![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಚಾಕಲೇಟ್ ಗರ್ಲ್ ಬಂದ್ಲು
Team Udayavani, Apr 14, 2017, 3:50 AM IST
![14-SUCHI-4.jpg](https://www.udayavani.com/wp-content/uploads/2017/04/13/14-SUCHI-4.jpg)
“ಥ್ರಿ ಪೆಗ್’ ಎಂಬ ರ್ಯಾಪ್ ಆಲ್ಬಂ ಮಾಡಿರುವ ಚಂದನ್ ಶೆಟ್ಟಿ “ಚಾಕಲೇಟ್ ಗರ್ಲ್’ ಎಂಬ ಮತ್ತೂಂದು ವೀಡಿಯೋ ಆಲ್ಬಂ ಮಾಡುತ್ತಾರೆಂಬ ವಿಷಯ ನಿಮಗೆ ಗೊತ್ತೇ ಇದೆ. ಈಗ “ಚಾಕಲೇಟ್ ಗರ್ಲ್’ ಆಲ್ಬಂ ಬಿಡುಗಡೆಯಾಗಿದೆ. ಇತ್ತೀಚೆಗೆ ಮಂತ್ರಿ ಮಾಲ್ನಲ್ಲಿ ಆಲ್ಬಂ ರಿಲೀಸ್ ಮಾಡಿದ್ದು, “ಥ್ರಿ ಪೆಗ್’ಗೆ ಸಿಕ್ಕಂತಹ ಪ್ರತಿಕ್ರಿಯೆ ಸಿಗುತ್ತದೆ ಎಂಬ ವಿಶ್ವಾಸ ಚಂದನ್ ಶೆಟ್ಟಿಗಿದೆ. ಸುಮಾರು 17 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಆಲ್ಬಂ ಮಾಡಿದ್ದು, ನೇಹಾ ಶೆಟ್ಟಿ ಇದರಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಆಲ್ಬಂನಲ್ಲಿ ಎಂಜಿಆರ್ ಅವರ ಬಳಸಿರುವ ರೋಲ್ಸ್ ರಾಯ್ ಕಾರನ್ನು ಬಳಸಲಾಗಿದೆ. ಜೊತೆಗೆ ಲ್ಯಾಂಬೋರ್ಗಿನಿ ಕಾರೊಂದನ್ನು ಕೂಡಾ ಬಳಸಲಾಗಿದ್ದು, ಬಹುತೇಕ ಹಾಡನ್ನು ಈ ಎರಡು ಕಾರಿನ ಅಕ್ಕಪಕ್ಕವೇ ಚಿತ್ರೀಕರಿಸಲಾಗಿದೆ. “ಈ ಹಿಂದಿನ ನನ್ನ ಎರಡು ಆಲ್ಬಂಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅದೇ ರೀತಿ “ಚಾಕಲೇಟ್ ಗರ್ಲ್’ಗೂ ಸಿಗುತ್ತದೆಂಬ ವಿಶ್ವಾಸವಿದೆ’ ಎಂಬುದು ಚಂದನ್ ಶೆಟ್ಟಿ ಮಾತು. ಇನ್ನು, ತಮ್ಮ ಆಲ್ಬಂವೊಂದು ಮಲ್ಟಿಪ್ಲೆಕ್ಸ್ ಪರದೆಯಲ್ಲಿ ಮೂಡಿಬರುತ್ತಿರುವ ಖುಷಿ ಕೂಡಾ ಚಂದನ್ ಮುಖದಲ್ಲಿ ಎದ್ದು ಕಾಣುತ್ತಿತ್ತು. ಈ ಆಲ್ಬಂ ಅನ್ನು ದಿನೇಶ್ ನಿರ್ಮಿಸಿದ್ದು, ಆಲ್ಬಂ ನಿರ್ಮಾಣದ ವೇಳೆ ಅನೇಕರು ಸಹಾಯ ಮಾಡಿದ್ದು, ಅದರಲ್ಲಿ ಲ್ಯಾಂಬೋರ್ಗಿನಿ ಕಾರು ಕೊಟ್ಟವರನ್ನೂ ನೆನಪಿಸಿಕೊಂಡರು ದಿನೇಶ್. “ಆಲ್ವಂ ಅನ್ನು ಹಾಲಿವುಡ್ ಶೈಲಿಯಲ್ಲಿ ವಿಭಿನ್ನವಾಗಿ ಮಾಡಬೇಕೆಂಬ ಆಸೆ ಇತ್ತು. ಅದು ಈಗ ಈಡೇರಿದೆ. ಈ ಆಲ್ಬಂ ಕೂಡಾ ಹಿಟ್ ಆಗುತ್ತದೆ ಎಂಬ ವಿಶ್ವಾಸ ದಿನೇಶ್ಗಿದೆಯಂತೆ. ಆಲ್ಬಂನಲ್ಲಿ ಕಾಣಿಸಿಕೊಂಡಿದ್ದ ನೇಹಾ ಶೆಟ್ಟಿ ಕಾರ್ಯಕ್ರಮಕ್ಕೆ ಬಂದಿರಲಿಲ್ಲ.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.