ಗ್ರಹಬಲ: ಈ ರಾಶಿಯವರಿಗಿಂದು ಮಿತ್ರನಿಂದ ಸಹಾಯ ತೋರಿಬಂದು ಆಪತ್ಕಾಲದಲ್ಲಿ ರಕ್ಷಣೆ ಸಿಗಲಿದೆ
Team Udayavani, Jan 11, 2021, 7:55 AM IST
11-01-2021
ಮೇಷ: ಕಫ ದೋಷದಿಂದ ಯಾ ಉದರ ವ್ಯಾಧಿ ಯಾ ಅಜೀರ್ಣದ ಉಪದ್ರವದಿಂದ ನಿಮಗೆ ಆರೋಗ್ಯವು ಸರಿ ಇರದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಕೊರತೆ ಕಂಡುಬರಲಿದೆ. ಆದಾಯ ವೃದ್ಧಿ ಇದ್ದರೂ ಖರ್ಚು ಅಷ್ಟೇ ಕಂಡುಬರುವುದು.
ವೃಷಭ: ವಿಲಾಸೀ ಸಾಮಾಗ್ರಿಗಳ ಖರೀದಿ ಕಂಡುಬರುವುದು. ತರಕಾರಿ ವ್ಯಾಪಾರದವರಿಗೆ ಲಾಭ, ನಷ್ಟಗಳು ಸಮವಾಗಿರುವುದು. ಮತ್ಸೋದ್ಯಮದವರಿಗೆ ಪ್ರಗತಿ ಇದ್ದರೂ ವ್ಯಾಪಾರವು ಏಳುಬೀಳು ಕಂಡುಬರುವುದು.
ಮಿಥುನ: ಸುಖ, ಸಂತೋಷಗಳು ಇದ್ದು ಸಮೃದ್ಧಿ ಕಂಡುಬರುವುದು. ಯಾತ್ರಾಸ್ಥಳಗಳ ಭೇಟಿ ಮಾಡುವಿರಿ. ಕಫ ದೋಷವು ಕಂಡುಬರುವುದು. ಗೃಹ ನಿರ್ಮಾಣದಂತಹ ಕಾರ್ಯಕ್ಕೆ ಕೈ ಹಾಕುವಿರಿ. ಮುಂಭಡ್ತಿ ಇದೆ.
ಕರ್ಕ: ನಿರುದ್ಯೋಗಿಗಳಿಗೆ ಉದ್ಯೋಗ ದೊರೆತು ಸಮಾಧಾನವಾಗಲಿದೆ. ಕೆಲವು ಕೆಲಸಗಳು ಸಲೀಸಾಗಿ ನಡೆದುಹೋಗಲಿದೆ. ಕಾರ್ಯಕ್ಷೇತ್ರದಲ್ಲಿ ಮೇಲಾಧಿಕಾರಿಗಳಿಗೆ ಸಹಕಾರ ಲಭಿಸಲಿದೆ. ಹಗಲಿರುಳು ದುಡಿದರೂ ಲಾಭಾಂಶ ಕಡಿಮೆ.
ಸಿಂಹ: ಪ್ರಯಾಣದಲ್ಲಿ ಕಳ್ಳಕಾಕರ ಭೀತಿ ಕಂಡುಬರಲಿದೆ. ಕಾರ್ಯಬಾಹುಳ್ಯದಿಂದ ಚಿತ್ತಕ್ಷೋಭೆಯಾದೀತು. ಕೈಕೆಳಗಿನ ಕೆಲಸಗಾರರಿಂದ ಅಸಹಕಾರ ಕಂಡುಬಂದೀತು. ಹಣ್ಣು ಹಂಪಲು, ಸಿಹಿ ತಿಂಡಿ, ಪಾನೀಯದವರಿಗೆ ಲಾಭವಿದೆ.
ಕನ್ಯಾ: ಆಹಾರ ಧಾನ್ಯಗಳಿಂದ ಲಾಭಾಂಶ ಕಂಡುಬರುವುದು. ಕುಂಭಾರ, ಗುಡಿಕೈಗಾರಿಕೆಯವರಿಗೆ ಪ್ರೋತ್ಸಾಹ ದೊರಕಲಿದೆ. ಕಾಳು, ಸಾಂಬಾರು ಪದಾರ್ಥ ವ್ಯಾಪಾರಿಗಳಿಗೆ ಎಣಿಕೆಯಂತೆ ವ್ಯಾಪಾರ ನಡೆಯದು. ಶುಭವಿದೆ.
