ಹೊಸ ಮನ್ವಂತರದ ನಿರೀಕ್ಷೆಯಲ್ಲಿ ಚಾಲಿ ಪೋಲಿಲು-2


Team Udayavani, Apr 18, 2019, 6:05 AM IST

Untitled-1

ಮಾತಿನಲ್ಲೇ ಮೋಡಿ ಮಾಡಿ, ಹುಡುಗಾಟದಲ್ಲೇ ಕಾಲ ಕಳೆದ ಮೂವರು “ಚಾಲಿ ಪೋಲಿಗಳು’ ಕೋಸ್ಟಲ್‌ವುಡ್‌ನ‌ಲ್ಲಿ ಮಾಡಿದ ದಾಖಲೆ ಹೊಸ ಮನ್ವಂತರವನ್ನು ಸೃಷ್ಟಿಸಿತ್ತು. ಒಂದೊಮ್ಮೆ ತುಳು ಸಿನೆಮಾಗಳು ಯಾವುದೇ ಬೆಳವಣಿಗೆಯನ್ನು ಕಾಣುತ್ತಿಲ್ಲ ಎಂಬ ಕಾಲದಲ್ಲಿ ತುಳು ಸಿನೆಮಾಗಳಿಗೆ ಆಸರೆಯಾಗಿ ನಿಂತ ಸಿನೆಮಾ “ಚಾಲಿ ಪೋಲಿಲು’. ಕೋಸ್ಟಲ್‌ವುಡ್‌ನ‌ಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ (511 ದಿನಗಳ ಪ್ರದರ್ಶನ) ಯಶಸ್ವಿ ಪ್ರದರ್ಶನ ಕಂಡ ಈ ಸಿನೆಮಾ ತುಳು ಸಿನೆಮಾ ಲೋಕಕ್ಕೆ ಜೀವ ಸೆಲೆ ದೊರೆತಂತಾಗಿತ್ತು.

ಈಗ ಕೋಸ್ಟಲ್‌ವುಡ್‌ಗೆ ಖುಷಿಯ ಸಂಗತಿಯೆಂದರೆ, ಮತ್ತೂಮ್ಮೆ “ಚಾಲಿ ಪೋಲಿಲು’ ಎರಡನೇ ರೂಪದಲ್ಲಿ ಅರ್ಥಾತ್‌ “ಭಾಗ 2’ರ ಕಂತಿನಲ್ಲಿ ಮತ್ತೂಮ್ಮೆ ತೆರೆ ಮೇಲೆ ಬರಲು ಅಣಿಯಾಗುತ್ತಿದೆ. ಮೂವರು ಚಾಲಿಪೋಲಿಲು ಮಾಡಿದ ಎಡವಟ್ಟಿನ ಕೊನೆಯ ದೃಶ್ಯದಿಂದ ಕಥೆ ಮತ್ತೆ ಆರಂಭವಾಗಲಿದೆ. ಚಾಲಿಪೋಲಿಲು ಸಿನೆಮಾದಲ್ಲಿ ಯಾವೆಲ್ಲ ಕಲಾವಿದರು ಇದ್ದಾರೋ ಅವರೆಲ್ಲ ಭಾಗ ಎರಡರಲ್ಲಿಯೂ ಇರಲಿದ್ದಾರೆ.

ತುಳುಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿ ದಾಖಲೆಯ ಮೇಲೆ ದಾಖಲೆ ಬರೆದ ಪ್ರಕಾಶ್‌ ಪಾಂಡೇಶ್ವರ್‌ ನಿರ್ಮಾಣದಲ್ಲಿ ಮೂಡಿಬಂದ ಮೊದಲ “ಚಾಲಿಪೋಲಿಲು’ ಸ್ಯಾಂಡಲ್‌ವುಡ್‌ನ‌ಲ್ಲಿಯೂ ಮೆಚ್ಚುಗೆ ಗಿಟ್ಟಿಸಿತ್ತು. ವಿಶೇಷವೆಂದರೆ ಪ್ರಕಾಶ್‌ ಪಾಂಡೇಶ್ವರ ಅವರು ಆ್ಯಕ್ಷನ್‌ ಕಟ್‌ ಹೇಳಿದ “ದಬಕ್‌ ದಬ ಐಸಾ’ ಸಿನೆಮಾ ಕೂಡ ಕೋಸ್ಟಲ್‌ವುಡ್‌ನ‌ಲ್ಲಿ ಇನ್ನೊಂದು ಸಾಧನೆ ಬರೆದಿತ್ತು. ಇದೇ ಆಶಯದೊಂದಿಗೆ ಈಗ ಚಾಲಿಪೋಲಿಲು ಎರಡನೇ ಭಾಗದ ಸಿನೆಮಾ ಆರಂಭಿಸಲು ನಿರ್ಧರಿಸಿದ್ದಾರೆ. ಪ್ರಕಾಶ್‌ ಪಾಂಡೇಶ್ವರ ಅವರೇ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

