ಈ ವರ್ಷದಲ್ಲಿ ಪ್ರವಾಸ ಮಾಡಲು ಯೋಚಿಸಿದ್ದೀರಾ? ಇಲ್ಲಿದೆ ನೋಡಿ ಸುಂದರ ಪ್ರವಾಸಿ ತಾಣಗಳು?


Team Udayavani, Jan 1, 2020, 4:10 PM IST

w

ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗಬೇಕು, ಸುಂದರ ತಾಣಗಳನ್ನು ಸಂದರ್ಶಿಸಬೇಕು ಎಂದುಕೊಂಡಿದ್ದೀರಾ. ಕಳೆದ ವರ್ಷ ಇದೇ ರೀತಿ ಯೋಜನೆ ಹಾಕಿ ಪ್ರವಾಸಕ್ಕೆ ಹೋಗಲು ಹಾಕಿಲ್ಲವೆ? ಹೊಸವರ್ಷದ ಈ ಸಂದರ್ಭದಲ್ಲಿ ಕೆಲವು ಪ್ರವಾಸಿ ತಾಣಗಳ ಬಗ್ಗೆ ಇಲ್ಲಿದೆ ಮಾಹಿತಿ.

ವಾರಾಂಗಲ್  ಕೋಟೆ

ತೆಲಂಗಾಣ ರಾಜ್ಯದ ವಾರಂಗಲ್ ಪಟ್ಟಣದಲ್ಲಿ ಕಾಣ ಸಿಗುವ ಈ ಕೋಟೆಯು ಅದ್ಭುತ ಐತಿಹಾಸಿಕ ತಾಣವಾಗಿದೆ. ಅನೇಕ ಕಂಬಗಳಿಂದ ಆವೃತವಾಗಿರುವ ಈ ಕೋಟೆಯು ಐತಿಹಾಸಿಕ ಕಥೆಯನ್ನು ವರ್ತಮಾನದಲ್ಲಿ ಸಾರುತ್ತಿದೆ. ಇಲ್ಲಿನ ಕಂಬಗಳ ಮೇಲೆ ವಿವಿಧ ಬಗೆಯ ಚಿತ್ತಾರವನ್ನು ಕಾಣಬಹುದು. ಸುತ್ತಲೂ ಹಚ್ಚ ಹಸಿರಿನ ಪರಸರದ ನಡುವೆಯೂ ಈ ಕೋಟೆಯೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.

ಕೋಟೆಯನ್ನು 12ನೇ ಶತಮಾನದಲ್ಲಿ ಕಾಕತೀಯರ ಆಡಳಿತದ ಅವಧಿಯಲ್ಲಿ ಕಟ್ಟಲಾಗಿದೆ ಎಂದು ಇತಿಹಾಸವೂ ತಿಳಿಸುತ್ತದೆ. ಮತ್ತೊಂದು ಸ್ವಾರಸ್ಯಕರ ವಿಷಯವೆಂದರೆ ಕಾಕತೀಯ ಸಾಮ್ರಾಜ್ಯವು ಪ್ರಸ್ತುತ ತೆಲಂಗಾಣ ರಾಜ್ಯದ ಅಧಿಕೃತ ಲಾಂಚನವಾಗಿದೆ. ಹೀಗೆ ವಾರಂಗಲ್ ಕೋಟೆ ಪ್ರವಾಸಪ್ರೀಯರ ನೆಚ್ಚಿನ ತಾಣವಾಗಿ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಿದೆ.

ಪಾಖಾಲ್ ಕೆರೆ

ವಾರಾಂಗಲ್ ಜಿಲ್ಲೆಯಲ್ಲಿರುವ ಈ ಕೆರೆಯು ಪ್ರಕೃತಿ ಪ್ರಶಾಂತತೆಯ ನಡುವೆ ಕಂಗೊಳಿಸುತ್ತಿದೆ. ಈ ಜಿಲ್ಲೆಯಲ್ಲಿರುವ ಪಾಖಾಲ್ ವನ್ಯಜೀವಿ ಅಭಯಾರಣ್ಯದಲ್ಲಿ ಈ ಸುಂದರವಾದ ಕೆರೆಯನ್ನು ಕಾಣಬಹುದು. ವಿಶಾಲವಾಗಿ ಮೈ ಚಾಚಿ ನಿಂತಿರುವ ಈ ಕೆರೆಯನ್ನುಕಾಕತೀಯರ ದೊರೆಯಾಗಿದ್ದ ಗಣಪತಿ ದೇವನಿಂದ ಸುಮಾರು 1213ರಲ್ಲಿ ನಿರ್ಮಿಸಿಲಾಗಿದೆ. ಇದೊಂದು ಕೃತಕವಾಗಿ ನಿರ್ಮಿಸಿರುವ ಕರೆಯಾಗಿದ್ದು, ತೆಲಂಗಾಣ ರಾಜ್ಯಕ್ಕೆ ಪ್ರವಾಸಕ್ಕೆಂದು ಭೇಟಿ ನೀಡಿದರೆ, ಇನ್ನಿತ್ತರ ಸ್ಥಳಗಳ ಜೊತೆಗೆ ಈ ಸ್ಥಳವೂ ಪ್ರವಾಸಿ ಆಕರ್ಷಣೆಯ ತಾಣವಾಗಿದೆ.

