್ನು ಅರಿತುಕೊಂಡು ವ್ಯವಹರಿಸಿದರೆ ಎಲ್ಲರಿಗೂ ಮಾದರಿಯಾಗುವ ವ್ಯಕ್ತಿತ್ವ. ಉದ್ಯೋಗ ನಿರ್ವಹಣ ಸಾಮರ್ಥ್ಯಕ್ಕೆ ಮೇಲಧಿಕಾರಿಗಳ ಮೆಚ್ಚುಗೆ. ಆಭರಣ ಖರೀದಿ. ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ಹಣ ಹೂಡಿಕೆ.

ಕುಂಭ: ಶಾಕ್‌ ಅಬಾÕರ್ಬರಿನಂತೆ ಹೊಡೆತ ಗಳನ್ನು ತಾಳಿಕೊಳ್ಳುವ ಸಾಮರ್ಥ್ಯ. ಉದ್ಯೋಗದಲ್ಲಿ ದಿನಕ್ಕೊಂದು ಹೊಸ ಜವಾಬ್ದಾರಿ. ಸ್ವಂತ ಉದ್ಯಮ ನಿರಾತಂಕ ಬೆಳವಣಿಗೆ. ಉತ್ಪನ್ನಗಳಿಗೆ ಹೊಸ ರೂಪ ಕೊಡಲು ಚಿಂತನೆ.

ಮೀನ: ಸಣ್ಣಪುಟ್ಟ ಸೋಲುಗಳಿಂದ ವಿಚಲಿತರಾಗದಿರಿ. ಉದ್ಯೋಗ ಸ್ಥಾನದಲ್ಲಿ ಜಯ ಹಾಗೂ ಕೀರ್ತಿ ಎರಡೂ ಲಭ್ಯ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನ. ಹಿರಿಯರ ಆಸ್ತಿ ಉಳಿಸಿ ಬೆಳೆಸಲು ದೈವಸಹಾಯ ಪ್ರಾಪ್ತಿ. ಸಣ್ಣ ಮಟ್ಟದಲ್ಲಿ ಕೃಷಿ ಆರಂಭಿಸಲು ಸಕಾಲ. ಲೇವಾದೇವಿ ವ್ಯವಹಾರದಿಂದ ದೂರವಿರಿ. ಕಟ್ಟಡ ನಿರ್ಮಾಣ ವ್ಯವಹಾರದಲ್ಲಿ ಆಸಕ್ತರಿಗೆ ಮಧ್ಯಮ  ಲಾಭ

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.