ಬಾಬು ಕೃಷ್ಣಮೂರ್ತಿ 75ರ ಸಂಭ್ರಮ


Team Udayavani, Apr 1, 2018, 7:30 AM IST

3.jpg

ಕನ್ನಡ ಸಾಹಿತ್ಯಕ್ಕೆ ಕ್ರಾಂತಿಕಾರಿಗಳಾದ ಚಂದ್ರಶೇಖರ ಆಜಾದ್‌, ಭಗತ್‌ ಸಿಂಗ್‌, ವೀರ ಸಾವರ್ಕರ್‌, ಬಾಘಾ ಜತೀನ್‌, ಸಾಧುಗಳಾದ ಶ್ರೀಲ ಪ್ರಭುಪಾದ ಇವರನ್ನು ತಮ್ಮ ಐದು ಬೃಹತ್‌ ಕಾದಂಬರಿಗಳ ಮೂಲಕ ಪರಿಚಯಿಸಿದ ಕೀರ್ತಿ ಹಿರಿಯ ಪತ್ರಕರ್ತ ಬಾಬು ಕೃಷ್ಣಮೂರ್ತಿಯವರಿಗೆ ಸಲ್ಲುತ್ತದೆ. ಅವರಿಗೆ 75 ವರ್ಷ ನಡೆಯುತ್ತಿರುವ ಸಂದರ್ಭದಲ್ಲಿ ಇಂದು ಬೆಂಗಳೂರಿನಲ್ಲಿ ಅವರ ಸಾಹಿತ್ಯದ ಕುರಿತ ವಿಚಾರಸಂಕಿರಣ ಆಯೋಜನೆಗೊಂಡಿದೆ. ಈ ಸಂದರ್ಭದಲ್ಲಿ ಬಾಬು ಕೃಷ್ಣಮೂರ್ತಿ: ಸಾಹಿತ್ಯ ವಿಮರ್ಶೆ  ಕೃತಿಯೂ ಬಿಡುಗಡೆಯಾಗಲಿದೆ.

ಬಾಬು ಕೃಷ್ಣಮೂರ್ತಿ ಬಿಎಸ್ಸಿ ಆದಮೇಲೆ ವಿದ್ಯಾಭ್ಯಾಸ ಮುಂದುವರಿಸಲಿಲ್ಲ. ಮೆಡಿಕಲ್‌ ರೆಪ್‌ ಆಗುವ ಅವಕಾಶ ಬಂದಿತ್ತು. ಅದರ ಬದಲು ಅವರು ತಮ್ಮ ಓದಿನ ಬಲ, ದೇಶಭಕ್ತರನ್ನು ಸಾಹಿತ್ಯದ ಮೂಲಕ, ದೊಡ್ಡ ದೊಡ್ಡ ಕಾದಂಬರಿಗಳನ್ನು ಬರೆಯುವ ಮೂಲಕ ಕನ್ನಡದ ಓದುಗರಿಗೆ ಪರಿಚಯಿಸಲು ಮನಸ್ಸು ಮಾಡಿದರು. ಇದಕ್ಕೆ ಅವರಿಗೆ ಮಧ್ವರಾವ್‌ ಎಂಬ ಹಿರಿಯ ಹಿತೈಷಿಗಳ ನಿರಂತರ ಪ್ರೋತ್ಸಾಹವಿತ್ತು.

ಬೆಂಗಳೂರಿನ ವಾತಾವರಣದ ಕಾರಣದಿಂದ ಅವರಿಗೆ ಸಿದ್ಧವನಹಳ್ಳಿ ಕೃಷ್ಣಶರ್ಮ, ಪು.ತಿ. ನರಸಿಂಹಾಚಾರ್‌, ತಿರುಮಲೆ ತಾತಾಚಾರ್ಯ ಶರ್ಮ, ಜಿ.ಪಿ. ರಾಜರತ್ನಂ ಅವರ ಪರಿಚಯವಾಯಿತು. ಸಿನೆಮಾ ನಟ ಉದಯ ಕುಮಾರ್‌ ಅವರಿಗೆ ಮೊದಲಿನಿಂದಲೂ ಕೃಷ್ಣಮೂರ್ತಿಯವರ ಸಾಹಿತ್ಯ ಪ್ರತಿಭೆಯ ಮೇಲೆ ಅಪಾರ ಭರವಸೆಯಿತ್ತು.  ಮುಂದೆ ಅವರು ಅಜೇಯ ಬರೆದು ರಾತ್ರೋರಾತ್ರಿ ಕರ್ನಾಟಕ ಫೇಮಸ್‌ ಆದ ಬಳಿಕ ಮಾಸ್ತಿ, ವಿ. ಕೃ. ಗೋಕಾಕ್‌, ಬಸವರಾಜ ಕಟ್ಟಿàಮನಿ, ತ.ರಾ.ಸು., ಕೊರಟಿ ಶ್ರೀನಿವಾಸ ರಾವ್‌ ಅವರ ಮೆಚ್ಚುಗೆಗೂ ಪಾತ್ರರಾದರು.

