ಗಿಡಗಳಿಗೆ ನೀರೂಡುವಾಗ ಒಸರಿತು ಅನುಭವದ ಚಿಲುಮೆ


Team Udayavani, Mar 18, 2018, 7:00 AM IST

s-2.jpg

ಜುಲೈ – ಆಗಸ್ಟ್‌ನಲ್ಲಿ  ಗಿಡಗಳನ್ನು ನೆಟ್ಟಾಯಿತು. ಈಗ ಅವುಗಳನ್ನು ಉಳಿಸುವ ಜವಾಬ್ದಾರಿಯಿದೆ. ಎರಡು ವರ್ಷ ಅವುಗಳನ್ನು ನೋಡಿಕೊಂಡು ನೀರುಣಿಸಿದರಾಯಿತು, ಮತ್ತೆ ಅವು ಜೀವಮಾನವಿಡೀ ನಮಗೆಲ್ಲ  ಉಸಿರು ನೀಡುತ್ತವೆ…

ಜೂನ್‌ನಲ್ಲಿ ಅರಣ್ಯ ಇಲಾಖೆಯವರೋ ಇನ್ನಾರೋ ಗಿಡಗಳನ್ನು ನೆಡುತ್ತಾರೆ. ಹಾಗೆ ನೆಟ್ಟು ಬಿಟ್ಟರೆ ಸಾಲದಲ್ಲ, ಅವುಗಳಿಗೆ ಮುಂದಿನ ನಾಲ್ಕಾರು ವರ್ಷಗಳ ಕಾಲ ಚಳಿಗಾಲ, ಬೇಸಗೆಯಲ್ಲಿ ನೀರು ಕೊಡುತ್ತಾ ಜೀವ ಉಳಿಸುವುದು ಮುಖ್ಯ. ಅನಂತರ ಅವು ತಮ್ಮ ಪಾಡಿಗೆ ಬೆಳೆಯುತ್ತಾ ನೆಳಲು ಒದಗಿಸುತ್ತವೆ. 

ಮಣಿಪಾಲದ ಮಣಿಪಾಲ ಜ್ಯೂನಿಯರ್‌ ಕಾಲೇಜು ಪ್ರೌಢಶಾಲೆಯ “ಸೈನ್ಸ್ ಕ್ಲಬ್‌’ನ 21 ಮಕ್ಕಳು ಮೂರ್ನಾಲ್ಕು ತಿಂಗಳುಗಳಿಂದ ಈಚೆಗೆ ಪ್ರತೀ ರವಿವಾರ ಬೆಳಿಗ್ಗೆ 7.30ರಿಂದ 9 ಗಂಟೆಯವರೆಗೆ ಬಕೇಟು ಹಿಡಿದು ಆಸುಪಾಸಿನ ರಸ್ತೆ ಬದಿಯಲ್ಲಿ ನೆಟ್ಟ ಗಿಡಗಳಿಗೆ ನೀರು ಹನಿಸುತ್ತಿದ್ದಾರೆ. ಅಧ್ಯಾಪಕರ ಜತೆಗೂಡಿ ಮೊದಲ ಬಾರಿಗೆ ರಸ್ತೆ ಬದಿಯ 63 ಗಿಡಗಳಿಗೆ ನೀರು ಹಾಕಿದ ಅವರ ಕಣ್ಣುಗಳಲ್ಲಿ ಏನೋ ಒಂದು ಖುಷಿ.

ಪ್ಲಾನೆಟೋರಿಯಂ ಆವರಣದಿಂದ, ಬಿಎಸ್‌ಎನ್‌ಎಲ್‌ ಕ್ವಾರ್ಟರ್ಸ್‌ನಿಂದ, ಪೊಲೀಸ್‌ ಕ್ವಾರ್ಟರ್ಸ್‌ನಿಂದ ನೀರನ್ನು ಬಕೇಟುಗಳಲ್ಲಿ ತುಂಬಿಕೊಂಡು ಬಂದು ರಸ್ತೆಯ ಬದಿಯ ಗಿಡಗಳಿಗೆ ಹಾಕುವ ಅವರ ಸಂಭ್ರಮವೇ ಸೋಜಿಗದ ಸಂಗತಿ. ನೀರು ಕೊಟ್ಟು ಸಹಕರಿಸಿದವರೆಲ್ಲರಿಗೂ ಅವರು ಆಭಾರಿ. ದಿನಕ್ಕೊಂದೆರಡು ಚೆರಿಗೆ ನೀರನ್ನು ತಮ್ಮ ತಮ್ಮ ಮನೆಯೆದುರಿನ ಗಿಡಕ್ಕೆ ಪ್ರತಿಯೊಬ್ಬರೂ ಹಾಕಿದರೆ ಅವೆಲ್ಲವೂ ನಳನಳಿಸಿ ಬೆಳೆದಾವು. 

