BJP ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಯುಪಿ ಮಾದರಿ ಆಡಳಿತ: ಯತ್ನಾಳ್
ಬುಲ್ಡೋಜರ್ ಇಲ್ಲವೇ ಎನ್ಕೌಂಟರ್ ಶಿಕ್ಷೆ ನಿಶ್ಚಿತ...
Team Udayavani, May 6, 2023, 6:04 PM IST
ಬೀದರ್ : ಕರ್ನಾಟಕದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಉತ್ತರದ ಪ್ರದೇಶ ಮುಖ್ಯಮಮತ್ರಿ ಯೋಗಿ ಆದಿತ್ಯನಾಥ್ ಮಾದರಿ ಆಡಳಿತವನ್ನು ಜಾರಿ ಮಾಡಲಾಗುವುದು ಎಂದು ಹೇಳಿರುವ ಮಾಜಿ ಕೇಂದ್ರ ಸಚಿವ, ಶಾಸಕ ಬಸವನಗೌಡ ಪಾಟೀಲ ಯತ್ನಾಳ್, ಗುಂಡಾಗಿರಿ ಮತ್ತು ಹಿಂದೂಗಳ ವಿರುದ್ಧ ಮಾತನಾಡುವವರಿಗೆ ಎನ್ಕೌಂಟರ್ ಮಾಡುತ್ತೇವೆ ಎಂದು ಗುಡುಗಿದ್ದಾರೆ.
ನಗರದ ಗಾಂಧಿ ಗಂಜ್ನಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಈಶ್ವರಸಿಂಗ್ ಠಾಕೂರ್ ಅವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹಿಂದೂ ಮತ್ತು ದೇಶದ ವಿರುದ್ಧ ಮಾತನಾಡುವ ರೌಡಿಗಳಿಗೆ ಉತ್ತರದ ಪ್ರದೇಶ ಸರ್ಕಾರದಂತೆ ಬುಲ್ಡೋಜರ್ ಇಲ್ಲವೇ ಎನ್ಕೌಂಟರ್ ಶಿಕ್ಷೆ ನಿಶ್ಚಿತ. ಇಲ್ಲಿಯೂ ನೋ ಜೇಲ್, ನೋ ಬಿರಿಯಾನಿ ಊಟ ಎಂದರು.
ರಾಜ್ಯದಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಬಜರಂಗ ದಳ ನಿಷೇಧ ಮಾಡಲಾಗುವುದು ಎಂದು ಹೇಳುತ್ತಿರುವ ಕಾಂಗ್ರೆಸ್ಗೆ ತಲೆ ಇದೆಯಾ ಎಂದು ಪ್ರಶ್ನಿಸಿದ ಯತ್ನಾಳ್, ಯಾವುದೇ ಸಂಘಟನೆಯನ್ನು ನಿಷೇಧ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇರುತ್ತದೆ. ಆದರೆ, ಈಗ ಕೇಂದ್ರದಲ್ಲಿ ಇರುವುದು ಕಾಂಗ್ರೆಸ್ನ ಅಪ್ಪ ಪ್ರಧಾನಿ ಮೋದಿ ಎಂಬುದು ಗೊತ್ತಿರಲಿ. ಹಿಂದೆ ಸಿದ್ಧರಾಮಯ್ಯ ಸರ್ಕಾರ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವ ಗುರಿ ಹೊಂದಿದ್ದ ಪಿಎಫ್ಐನ ಕಾರ್ಯಕರ್ತರ ಮೇಲಿನ ಗುಂಡಾ ಪ್ರಕರಣಗಳನ್ನು ಕೈಬಿಟ್ಟಿತ್ತು. ಆದರೆ, ಹಿಂದೂ ಕಾರ್ಯಕರ್ತರನ್ನು ಕೊಲೆಗೈದವರಿಗೆ ಶಿಕ್ಷೆ ಅಥವಾ ನೊಂದ ಕುಟುಂಬಕ್ಕೆ ಪರಿಹಾರ ಕೊಡುವ ಕೆಲಸ ಮಾಡಲಿಲ್ಲ ಎಂದು ಕಿಡಿಕಾರಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಡಾ. ಅಂಬೇಡ್ಕರ್ ಅವರ ಇತಿಹಾಸವನ್ನು ಸರಿಯಾಗಿ ಓದಿಕೊಂಡಿಲ್ಲ. ಕಾಂಗ್ರೆಸ್ಗೆ ಮತ ಹಾಕಿದರೆ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಅಂಬೇಡ್ಕರ ಹೇಳಿದ್ದರು. ಅವರ ಹೆಸರಲ್ಲಿ ಇಂದು ಮಲ್ಲಿಕಾರ್ಜುನ ಅವರು ಎಲ್ಲ ಸುಖ, ಸಂತೋಷವನ್ನು ಅನುಭವಿಸಿದ್ದಾರೆ. ಮೋದಿ ಅವರ ಬಗ್ಗೆ ಮಾತನಾಡಿರುವ ಪ್ರಿಯಾಂಕ ಖರ್ಗೆ ಸ್ತ್ರೀಲಿಂಗ ಅಥವಾ ಪುಲ್ಲಿಂಗ ಎಂಬುದು ಗೊತ್ತಿಲ್ಲ. ತುಮಕೂರಿನ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ದಿನ ಪ್ರಿಯಾಂಕ, ಸ್ಟಾರ್ ಹೊಟೇಲ್ನಲ್ಲಿ ಹೈದ್ರಾಬಾದನ ಬೇ** (ಓವೈಸಿ) ಜತೆಗೆ ದಲಿತ- ಮುಸ್ಲಿಂ ಚರ್ಚಾ ಕೂಟ ನಡೆಸುತ್ತಿದ್ದರು. ಅವರಿಗೆ ಲಿಂಗಾಯತ, ಹಿಂದುಗಳ ಬಗ್ಗೆ ಎಷ್ಟು ಗೌರವ ಇದೆ ಎಂಬುದು ಅರಿತುಕೊಳ್ಳಬೇಕು. ಯಾವಾಗಲು ಅಧಿಕಾರ ಮತ್ತು ಸಂಪತ್ತು ಒಮ್ಮೆಯೇ ಸಿಕ್ಕಾಗ ಪ್ರಿಯಾಂಕ ತರಾ ಆಗುತ್ತಾರೆ ಎಂದು ವ್ಯಂಗ್ಯವಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ
Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್ ರೇವಣ್ಣನಂಥವರಾ?; ಜಿಗ್ನೇಶ್
Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು