ಮಕ್ಕಳ ನೃತ್ಯಂ ಮೈಸೂರು ಮಂದಿಯ ಸಿನಿಮಾ ಪ್ರೀತಿ
Team Udayavani, Sep 14, 2018, 6:00 AM IST
ನಾನೆಲ್ಲಾದರೂ ಮೈಸೂರಿಗೆ ಬಂದು ಬಿಟ್ನಾ?’ಹಾಗಂತ ಪದೇಪದೇ ಕೇಳಿದರು ನಿರ್ಮಾಪಕ ಉಮೇಶ್ ಬಣಕಾರ್. ಅದಕ್ಕೆ ಕಾರಣ ವೇದಿಕೆಯ ಮೇಲೆ, ಕೆಳಗೆ ಮೈಸೂರಿನವರೇ ಇದ್ದರು. ಅದೇ ಕಾರಣಕ್ಕೆ ಉಮೇಶ್ ಬಣಕಾರ್, “ಯಾರನ್ನ ಕೇಳಿದ್ರೂ ಮೈಸೂರಿನವ್ರು ಅಂತಾರೆ. ನಾನೇನಾದರೂ ಮೈಸೂರಿಗೆ ಬಂದುಬಿಟ್ನಾ ಅಂತ ಕೇಳಿದ್ದೇ ಅದಕ್ಕೆ’ ಎಂದರು.
ಅಂದಹಾಗೆ, ಉಮೇಶ್ ಬಣಕಾರ್ ಹೀಗೆ ಮಾತಾಡಿದ್ದು “ನೃತ್ಯಂ’ ಎಂಬ ಹೊಸ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ. ಹೆಸರೇ ಹೇಳುವಂತೆ ಇದೊಂದು ನೃತ್ಯದ ಕುರಿತಾದ ಚಿತ್ರ. ಮೈಸೂರು ರಾಜು ಎನ್ನುವವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇನ್ನು ಪ್ರವೀನ್ ಲಾಡ್ ಎನ್ನುವವರು ಈ ಚಿತ್ರದ ನಿರ್ಮಾಪಕರು. ಅತಿಷಯ್ ಜೈನ್ ಸಂಗೀತ ಸಂಯೋಜಿಸಿರುವ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ, ಉಮೇಶ್ ಬಣಕಾರ್ ಸೇರಿದಂತೆ ಹಲವರು ಆಗಮಿಸಿದ್ದರು.
ತಮ್ಮ ಮಾತು ಮುಂದುವರೆಸಿದ ಉಮೇಶ್ ಬಣಕಾರ್, “ಸಾಮಾನ್ಯವಾಗಿ ನಿರ್ಮಾಪಕರು ತಮ್ಮ ಮಕ್ಕಳನ್ನೇ ಹೀರೋಗಳನ್ನಾಗಿ ಮಾಡಿ ಸಿನಿಮಾ ಮಾಡುತ್ತಿದ್ದಾರೆ. ಆದರೆ, ಈ ನಿರ್ಮಾಪಕರು ಬೇರೆಯವರ ಮಕ್ಕಳನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಮಕ್ಕಳಿಗಷ್ಟೇ ಅಲ್ಲ, ನಿರ್ಮಾಪಕರಿಗೂ ಮುಗ್ಧತೆ ಇದೆ. ಆ ಮುಗ್ಧತೆ ಅವರ ಕೈಬಿಡುವುದಿಲ್ಲ. ಚಿತ್ರದಲ್ಲಿ ನಟಿಸಿರುವ ಮಹೇಂದ್ರ ಅವರ ಅಭಿನಯ ನೋಡಿದೆ. ನನಗೆ ಅವರ ಬಾಡಿ ಲಾಂಗ್ವೇಜ್ ಇಷ್ಟವಾಯಿತು. ಯಾವ ದೊಡ್ಡ ಕಲಾವಿದರಿಗೂ ಆತ ಕಡಿಮೆ ಇಲ್ಲ. ಚಿತ್ರದಲ್ಲಿ ನಟಿಸಿರುವ ಮಕ್ಕಳು, ಹಂತಹಂತವಾಗಿ ಬೆಳೆಯಲಿ. ಬೆಳೆದ ಮೇಲೆ ನಿರ್ಮಾಪಕರನ್ನು ಕೈ ಬಿಡಬೇಡಿ’ ಎಂದು ಕರೆ ನೀಡಿದರು
ಇದೊಂದು ನೃತ್ಯದ ಕುರಿತಾದ ಚಿತ್ರವಷ್ಟೇ ಅಲ್ಲ, ಮಕ್ಕಳ ಚಿತ್ರವೂ ಹೌದು. ನೃತ್ಯ ಕಲಿಯಬೇಕು ಎಂಬ ಆಸೆ ಇರುವ ಒಂದಿಷ್ಟು ಮಕ್ಕಳು, ಅದನ್ನು ಸವಾಲಾಗಿ ತೆಗೆದುಕೊಂಡು, ಹೇಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ ಎನ್ನುವುದು ಚಿತ್ರದ ಕಥೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