ತುಲಾ: ನೂತನ ಕಾರ್ಯಾರಂಭವು ವಿಘ್ನ ಭೀತಿಯಿಂದ ನಡೆದೀತು. ಆದರೆ ಧೈರ್ಯ, ಆತ್ಮವಿಶ್ವಾಸವು ನಿಮ್ಮನ್ನು ಕಾಪಾಡಲಿದೆ. ಚಿತ್ರೋದ್ಯಮ, ಸಂಗೀತ, ನರ್ತನ ಮುಂತಾದವುಗಳಿಗೆ ವಿಶೇಷ ಕೀರ್ತಿ, ಪುರಸ್ಕಾರ ಲಭಿಸಲಿದೆ.
ವೃಶ್ಚಿಕ: ಸಾಗರೋದ್ಯಮಿಗಳಿಗೆ ಸರಿಯಾದ ಲಾಭವಿರದು. ಕರಕುಶಲ ಕಲೆ, ಕಟ್ಟಡ ಸಾಮಾಗ್ರಿಗಳ ತಯಾರಿಕೆಗಳಿಗೆ ಹಾಗೂ ಯಂತ್ರ ಸ್ಥಾವರ ಕೆಲಸದವರಿಗೆ ಚೆನ್ನಾಗಿ ಆದಾಯ ಬರುವುದು. ಆರೋಗ್ಯ ಮಾತ್ರ ಹದಗೆಡಲಿದೆ ಜಾಗ್ರತೆ.
ಧನು: ಗಣಿ ಕೆಲಸಗಾರರಿಗೆ ಕಾರ್ಯದ ಒತ್ತಡ ಹೆಚ್ಚಲಿದೆ ಹೊರತು ಲಾಭವಿರದು. ಕಠಿಣ ಪರಿಶ್ರಮ ಕೈಗೊಂಡರೂ ಅಷ್ಟಕಷ್ಟೇ. ನ್ಯಾಯಾಲಯದಲ್ಲಿ ವಾದ ವಿವಾದಗಳು ಮುಗಿದಾವು. ಸಂಚಾರದಲ್ಲಿ ಜಾಗ್ರತೆ ಮಾಡಿರಿ.
ಮಕರ: ಪ್ರಯಾಣದಲ್ಲಿ ಆಯಾಸವು ಕಂಡುಬರಲಿದೆ. ಹಿರಿಯರಿಂದ ಅರ್ಥಿಕ ಲಾಭ ದೊರೆತು ಸಮಾಧಾನವಾಗಲಿದೆ. ಮನದನ್ನೆಯ ಮಾತು ಹಿತ ತರಲಿದೆ. ಅಧಿಕಾರಿ ವರ್ಗದಲ್ಲಿ ಭಿನ್ನಮತ ಕಂಡುಬಂದು ತಲೆಕೆಟ್ಟೀತು.
ಕುಂಭ: ಮನೆಯಲ್ಲಿ ತಂದೆಯ ಆರೋಗ್ಯ ಸುಧಾರಣೆಗಾಗಿ ಖರ್ಚು ಕಂಡುಬಂದೀತು. ಮಕ್ಕಳ ವಿದ್ಯೆಗಾಗಿ ಖರ್ಚು ತೋರಿಬರಲಿದೆ. ಮಿತ್ರನಿಂದ ಸಹಾಯ ತೋರಿಬಂದು ಆಪತ್ಕಾಲದಲ್ಲಿ ರಕ್ಷಣೆ ಸಿಗಲಿದೆ. ಪ್ರಯಾಣ ಕಂಡುಬಂದೀತು.
ಮೀನ: ರಕ್ಷಣೆ ಹಾಗೂ ಶಿಕ್ಷಣಾ ವರ್ಗದವರಿಗೆ ಕ್ಲೇಶ ಹೆಚ್ಚಲಿದೆ. ಎಣಿಕೆಯಂತೆ ಕಾರ್ಯಸಾಧನೆ ಇರುವುದಿಲ್ಲ. ಆರೋಗ್ಯವು ಸಾಮಾನ್ಯವಾಗಿರುವುದು. ಕಾರ್ಯಸಿದ್ಧಿ ಇರುವುದು. ಗೃಹದಲ್ಲಿ ಸಂತೋಷದ ಸಮಾರಂಭವಿದೆ.
ಎನ್.ಎಸ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