ಇಂದಿನ ಗ್ರಹಬಲ: ಹೇಗಿದೆ ಇಂದಿನ ರಾಶಿ ಭವಿಷ್ಯ
Team Udayavani, Dec 24, 2020, 7:33 AM IST
24-12-2020
ಮೇಷ: ಸಾಂಸಾರಿಕವಾಗಿ ಕೆಲವೊಂದು ವಿಚಾರಗಳನ್ನು ಅನಾವಶ್ಯಕವಾಗಿ ಯೋಚಿಸುವಂತಾಗಲಿದೆ. ಹಿರಿಯರ ಜಂಜಾಟದಿಂದ ಆಗಾಗ ಮಾನಸಿಕವಾಗಿ ಕಿರಿಕಿರಿಯನ್ನು ಅನುಭವಿಸುವ ಪರಿಸ್ಥಿತಿಯ ಎದುರಾದೀತು. ಶುಭವಿದೆ.
ವೃಷಭ: ನಿಮ್ಮ ಕ್ರಿಯಾಶೀಲತೆ, ಪ್ರೌಢಿಮೆ, ಪರಿಶ್ರಮಗಳನ್ನು ಹಾಕಿರಿ. ಅದರ ಫಲವು ನಿಮಗೆ ದೊರಕಲಿದೆ. ಬದುಕಿನ ಕಷ್ಟನಷ್ಟಗಳ ಅನುಭವವು ನಿಮಗೆ ಪಾಠವಾದೀತು. ಆರ್ಥಿಕ ಸ್ಥಿತಿಯು ಅಭಿವೃದ್ಧಿಯಾಗುತ್ತಲೇ ಹೋಗಲಿದೆ.
ಮಿಥುನ: ಕಾರ್ಯರಂಗದಲ್ಲಿ ಪರಿಚಯಸ್ಥರಿಂದಲೇ ಕಾರ್ಯಸಾಧನೆಯಾಗಲಿದೆ. ನಿಮ್ಮ ಪ್ರಯತ್ನ ಬಲ, ಆತ್ಮವಿಶ್ವಾಸ ಸದ್ಯದಲ್ಲೇ ಫಲ ನೀಡಲಿದೆ. ಮಾನಸಿಕವಾಗಿ ಧೈರ್ಯವನ್ನು ಕಳೆದುಕೊಳ್ಳದಿರಿ. ಸಹನೆ ಇರಲಿ.
ಕರ್ಕ: ಯೋಗ್ಯ ವಯಸ್ಕರಿಗೆ ಒಂಟಿತನದ ಕಷ್ಟ ಸದ್ಯದಲ್ಲೇ ನಿವಾರಣೆಯಾಗಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ವೃತ್ತಿ ಭವಿಷ್ಯವನ್ನು ನೀವೇ ನಿರ್ಧರಿಸುವ ಸಂದರ್ಭಗಳು ಒದಗಿ ಬರುತ್ತವೆ. ಸದ್ಯದ ಪರಿಸ್ಥಿತಿಯಲ್ಲಿ ಸುಮ್ಮನಿರಿ.
ಸಿಂಹ: ಜೀವನದಲ್ಲಿ ಎದುರಾಗುವ ಸೋಲು, ನಿರಾಶೆಗಳಿಗೆ ಮನಸ್ಸು ಘಾಸಿಗೊಳ್ಳದಂತೆ ಹೃದಯವನ್ನು ಗಟ್ಟಿಗೊಳಿಸ ಬೇಕಾಗುತ್ತದೆ. ಆರ್ಥಿಕವಾಗಿ ಹಣಕಾಸಿನ ಲೆಕ್ಕಾಚಾರದಲ್ಲಿ ಹೆಚ್ಚಿನ ಗಮನಹರಿಸಿರಿ. ಅನಿರೀಕ್ಷಿತ ಶುಭವಾರ್ತಾ ಶ್ರವಣ.
ಕನ್ಯಾ: ಅವಿಭಕ್ತ ಕುಟುಂಬದವರಿಗೆ ಹೊಂದಾಣಿಕೆಯ ಅಗತ್ಯವಿದೆ. ನಿರುದ್ಯೋಗಿಗಳಿಗೆ ಅನಿಶ್ಚಿತತೆ ದೂರವಾಗಲಿದೆ. ಅವಿವಾಹಿತರಿಗೆ ತಪ್ಪಿ ಹೋದ ಅವಕಾಶಗಳು ಪುನಃಹ ಲಭ್ಯವಾಗಲಿದೆ. ಚಾಲನೆ ಹಾಗೂ ಆರೋಗ್ಯ ಜಾಗ್ರತೆ ಮಾಡಿರಿ.
