ಈ ವಾರ ತೆರೆಗೆ
Team Udayavani, Nov 24, 2017, 11:47 AM IST
ಉಪ್ಪು ಹುಳಿ ಖಾರ: ಇಮ್ರಾನ್ ಸರ್ದಾರಿಯ ನಿರ್ದೇಶನದ ಈ ಚಿತ್ರಕ್ಕೆ ರಮೇಶ್ರೆಡ್ಡಿ ನಿರ್ಮಾಪಕರು. ಚಿತ್ರದಲ್ಲಿ ಮಾಲಾಶ್ರೀ, ಅನುಶ್ರೀ, ಜಯಶ್ರೀ, ಶರತ್, ಶಶಿ, ಧನಂಜಯ (ನೃತ್ಯ ನಿರ್ದೇಶಕ ಧನು), ಅಪರೂಪ್ ನಟಿಸಿದ್ದಾರೆ. ರಾಗಿಣಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಎ.ಪಿ.ಅರ್ಜುನ್ ಸಂಭಾಷಣೆ ಬರೆದರೆ, ಶಷಾಂಕ್ ಶೇಷಗಿರಿ, ಜುಡಾ ಸ್ಯಾಂಡಿ, ಪ್ರಜ್ವಲ್ ಪೈ ಹಾಗೂ ಕಿಶೋರ್ ಅಕ್ಸ ಸಂಗೀತ ನೀಡಿದ್ದಾರೆ. ಲಾನ್ಸ್ಕೆಪ್ಲನ್ ಮತ್ತು ನಿರಂಜನ್ಬಾಬು ಕ್ಯಾಮೆರಾ ಹಿಡಿದಿದ್ದಾರೆ.
ಅತಿರಥ: ಮಹೇಶ್ ಬಾಬು ನಿರ್ದೇಶನದ ಈ ಚಿತ್ರಕ್ಕೆ ಚೇತ್ ಹೀರೋ. ಲತಾ ಹೆಗಡೆ ನಾಯಕಿ. ಚಾಮುಂಡಿ ಸಿನಿ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಹರೀಶ್ ಜಯಕೃಷ್ಣ ಅವರು ಸಂಭಾಷಣೆ ಬರೆದಿದ್ದಾರೆ. ಪ್ರೇಮ್, ಡಾ.ವೇಣುಗೋಪಾಲ್ ಮತ್ತು ಗಂಡಸಿ ಮಂಜುನಾಥ್ ನಿರ್ಮಾಪಕರು. ಚಿತ್ರದಲ್ಲಿ ಅವಿನಾಶ್, ಅಚ್ಯುತ್ ಕುಮಾರ್, ಕಬೀರ್ ಸಿಂಗ್, ಸಾಧು ಕೋಕಿಲಾ, ಸುಧಾ ಬೆಳವಾಡಿ, ಅರುಣ ಬಾಲರಾಜ್, ಪ್ರಶಾಂತ್ ಸಿದ್ದಿ, ಮೋಹನ್ ಜುನೇಜ ಇತರರು ಇದ್ದಾರೆ. ಜೈ ಆನಂದ್ ಛಾಯಾಗ್ರಹಣವಿದೆ. ಸುರಾಗ್ ಸಂಗೀತವಿದೆ. ನಾಗೇಂದ್ರ ಪ್ರಸಾದ್, ಕವಿರಾಜ್, ಗೌಸ್ಪೀರ್, ಚೇತನ್ ಗೀತೆ ರಚಿಸಿದ್ದಾರೆ.
ಹನಿ ಹನಿ ಇಬ್ಬನಿ: ಈ ಚಿತ್ರದ ಮೂಲಕ ಮದ್ದೂರ್ ಶಿವು ನಿರ್ದೇಶಕರಾಗಿದ್ದಾರೆ. ನಿರ್ಮಾಣ ಕೂಡ ಇವರದೇ. ಸ್ನೇಹ, ಪ್ರೀತಿ ಹಾಗೂ ಹಾಸ್ಯ ಚಿತ್ರದಲ್ಲಿದೆ. ಇಂದ್ರಸೇನ ಐದು ಹಾಡುಗಳಿಗೆ ಸಂಗೀತ ನೀಡಿದ್ದಾರ. ನಾಗೇಶ್ವರರಾವ್ ಕ್ಯಾಮೆರಾ ಹಿಡಿದಿದ್ದಾರೆ. ಹಂಸರಾಜ್ ಕಥೆ ಬರೆದರೆ, ಅನಂತ ಪದ್ಮನಾಭ ಸಂಭಾಷಣೆ ಬರೆದಿದ್ದಾರೆ. ದಿಲ್ಸೆ ದಿಲೀಪ್ ಗೀತ ರಚಿಸಿದ್ದಾರೆ. ಅಜಿತ್ ಜಯರಾಜ್ ಚಿತ್ರದ ಹೀರೋ. ದೀಪ್ತಿ ಕಾಪ್ಸೆ ಹಾಗೂ ನಿರೀಕ್ಷಾ ನಾಯಕಿಯರು. ನೆಲ ನರೇಂದ್ರ ಬಾಬು, ಉಮೇಶ್, ಜೋಗಿ ಆನಂದ್ ಇತರರು ನಟಿಸಿದ್ದಾರೆ.
ನಮ್ಮೂರಲ್ಲಿ: ಹೊಸಬರೇ ಸೇರಿ ಮಾಡಿರುವ ಈ ಚಿತ್ರವನ್ನು ನಾಗೇಂದ್ರ ನಿರ್ಮಿಸಿದ್ದಾರೆ. ಎಲ್.ಎಂ.ಗೌಡ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಾಜು ಶಿರಾ ಛಾಯಾಗ್ರಹಣವಿದೆ. ಹರ್ಷ ಕೂಗೋಡು ಸಂಗೀತ ನೀಡಿದ್ದಾರೆ. ಮಂಜು ಎಮ್ಮೆನಹಳ್ಳಿ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಹಿತನ್ ಹಾಸನ್ ಸಾಹಿತ್ಯವಿದೆ. ಥ್ರಿಲ್ಲರ್ ಮಂಜು ಸಾಹಸವಿದೆ. ಶೇಖರ್ ರಾಜ್, ರಚಿತಾಗೌಡ, ತನುಜಾ, ಪುಷ್ಪಾ, ವಿಶಾಲ್, ನಾಗೇಂದ್ರ, ಜಿ.ವೆಂಕಟರಮಣಪ್ಪ, ಶಫಿ, ಶಶಿ, ಅನಿತಾ, ಅಕ್ಮಲ್ ವಿ ಕೋಟೆ ಇತರರು ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