![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಆಫ್ ಬೀಟೂ ಅಲ್ಲ; ಫುಲ್ ಬೀಟೂ ಅಲ್ಲ, ಪಂಟ ಎಂಬ ಹೊಸ ಬೀಟ್ ಸಿನಿಮಾ
Team Udayavani, Feb 17, 2017, 3:50 AM IST
![Panta.jpg](https://www.udayavani.com/wp-content/uploads/2017/02/16/Panta-620x419.jpg)
ಎಸ್.ನಾರಾಯಣ್ ನಿರ್ದೇಶನದ “ಪಂಟ’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರ ಇಂದು ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ.
“ಲಕ್ಷ್ಮಣ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಲಾಂಚ್ ಆದ ಅನೂಪ್ ರೇವಣ್ಣ ನಟಿಸಿರುವ ಎರಡನೇ ಸಿನಿಮಾ “ಪಂಟ’. ಸ್ವತಃ ನಾರಾಯಣ್ ಅವರಿಗೆ “ಪಂಟ’ ಒಂದು ಹೊಸ ಬಗೆಯ ಸಿನಿಮಾವಂತೆ. ಅವರ ಮಾತಲ್ಲೇ ಹೇಳುವುದಾದರೆ ಇದು ಹೊಸ ಬೀಟ್ ಸಿನಿಮಾ. “ಇದು ಆಫ್ಬೀಟ್ ಸಿನಿಮಾನೂ ಅಲ್ಲ, ಫುಲ್ಬಿàಟ್ ಸಿನಿಮಾನೂ ಅಲ್ಲ, ಒಂದು ಹೊಸ ಬೀಟ್ ಸಿನಿಮಾ ಎನ್ನಬಹುದು’ ಎಂದು ನಾರಾಯಣ್ “ಪಂಟ’ ಸಿನಿಮಾದ ಬಗ್ಗೆ ಹೇಳಿದರು. ಹಾಗಂತ ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳಿಗೆ ಯಾವುದೇ ಕೊರತೆಯಿಲ್ಲ. ಜನರನ್ನು ಮೆಚ್ಚಿಸಲು ಏನೆಲ್ಲಾ ಅಂಶಗಳು ಬೇಕೋ ಆ ಎಲ್ಲಾ ಅಂಶಗಳು ಈ ಸಿನಿಮಾದಲ್ಲಿವೆಯಂತೆ. ಚಿತ್ರದಲ್ಲಿ ನಾಯಕನ ಪಾತ್ರ ತುಂಬಾ ಭಿನ್ನವಾಗಿದೆ ಎಂಬುದು ನಾರಾಯಣ್ ಮಾತು. ನಾಯಕ ಯಾವ ಕ್ಷಣ ಏನು ಯೋಚನೆ ಮಾಡುತ್ತಾನೆ, ಆತನ ಕಾರ್ಯವೈಖರಿ ಹೇಗಿರುತ್ತದೆ ಎಂಬುದನ್ನು ಊಹಿಸೋದು ಕೂಡಾ ಕಷ್ಟ ಎಂಬುದು ನಾರಾಯಣ್ ಮಾತು. ಚಿತ್ರಕ್ಕೆ ಸುದೀಪ್ ಹಾಡಿರುವ ಹಾಡು ಹಿಟ್ ಆಗಿರುವ ಬಗ್ಗೆಯೂ ನಾರಾಯಣ್ ಖುಷಿಯಿಂದ ಹೇಳಿಕೊಂಡರು. ಚಿತ್ರದಲ್ಲಿ ನಾಯಕಿಯ ಹೊರತಾಗಿ ಮೂರು ಪಾತ್ರಗಳು ಪ್ರಮುಖವಾಗಿರುತ್ತದೆಯಂತೆ. ಅದು ನಾಯಕ ಹಾಗೂ ಆತನ ಇಬ್ಬರು ಸ್ನೇಹಿತರು. ತರಂಗ ವಿಶ್ವ ನಾಯಕನ ಸ್ನೇಹಿತನ ಪಾತ್ರದಲ್ಲಿ ನಟಿಸಿದ್ದಾರೆ.
ನಾಯಕ ಅನೂಪ್ ಅವರಿಗೆ ಎರಡನೇ ಸಿನಿಮಾಕ್ಕೆ ನಾರಾಯಣ್ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ಖುಷಿಕೊಟ್ಟಿದೆಯಂತೆ. “ನಾರಾಯಣ್ ಅವರಿಂದ ಸಾಕಷ್ಟು ಕಲಿತೆ. ಇಡೀ ಸೆಟ್ ಅನ್ನು ಅವರು ಜಾಲಿಯಾಗಿಟ್ಟು, ಕಲಾವಿದರಿಂದ ನಟನೆ ತೆಗೆಸುತ್ತಾರೆ’ ಎನ್ನುವುದು ಅನೂಪ್ ಮಾತು. ನಾಯಕಿ ರಿತೀಕ್ಷಾ ಸೇರಿದಂತೆ ಚಿತ್ರದಲ್ಲಿ ನಟಿಸಿದ ಕಲಾವಿದರು “ಪಂಟ’ ಬಗೆಗಿನ ತಮ್ಮ ಅನಿಸಿಕೆ ಹಂಚಿಕೊಂಡರು.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.