ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ದೊಡ್ಡ ಜನರ ಸಹವಾಸದಿಂದ ನಷ್ಟ ಸಂಭವವಾಗಲಿದೆ
Team Udayavani, Feb 3, 2021, 7:44 AM IST
03-021-2021
ಮೇಷ: ವಿರೋಧಿಗಳಿಂದ ಉಪಟಳವು ಆಗಾಗ ಕಂಡುಬಂದು ಬೇಸರವಾಗಲಿದೆ. ಸ್ತ್ರೀ ಸಂಬಂಧ ಚಿಂತೆಯೂ, ಮಿತ್ರರಿಂದ ಹಿತವಚನ ಕಂಡುಬಂದು ಸಮಾಧಾನವಾಗಲಿದೆ. ಚಿತ್ತಚಾಂಚಲ್ಯವು ಕಾಡಲಿದೆ.
ವೃಷಭ: ಅಧಿಕ ಲಾಭವಿದ್ದರೂ ಅಷ್ಟೇ ಖರ್ಚು ಕಂಡು ಬರಲಿದೆ. ಉಳಿತಾಯ ಮಾಡಲು ಕಷ್ಟವಾಗ ಬಹುದು. ಹೊಸ ವಸ್ತ್ರಾಭರಣಗಳ ಖರೀದಿಯು ಕಂಡುಬಂದೀತು. ದೊಡ್ಡ ಜನರ ಸಹವಾಸದಿಂದ ನಷ್ಟವು ಸಂಭವವಾಗಲಿದೆ.
ಮಿಥುನ: ವ್ಯಾಪಾರ, ಉದ್ಯೋಗದಲ್ಲಿ ಅಲ್ಪ ಲಾಭವು, ಅಧಿಕ ಖರ್ಚು ಕಂಡುಬರಲಿದೆ. ಹಿತಶತ್ರುಗಳ ಕಾಟವು ಕಂಡುಬರುವುದು. ದೇಹಾರೋಗ್ಯವು ಉತ್ತಮವಿರುವುದು. ಪುಣ್ಯಕ್ಷೇತ್ರ ದರ್ಶನ, ಗುರುವಿನ ಅನುಗ್ರಹವು ತೋರಿಬರುವುದು.
ಕರ್ಕ: ಸರಕಾರೀ ಕೆಲಸಗಳು ವಿಫಲವಾಗಲಿದೆ. ಒತ್ತಡದ ಕೆಲಸಗಳಲ್ಲಿ ಕಾರ್ಯಸಿದ್ಧಿಯಾಗಲಿದೆ. ವ್ಯರ್ಥ ಚಿಂತೆಯು ಕಂಡುಬರಲಿದೆ. ವ್ಯಾಪಾರ, ವ್ಯವಹಾರದಲ್ಲಿ ಅಲ್ಪ ಅಭಿವೃದ್ಧಿ ಕಂಡುಬರಲಿದೆ. ವಿರೋಧಿಗಳಿಂದ ಉಪದ್ರವವಿದೆ.
ಸಿಂಹ: ಕೋರ್ಟು ಕಚೇರಿಯ ಕೆಲಸಗಳಲ್ಲಿ ಅಪಜಯ, ಅಪಮಾನವು ಇದ್ದೀತು. ಇಷ್ಟ ಕಾರ್ಯಗಳು ನಿಧಾನಗತಿ ಯಲ್ಲಿ ಸಾಗಲಿದೆ. ಮನಸ್ಸಿಗೆ ಸಂತಾಪವು, ಮನೋವ್ಯಥೆಯು, ಅಧಿಕ ತಿರುಗಾಟವು ದುಂದುವೆಚ್ಚವು ಕಂಡುಬರುವುದು.
ಕನ್ಯಾ: ಆರ್ಥಿಕ ಅಡಚಣೆಯು, ಸಾಲದ ಬಾಧೆಯು, ಉತ್ಪನ್ನಕ್ಕಿಂತ ಖರ್ಚು ಹೆಚ್ಚಾದೀತು. ನಾನಾರೀತಿಯಲ್ಲಿ ಸಮಸ್ಯೆಗಳು ಎದುರಾದವು. ಹಲವಾರು ರೀತಿಯಲ್ಲಿ ವ್ಯವಹಾರ ಕೈಗೊಳ್ಳುವುದರಿಂದ ಅಲ್ಪ ನೆಮ್ಮದಿಯು ಕಾಣಸಿಗುವುದು.