ಕೆಲವು ಕಾಲ ದೇಶಸೇವೆ ಮಾಡಲು ಮದುವೆಯಾಗದೆ ಉಳಿದಿದ್ದ ಅವರು 1986ರಲ್ಲಿ ಶ್ರೀಮತಿ ಸುಶೀಲಾ ಅವರನ್ನು ಮದುವೆಯಾದರು. ಕೃಷ್ಣಮೂರ್ತಿಯವರ ಜೀವನ ಮತ್ತು ಸಾಹಿತ್ಯಜೀವನ ಎರಡಲ್ಲೂ ಆಕೆಯ ಪಾತ್ರ ದೊಡ್ಡದು. ಅವರ ಸಹಾಯವಿಲ್ಲದಿದ್ದರೆ ಈ ಪ್ರಮಾಣದ ಸಮಯ, ತಾಳ್ಮೆ, ನಿರಂತರ ಪ್ರವಾಸ, ಅಧ್ಯಯನ ಬೇಡುವ ದೈತ್ಯಕೃತಿಗಳನ್ನು ಕೃಷ್ಣಮೂರ್ತಿಯವರು ಪ್ರಾಯಃ ರಚಿಸಲು ಸಾಧ್ಯವಾಗುತ್ತಿರಲಿಲ್ಲ.

ಮದುವೆಯಾದ ಬಳಿಕ ಕೃಷ್ಣಮೂರ್ತಿಯವರು ವಾರಪತ್ರಿಕೆಯೊಂದರ ಸಂಪಾದಕರಾಗಿ ಸುದೀರ್ಘ‌ ಕಾಲ ಕೆಲಸ ಮಾಡಿದರು. ಈ ಅವಧಿಯಲ್ಲಿ ಅವರ ಮುಂದಿನ ಬೃಹತ್‌ ಕೃತಿಗಳ ಹಿನ್ನೆಲೆಯಲ್ಲಿ ನಿರಂತರ ಓದು, ವಿಷಯ ಸಂಗ್ರಹಣೆ ನಡೆದಿತ್ತು. ಈಗ ಕನ್ನಡ ಸಾಹಿತ್ಯದಲ್ಲಿ ಪ್ರಸಿದ್ಧರಾಗಿರುವ ಅನೇಕ ಲೇಖಕ-ಲೇಖಕಿಯರನ್ನು ಪರಿಚಯಿಸಿದವರು ಕೃಷ್ಣಮೂರ್ತಿ. ಅವರು ಅಪ್ಪಟಜ್ಞಾನ ಪಕ್ಷಪಾತಿ. ಭಾರತೀಯ ಯುವಕರು ಕಳೆದ ನೂರು ಅಥವಾ ಎಪ್ಪತ್ತು-ಎಂಬತ್ತು ವರ್ಷಗಳ ಹಿಂದೆ ಹೇಗಿದ್ದರು? ಅವರ ಆಶೋತ್ತರಗಳು ಹೇಗಿದ್ದವು? ಅವರು ವಿದೇಶಿ ಪ್ರಭುತ್ವ ವಸಾಹತುಶಾಹಿ ವಿರುದ್ಧ ಹೋರಾಡಿದ್ದು, ಚಿಂತಿಸಿದ್ದು ಕೃಷ್ಣಮೂರ್ತಿಯವರ ಜ್ಞಾನಾನ್ವೇಷಣೆಯ ದಾರಿ. ಈ ದಾರಿಯಲ್ಲಿ ಅವರು ಸುಮಾರು ಅರವತ್ತು ವರ್ಷಗಳು ಹೆಜ್ಜೆ ಹಾಕಿ¨ªಾರೆ. ಮೊಕಾಶಿಯವರು ಸಿಂಧು ಲಿಪಿಯ ಬೆನ್ನು ಹತ್ತಿದ್ದರು. ಬೇಂದ್ರೆಯವರು ಸಂಖ್ಯೆಗಳ ವಿಲಕ್ಷಣತೆ ಕುರಿತು ಆಳವಾಗಿ ಕೆಲಸ ಮಾಡಿದ್ದಾರೆ. ಶಂಬಾ ಅವರು ವೇದದ ರಹಸ್ಯ ಸಂಕೇತಗಳ ಹುಡುಕಾಟ ಮಾಡಿದರು. ಕುವೆಂಪು ಮಲೆನಾಡಿನ ಅಭಿಜಾತ ಸೌಂದರ್ಯ, ಜೀವನವನ್ನು ಅನುಭವಿಸಿ ಜೀವನದ ಉದ್ದಕ್ಕೂ ಬರೆದರು. ಅವರ ಮಗ ತೇಜಸ್ವಿ ಅದೇ ಮಲೆನಾಡಿನ ನಂತರದ ದಾರುಣ ಪರಿಸ್ಥಿತಿ, ಮನುಷ್ಯನ ದುರಾಸೆ ಅರಣ್ಯವನ್ನು ಬೋಳು ಬೋಳು ಮಾಡಿದ್ದನ್ನು ಚಿತ್ರಿಸಿದರು. ಕಾರಂತರು, ಭೈರಪ್ಪನವರು ಮನುಷ್ಯ  ಸ್ವಭಾವಗಳನ್ನು ತಮ್ಮ ಎಲ್ಲಾ ಕಾದಂಬರಿಗಳಲ್ಲೂ ಅನ್ವೇಷಣೆ ಮಾಡಿದರು. ಹೀಗೆ ಕನ್ನಡದ ಒಬ್ಬೊಬ್ಬ ಲೇಖಕಕರಿಗೂ ಅವರದ್ದೇ ಆದ ಸೃಜನಶೀಲ ತಹತಹವಿದೆ, ಹುಡುಕಾಟವಿದೆ. ಅದರ ಅರ್ಥ ಏನು ಎಂದು ಅವರು ಯಾರೂ ತಲೆಕೆಡಿಸಿಕೊಂಡಿಲ್ಲ, ಬದಲಾಗಿ ತಮ್ಮ ಅಳಿವು-ಉಳಿವಿನ ಪ್ರಶ್ನೆ ಎಂಬಷ್ಟು ಕಾಳಜಿ ವಹಿಸಿ ಈ ಹುಡುಕಾಟ ಮಾಡಿದ್ದಾರೆ. ಗೋಪಾಲಕೃಷ್ಣ ಅಡಿಗರು ಒಮ್ಮೆ ಸಾಹಿತ್ಯದ ಶ್ರೇಷ್ಠತೆ ನನಗೆ ಜೀವನ್ಮರಣದ ಪ್ರಶ್ನೆ ಎಂದು ಹೇಳಿದ್ದರು. ಕೃಷ್ಣಮೂರ್ತಿಯವರ ಒಟ್ಟಾರೆ ಕ್ರಾಂತಿಲೋಕದ ಅನ್ವೇಷಣೆಯನ್ನು ಹೀಗೆ ನೋಡಬೇಕು. ಕ್ರಾಂತಿಕಾರಿಗಳನ್ನು ಕುರಿತು ದೊರಕುವ ಸಣ್ಣ ಸಣ್ಣ ಮಾಹಿತಿಗಳನ್ನು ಒಂದೆಡೆ ಕಲೆ ಹಾಕಿ ಅದಕ್ಕೆ ಸಾಹಿತ್ಯದ ಆಕೃತಿ ನೀಡಿ ರಸವತ್ತಾದ ವೀರ್ಯವತ್ತಾದ ರೂಪದಲ್ಲಿ ಕೃಷ್ಣಮೂರ್ತಿಯವರು ವಾಚಕರಿಗೆ ನೀಡಿದ್ದಾರೆ.