ಮೂರ್ನಾಲ್ಕು ತಿಂಗಳ ಹಿಂದೆ ಆರಂಭವಾದ ಈ ಕಾರ್ಯ ಇದುವರೆಗೂ ಒಂದು ರವಿವಾರವೂ ತಪ್ಪಿಹೋಗಿಲ್ಲ. “ಜಲ ಸ್ವಯಂಸೇವಕ’ರಾಗಿ ಬರುವ ಶಾಲೆಯ ಮಕ್ಕಳ ಉತ್ಸಾಹವೂ ಕಡಿಮೆಯಾಗಿಲ್ಲ. ಅದರ ಬದಲು ಈ ಮಕ್ಕಳು ನೀರು ಹಾಕುವ ಪರಿಸರದ ಆಸುಪಾಸಿನಲ್ಲಿ ಜನರ ಮನಸ್ಸು ಬದಲಾಗಿದೆ. ಮೊನ್ನೆಮೊನ್ನೆ ಕಾರಿನಲ್ಲಿ ಹಾದುಹೋಗುವ ಮಹಿಳೆಯೊಬ್ಬರು ಒಂದಷ್ಟು ದೂರ ಹೋದವರು ಮಕ್ಕಳ ಕೆಲಸವನ್ನು ಕಂಡು ನಾಲ್ಕಾರು ತಂಪು ಪಾನೀಯ ಬಾಟಲಿಗಳನ್ನು ಖರೀದಿಸಿ ತಂದು ಮಕ್ಕಳಿಗೆ ಕೊಟ್ಟು ಹೋದರು. ಗಿಡಗಳಿಗೆ ನೀರುಣಿಸುವ ನಿಮ್ಮ ಹೊಟ್ಟೆ ತಣ್ಣಗಿರಲಿ ಮಕ್ಕಳೇ ಎಂದು ಹಾರೈಸಿ ಸಾಗಿದರು. ನೀರು ಹಾಕುವ ಕೆಲಸ ಮೂರ್ನಾಲ್ಕು ತಿಂಗಳು ಪೂರೈಸಿದ ಬಳಿಕ ಈಗ ಖಾಯಂ ಆಗಿ ಮಕ್ಕಳಿಗೆ ನೀರು ಕೊಡುವ ಕೆಲವು ಮನೆಗಳೂ ತಯಾರಾಗಿವೆ. ಆ ಸ್ಥಳಕ್ಕೆ ಹೋದಾಗ ಮಕ್ಕಳು “ಗಿಡಗಳಿಗೆ ಹಾಕಲು ನೀರು ಕೊಡಿ’ ಎಂದು ಕೇಳಬೇಕಾಗಿಲ್ಲ; ಮನೆಯವರು, ಸಂಸ್ಥೆಗಳವರೇ ಪೈಪು ಸಿಕ್ಕಿಸಿ “ತುಂಬಿಸಿಕೊಳ್ಳಿ ಮಕ್ಕಳೇ’ ಅಂದು ಬಿಡುತ್ತಾರೆ. ಕೆಲವು ಮನೆಗಳವರು ಗಿಡಗಳಿಗೆ ನೀರು ಹಾಕುವ ಕೆಲಸವನ್ನು ತಾವೇ ವಹಿಸಿಕೊಂಡಿದ್ದಾರೆ. ಹೀಗಾಗಿ ಮಕ್ಕಳ ಅಷ್ಟು ಗಿಡಗಳ ಜವಾಬ್ದಾರಿ ಕಡಿಮೆಯಾಗಿದೆ, ಬೇರೆ ಇನ್ನಷ್ಟು ಗಿಡಗಳಿಗೆ ನೀರುಣಿಸುವ ಹೊಣೆಗಾರಿಕೆ ಹೊತ್ತುಕೊಂಡಾಗಿದೆ.

