ಗಾದೆ ಪುರಾಣ


Team Udayavani, May 2, 2019, 11:17 AM IST

Chinnari-Gaadhe-Purana

01. ವೇದನೆ ಇದ್ದಲ್ಲಿ ಸಾಧನೆ
ಒಳ್ಳೆಯ ಫ‌ಸಲು ಪಡೆಯಲು ಭೂಮಿಯನ್ನು ಆಳವಾಗಿ ಉಳಬೇಕು. ಅಗಲವಾಗಿ ಉತ್ತರೆ ಎಲ್ಲರಿಗೂ ಕಾಣಿಸುತ್ತದೆಯೇ ಹೊರತು, ಅದರಿಂದ ಬೆಳೆಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಕೇವಲ ಕಾಣಿಸುವುದರಿಂದ ನಿಶ್ಚಿತ ಫ‌ಲ ಸಿಕ್ಕುವುದಿಲ್ಲ. ಯಾವುದೇ ವಿಷಯವನ್ನಾಗಲಿ, ಆಳವಾಗಿ ಅಭ್ಯಾಸ ಮಾಡಬೇಕೇ ಹೊರತು, ಸುಮ್ಮನೆ ಅದರ ರೂಪುರೇಷೆಗಳನ್ನು ತಿಳಿದುಕೊಂಡರೆ ಸಾಲದು ಎನ್ನುವುದು ಈ ಗಾದೆಯ ಒಟ್ಟು ಅರ್ಥ.

02. ಸುಂಕದವನ ಮುಂದೆ ಸುಖ ದುಃಖ ಹೇಳಿಕೊಂಡ ಹಾಗೆ
ಯಾರಿಗೆ ಏನು ಹೇಳಬೇಕೋ, ಎಷ್ಟು ಹೇಳಬೇಕೋ ಅಷ್ಟೇ ಹೇಳಬೇಕು. ಸಂಬಂಧವಿಲ್ಲದವರ ಎದುರಿಗೆ ತಾಪತ್ರಯಗಳನ್ನು ಹೇಳಿಕೊಳ್ಳುವುದು ಅವಿವೇಕ ಮತ್ತು ಅದರಿಂದ ಸಮಯ ವ್ಯರ್ಥ. ಅದರಿಂದ ನಗೆಪಾಟಲಿಗೆ ಈಡಾಗಬಹುದು ಅಷ್ಟೆ. ಸುಂಕದವನಿಗೆ ಸುಂಕ ವಸೂಲಿ ಮಾಡುವುದಷ್ಟೇ ಕೆಲಸ. ನಮ್ಮ ಕಷ್ಟ ಸುಖಗಳನ್ನು ಕಟ್ಟಿಕೊಂಡು ಅವನಿಗೆ ಏನೂ ಆಗಬೇಕಿಲ್ಲ.

03. ಬರೆ ಹಾಕಿಕೊಂಡ ಮಾತ್ರಕ್ಕೆ ಬೆಕ್ಕು ಹುಲಿಯಾದೀತೇ?
ಮೈ ಮೇಲೆ ಪಟ್ಟೆ, ಗರ್ಜನೆ, ಬೇಟೆಯಾಡುವ ಕ್ರಮ ಇವೆಲ್ಲಾ ಹುಲಿಗೆ ವಂಶಪಾರಂಪರ್ಯವಾಗಿ ಬಂದ ಗುಣಗಳು. ಗಾತ್ರದಲ್ಲಿ, ಸಾಹಸದಲ್ಲಿ ತನಗಿಂತ ಬಲಿಷ್ಠವಾದ ಹುಲಿಯನ್ನು ಅನುಕರಿಸಲು ಹೋಗಿ ಬೆಕ್ಕು ತನ್ನ ಮೈ ಮೇಲೆ ಬರೆ ಹಾಕಿಕೊಂಡ ಮಾತ್ರಕ್ಕೆ ಅದು ಹುಲಿಯಾಗಲು ಸಾಧ್ಯವೇ? ದೊಡ್ಡ ಮನುಷ್ಯರನ್ನು, ಪ್ರತಿಭಾವಂತರನ್ನು ಅನುಕರಿಸಲು ಹೋಗಿ ಮೂರ್ಖತನ ಪ್ರದರ್ಶಿಸಬಾರದು.

04. ಲೊಚಗುಟ್ಟುವ ಹಲ್ಲಿ ಭವಿಷ್ಯ ಹೇಳಬಲ್ಲದೇ?
ಹಲ್ಲಿಯ ಶಕುನ ನಂಬುವುದು, ಬೆಕ್ಕು ಅಡ್ಡ ಬಂದರೆ ಹಿಂದಕ್ಕೆ ಹೋಗುವುದು, ಬೆಳಗೆದ್ದು ನರಿ ಮುಖ ನೋಡಿದರೆ ಭಾಗ್ಯ ಬರುತ್ತದೆ ಎನ್ನುವುದು, ಎಡಗಾಲು ಎಡವುವುದು ಅಥವಾ ಒಂಟಿ ಸೀನು ಸೀನುವುದು ಕೆಟ್ಟ ಶಕುನ ಎನ್ನುವುದು… ಮೊದಲಾದ ಮೂಢನಂಬಿಕೆಗಳು ಇಂದಿಗೂ ನಮ್ಮಲ್ಲಿ ಜನಜನಿತವಾಗಿದೆ. ಪರೀಕ್ಷೆಗೆ ಒಳಪಡದ ಯಾವ ನಂಬಿಕೆಯೂ ನಂಬಲು ಅರ್ಹವಲ್ಲ. ಮೂಢನಂಬಿಕೆಗಳನ್ನು ಬಿಡಬೇಕು ಎನ್ನುವುದು ಈ ನುಡಿಗಟ್ಟಿನ ಅರ್ಥ.

– ಸಂಗ್ರಹ- ವಿವರಣೆ: ಸಂಪಟೂರು ವಿಶ್ವನಾಥ್‌

ಟಾಪ್ ನ್ಯೂಸ್

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.