ಅವರು ಬಹಳ ತಿರುಗಾಟ ಮಾಡಿ ತಮ್ಮ ಕೃತಿಗಳನ್ನು ಬರೆದಿಲ್ಲ. ಆದರೆ ಅಜೇಯ ಮತ್ತು ಅದಮ್ಯದಂಥ ಉತ್ತರಭಾರತ ಮತ್ತು ಮರಾಠಿ ನೆಲೆಗಳಿಗೆ ಹೋಗಿ ಬಂದಿದ್ದಾರೆ. ಒಂದು ವಸ್ತು ಅಲ್ಲೇ ಇರುತ್ತದೆ, ಅದನ್ನು ಕಾಣುವವರು ಬಂದಾಗ ಅದು ಅವರ ಕಣ್ಣಿಗೆ ಬೀಳುತ್ತದೆ. ಉದಾಹರಣೆಗೆ ದೇಸಿ ಸಮಾಜವಿಜ್ಞಾನಿ ಧರ್ಮಪಾಲ್‌ ಇಂಗ್ಲೆಂಡಿನ ಗ್ರಂಥಾಲಯಗಳಲ್ಲಿ ದಶಕಗಳಗಟ್ಟಲೆ ಕುಳಿತು ತಪಸ್ಸು ಮಾಡಿದ್ದರಿಂದ, ಅವರಿಗೆ ಹತ್ತಾರು ಲೈಬ್ರರಿಗಳಲ್ಲಿ ಇರುವ 17, 18, 19ನೇ ಶತಮಾನದ ದಾಖಲೆಗಳನ್ನು ನೋಡಲು ಸಾಧ್ಯವಾಯಿತು. ಇನ್ನೂ ಮುಖ್ಯವಾದ ವಿಷಯವೆಂದರೆ, ಅವುಗಳ ನಡುವೆ ಇರುವ ಲಿಂಕ್‌ ಜೋಡಿಸಿ ಬ್ರಿಟಿಷರ ಕಣ್ಣಲ್ಲಿ ಭಾರತ ಹೇಗಿತ್ತು ಎಂಬುದನ್ನು ಸಮಗ್ರವಾಗಿ ಕಲ್ಪಿಸಿಕೊಳ್ಳಲು ಸಾಧ್ಯವಾಯಿತು. ಕೃಷ್ಣಮೂರ್ತಿಯವರ ವಿಷಯದಲ್ಲೂ ಹೆಚ್ಚು ಕಮ್ಮಿ ಹೀಗೆ ಆಯಿತು. ಅಜೇಯ ಕಾದಂಬರಿಗಾಗಿ ಅವರು ಮಾಡಿರುವ ವಿಷಯ ಸಂಗ್ರಹಣೆಯ ಅಗಾಧತೆ, ವಿಪುಲತೆ ನೋಡಿದರೆ ಆಶ್ಚರ್ಯವಾಗುತ್ತದೆ. ದಕ್ಷಿಣಭಾರತದ, ಕರ್ನಾಟಕದ ಯುವ ಲೇಖಕರೊಬ್ಬರು ಕಾಶಿ ಮುಂತಾದ ಕಡೆಗಳಲ್ಲಿ ಸಂಚರಿಸಿ, ಅಲ್ಲಿ ದೊರೆತ ಮಾಹಿತಿಗಳನ್ನು ಕಲೆಹಾಕಿ ತಮ್ಮ ಕೃತಿಯೊಳಗೆ ಅದನ್ನು ಅರ್ಥಪೂರ್ಣವಾಗಿ ಬಳಸಿಕೊಂಡಿರುವುದು ಸೋಜಿಗ ಹುಟ್ಟಿಸುತ್ತದೆ.