ಸದ್ಯ ಎರಡನೇ ಚಾಲಿಪೋಲಿಗಳ ಸ್ಕ್ರಿಪ್ಟ್ ವರ್ಕ್‌ ನಡೆಯುತ್ತಿದೆ. ಎಲ್ಲ ಪೂರ್ಣವಾದ ಬಳಿಕ ಕಲಾವಿದರ ಟೈಮಿಂಗ್ಸ್‌ ಹಾಗೂ ಶುಭ ಮುಹೂರ್ತ ನೋಡಿಕೊಂಡು ಸಿನೆಮಾ ಶೂಟಿಂಗ್‌ ಆರಂಭಿಸಲು ಮಾತುಕತೆ ನಡೆಯುತ್ತಿದೆ.

ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಒಳ್ಳೊಳ್ಳೆ ಸಿನೆಮಾ ಬರುತ್ತಿದ್ದರೂ, ಜನರು ಕೋಸ್ಟಲ್‌ವುಡ್‌ ಕಡೆಗೆ ಸ್ವಲ್ಪ ನಿರಾಸಕ್ತಿ ತೋರಿದಂತಿದೆ. ಹೀಗಾಗಿಯೇ ಒಳ್ಳೆಯ ಸಿನೆಮಾ ಕೂಡ ಕಲೆಕ್ಷನ್‌ನಲ್ಲಿ ಸೋಲುತ್ತಿದೆ. ಒಳ್ಳೆಯ ಸಿನೆಮಾ ಮಾಡುವುದೇ ತಪ್ಪಾ? ಎಂದು ಪ್ರಶ್ನಿಸುವ ಕಾಲವೂ ಉಂಟು. ಇಂತಹ ಪಶ್ಚಾತಾಪದ ಸಂಗತಿಗಳಿಗೆ ಇತಿಶ್ರೀ ಹಾಡಲು ಹೊಸ ತುಳು ಸಿನೆಮಾ ಒಂದು ಕೋಸ್ಟಲ್‌ವುಡ್‌ನ‌ಲ್ಲಿ ಸದ್ದು ಮಾಡಬೇಕಾದ ಅನಿವಾರ್ಯತೆ ಇದೆ. “ಚಾಲಿಪೋಲಿಲು- 2′ ಬಂದರೆ ಇಂತಹ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂಬ ಮಾತು ಕೋಸ್ಟಲ್‌ವುಡ್‌ ಅಂಗಳದಲ್ಲಿ ಕೇಳಿಬರುತ್ತಿದೆ.

ಚಾಲಿಪೋಲಿಲು ಮೊದಲ ಭಾಗದಲ್ಲಿ ನವೀನ್‌ ಡಿ. ಪಡೀಲ್‌ ಅವರನ್ನು ಮುಖ್ಯ ನೆಲೆಯಲ್ಲಿಟ್ಟು, ದೇವದಾಸ್‌ ಕಾಪಿಕಾಡ್‌ ಹಾಗೂ ಭೋಜರಾಜ್‌ ವಾಮಂಜೂರ್‌ ಅವರ ಒಡನಾಟದ ಮೂಲಕವಾಗಿ ಕುಟುಂಬದೊಳಗಿನ ಭಾವನಾತ್ಮಕತೆಯನ್ನು ಹೆಣೆಯಲಾಗಿತ್ತು. ಹಾದಿ ತಪ್ಪಿ ನಡೆದಾಗ ಗದರಿಸುವ ಹಾಗೂ ಪರಿಣಾಮವನ್ನು ಅನುಭವಿಸುವ ಸಂದೇಶ ಅತ್ಯದ್ಬುತವಾಗಿತ್ತು. ಅರವಿಂದ ಬೋಳಾರ್‌ ಸಿನೆಮಾಕ್ಕೆ ಹೊಸ ರೂಪ ನೀಡಿದ್ದರು. ಇದೇ ಗೆಟಪ್‌ನೊಂದಿಗೆ ಈಗ “ಚಾಲಿಪೋಲಿಲು- 2′ ಮಾಡುವ ಬಗ್ಗೆ ಪ್ರಕಾಶ್‌ ಪಾಂಡೇಶ್ವರ ಲೆಕ್ಕ ಹಾಕಿದ್ದಾರೆ.

– ದಿನೇಶ್‌ ಇರಾ

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.