Daily Horoscope: ಉದ್ಯೋಗ ಬದಲಾವಣೆಯ ಯೋಚನೆ, ಸ್ವಂತ ಉದ್ಯಮದಲ್ಲಿ ಗಮನಾರ್ಹ ಪ್ರಗತಿ
Team Udayavani, Jan 30, 2024, 7:27 AM IST
ಮೇಷ: ಕಾರ್ಯರಂಗದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಲವಲವಿಕೆಯ ವಾತಾ ವರಣ. ಉದ್ಯಮಗಳ ನಡುವೆ ಉತ್ಪನ್ನಗಳ ಮಾರಾಟ ದಲ್ಲಿ ಪೈಪೋಟಿ. ವಿಸ್ತರಣಾ ಯೋಜನೆಗೆ ಬ್ಯಾಂಕ್ ನೆರವು. ಹಿರಿಯರ ಆರೋಗ್ಯದ ಕಡೆಗೆ ಗಮನ ಇರಲಿ.
ವೃಷಭ: ಉದ್ಯೋಗ ಬದಲಾವಣೆಯ ಯೋಚನೆ. ಸರಕಾರಿ ಅಧಿಕಾರಿಗಳಿಗೆ ದೂರದ ಊರಿಗೆ ವರ್ಗಾವಣೆ ಸಂಭವ. ಖಾಸಗಿ ರಂಗದ ಉತ್ಪಾದನೆ ಹೆಚ್ಚಳ. ಅಲ್ಪಾವಧಿಯ ಷೇರು ವ್ಯವಹಾರದಲ್ಲಿ ನಷ್ಟ. ದೇವತಾ ಸಾನ್ನಿಧ್ಯಕ್ಕೆ ಭೇಟಿ ಸಂಗೀತ ಶ್ರವಣದ ಅವಕಾಶ.
ಮಿಥುನ: ಹಿತಶತ್ರುಗಳು ಮತ್ತು ವಿಘ್ನ ಸಂತೋಷಿಗಳನ್ನು ದೂರವಿಡಿ. ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ. ಸ್ವಂತ ಉದ್ಯಮದ ಪ್ರಗತಿ ತೃಪ್ತಿಕರ. ಕೃಷ್ಯುತ್ಪನ್ನಗಳ ಮಾರಾಟದಿಂದ ಲಾಭ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣದ ಸಾಧ್ಯತೆ.
ಕರ್ಕಾಟಕ: ಪರಿಸ್ಥಿತಿ ನಿಭಾಯಿಸಲು ಶಕ್ತಿ ಉಳ್ಳವರಾಗಿದ್ದೀರಿ. ಉದ್ಯೋಗ ಸ್ಥಾನದಲ್ಲಿ ಪ್ರತಿಭೆ, ಅನುಭವಕ್ಕೆ ಪ್ರಾಶಸ್ತ್ಯ. ಉದ್ಯಮದ ಉತ್ಪಾದನೆಗಳ ಗುಣಮಟ್ಟ ಸುಧಾರಣೆ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ.
ಸಿಂಹ: ನಿಧಾನವಾದರೂ ನಿಲ್ಲದ ಪ್ರಗತಿ. ಉದ್ಯೋಗಸ್ಥರಿಗೆ ಸಂತೃಪ್ತಿಯ ಭಾವನೆ. ಗ್ರಾಹಕರ ಪ್ರಚಾರದಿಂದ ವ್ಯಾಪಾರಕ್ಕೆ ಪೋಷಣೆ. ಕಟ್ಟಡ ನಿರ್ಮಾಣ ಕಂಟ್ರಾಕ್ಟರರಿಗೆ ಕಾರ್ಮಿಕರ ಸಮಸ್ಯೆ. ನಿವೇಶನ ಖರೀದಿ ಮಾತುಕತೆ ಅಂತಿಮ.
ಕನ್ಯಾ: ಇಡೀ ದಿನದ ವ್ಯವಹಾರಗಳಲ್ಲಿ ಅರ್ಧಪಾಲು ನೆಮ್ಮದಿ. ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ಸ್ವಂತ ಉದ್ಯಮದಲ್ಲಿ ಗಮನಾರ್ಹ ಪ್ರಗತಿ, ಹೊಸ ನೌಕರರ ಸೇರ್ಪಡೆ. ಉದ್ಯೋಗಾಸಕ್ತರನ್ನು ಅರಸಿ ಬರುವ ಅವಕಾಶಗಳು.
