ಜಾತಕ ಕತೆಗಳು: ಕಾಗೆಯ ಅವಸರ


Team Udayavani, Jan 5, 2020, 4:15 AM IST

5

ಒಂದೂರಿನಲ್ಲಿ ಮನೆಯೊಂದರ ಬಳಿ ಇರುವ ಮರದ ಮೇಲೆ ಪಾರಿವಾಳ ವಾಸವಾಗಿತ್ತು. ಆ ಮನೆಯ ಅಡುಗೆ ಕೋಣೆಯ ಬಳಿಯೇ ಆ ಮರವಿತ್ತು. ಪ್ರತಿದಿನವೂ ಆಹಾರ ಹುಡುಕುತ್ತ ಸಾಗುವ ಪಾರಿವಾಳ ಆಗೀಗ ಅಡುಗೆ ಕೋಣೆಯ ಕಿಟಕಿಯ ಬಳಿ ಬಂದು ಕುಳಿತುಕೊಳ್ಳುತ್ತಿತ್ತು.

ಮನೆಯ ಯಜಮಾನಿಗೆ ಪ್ರತಿದಿನವೂ ಓಡಾಡುವ ಈ ಪಾರಿವಾಳದ ಬಗ್ಗೆ ಪ್ರೀತಿಯಿತ್ತು. ಅಡುಗೆ ಕೋಣೆಯ ಕಿಟಕಿಯಿಂದ ದಿನವೂ ಧಾನ್ಯದ ಕಾಳಗಳನ್ನು ಅಥವಾ ಮೀನಿನ ತುಂಡುಗಳನ್ನು ಎಸೆಯುತ್ತಿದ್ದಳು. ಇದರಿಂದ ಬಹಳ ಖುಷಿಯಾದ ಪಾರಿವಾಳ ಆಹಾರ ಹುಡುಕಲು ಹೆಚ್ಚು ದೂರ ಹೋಗುತ್ತಿರಲಿಲ್ಲ.

ವಿಹಾರಕ್ಕೆಂದೋ, ಸ್ನೇಹಿತರನ್ನು, ಅಥವಾ ಬಂಧುಗಳನ್ನು ಮಾತನಾಡಿಸಲೆಂದೋ ಆ ಪಾರಿವಾಳ ದೂರಕ್ಕೆ ಪ್ರಯಾಣಿಸುತ್ತಿತ್ತು. ಪಾರಿವಾಳದ ಈ ಆರಾಮ ಜೀವನವನ್ನು ಅಲ್ಲೇ ಪಕ್ಕದ ಮತ್ತೂಂದು ಮರದಲ್ಲಿ ವಾಸವಾಗಿದ್ದ ಕಾಗೆಯು ಗಮನಿಸುತ್ತಿತ್ತು. ಇಷ್ಟೊಂದು ಆರಾಮದಾಯಕ ಜೀವನ ಹೇಗೆ ಸಾಧ್ಯ ಎಂದು ಅದು ಯೋಚಿಸಲು ಶುರುಮಾಡಿತು. ನಾನು ಎಲ್ಲಿ ಹೋದರೂ, “”ಛೀ ಥೂ… ಹೋಗು ಎಂದು ಓಡಿಸುತ್ತಾರೆ. ಈ ಪಾರಿವಾಳಕ್ಕೆ ಎಷ್ಟೊಂದು ಆರಾಮ ಜಾಗ ಸಿಕ್ಕಿದೆಯಲ್ಲ” ಎಂದುಕೊಂಡಿತು.

ತಾನು ಈ ಪಾರಿವಾಳದ ಸ್ನೇಹ ಸಂಪಾದಿಸಿದರೆ ತನಗೂ ಅನಾಯಾಸವಾಗಿ ಆಹಾರ ಸಿಗಬಹುದು ಎಂದು ಭಾವಿಸಿದ ಕಾಗೆ, ಒಂದು ದಿನ ಪಾರಿವಾಳದ ಜೊತೆಗೆ ಮಾತು ಶುರು ಮಾಡಿತು. ಅದೂ ಇದೂ ಮಾತನಾಡುತ್ತ ಕಾಗೆ, ತನ್ನನ್ನೂ ಅಡುಗೆ ಕೋಣೆಯ ಕಿಟಕಿಯ ಬಳಿ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿತು. ಆದರೆ, ಪಾರಿವಾಳ ಒಪ್ಪಲಿಲ್ಲ. “”ನೀನು ತುಂಬಾ ಅವಸರ ಮಾಡುತ್ತಿ. ನಿನ್ನನ್ನು ಕರೆದುಕೊಂಡು ಹೋದರೆ, ನನಗೂ ಕಾಳುಕಡಿ ಸಿಗಲಿಕ್ಕಿಲ್ಲ” ಎಂದು ಸಿಡುಕಿತು. ಆದರೆ, ಕಾಗೆ ಛಲಬಿಡದ ತ್ರಿವಿಕ್ರಮನಂತೆ, ಪಾರಿವಾಳದ ಮನವೊಲಿಸಲು ಪ್ರಯತ್ನಿಸುತ್ತಲೇ ಇತ್ತು. ಕೊನೆಗೊಂದು ದಿನ ಪಾರಿವಾಳ, “”ಆಯಿತು ನೀನು ನನ್ನೊಂದಿಗೆ ಬಂದು ಕಿಟಕಿಯಲ್ಲಿ ಕುಳಿತುಕೊಳ್ಳಬಹುದು. ನಾವಿಬ್ಬರೂ ರಾಜಕೀಯವೋ, ಸಂಗೀತದ ವಿಷಯವೋ ಮಾತನಾಡುತ್ತ ಕುಳಿತುಕೊಳ್ಳಬಹುದು. ಆದರೆ, ಅವರು ನೀಡುವ ಆಹಾರದಲ್ಲಿ ನಾನು ನಿನಗೆ ಪಾಲು ಕೊಡುವುದಿಲ್ಲ” ಎಂದು ಹೇಳಿತು. ಮನದೊಳಗೆ ಬೇರೆಯೇ ಲೆಕ್ಕಾಚಾರ ಹಾಕಿದ ಕಾಗೆ, ಪಾರಿವಾಳದ ಮಾತಿಗೆ ಒಪ್ಪಿಗೆ ಸೂಚಿಸಿತು.