ರಸ್ತೆ ಬದಿಯ ಗಿಡಗಳಿಗೆ ನೀರುಣಿಸುವ ಕಾಯಕ ದಲ್ಲಿ ಮಕ್ಕಳಿಗೆ ಒದಗಿದ ಎಲ್ಲ ಅನುಭವಗಳೂ ಒಳ್ಳೆಯವೇ ಆಗಿರಲಿಲ್ಲ. ಒಂದು ಕ್ವಾರ್ಟರ್ಸ್‌ನ ಶಿಕ್ಷಿತ ನಾಗರಿಕರೊಬ್ಬರು, “”ನಾವು ನೀರು ಕೊಟ್ಟರೆ ನೀರೆಲ್ಲ ಖಾಲಿಯಾಗುತ್ತೆ… ಮತ್ತೆ ಪಂಪ್‌ ಚಾಲೂ ಮಾಡಬೇಕಾಗುತ್ತದೆ. ಅಲ್ಲದೆ, ಇಲ್ಲಿ 24 ಮನೆಗಳಿವೆ. ಅವರೆಲ್ಲ ತಕರಾರು ತೆಗೆಯುತ್ತಾರೆ” ಎಂದರು. “”ಮನೆಗೊಂದರಂತೆ ಒಂದೊಂದು ಬಕೇಟ್‌ ನೀಡಿದರೆ 24 ಗಿಡಗಳಿಗೆ ನೀರಾಗುತ್ತದೆ ಸರ್‌ ಮತ್ತು ಆ ನೀರನ್ನು ಮನೆಯಲ್ಲಿ ನೀರನ್ನು ಜಾಗರೂಕತೆಯಿಂದ ಬಳಸಿ ಸರಿದೂಗಿಸಲು ಸಾಧ್ಯವಿಲ್ಲವೇ?” ಎಂದರೂ ಅವರು ಒಪ್ಪಲಿಲ್ಲ. 

ಇದು ಒಂದು ಧ್ರುವ. ಆದರೆ “ಇಲ್ಲಿ ಬನ್ನಿ’ ಎಂದು ನಗುಮುಖದಿಂದ ಕರೆದು, ನೀರು ಕೊಟ್ಟು ಸಹಕರಿಸಿದ್ದು, ಪ್ಲಾನೆಟೋರಿಯಂನ ಸೆಕ್ಯೂರಿಟಿಯವರು ಮತ್ತು ಮೆಚ್ಚುಗೆಯ ನಗೆ, ಸಹಕಾರ ಕೊಟ್ಟು  ಸಹಕರಿಸಿದ್ದು ಪೊಲೀಸ್‌ ಕ್ವಾರ್ಟರ್ಸ್‌ನ ನಿವಾಸಿ ಪೊಲೀಸರು.

ಮಕ್ಕಳು ಅಪ್ರಯತ್ನಪೂರ್ವಕವಾಗಿ ಸರಿ-ತಪ್ಪು, ಸ್ವಾರ್ಥ- ನಿಸ್ವಾರ್ಥ ಹೀಗೆ ಸಮಾಜದ ವಿವಿಧ ಬಣ್ಣಗಳನ್ನು ಸ್ವತಃ ಅನುಭವಿಸಿ ಅರಿತುಕೊಳ್ಳುವಂತಾದುದು ರಸ್ತೆ ಬದಿಯ ಗಿಡಗಳಿಗೆ ನೀರು ಹಾಕುವಂತಹ ಈ ಸಣ್ಣದೆಂದು ಕಾಣಬಹುದಾದ ಕೆಲಸದಿಂದ ಸಾಧ್ಯವಾದ ಇನ್ನೊಂದು ಬಗೆಯ ಕಲಿಕೆ ಎನ್ನಬಹುದೋ ಏನೋ! ಗಿಡಗಳಿಗೆ ನೀರು ಹಾಕುವುದರ ಜತೆಗೆ ಸ್ವತ್ಛ ಭಾರತ್‌ ಅನ್ನೂ ಸಣ್ಣ ಮಾದರಿಯಲ್ಲಾದರೂ ಅನುಷ್ಠಾನಕ್ಕೆ ತರಬಹುದು ಎಂಬುದು ನಾಲ್ಕಾರು ವಾರಗಳ ಬಳಿಕ ಹೊಳೆದ ಆಲೋಚನೆ. ಸರಿ, ಈಗ ನೀರು ಹಾಕುವ ದಾರಿಯಲ್ಲಿ ಮಕ್ಕಳು ಕಸ ಆಯುವ ಕೆಲಸವನ್ನೂ ಕೈಗೊಳ್ಳುತ್ತಿದ್ದಾರೆ.

