ಪುಟ್ಟ ಕತೆ: ಪದಗಳು, ಖಾಲಿಗಳು


Team Udayavani, Feb 25, 2018, 8:20 AM IST

s-8.jpg

ಶಾಲೆಯಲ್ಲಿ ವಾರದ ಕೊನೆಯ ದಿನ ಪ್ರಬಂಧವನ್ನು ಓದಬೇಕಿತ್ತು. ಪ್ರಬಂಧ ಬರೆಯುವುದು ಹೇಗೆ, ಯಾರಾದರೂ ಹಿರಿಯರಲ್ಲಿ ಬರೆಸೋಣ ಎಂದು ನಮ್ಮ ಈ ಕಥಾನಾಯಕ ಬಗೆದ. ಇವತ್ತಲ್ಲ, ನಾಳೆ ಬರೆಸಿದರಾಯಿತು ಎಂದು ನಿರ್ಧರಿಸಿದ, ಸಹಜವಾಗಿ. 

 ಹಾಗೂಹೀಗೂ ಮುನ್ನಾದಿನ ಸಂಜೆಯವರೆಗೂ ಕ್ಷಣಗಳನ್ನು ಮುಂದೂಡಿದ. ಸಂಜೆ ಆಟದ ಪೀರಿಯೆಡ್‌ ಮುಗಿಯಿತು. ಇನ್ನೇನು ಜನಗಣಮನ ಹಾಡಿಯೂ ಆಯಿತು. ಎಲ್ಲರೂ ಶಾಲೆಯಿಂದ ಹೊರಗೆ ಧಾವಿಸಿ ಮನೆಯ ದಾರಿ ಹಿಡಿದರು. ಇವನು, ಒಂದು ಹಾಳೆಯ ತಲೆಯಲ್ಲಿ ಪ್ರಬಂಧದ ಶೀರ್ಷಿಕೆಯನ್ನು ಗೀಚಿ, ಯಾರಾದರೂ ಅದರ “ದೇಹವನ್ನು’ ಬರೆದುಕೊಡ “ಬಲ್ಲವರು’ ಇದ್ದಾರೆಯೇ ಎಂದು ಅತ್ತಿತ್ತ ಹುಡುಕಾಡಿದ. 

ಸಮಾಜದ ಮೇಷ್ಟ್ರ ಬಳಿ ಹೋಗಿ, “ಸರ್‌, ಒಂದು ಪ್ರಬಂಧ ಬರೆದುಕೊಡಿ’ ಎಂದು ಕೇಳಿದರೆ, “ನೀನು ಲಾಸ್ಟ್‌  ಮೂಮೆಂಟ್‌ವರೆಗೆ ಎಲ್ಲಿಗೆ ಹೋಗಿದ್ದೆ? ಈಗ ನನಗೆ ಪುರುಸೊತ್ತಿಲ್ಲ, ನಡಿ’ ಎಂದು ಬೈದು ಅವನನ್ನು ಓಡಿಸಿದರು.

ಮನೆಗೆ ಹೋಗಿ ನೆರೆಮನೆಯ ಮೀನಾಳಲ್ಲಿ ಕೇಳಿದ. ಅವಳು ಫೈನಲ್‌ ಇಯರ್‌ ಎಂ.ಎ. ಓದುತ್ತಿದ್ದಳು. “”ನನಗೆ ನಾಳೆ ಎಕ್ಸಾಮ್‌ ಇದೆ. ಟೈಮಿಲ್ಲ” ಎಂದಳು.

ಇವನು ನೇರವಾಗಿ ಅಮ್ಮನ ಬಳಿಗೆ ಬಂದು “ಬರೆದುಕೊಡು’ ಎಂದು ಹಾಳೆಯೊಡ್ಡಿದ. ಅವಳು ನಕ್ಕಳು.
ಎರಡು ಖಾಲಿ ಪುಟಗಳನ್ನು ಹಿಡಿದು ಎಲ್ಲ ಕಡೆ ಅಲೆದರೂ ಪ್ರಯೋಜನವಿಲ್ಲ. ತಾನೇ ಏನಾದರೂ ಬರೆದು ಬಿಡುವುದೆಂದು ಯೋಚಿಸಿದ. ರಾತ್ರಿಯಾಯಿತು. “ಬೆಳಗ್ಗೆ ಬೇಗ ಎಬ್ಬಿಸು’ ಎಂದು ಅಮ್ಮನಲ್ಲಿ  ಹೇಳಿ ಚಾಪೆ ಬಿಡಿಸಿ ಮಲಗಿದ.

ಬೆಳಗ್ಗೆ ಅಮ್ಮ ಎಬ್ಬಿಸಿದಳು. ಕಣ್ಣುಜುತ್ತ ಎದ್ದ. ಏನಾದರೂ ಬರೆಯೋಣ ಎಂದು ಕುಳಿತ. ಏನೂ ಹೊಳೆಯಲಿಲ್ಲ. ಇನ್ನೇನು ಕೆಲವೇ ಗಂಟೆಗಳಲ್ಲಿ ಶಾಲೆಯಲ್ಲಿ ಪ್ರಬಂಧ ಓದಬೇಕು. ಏನು ಮಾಡುವುದು!  ಏನಾದರಾಗಲಿ ಎಂದು ತಿಳಿದ ಒಂದಷ್ಟು ಪದಗಳನ್ನು ಹಾಳೆಯ ಮೇಲೆ ಇಟ್ಟ. ತಿಳಿಯದ ಕಡೆ ಹಾಗೇ ಜಾಗ ಬಿಟ್ಟ.

ಪದಗಳು ಸ್ವಲ್ಪ , ಇನ್ನು ಸ್ವಲ್ಪ ಖಾಲಿಗಳು !
ಒಂದಿಷ್ಟು ಶಬ್ದಗಳು, ಒಂದಷ್ಟು ನಿಶ್ಶಬ್ದಗಳು! 
ಮಾತುಗಳು, ಮಾತುಗಳಿಗೆ ಅರ್ಥ ತುಂಬುವ ಮೌನಗಳು!
ಅಷ್ಟು ವ್ಯಾಕರಣ, ಇಷ್ಟು ಅಂತಃಕರಣ.
.
ಪ್ರಬಂಧ ರೆಡಿಮಾಡಿದ ಖುಷಿಯಲ್ಲಿ ಶಾಲೆಗೆ ಹೋದ.
ನೋಟ್ಸ್‌ ಪುಸ್ತಕದ ಮಧ್ಯದಲ್ಲಿಟ್ಟಿದ್ದ  ಹಾಳೆಯನ್ನು ಹುಡುಕಾಡಿದ. ಸಿಕ್ಕಿತು. ತೆರೆದ.
ಛೆ ! ನೋಡಿದರೆ ಅದರಲ್ಲಿ  ಪ್ರಬಂಧವಿರಲಿಲ್ಲ.
ಒಂದು ಸುಂದರ ಕವನವಿತ್ತು. ಅದನ್ನೇ ಹಾಡಿದ. 
ಬಹುಮಾನ ಬಂತೋ ಗೊತ್ತಿಲ್ಲ; ಬಾರದಿದ್ದರೂ ಅಡ್ಡಿಯಿಲ್ಲ ಎಂಬ ಸಂತೃಪ್ತಿ ಭಾವ ಮಾತ್ರ ಅವನಲ್ಲಿ ಎದ್ದು 
ತೋರುತ್ತಿತ್ತು.

ಪಾರ್ಥ

ಟಾಪ್ ನ್ಯೂಸ್

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.