ತುಲಾ: ವಿಚಾರ ವಿನಿಮಯದಿಂದ ಕಾರ್ಯಾನುಕೂಲಕ್ಕೆ ಸುಲಭವಾಗುತ್ತದೆ. ಶುಭಮಂಗಲ ಕಾರ್ಯಕ್ಕಾಗಿ ಓಡಾಟ ತಂದೀತು. ವಿದ್ಯಾರ್ಥಿಗಳಿಗೆ ಉತ್ಸಾಹದ ವಾತಾವರಣ ವಿರುತ್ತದೆ. ಖರ್ಚಿನ ಬಗ್ಗೆ ಜಾಗ್ರತೆ.
ವೃಶ್ಚಿಕ: ಜಾಗ ಖರೀದಿ ಮಾಡುವ ಯೋಚನೆ ತೋರಿ ಬಂದು ಅನುಕೂಲವಾಗಲಿದೆ. ದಂಪತಿಗಳ ಮಧ್ಯೆ ಭಿನ್ನಾಭಿಪ್ರಾಯ ತಿಕ್ಕಾಟಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಮಾಡುವುದು ಅಗತ್ಯ.
ಧನು: ನಿರೀಕ್ಷಿತ ಕಾರ್ಯಸಾಧನೆ ಮನಸ್ಸಿಗೆ ನೆಮ್ಮದಿ ತಂದೀತು. ಕಾರ್ಯರಂಗದಲ್ಲಿ ಹೆಚ್ಚಿನ ಗಮನಹರಿಸ ಬೇಕಾದೀತು. ಹಿರಿಯರ ಸೂಕ್ತ ಸಲಹೆಗಳಿಗೆ ಸ್ಪಂದಿಸಿರಿ. ಕಾರ್ಯರಂಗದಲ್ಲಿ ತುಂಬಾ ಸಮಾಧಾನದ ವಾತಾವರಣ.
ಮಕರ: ಆರ್ಥಿಕವಾಗಿ ಆದಾಯದಷ್ಟೇ ಖರ್ಚು-ವೆಚ್ಚಗಳಿರುತ್ತವೆ. ವೃತ್ತಿರಂಗದಲ್ಲಿ ನಿರೀಕ್ಷಿತ ಪ್ರಮೋಶನ್ ಸದ್ಯದಲ್ಲೇ ಒದಗಿ ಬಂದೀತು. ವಿದ್ಯಾರ್ಥಿಗಳ ಅಭ್ಯಾಸಬಲವು ಮುಂದೆ ಒಳ್ಳೆಯ ಭವಿಷ್ಯವು ದೊರಕೀತು.
ಕುಂಭ: ಅನಾವಶ್ಯಕ ಚಿಂತೆಗಳಿಂದ ತಲೆನೋವು ಬರಿಸಿಕೊಳ್ಳುವಂತಾದೀತು. ಅಧಿಕ ರಕ್ತದೊತ್ತಡ, ಮಧುಮೇಹಗಳಿಂದ ಬಳಲುವವರು ಹೆಚ್ಚಿನ ಜಾಗ್ರತೆ ವಹಿಸ ಬೇಕಾಗುತ್ತದೆ. ಸ್ವಾಭಿಮಾನಕ್ಕೆ ಭಂಗ ತಂದೀತು. ಶುಭವಿದೆ.
ಮೀನ: ಚಿಂತಿತ ಕೆಲಸ ಕಾರ್ಯಗಳು ಅಡೆತಡೆ ಗಳಿಂದಲೇ ಪೂರ್ಣವಾಗುತ್ತದೆ. ಸಾಂಸಾರಿಕವಾಗಿ ಮಹಿಳೆಯರು ಅನಾವಶ್ಯಕವಾಗಿ ಮನೋವ್ಯಾಕುಲತೆಗೆ ಗುರಿಯಾಗಲಿದ್ದಾರೆ. ಉದ್ಯೋಗಿಗಳಿಗೆ ಪ್ರಮೋಶನ್ ಒದಗಿ ಬರಬಹುದು.
ಎನ್.ಎಸ್.ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…