ಕೋಸ್ಟಲ್ ವುಡ್ ನಾಯಕಿಗೆ ಸ್ಯಾಂಡಲ್ವುಡ್ ಆಫರ್
Team Udayavani, Sep 20, 2018, 1:22 PM IST
ಇನ್ನಷ್ಟೇ ತೆರೆ ಕಾಣಬೇಕಾಗಿರುವ ಬಲಿಪೆ ತುಳು ಚಿತ್ರದ ನಾಯಕಿಗೆ ಈ ಸ್ಯಾಂಡಲ್ ವುಡ್ ನಿಂದ ಆಫರ್ ಬಂದಿದೆ. ಅಮ್ಮೆರ್ ಪೊಲೀಸ್, ಅಪ್ಪೆ ಟೀಚರ್ ಚಲನಚಿತ್ರದ ಮೂಲಕ ಗುರುತಿಸಿಕೊಂಡ ಪುತ್ತೂರಿನ ಅಂಕಿತಾ ಪಟ್ಲ ಅವರು ಬಲಿಪೆ ಚಿತ್ರೀಕರಣವನ್ನು ಈಗಷ್ಟೇ ಮುಗಿಸಿದ್ದು, ಅಷ್ಟರಲ್ಲೇ ಸ್ಯಾಂಡಲ್ವುಡ್ ಕದ ತಟ್ಟಲು ಸಿದ್ಧರಾಗಿದ್ದಾರೆ.
ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಪದವಿ ವಿದ್ಯಾರ್ಥಿನಿ ಆಗಿದ್ದಾಗಲೇ ಲಾಸ್ಟ್ ಸೆಮಿಸ್ಟರ್ ಆಲ್ಬಂ ಸಾಂಗ್ ಒಂದಕ್ಕೆ ಹೆಜ್ಜೆ ಹಾಕಿದ್ದು,ಅವರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಯಿತು. ಬಳಿಕ ರೂಲ್ 129 ಎಂಬ ಸಾಕ್ಷ್ಯಚಿತ್ರದಲ್ಲಿ ಬಣ್ಣ ಹಚ್ಚಿದರು. ಸಾಕ್ಷ್ಯಚಿತ್ರಗಳಿಂದಾಗಿ ಸಿಕ್ಕಿದ ಮನ್ನಣೆ ಸಿನೆಮಾ ರಂಗಕ್ಕೆ ಪ್ರವೇಶಿಸುವಂತೆ ಮಾಡಿತು. ಅಮ್ಮೆರ್ ಪೊಲೀಸ್ ಸಿನೆಮಾದ ನಾಲ್ಕೇ ನಾಲ್ಕು ಸೀನ್ ಗಳಲ್ಲಿ ಕಾಣಿಸಿಕೊಂಡರು. ಇದರಿಂದಾಗಿ ಅಪ್ಪೆ ಟೀಚರ್ ಸಿನೆಮಾದಲ್ಲಿ ಅವಕಾಶ ಸಿಕ್ಕಿತು. ಅಷ್ಟರಲ್ಲೇ ಅದೃಷ್ಟ ಖುಲಾಯಿಸಿದ್ದು, ಬಲಿಪೆ ಸಿನೆಮಾದ ನಾಯಕಿ ನಟಿಯಾಗಿ ಆಯ್ಕೆಯಾದರು.
ವಿದ್ಯಾರ್ಥಿ ದೆಸೆಯಲ್ಲಿಯೇ ಸಿನೆಮಾ ರಂಗದ ಕದ ತಟ್ಟಿದವರು ಅಂಕಿತಾ. ಬಿ.ಎ. ಪತ್ರಿಕೋದ್ಯಮ ಪದವಿ ಮುಗಿಸುತ್ತಿದ್ದಂತೆ ಕಿರುತೆರೆಯೂ ಕೈಬೀಸಿ ಕರೆಯಿತು. ಎಂಸಿಜೆ ಮಾಡಬೇಕು ಎಂಬ ಅಪೇಕ್ಷೆ ಇದ್ದರೂ, ಸಿನೆಮಾ ರಂಗದ ಒಲವೇ ಹೆಚ್ಚಾಯಿತು. ಇದರ ನಡುವೆ ಶಾಂತಂ ಪಾಪಂನಲ್ಲೂ ಅಭಿನಯಿಸಿ ಬಂದರು. ಅಷ್ಟರಲ್ಲಿಯೇ ಕನ್ನಡ ಸಿನೆಮಾವೊಂದರ ನಾಯಕಿ ನಟಿಯಾಗಿ ಆಯ್ಕೆ ಆಗಿದ್ದಾರೆ. ಸಿನೆಮಾದ ಹೆಸರು, ನಾಯಕ ನಟ, ನಿರ್ದೇಶಕರ ಬಗ್ಗೆ ಯಾವುದೇ ಸುಳಿವು ಬಿಟ್ಟು ಕೊಟ್ಟಿಲ್ಲ. ಸ್ಯಾಂಡಲ್ವುಡ್ ಆಫರ್ ಬಂದಿದೆ. ಅಂತಿಮ ಹಂತದಲ್ಲಿದೆ ಎನ್ನುತ್ತಾರೆ ನಾಯಕಿ ಅಂಕಿತಾ.
ಕೋಸ್ಟಲ್ವುಡ್ನ ಬಲಿಪೆ ಈಗಾಗಲೇ ಶೂಟಿಂಗ್ ಮುಗಿಸಿದೆ. ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಬಿಡುಗಡೆ ಕಾಣುವ ನಿರೀಕ್ಷೆ ಇದೆ. ಇದರಲ್ಲಿ ಅಂಕಿತಾ ಅವರದ್ದು ವೈದ್ಯೆಯ ಪಾತ್ರ. ಆಸಕ್ತಿ ಇದ್ದರೂ, ಸ್ವಲ್ಪ ಕೀಳರಿಮೆ ಇತ್ತು. ಹೆತ್ತವರ ಪ್ರೋತ್ಸಾಹದಿಂದ ಇಲ್ಲಿವರೆಗೆ ತಲುಪಿದ್ದೇನೆ. ಒಂದು ವೇಳೆ ಸಿನೆಮಾದಲ್ಲಿ ಮುಂದುವರಿಯಲು ಸಾಧ್ಯವಾಗದಿದ್ದರೆ ಉಪನ್ಯಾಸಕಿ ಆಗಬೇಕೆಂಬ ಕನಸಿದೆ ಎನ್ನುತ್ತಾರೆ ಅಂಕಿತಾ ಪಟ್ಲ.
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು