ಚಳಿಗಾಲದ ಆಗುಂಬೆಯ ಸೊಬಗೇ ಬೇರೆ !


Team Udayavani, Jan 30, 2020, 5:34 AM IST

agumbe-tourist-places

ಆಗುಂಬೆಯಾ ಪ್ರೇಮ ಸಂಜೆಯಾ ಎಂದು ಮೇರು ನಟ ಡಾ| ರಾಜಕುಮಾರ್‌ ಮತ್ತು ನಟಿ ಮಾಧವಿಯ ಹಾಡಿನ ದೃಶ್ಯ ನೋಡಿರಬಹುದು. ಸೂರ್ಯಾಸ್ತಮಾನಕ್ಕೆ ಹೇಳಿ ಮಾಡಿಸಿದ ಆಗುಂಬೆಗೆ ಎರಡು ರೂಪಗಳಿವೆ. ಸಾಮಾನ್ಯವಾಗಿ ನಾವು ಮಳೆ ಸುರಿಯುವಾಗ ಆಗುಂಬೆಯನ್ನು ನೆನಪು ಮಾಡಿಕೊಳ್ಳುತ್ತೇವೆ.

ಆದರೆ ಅದರ ಚಳಿಗಾಲದ ವಿಶ್ವರೂಪವನ್ನು ನೋಡಿದವರೇ ಕಡಿಮೆ. ಚಳಿಗಾಲದಲ್ಲಿ ಮಂಜು ಆವರಿಸಿಕೊಂಡ ಆಗುಂಬೆಯನ್ನು ನೋಡಲಿಕ್ಕೆ ಇನ್ನೂ ಚೆಂದ. ಅಲ್ಲಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ಕುಂದಾದ್ರಿ ಸೂರ್ಯೋದಯಕ್ಕೆ ಪ್ರಸಿದ್ಧ. ಈ ಚುಮು ಚುಮು ಚಳಿಯಲಿ ಸಾಗಿದರೆ, ನಿಮ್ಮನ್ನೇ ಆವರಿಸಿಕೊಳ್ಳುತ್ತದೆ ಬೆಳಗಿನ ಮೋಡ ಮತ್ತು ಮಂಜು.

ಆಂಗುಬೆ ಘಾಟಿ ಹತ್ತುವುದೇ ಒಂದು ರೋಚಕ ಅನುಭವ ನೀಡುವಂಥದ್ದು. ಮೇಲೆ, ಕೆಳಗೆ ಎನ್ನುತ್ತಾ ಹಾವು ಏಣಿ ಆಟವಾಡುವಂತೆ ವಾಹನಗಳು ಚಲಿಸುವ ಕ್ರಮವೇ ಸಾಹಸ ವೆನಿಸುತ್ತದೆ. ಸೋಮೇಶ್ವರದಿಂದ ಮೇಲಕ್ಕೇರಿ ಬಂದರೆ ಸೂರ್ಯಾಸ್ತ, ದೋಣಿ ವಿಹಾರ ಕೇಂದ್ರವೂ ಎಲ್ಲವೂ ಲಭ್ಯ.

ಹಲವು ತಾಣಗಳು
ಇದರ ಸುತ್ತಮುತ್ತಲೂ ಹಲವಾರು ಚೆಂದದ ತಾಣಗಳಿವೆ. ಆಗುಂಬೆ ಸರ್ಕಲ್‌ನಿಂದ ಕೊಪ್ಪ- ಶೃಂಗೇರಿಗೆ ಹೋಗುವ ಮಾರ್ಗದಲ್ಲಿ ತುಸು ತಿರುಗಿ ಹೋದರೆ ಜೋಗಿಗುಂಡಿ ಸೊಬಗು ಕಾಣಬಹುದು. ಇಲ್ಲಿ ಸರ್ಕಸ್‌ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ! ಹರಿಯುವ ನೀರಿನ ಝರಿಯ ಧಾರೆಯ ಖುಷಿಯೇ ಬೇರೆ.

ಇನ್ನೊಂದು ಸೊಬಗಿನ ತಾಣ ಒನಕೆ ಅಬ್ಬಿ!
ಇದೊಂದು ಆಕರ್ಷಕ ಜಲಪಾತ! ಈ ಅಬ್ಬಿ ನೋಡಲು ಸೂರ್ಯಾಸ್ತದ ಗೇಟ್‌ ಸಮೀಪದಿಂದ ಕಾಡುದಾರಿಯಲ್ಲಿ ಸಾಗಬೇಕು. ಮಳೆಗಾಲದಲ್ಲಿ ಈ ಜಲಪಾತ ಧುಮ್ಮಿಕ್ಕುತ್ತದೆ. ಜಿಗಣೆ ಕಾಟವೂ ಇರುತ್ತದೆ. ಸೂಕ್ತ ಮಾರ್ಗದರ್ಶಕರನ್ನು ಹೊಂದು ವುದು ಅವಶ್ಯ. ಇದರೊಂದಿಗೆ ದೊಡ್ಡಗುಡ್ಡವನ್ನೂ ನೋಡಬಹುದು. ಈಗ ದಟ್ಟ ಮಂಜು ಇರುವ ಕಾರಣ ಬೆಳಗ್ಗೆ ಮತ್ತು ಸಂಜೆ ವಾಹನ ಚಲಾಯಿಸುವಾಗ ಎಚ್ಚರ ಅಗತ್ಯ.

ದೋಣಿ ವಿಹಾರ ಕೇಂದ್ರ
ಆಗುಂಬೆ ಸೂರ್ಯಾಸ್ತ ವೀಕ್ಷಣೆ ಪ್ರದೇಶದ ಪಕ್ಕದಲ್ಲೇ ಇರುವ ಕೆರೆಯಲ್ಲಿನ ದೋಣಿ ವಿಹಾರ ಮತ್ತಷ್ಟು ಆಕರ್ಷಕ. ಈ ಸ್ಥಳಕ್ಕೆ ಮಳೆಕಾಡು ವಿಶ್ರಾಂತಿಧಾಮ ಎಂದು ಕರೆಯುತ್ತಾರೆ. ಮಳೆಕಾಡು ವಿಶ್ರಾಂತಿಧಾಮದ ಪ್ರವೇಶ ಶುಲ್ಕ 2 ರೂ. ಕೆರೆಯಲ್ಲಿ ಪೆಡಲ್‌ ಬೋಟ್‌ಗಳನ್ನು ಇಡಲಾಗಿದ್ದು ಇದರಲ್ಲಿ ವಿಹರಿಸಲು ಒಬ್ಬರಿಗೆ 40 ರೂ. ಪಾವತಿಸ ಬೇಕು. ಆಗುಂಬೆಯ ಗ್ರಾಮ ಅರಣ್ಯ ಸಮಿತಿ ವಿಶ್ರಾಂತಿಧಾಮದ ಹೊಣೆ ಹೊತ್ತಿದೆ.

-ದಯಾನಂದ ಬಳ್ಕೂರು

ಟಾಪ್ ನ್ಯೂಸ್

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.