Daily Horoscope: ಆತಂಕದ ಕಾಲ ಕಳೆದು ನೆಮ್ಮದಿಯ ಪರ್ವ ಆರಂಭ, ಉದ್ಯೋಗದಲ್ಲಿ ಪ್ರತಿಭೆ


Team Udayavani, Mar 2, 2024, 7:27 AM IST

1-24-saturday

ಮೇಷ: ಸಪ್ತಾಹದ ಕೊನೆಯ ದಿನ. ಉದ್ಯೋಗಸ್ಥರಲ್ಲಿ ಕೆಲವರಿಗೆ ಅವಧಿಗೆ ಮೊದಲೇ ಕೆಲಸ ಮುಗಿದ ಸಮಾಧಾನವಿದ್ದರೆ ಇನ್ನು ಕೆಲವರಿಗೆ ಮುಗಿಸುವ ಆತುರ. ಉದ್ಯಮಗಳ ಪ್ರಗತಿಗೆ ಹಾನಿಯಿಲ್ಲ. ಮಹಿಳೆಯರ ಉದ್ಯಮ ಅಭಿವೃದ್ಧಿ.

ವೃಷಭ: ಸರ್ವತೋಮುಖ ಅಭಿವೃದ್ಧಿಯ ಲಕ್ಷಣಗಳು ಗೋಚರ. ಉದ್ಯೋಗಸ್ಥರು ಕರ್ತವ್ಯ ಪಾಲನೆಯಲ್ಲಿ ಯಶಸ್ವಿ. ಉದ್ಯಮಗಳ ಅಭಿವೃದ್ಧಿ ಅಬಾಧಿತ. ವಸ್ತ್ರ, ಸಿದ್ಧ ಉಡುಪುಗಳು ಹಾಗೂ ಪಾದರಕ್ಷೆ ವ್ಯಾಪಾರಿಗಳಿಗೆ ಹೇರಳ ಲಾಭ.

ಮಿಥುನ: ಆತಂಕದ ಕಾಲ ಕಳೆದು ನೆಮ್ಮದಿಯ ಪರ್ವ ಆರಂಭ. ಉದ್ಯೋಗದಲ್ಲಿ ಪ್ರತಿಭೆ, ಕಾರ್ಯಸಾಮರ್ಥ್ಯಕ್ಕೆ ಗೌರವ. ಕೃಷಿ ಕ್ಷೇತ್ರದಲ್ಲಿ ಮುಂದುವರಿದ ಬೆಳವಣಿಗೆ. ಧಾರ್ಮಿಕ ಸಾಹಿತ್ಯ ಅಧ್ಯಯನದಲ್ಲಿ ಆಸಕ್ತಿ.

ಕರ್ಕಾಟಕ: ಪ್ರತಿಭೆ ತೋರಲು ಸರಿಯಾದ ಪರಿಸರಕ್ಕೆ ಪ್ರವೇಶ. ಉದ್ಯೋಗ ಸ್ಥಾನದಲ್ಲಿ ಕ್ರಿಯೆಗೆ ಉತ್ತೇಜಿಸುವ ವಾತಾವರಣ. ಒಡೆಯರು- ನೌಕರರ ನಡುವೆ ಸಂಬಂಧ ಸುಧಾರಣೆ. ಪ್ರಾಪ್ತ ವಯಸ್ಕರಿಗೆ ವಿವಾಹ ನಿಶ್ಚಯ.

ಸಿಂಹ: ಎಲ್ಲ ವಿಭಾಗಗಳಲ್ಲೂ ಶಿಸ್ತುಬದ್ಧವಾಗಿ ಕಾರ್ಯ ನಿರ್ವಹಿಸಿದ ತೃಪ್ತಿ. ನಿಗದಿತ ಕಾರ್ಯಗಳು ಅವಧಿಗೆ ಮೊದಲೇ ಮುಕ್ತಾಯ. ಸರಕಾರಿ ನೌಕರರಿಗೆ ಹಿತಾನುಭವ. ಉದ್ಯಮಿ ಮಹಿಳೆಯರಿಗೆ ಸಂತೃಪ್ತಿಯ ವಾತಾವರಣ.

ಕನ್ಯಾ: ಎಲ್ಲ ಯೋಜನೆಗಳನ್ನೂ ಯಾವುದೇ ವಿಘ್ನವಿಲ್ಲದೆ ಸಕಾಲದಲ್ಲಿ ಅನುಷ್ಠಾನಕ್ಕೆ ತಂದ ತೃಪ್ತಿ. ಉದ್ಯೋಗ, ಉದ್ಯಮಗಳಲ್ಲಿ ಕಾರ್ಯನಿಷ್ಠೆಗೆ ಪ್ರತಿಫ‌ಲ. ಹೊಸ ಪರಿಚಿತರಿಂದ ಸಹಾಯ. ಮನೆಯ ವಾಸ್ತು ಸುಧಾರಣೆಗೆ ಕ್ರಮ. ಹಿರಿಯರ ಆರೋಗ್ಯ ಉತ್ತಮ.

ತುಲಾ: ಕಾರ್ಯಸಂಬಂಧ ದೂರ ಪ್ರಯಾಣ. ಉದ್ಯೋಗಸ್ಥರಿಗೆ ವಿಭಾಗ ಬದಲಾವಣೆ. ನಿಕಟ ಬಂಧುಗಳಿಂದ ಸಕಾಲದಲ್ಲಿ ಸಹಾಯ. ವಿವಾಹಾಸಕ್ತರಿಗೆ ಸಮರ್ಪಕ ಜೋಡಿ ಲಭಿಸುವ ಭರವಸೆ. ಆರೋಗ್ಯ ತಕ್ಕಮಟ್ಟಿಗೆ ಉತ್ತಮ.

ವೃಶ್ಚಿಕ: ಉದ್ಯೋಗ ಸ್ಥಾನದಲ್ಲಿ ಕಾರ್ಯ ಕ್ಷಮತೆಗೆ ವಿಶೇಷ ಮನ್ನಣೆ. ಉದ್ಯಮಗಳಲ್ಲಿ ಸೌಹಾರ್ದದ ವಾತಾವರಣ. ಲೇವಾದೇವಿ ವ್ಯವಹಾರ ದಿಂದ ಪ್ರತಿಕೂಲ ಪರಿಣಾಮ. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ.

ಧನು: ವಿವಿಧ ಮೂಲಗಳಿಂದ ವರಮಾನದಲ್ಲಿ ಏರಿಕೆ. ಉದ್ಯೋಗ ಸಂಬಂಧಿ ಕಾರ್ಯಗಳು ಅವಧಿಗೆ ಮೊದಲೇ ಮುಕ್ತಾಯ. ಪಾಲುದಾರಿಕೆ ಉದ್ಯಮ ಆರಂಭ. ಕೃಷಿ ಕ್ಷೇತ್ರದಲ್ಲಿ ಪ್ರಗತಿ ತೃಪ್ತಿಕರ. ವಸ್ತ್ರ ಶೋಕಿ ಪದಾರ್ಥ ವ್ಯಾಪಾರಿಗಳಿಗೆ ಆದಾಯ ಹೆಚ್ಚಳ.

ಮಕರ: ನಿರೀಕ್ಷಿಸಿದ್ದಕ್ಕಿಂತ ಸುಲಭವಾಗಿ ಕಾರ್ಯ ಸಾಧನೆ. ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ವೃತ್ತಿಪರರಿಗೆ ನಿಗದಿತ ಸಮಯಕ್ಕೆ ಕಾರ್ಯ ಮುಗಿಸಿದ ಸಮಾಧಾನ. ವಿದ್ಯುತ್‌ ಸಾಧನಗಳ ಖರೀದಿಗೆ ಧನವ್ಯಯ. ಹಿರಿಯರ ಆರೋಗ್ಯ ಸುಧಾರಣೆ.

ಕುಂಭ: ಸಹೋದ್ಯೋಗಿ ವೃಂದದ ಉತ್ತೇಜನದಿಂದ ಇನ್ನಷ್ಟು ಕಾರ್ಯಗಳಿಗೆ ಸಜ್ಜು. ಉದ್ಯಮದ ಉತ್ಪನ್ನಗಳಿಗೆ ಹಾಗೂ ಮುದ್ರಣ ಸಾಮಗ್ರಿಗಳಿಗೆ ವ್ಯಾಪಕ ಬೇಡಿಕೆ. ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭದ ಕಾಲ.

ಮೀನ: ಆಯೋಜಿತ ಕಾರ್ಯಗಳು ಶೀಘ್ರ ಮುಕ್ತಾಯ. ಹೊಸ ಸೇವೆಗಳನ್ನು ಆರಂಭಿಸಲು ಆಸಕ್ತಿ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನ. ಸಾಮಾಜಿಕ ರಂಗದಲ್ಲಿ ಗೌರವ ವೃದ್ಧಿ. ಕೃಷ್ಯುತ್ಪನ್ನಗಳ ಪ್ರಮಾಣ ವೃದ್ಧಿ. ಹಿರಿಯರ, ಸಂಗಾತಿಯ, ಮಕ್ಕಳ ಆರೋಗ್ಯ ವೃದ್ಧಿ. ವ್ಯಾಪಾರ ನಿಮಿತ್ತ ಪ್ರಯಾಣ ಸಂಭವ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.