ಪುಲಿಕಟ್

ಕೋರ ಮಂಡಲ ತೀರ ಎಂಬ ಸ್ಥಳದ ಹೆಸರನ್ನು ಎಲ್ಲರೂ ಕೇಳಿರುವುದು ಸಹಜ. ತಮಿಳುನಾಡಿನಲ್ಲಿರುವ ಈ ಕೋರಮಂಡಲ ತೀರ ಪ್ರಕೃತಿಯ ಸೊಬಗನ್ನು ತನ್ನ ಮಡಿಲಿನಲ್ಲಿ ತುಂಬಿಕೊಂಡು ಕಂಗೊಳಿಸುತ್ತಿದೆ. ಇಲ್ಲಿನ ಪುಲಿಕಟ್  ಎರಡು ವಿಷಯಗಳಿಗೆ ಪ್ರಸಿದ್ಧವಾಗಿದೆ. ಒಂದು ಪುಲಿಕಟ್ ಸರೋವರ ಮತ್ತು ಪುಲಿಕಟ್ ಪಕ್ಷಿಧಾಮ. ಭಾರತದ ಎರಡನೇ ಉಪ್ಪುನೀರಿನ ಸರೋವರ ಎಂಬ ಹೆಗ್ಗಳಿಕೆ ಇಲ್ಲಿನ ಸರೋವರವೂ ಪಡೆದಿದೆ. ಅನೇಕ ಪ್ರವಾಸಿಗರನ್ನು  ಸ್ಥಳವೂ ಆಕರ್ಷಿಸುತ್ತಿದೆ

ಗೋಕಾಕ್ ಜಲಪಾತ:

ಕರ್ನಾಟಕದ ಬೆಳಗಾವಿ ನಗರದ ಈಶಾನ್ಯ ಭಾಗಕ್ಕೆ ಸುಮಾರು 67 ಕಿ.ಮೀ ದೂರದಲ್ಲಿರುವ ಗೋಕಾಕ್ ಪಟ್ಟಣದಲ್ಲಿ ಈ ಜಲಪಾತವನ್ನು ಕಾಣಬಹುದು. ಪ್ರಕೃತಿಯ ರಮಣೀಯತೆ ನಡುವೆ ಹಾಲಿನ ಕೆನೆಯಂತೆ ಹರಿಯುವ ಈ ಜಲಪಾತವು ಗೋಕಾಕ್ ಫಾಲ್ಸ್ ಎಂದೇ ಪ್ರಸಿದ್ಧವಾಗಿದೆ. ಘಟಪ್ರಭಾ ನದಿಯಿಂದ ಉಂಟಾದ ಈ ಜಲಪಾತಕ್ಕೆ  ಅಡ್ಡಲಾಗಿ ಕಟ್ಟಲಾದ ತೂಗು ಸೇತುವೆಯಿದ್ದು, ಅದರ ಮೇಲೆ ಸಾಗುತ್ತಿದ್ದರೆ ಪ್ರಶಾಂತತೆ ನಡುವೆಯೂ ಧುಮ್ಮುಕ್ಕಿ ಹರಿಯುವ ಈ ಜಲಪಾತ ನೋಡುತ್ತಾ ಅಬ್ಬಾ ಎಂಬ ಉದ್ಗಾರದೊಂದಿಗೆ ಈ  ರೋಮಾಂಚನಕಾರಿ ಆನಂದವನ್ನು ಪಡೆಯಬಹುದು.  ಗೋಕಾಕ್‌ಗೆ ತೆರಳಲು ಬೆಳಗಾವಿಯಿಂದ ಬಸ್ ಮತ್ತು ರೈಲುಗಳು ಲಭ್ಯವಿದೆ.

ಐಹೊಳೆ ಹಾಗೂ ಪಟ್ಟದಕಲ್ಲು

ಬಾಗಲಕೋಟೆ ಜಿಲ್ಲೆಯಲ್ಲಿರುವ ಐಹೊಳೆ ಮತ್ತು ಪಟ್ಟದಕಲ್ಲು ಇತಿಹಾಸ ಪ್ರಸಿದ್ಧ ಸುಂದರ ತಾಣ. ಚಾಲುಕ್ಯರ  ವಾಸ್ತುಶೈಲಿಯನ್ನು ನೋಡಬೇಕೆಂಬ ಹಂಬಲವಿದ್ದರೆ ಈ ಸ್ಥಳಕ್ಕೆ ಭೇಟಿ ನೀಡುವುದು ಉತ್ತಮ. ಚಾಲುಕ್ಯರ ಅನೇಕ ಕಲಾಕೃತಿಗಳ, ವಾಸ್ತುಶಿಲ್ಪಗಳ ರಚನೆಯನ್ನುಳ್ಳ ಅನೇಕ ದೇವಾಲಯಗಳನ್ನುಈ ಗ್ರಾಮದಲ್ಲಿ ಕಾಣಬಹುದಾಗಿದೆ.

ಹೀಗೆ ವಿವಿಧ ಬಗೆಯ ಇತಿಹಾಸಗಳನ್ನು ಒಳಗೊಂಡು, ಪ್ರಕೃತಿಯ ಮಡಿಲಿನಲ್ಲಿ ರಾರಾಜಿಸುತ್ತಿರುವ ಈ ಸ್ಥಳಕ್ಕೆ ಪ್ರವಾಸವನ್ನು ಕೈಗೊಳ್ಳಬೇಕೆಂದು ಕೊಂಡವರಿಗೆ ಹೇಳಿ ಮಾಡಿಸಿದ ತಾಣಗಳು. ಹೊಸ ವರ್ಷದ ಪ್ರಕೃತಿಯ ಮಡಿಲಿನಲ್ಲಿ  ಸಮಯ ಕಳೆಯಬೇಕೆಂದುಕೊಳ್ಳುವವರು ಈ ಸ್ಥಳಕ್ಕೆ ಭೇಟಿ ನೀಡುವುದು ಉತ್ತಮ.

ಸಾಯಿನಂದಾ ಚಿಟ್ಪಾಡಿ,
ವಿವೇಕಾನಂದ ಕಾಲೇಜು, ಪುತ್ತೂರು

ಟಾಪ್ ನ್ಯೂಸ್

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.