ಬಿರುಸಿನಲ್ಲಿ ಶೂಟಿಂಗ್ ಮುಗಿಸಿದ ಪೆಪ್ಪೆರೆರೆ ಪೆರೆರೆರೆ
Team Udayavani, Apr 11, 2019, 6:10 AM IST
ಖ್ಯಾತ ನಟ ಶೋಭರಾಜ್ ಪಾವೂರು ಆ್ಯಕ್ಷನ್ ಕಟ್ ಹೇಳಿದ “ಪೆಪ್ಪೆರೆರೆ ಪೆರೆರೆರೆ’ ತುಳು ಸಿನೆಮಾ ಬಿರುಸಿನಲ್ಲಿಯೇ ಶೂಟಿಂಗ್ ಮುಗಿಸಿದೆ.
ತುಳು ರಂಗಭೂಮಿ, ಸಿನೆಮಾ, ಕನ್ನಡ ಸಿನೆಮಾ, ಕಿರುತೆರೆಯಲ್ಲಿ ಸಾಕಷ್ಟು ಕೆಲಸ ಮಾಡಿದ ಶೋಭರಾಜ್ “ಪೆಪ್ಪೆರೆರೆ ಪೆರೆರೆರೆ’ ಸಿನೆಮಾ ಮಾಡಿದ್ದಾರೆ. ಸದ್ದು ಮಾಡದೆ ಶೂಟಿಂಗ್ ಮಾಡಿದ ಈ ಸಿನೆಮಾ ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿದೆ.
ಸಾಂಗ್ ಶೂಟಿಂಗ್ ಬಾಕಿ ಇದೆ. ಉಳಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಿದೆ. ಸಿನೆಮಾ ಪೂರ್ಣ ರೀತಿಯಲ್ಲಿ ರೆಡಿಯಾಗಿ ಎಲ್ಲ ಓಕೆ ಆದ ಬಳಿಕವಷ್ಟೇ ಸಿನೆಮಾ ರಿಲೀಸ್ ಬಗ್ಗೆ ಯೋಚನೆ ಎನ್ನುತ್ತಾರೆ ಶೋಭರಾಜ್. ಕರಾವಳಿಯ ಸೂಪರ್ ಸ್ಟಾರ್ಗಳಾದ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸತೀಶ್ ಬಂದಳೆ, ಸಾಯಿಕೃಷ್ಣ, ಜೆ.ಪಿ. ತೂಮಿನಾಡ್ ಸಹಿತ ಹಲವು ಕಲಾವಿದರು ಸಿನೆಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಚೈತ್ರ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ. ಶೋಭರಾಜ್ ಆ್ಯಕ್ಷನ್ ಕಟ್ ಹೇಳುವ ಜತೆಗೆ ಸಿನೆಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಗುರು ಬಾಯಾರ್ ಸಿನೆಮಾಕ್ಕೆ ಸಂಗೀತ ಒದಗಿಸಿದ್ದಾರೆ. ಶೂಟಿಂಗ್ ಆರಂಭವಾದ ಕಾಲದಿಂದ ಇಲ್ಲಿಯವರೆಗೆ ಯಾವುದೇ ಢಾಂಡೂಂ ಮಾಡದೆ ಶೂಟಿಂಗ್ ಕಂಡಿರುವ ಈ ಸಿನೆಮಾದ ವಿಶೇಷ ಏನು? ಕಥೆ ಏನು? ಎಂಬ ಬಗ್ಗೆಯೂ ಚಿತ್ರತಂಡ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸಿನೆಮಾ ಬಿಡುಗಡೆಯ ಕಾಲದಲ್ಲಿ ಈ ಎಲ್ಲ ವಿಚಾರಗಳು ಗೊತ್ತಾಗಲಿದೆ ಎಂಬುದು ಲೆಟೆಸ್ಟ್ ಮಾಹಿತಿ.