ನಾವು ಹಾಕಿದ ನೀರಿನಿಂದಷ್ಟೇ ಅವು ಬದುಕಿ ಬೆಳೆಯುತ್ತವೆಂದಲ್ಲ ಅಥವಾ ಇದೊಂದು ಅಸಾಮಾನ್ಯ ಕೆಲಸವೂ ಅಲ್ಲ. ಆದರೆ ಮಕ್ಕಳಲ್ಲಿ ತನ್ನಷ್ಟಕ್ಕೇ ತಾನೇ ಒಂದು ಪರಿಸರದ ಪ್ರಜ್ಞೆ ಮೂಡುತ್ತದೆ. ತಾವು ಆರೈಕೆ ಮಾಡಿದ್ದು ಎನ್ನುವ ಭಾವ ಗಿಡಗಳೊಂದಿಗೆ ಸ್ನೇಹ ಹುಟ್ಟಿಸುತ್ತದೆ. ಅವುಗಳೊಂದಿಗಿನ ಒಡನಾಟ ನಿಜವಾದ ಕಾಳಜಿಗೆ ಕಾರಣವಾಗುತ್ತದೆ. ಲಾಭ ಇಷ್ಟೇ: ಮಕ್ಕಳು ಪ್ರಜ್ಞಾವಂತರಾಗಲು ಸರಿಯಾದ ಮಾರ್ಗ ದೊರೆಯುತ್ತದೆ. ಹಸಿರು ಪರಿಸರದ ಅದ್ಭುತ ಫೋಟೋಗಳನ್ನೋ ವಿಡಿಯೋಗಳನ್ನೋ ನೋಡಿ ಸೃಷ್ಟಿಯಾಗುವ ಪರಿಸರ ಪ್ರೇಮಕ್ಕಿಂತ ಹೀಗೆ ಮೂಡುವ ಪರಿಸರ ಪ್ರೀತಿ ಹೆಚ್ಚು ಗಟ್ಟಿ ಎನ್ನುತ್ತಾರೆ ಗಿಡಗಳಿಗೆ ನೀರು ಹಾಕುವ ಕಾರ್ಯಕ್ಕೆ ಮಕ್ಕಳನ್ನು ಪ್ರೇರೇಪಿಸಿ ಮುನ್ನಡೆಸುತ್ತಿರುವ ಶಿಕ್ಷಕರು. 

ಎಪ್ರಿಲ್‌ ಹೊತ್ತಿಗೆ ಶಾಲೆ ಮುಗಿಯುತ್ತದೆ, ಮತ್ತೆ? ರಜೆಯಲ್ಲೂ ಮಕ್ಕಳು ಬರುತ್ತಾರಂತೆ, ನೀರು ಹಾಕುತ್ತಾರಂತೆ- ಮೋಡ ದಟ್ಟೈಸಿ ಮಳೆಯೇ ಗಿಡಗಳಿಗೆ ನೀರೂಡುವ ಕೆಲಸವನ್ನು ತನ್ನ ಕೈಗೆತ್ತಿಕೊಳ್ಳುವವರೆಗೆ…

ತೇಜಸ್ವಿ

ಟಾಪ್ ನ್ಯೂಸ್

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Indian paradise flycatcher: ಚೋಟುದ್ದ ಹಕ್ಕಿಗೆ ಮಾರುದ್ದ ಬಾಲ!

Indian paradise flycatcher: ಚೋಟುದ್ದ ಹಕ್ಕಿಗೆ ಮಾರುದ್ದ ಬಾಲ!

Puneeth Rajkumar: ಅಪ್ಪು ಎಂಬ ಅಯಸ್ಕಾಂತ..

Puneeth Rajkumar: ಅಪ್ಪು ಎಂಬ ಅಯಸ್ಕಾಂತ..

Wood pecker Bird: ಹೊಂಬೆನ್ನಿನ ಹಕ್ಕಿಯ  ಜೊತೆ ತಂಪಾದ ಸಂಜೆ

Wood pecker Bird: ಹೊಂಬೆನ್ನಿನ ಹಕ್ಕಿಯ  ಜೊತೆ ತಂಪಾದ ಸಂಜೆ

Empowerment: ಬಾಳು ಬೆಳಗಿದ ಬಾಳೆ!

Empowerment: ಬಾಳು ಬೆಳಗಿದ ಬಾಳೆ!

Facebook: ಅರ್ಧಗಂಟೆಯ ಬಿಕ್ಕಟ್ಟಿಗೆ ಕಾಲ ಸ್ತಂಭಿಸಿತು!

Facebook: ಅರ್ಧಗಂಟೆಯ ಬಿಕ್ಕಟ್ಟಿಗೆ ಕಾಲ ಸ್ತಂಭಿಸಿತು!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.