![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
ಅಲೈವ್, ಇದು ಬದುಕಿನ ಹೋರಾಟ
Team Udayavani, Aug 20, 2018, 3:42 PM IST
![20-agust-15.jpg](https://www.udayavani.com/wp-content/uploads/2018/08/20/20-agust-15.jpg)
ಕೇರಳ, ಕೊಡಗಿನಲ್ಲಿ ಭಾರೀ ಮಳೆ, ಪ್ರವಾಹದಂತ ಪ್ರಕೃತಿಯ ಮುನಿಸು ಕಂಡಾಗ ಬದುಕಿನಲ್ಲಿ ಎಲ್ಲವೂ ಕಳೆದುಕೊಂಡವರನ್ನು ನೋಡಿದಾಗ ಹೃದಯ ಭಾರವಾಗುತ್ತದೆ. ಈ ಪರಿಸ್ಥಿತಿಯಲ್ಲೂ ನೆನಪಾಗುವುದು ಫ್ರಾಂಕ್ ಮಾರ್ಷಲ್ ನಿರ್ದೇ ಶದ 1993ರಲ್ಲಿ ತೆರೆಗೆ ಬಂದ ಹಾಲಿವುಡ್ ಚಿತ್ರ ‘ಅಲೈವ್. ಮನುಷ್ಯ ಬದುಕಲಿಕ್ಕಾಗಿ ಏನೆಲ್ಲ ಮಾಡಬಲ್ಲ ಎಂಬುದನ್ನು ತೋರಿಸಿರುವ ಚಿತ್ರವಿದು.
ಉರುಗ್ವೆಯ ಫುಟ್ಬಾಲ್ ತಂಡ ಬೇರೆ ದೇಶದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಂಭ್ರಮದಿಂದ ಹೊರಟಿರುತ್ತದೆ. ಆದರೆ ಇವರ ಈ ಸಂಭ್ರಮ ಕೆಲವೇ ಕೆಲವು ಕ್ಷಣಗಳು ಎಂಬ ಅರಿವು ಯಾರಿಗೂ ಇರುವುದಿಲ್ಲ. ಉರುಗ್ವೆ ಆಟಗಾರರು ಕುಳಿತಿದ್ದ ವಿಮಾನ, ಬ್ರಿಟಿಷ್ ಕೊಲಂಬಿಯಾದ ಪರ್ಸೆಲ್ ಮೌಂಟೆನ್ಸ್ ಎಂಬ ಹಿಮಪರ್ವತಗಳ ಸಾಲಿನಲ್ಲಿ ಅಪಘಾತಕ್ಕೀಡಾಗುತ್ತದೆ. ಈ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾದರೆ, ಇನ್ನು ಕೆಲವು ಮಂದಿ ಗಂಭೀರ ಗಾಯಗೊಳ್ಳುತ್ತಾರೆ. ಬದುಕಿರುವ ಮಂದಿ ತಮ್ಮ ಜೀವ ಉಳಿಸಿಕೊಳ್ಳಲು ನಡೆಸುವ ಹೋರಾಟವೇ ಈ ಚಿತ್ರದ ಸಂಪೂರ್ಣ ಕತೆ.
ವಿಮಾನದಲ್ಲಿದ್ದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು, ಗಾಯಗೊಂಡವರಿಗೆ ತಮ್ಮಲ್ಲಿದ್ದ ಪ್ರಥಮ ಚಿಕಿತ್ಸೆ ಕಿಟ್ಗಳಿಂದ ಉಪಚರಿಸುತ್ತಾರೆ. ಆದರೂ ಕೆಲವರ ಸಾವು ಇಡೀ ಉರುಗ್ವೆಯ ಫುಟ್ಬಾಲ್ ತಂಡವನ್ನು ಸಂಪೂರ್ಣವಾಗಿ ಧೃತಿಗೆಡಿಸುತ್ತದೆ. ಸಹ ಪ್ರಯಾಣಿಕರ ಅಳಿದುಳಿದ ಲಗೇಜುಗಳಲ್ಲಿದ್ದ ವೈನ್, ಚಾಕೋಲೆಟ್ ಗಳನ್ನು ತಿಂದು ಜೀವ ಉಳಿಸಿಕೊಳ್ಳಲು ಇವರು ಹೋರಾಟವನ್ನೇ ನಡೆಸುತ್ತಾರೆ. ಕೆಲವು ಹೊತ್ತಿನಲ್ಲಿ ಅವೆಲ್ಲವೂ ಖಾಲಿಯಾಗುತ್ತದೆ. ಮುಂದೆ ಎದುರಾಗುವುದು ಅಳಿವು- ಉಳಿವಿನ ಪ್ರಶ್ನೆ.
ಸಾಮಾಜಿಕ ಕಟ್ಟುಪಾಡುಗಳು, ನಿಯಮಗಳು ಎಲ್ಲವನ್ನೂ ಗಾಳಿಗೆ ತೂರಿ ಅಮಾನವೀಯರಂತೆ ಬದುಕುವ ಅನಿವಾರ್ಯತೆ ಎದುರಾದಾಗ ಜೀವ ಉಳಿಸಿಕೊಂಡವರು ತಮ್ಮ ಅಸ್ತಿತ್ವಕ್ಕಾಗಿ, ಬದುಕಲಿಕ್ಕಾಗಿ ಏನೇನು ಮಾಡಬೇಕಾಗುತ್ತೆ ಎಂಬುದನ್ನು ನಿರ್ಮಾಪಕರು ಚಿತ್ರ ದಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ನಿಸರ್ಗದ ದೈತ್ಯ ಶಕ್ತಿಯ ಮುಂದೆ ಮನುಷ್ಯ ಎಷ್ಟು ಅಸಹಾಯಕ ಎಂಬುದರ ಚಿತ್ರಣ ಇಲ್ಲಿದೆ.
ಚೇತನ್ ಓ.ಆರ್.
ಟಾಪ್ ನ್ಯೂಸ್
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.