ತುಲಾ: ಸಕಾಲದಲ್ಲಿ ಪರಿಹಾರಗೊಂಡ ಸಮ ಸ್ಯೆಗಳು. ಎಣಿಸದ ಮೂಲದಿಂದ ಧನಪ್ರಾಪ್ತಿ. ವಿತ್ತ ಸಂಸ್ಥೆಯ ನೆರವಿನಿಂದ ಉದ್ಯಮದ ಕಟ್ಟಡ ನವೀಕರಣ ಹಾಗೂ ವಿಸ್ತರಣೆ. ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳ ಖರೀದಿ. ಆರೋಗ್ಯ ಉತ್ತಮ.
ವೃಶ್ಚಿಕ: ಎಲ್ಲ ರೀತಿಯ ಸಂಕಟಗಳಿಂದ ವಿಮೋಚನೆ. ಉದ್ಯೋಗ ಸ್ಥಾನದಲ್ಲಿ ವಿಶ್ವಾಸ ವೃದ್ಧಿ. ಉದ್ಯಮ ಭರದಲ್ಲಿ ಮುನ್ನಡೆ. ಉತ್ಪನ್ನಗಳ ಗುಣಮಟ್ಟಕ್ಕೆ ಸಾಮಾಜಿಕರ ಶ್ಲಾಘನೆ. ಕೆಲವಡೆ ಮುಂದುವರಿದ ಹಬ್ಬದ ವಾತಾವರಣ.
ಧನು: ಕುಟುಂಬದೊಳಗಿನ ವೈಮನಸ್ಯ ತೊಲಗಿ ನೆಮ್ಮದಿ. ಉದ್ಯೋಗ ಸ್ಥಾನದಲ್ಲಿ ಸಜ್ಜ ನರ ಸದ್ಭಾವನೆಗೆ ಪಾತ್ರರಾಗುವಿರಿ. ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿ. ಕೃಷಿ ಭೂಮಿಯಲ್ಲಿ ಮುಂದು ವರಿದ ಪ್ರಯೋಗಗಳು.
ಮಕರ: ನ್ಯಾಯಾಲಯ ವ್ಯವಹಾರ ತೀರ್ಮಾನ ವಿಳಂಬ. ಉದ್ಯೋಗ ಸ್ಥಾನದಲ್ಲಿ ಬಹುಪಾಲು ನೆಮ್ಮದಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ನೂತನ ನಿವೇಶನ ಖರೀದಿ ಪ್ರಕ್ರಿಯೆ ಕೊನೆಯ ಹಂತದಲ್ಲಿ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ.
ಕುಂಭ: ಹೊಸ ಆದಾಯ ಮೂಲಗಳು ಗೋಚರ. ಸರಕಾರಿ ನೌಕರರಿಗೆ ಅನುಕೂಲ ವಾದ ವರ್ಗಾವಣೆ. ಕೆಲವು ಉದ್ಯಮಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಸೇವಾಕಾರ್ಯಗಳಲ್ಲಿ ಕೈಜೋಡಿಸಲು ಮನೆಮಂದಿಯ ಸಹಕಾರ.
ಮೀನ: ಶನಿಮಹಾತ್ಮನ ಅನುಗ್ರಹದಿಂದ ಧರ್ಮ ಮಾರ್ಗದಲ್ಲಿ ನಡೆಯಲು ಆಸಕ್ತಿ. ಉದ್ಯೋಗ ಸ್ಥಾನದಲ್ಲಿ ಅಜಾತಶತ್ರುತ್ವ. ಸರಕಾರಿ ಇಲಾಖೆ ನೌಕರರಿಂದ ಸಹಕಾರ. ಸೋದರಿಯ ಕುಟುಂಬದಲ್ಲಿ ಶುಭಕಾರ್ಯದ ಸಿದ್ಧತೆ. ದೇವಾಲಯದ ಅಭಿವೃದ್ಧಿ ಕಾರ್ಯ ಮುಂದುವರಿಕೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ
Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