ಒಂದೆರಡು ದಿನ ಪಾರಿವಾಳದ ಜೊತೆಗೆ ಮಾತಿಗೆ ಕುಳಿತ ಕಾಗೆ ಮತ್ತೂಂದು ದಿನ ಅಲ್ಲಿಂದ ಕದಲಲೇ ಇಲ್ಲ. ಪಾರಿವಾಳವು ಬೇರೇನೂ ದಾರಿ ತೋಚದೇ ಸುಮ್ಮನಿತ್ತು.  ಅಡುಗೆ ಮನೆಯಿಂದ “ಘಮ್‌’ ಎನ್ನುವ ಪರಿಮಳ ಬರುತ್ತಿರುವುದನ್ನು ಗಮನಿಸಿದ ಕಾಗೆಗೆ ತಳಮಳ ಶುರುವಾಯಿತು. ಅದು ಪಾರಿವಾಳವನ್ನು ಸರಿಸಿ, ಕಿಟಕಿಯ ಬಳಿ ಕೊಕ್ಕು ತೂರಿಸಿ ಮೀನು ಕರಿಯುತ್ತಿದ್ದ ಬಾಣಲೆಯನ್ನು ನೋಡಿತು. ಆಸೆಯನ್ನು ತಾಳಲಾರದೇ, “ಕಾ… ಕಾ’ ಎಂದು ಕಿರುಚಿತು.

ಅಡುಗೆಯಾಕೆ ಕಿಟಕಿಯಲ್ಲಿ ಕಾಗೆ ಕುಳಿತಿರುವುದನ್ನು ಕಂಡು ಬೆಚ್ಚಿ ಬಿದ್ದಳು. ಪಾರಿವಾಳವನ್ನು ಓಡಿಸಿ ಈ ಕಾಗೆ ಏತಕ್ಕೆ ಇಲ್ಲಿ ಬಂದಿದೆ ಎಂದು ಹುಬ್ಬುಗಂಟಿಕ್ಕುತ್ತಾ, ಪಕ್ಕದಲ್ಲೇ ಇಟ್ಟಿರುವ ಕವಣೆ ತೆಗೆದು ಬೀಸಿ ಒಗೆದಳು. ಕಾಗೆಯ ನೆತ್ತಿಗೆ ಕವಣೆಯ ಕಲ್ಲು ತಗುಲಿ ಅದು ನೆಲಕ್ಕುರುಳಿತು.  ತನ್ನ ಮಾತು ಕೇಳದೇ ಅವಸರದಲ್ಲಿಯೇ ಅಪಾಯವನ್ನು ಆಹ್ವಾನಿಸಿಕೊಂಡ ಕಾಗೆಯ ಬಗ್ಗೆ ಪಾರಿವಾಳಕ್ಕೆ ಬಹಳ ಬೇಸರವಾಯಿತು. ತಾಳ್ಮೆಯಿಲ್ಲದ ಬಾಳಿನಲ್ಲಿ ಅಪಾಯ ಬೇಗನೇ ಬರುತ್ತದೆ. “ಅತಿಯಾಸೆ ಗತಿಕೇಡು’ ಎಂದು ಹಿರಿಯರು ಹೇಳಿರುವುದನ್ನು ಪಾರಿವಾಳ ಜ್ಞಾಪಿಸಿಕೊಂಡು ಅಡುಗೆ ಕೋಣೆಯ ಕಿಟಕಿಯ ಮೇಲೆ ಸುಮ್ಮನೇ ಕುಳಿತುಕೊಂಡಿತು.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.