ರಷ್ಯನ್‌ ಭಾಷೆಯಲ್ಲಿ ತೊಲ್ಸ್‌ತಾಯ್‌ ಕುರಿತು ಬೃಹತ್‌ ಗ್ರಂಥವಿರದಿದ್ದಿದ್ದರೆ ಹೇಗಿರುತ್ತಿತ್ತು ಹಾಗೆ ಒಂದು ಪರಿಸ್ಥಿತಿ ಈಗಲೂ ಹಿಂದಿ ಸಾಹಿತ್ಯದಲ್ಲಿದೆ. ಅದೆಂದರೆ ಭಗತ್‌ ಸಿಂಗ್‌, ವಿಶ್ವನಾಥ ವೈಶಂಪಾಯನ, ಸುಖದೇವ್‌, ರಾಜಗುರು ಮುಂತಾದವರಿಗೆ ನಾಯಕನಾಗಿದ್ದ ಚಂದ್ರಶೇಖರ ಆಜಾದನ ಜೀವನ ಕುರಿತು 700-800 ಪುಟಗಳ ಉತ್ಕೃಷ್ಟ ಗ್ರಂಥ ಹಿಂದಿಯಲ್ಲಿ ಈವತ್ತಿಗೂ ಇಲ್ಲ. ಆದರೆ, ಕೃಷ್ಣಮೂರ್ತಿಯವರ ಅನ್ವೇಷಣೆಯ ಕಾರಣದಿಂದ ಕನ್ನಡದಲ್ಲಿ ಆಜಾದ್‌ ದೊರೆತ. ಸಾಂಸ್ಕತಿಕ ಫೆನಾಮಿನಾ ಏನು ಎಂಬುದಕ್ಕೆ ಇದೊಂದು ಉದಾಹರಣೆ. ಭಗತ್‌ ಸಿಂಗ್‌ ಪ್ರಸಿದ್ಧನಾದಷ್ಟು ಉತ್ತರಭಾರತದಲ್ಲಿ ಅಜಾದ್‌ ಬೇರೆ ಬೇರೆ ಕಾರಣಗಳಿಂದ ಎಷ್ಟು ಪ್ರಸಿದ್ಧನಾಗಬಹುದಿತ್ತೋ ಅಷ್ಟು ಪ್ರಸಿದ್ಧನಾಗಲಿಲ್ಲ. ಬಾಲಿವುಡ್‌ನ‌ ಪ್ರಸಿದ್ಧ ನಟ, ನಿರ್ದೇಶಕ, ನಿರ್ಮಾಪಕ ಮನೋಜ್‌ ಕುಮಾರ್‌ ಒಮ್ಮೆ ಬಾಬು ಅವರನ್ನು ಉತ್ತರದಲ್ಲಿ ಭಗತ್‌ಸಿಂಗ್‌ ಮನೆಮಾತು. ಆಜಾದ್‌ ಅವನಷ್ಟು ಪ್ರಸಿದ್ಧನಲ್ಲ. ಕರ್ನಾಟಕದಲ್ಲಿ ಆಜಾದ್‌ ಇಷ್ಟು ಪ್ರಸಿದ್ಧ ಹೇಗಾದ? ಎಂದು ಪ್ರಶ್ನಿಸಿದ್ದುಂಟು. ಇದಕ್ಕೆ ಕಾರಣ ಬಾಬು ಅವರ ಅಜೇಯ ಕೃತಿ ಎಂಬುದರಲ್ಲಿ ಅನುಮಾನಗಳಿಲ್ಲ. ಆದರೆ ಕೃಷ್ಣಮೂರ್ತಿಯವರ ಜ್ಞಾನಾನ್ವೇಷಣೆ, ಕ್ರಾಂತಿಕಾರಿಗಳ ಜೀವನ ಅವರು  ದೇಶಕ್ಕಾಗಿ ಪಟ್ಟ ಕಷ್ಟ, ಬಲಿದಾನದ ಮೇಲಿನ ಅಪಾರ ಗೌರವದ ಕಾರಣದಿಂದ ಝಾನ್ಸಿ ರಾಣಿ, ತಾತ್ಯಾ ಟೋಪಿ, ಕುವರಸಿಂಹ, ಆಜಾದ್‌, ಭಗತ್‌, ಫ‌ಡಕೆ, ಬಾಘಾ ಜತಿನ್‌, ಚಿದಂಬರ ಪಿಳೈ ಸುಬ್ರಹ್ಮಣ್ಯ ಭಾರತಿ, ಸಾವರ್ಕರ್‌ ಇವರ ಜೀವನದ ಚಿತ್ರಣ ಕನ್ನಡಿಗರಿಗೆ ದೊರೆತಿದೆ. ಕುವೆಂಪು ಇರದಿದ್ದರೆ ಮಲೆನಾಡಿನ ಅಪೂರ್ವ ಲೋಕ, ಅದರದ್ದೇ ಘನ ವ್ಯಕ್ತಿತ್ವ ಕನ್ನಡಕ್ಕೆ ಸಿಗುತ್ತಿರಲಿಲ್ಲ. ಬಾಬು ಅವರು ಬರೆಯದಿದ್ದರೆ ಈ ವಿಷಯವನ್ನು ಇಷ್ಟು ದೀರ್ಘ‌ವಾಗಿ ಬೇರೆಯವರು ಬರೆಯುತ್ತಿರಲಿಲ್ಲ ಎಂದರೆ ಉತ್ಪ್ರೇಕ್ಷೆಯಲ್ಲ. ಇನ್ನೊಂದು ವಿಷಯವೆಂದರೆ ಅವರು ಬಾಲ್ಯದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಗಳಿಗೆಗೆ ಸಾಕ್ಷಿಯಾದವರು. ಆಗಿನ ಮಲ್ಲೇಶ್ವರದಲ್ಲಿ ಎಲ್ಲೆಲ್ಲಿ ಆಗಸ್ಟ್‌ 15ರಂದು ಭಾರತದ ಧ್ವಜ ಹಾರುತ್ತಿತ್ತು ಎಂದು ಖಚಿತವಾಗಿ ಹೇಳಬಲ್ಲವರು! 

ಜಿ. ಬಿ. ಹರೀಶ

ಟಾಪ್ ನ್ಯೂಸ್

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.