ತುಲಾ: ದೇಹಾರೋಗ್ಯ ಉತ್ತಮವೂ, ಉತ್ಸಾಹದಾಯಕವೂ ಆಗಲಿದೆ. ಸ್ವಜನ, ಪರಜನರೊಡನೆ ಪ್ರೀತಿವೃದ್ಧಿಯು, ಹೊಸ ವಸ್ತ್ರಾಭರಣ ಖರೀದಿಯು ನಡೆದೀತು. ವಾಹನ ಸಂಗ್ರಹ, ಪರೋಪಕಾರಗಳಲ್ಲಿ ಮನಸ್ಸು ಸಮಾಧಾನವಾಗಲಿದೆ.
ವೃಶ್ಚಿಕ: ಗೃಹದಲ್ಲಿ ಶುಭ ಶೋಭನಾದಿ, ಮಂಗಲಕಾರ್ಯಗಳು ಜರಗಲಿವೆ. ಮನಸ್ಸಿಗೆ ಸಂತೋಷವೂ, ವಿರೋಧಿಗಳಿಗೆ ಮುಖಭಂಗವಾಗಲಿದೆ. ಬಂಧುಮಿತ್ರರು ಸಹಾಯ ಹಾಗೂ ಸಹಕಾರ ನೀಡಲಿರುವರು. ಇಷ್ಟಕಾರ್ಯಗಳು ನೆರವೇರುವುದು.
ಧನು: ಸ್ತ್ರೀಯರಿಂದ ಧನಪ್ರಾಪ್ತಿಯೋಗವೂ, ಉದ್ಯೋಗ ಕ್ಷೇತ್ರದಲ್ಲಿ ಏಳಿಗೆಯೂ ಕಂಡುಬರುವುದು. ಸಾರ್ವಜನಿಕ ಕ್ಷೇತ್ರದಲ್ಲಿ ಮಾನ ಮನ್ನಣೆಯು ದೊರಕಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಮುಂದಾಳತ್ವ ವಹಿಸಿ ಸೈ ಎನಿಸಿಕೊಳ್ಳುವಿರಿ.
ಮಕರ: ಕೋರ್ಟುಕಚೇರಿ ಕಾರ್ಯಭಾಗದಲ್ಲಿ ಅಪಜಯ ಕಂಡುಬರುವುದು. ವ್ಯಾಪಾರ, ವ್ಯವಹಾರದಲ್ಲಿ ಧನಹಾನಿ ಯಾದೀತು. ಅಪವಾದವು ಕಾಡಲಿದೆ. ಸಿಟ್ಟಿನ ಭರದಲ್ಲಿ ಏನಾದರೊಂದು ಅವಿವೇಕದ ಕೆಲಸ ಮಾಡಿ ನಂತರ ಪಶ್ಚಾತ್ತಾಪ ಪಡುವಿರಿ.
ಕುಂಭ: ದಾನ, ಧರ್ಮ, ಪರೋಪಕಾರಗಳಲ್ಲಿ ಮನಸ್ಸು ನಿರಂತರ ಓಡಾಡುವುದು. ದುಷ್ಟಜನರಿಂದ ಹಾನಿ ಕಂಡುಬರುವುದು. ಸ್ತ್ರೀಸಂಬಂಧ ಚಿಂತೆಯು ಕಾಡಲಿದೆ. ವ್ಯರ್ಥ ಧನಹಾನಿ ಕಂಡುಬರುವುದು. ನೆಮ್ಮದಿಯ ಸಹಜೀವನವಿದೆ.
ಮೀನ: ಪ್ರಾಪಂಚಿಕ ಜೀವನದಲ್ಲಿ ನೆಮ್ಮದಿಯು ಕಂಡುಬರುವುದು. ದೇಹಾರೋಗ್ಯವು ಸುಧಾರಿಸಲಿದೆ. ಉತ್ಸಾಹವು, ಸಂತೋಷವು ಇದ್ದು ಗೃಹದಲ್ಲಿ ಮಂಗಲ ಕಾರ್ಯವು ಜರಗುವುದು. ಪುಣ್ಯಕ್ಷೇತ್ರಗಳ ಸಂದರ್ಶನ ಭಾಗ್ಯವಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