ಮಳೆ ಮಂತ್ರ


Team Udayavani, Jun 25, 2017, 3:45 AM IST

landscape_in_the_rain_it_wa.jpg

ಮಳೆ ಮಂತ್ರವೆಂದೇ ಪ್ರಸಿದ್ಧವಾದ ಋಷ್ಯಶೃಂಗರ ಸರಳವಾದ ಮಂತ್ರದಲ್ಲಿ (ವಿಭಾಂಡಕಸುತಃ ಶ್ರೀಮಾನ್‌ ಶಾಂತಾಪತಿಃ ಅಕಲ್ಮಶಃ | ಋಷ್ಯಶೃಂಗ ಇತಿಖ್ಯಾತಃ ಮಹಾವೃಷ್ಟಿಂ ಪ್ರಯತ್ಛತು||) “ಶ್ರೀಮಾನ್‌’ ಮತ್ತು “ಅಕಲ್ಮಶ’ ಎರಡು ವಿಶೇಷಣಗಳಿವೆ. 

ಶ್ರೀಮಾನ್‌ ಶಬ್ದವನ್ನು ಎಲ್ಲಾ ಆಮಂತ್ರಣ ಪತ್ರಿಕೆಗಳಲ್ಲಿ, ಪ್ರಚಾರ ಫ‌ಲಕಗಳಲ್ಲಿ ರಾರಾಜಿಸುತ್ತೇವೆ. ಶ್ರೀಮಾನ್‌= ಶೋಭೆಯುಳ್ಳವರು. ನಾವು ಪ್ರತಿಯೊಬ್ಬರೂ ಒಳಗೆ ಶ್ರೀಮಾನ್‌ ಆಗದೆ ಫ್ಲೆಕ್ಸ್‌, ಬ್ಯಾನರ್‌, ಮಾಧ್ಯಮಗಳಲ್ಲಿ ಶ್ರೀಮಾನ್‌ ಆಗುತ್ತಿದ್ದೇವೆ. ಹೀಗೆ ರಾರಾಜಿಸಿದರೆ ಒಳಗೂ, ಹೊರಗೂ ಮತ್ತೆ ಮತ್ತೆ ಕಲ್ಮಶವೇ ದಾಸ್ತಾನು ಆಗುತ್ತದೆ. ನಾವು ಒಳಗೆ ಶ್ರೀಮಾನ್‌ ಆಗಿ ರೂಪುಗೊಳ್ಳಲು ಸಾಧ್ಯವೆ ಎಂದು ನೋಡಬಹುದು. ಶ್ರೀಮಾನ್‌ ಆಗಬೇಕಿದ್ದರೆ ಏನು ಮಾನದಂಡ? ಶೋಭೆ ಬರಬೇಕಾದರೆ ಅಲ್ಲೇ ಮುಂದೆ ಬರುವ “ಅಕಲ್ಮಶ’ ಶಬ್ದದವರಾಗಿರಬೇಕೆಂದು ಹೇಳಬಹುದು. ನಾವು ಆಗಾಗ ನಿಷ್ಕಲ್ಮಶ ಶಬ್ದ ಬಳಸುತ್ತೇವೆ. ಅಕಲ್ಮಶ ಶಬ್ದದ ಬಳಕೆ ಬಹಳ ಕಡಿಮೆ. ಎರಡನ್ನೂ ಒಂದೇ ಅರ್ಥದಲ್ಲಿ ಬಳಸುವುದಾ ದರೂ ಸ್ವಲ್ಪ ವ್ಯತ್ಯಾಸವನ್ನು ಹೇಳಬಹುದು. ಕಲ್ಮಶ ಇದ್ದು ಹೋಗಲಾಡಿಸಿದರೆ ನಿಷ್ಕಲ್ಮಶ; ಕಲ್ಮಶದ ಸಂಪರ್ಕವೇ ಇಲ್ಲದಿದ್ದರೆ ಅಕಲ್ಮಶ ! 

ಪರಿಸರಮಾಲಿನ್ಯದ ಮೂಲ
ಯಾರೋ ಕೆಲವರ ಹಿತ ಕಾಪಾಡಲು ಉದ್ಯೋಗ, ಐಶಾರಾಮ, ದೇಣಿಗೆ, ಅಂತಸ್ತು ಇದೆಲ್ಲದರ ಹಿಂದಿರುವ  ಆದಾಯ ಗಳಿಕೆ ಇತ್ಯಾದಿ ಆಕರ್ಷಣೆಗಳನ್ನು ಮುಂದಿಟ್ಟು ಜನರನ್ನು ತಮ್ಮತ್ತ ಸೆಳೆದು ಪರಿಸರ ಮಾಲಿನ್ಯ ಮಾಡುವುದು ನಡೆಯುತ್ತಿಲ್ಲವೆ? ಮನೆ ಒಳಗೂ, ಹೊರಗೂ ಪ್ಲಾಸ್ಟಿಕ್‌ ಇತ್ಯಾದಿ ಪರಿಸರ ಮಾಲಿನ್ಯ ಘೋರವಾಗಿ ನಡೆಯುತ್ತಿದ್ದರೂ ಮನಸ್ಸಿಗೆ ಏನೂ ಕಿರಿಕಿರಿ ಆಗದಿದ್ದರೆ ಒಳಗೂ ತುಂಬಿದ ಕಲ್ಮಶದ ಪ್ರಮಾಣವನ್ನು ಗಣಿಸಬಹುದು. ಇದೆಲ್ಲದರ ಪರಿಣಾಮದಿಂದ ಕೇವಲ ವಾತಾವರಣ ಕಲ್ಮಶವಾಗುವುದಲ್ಲ, ನೀರೇ ಇಲ್ಲದ ಅನುಭವ ಬೇಸಗೆಯಲ್ಲಿ ಆಗಿದೆ. ಈಗ ಮಳೆ ಬಂದು ನೀರಾಯಿತು ಎಂದು ಸಮಾಧಾನ ಪಟ್ಟುಕೊಳ್ಳುವಂತಿಲ್ಲ, ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಜಾಸ್ತಿಯಾಗುತ್ತಲೇ ಇದೆ. 

ಭೂಮಿಯಲ್ಲಿ ನೀರಿದ್ದರಲ್ಲವೆ?
“ನೀರು ಕೊಡುವುದು ಸರಕಾರದ ಹೊಣೆ ಎಂದು ಸಂವಿಧಾನವೇ ಹೇಳಿರುವುದರಿಂದ ಸರಕಾರ ನುಣುಚಿಕೊಳ್ಳಲು ಸಾಧ್ಯವಿಲ್ಲ, ಕೊನೇ ಪಕ್ಷ ಮತ ಗಳಿಸಲು ಬೇಕಾದರೂ ರಾಜಕಾರಣಿಗಳು ನೀರು ಕೊಡುತ್ತಾರೆ’ ಎನ್ನಬೇಡಿ. “ಭೂಮಿಯಲ್ಲಿ ನೀರು ಇದ್ದರೆ ಮಾತ್ರ ಕೊಡಲು ಸಾಧ್ಯ, ಮುಂದೊಂದು ದಿನ ಭೂಮಿಯಲ್ಲಿ ನೀರು ಇಲ್ಲದಾಗ ಸರಕಾರವೂ ಕೈಚೆಲ್ಲಬೇಕಾಗುತ್ತದೆ. 2025ರಲ್ಲಿ ಭಾರತದ ಅತಿ ದೊಡ್ಡ ಸಮಸ್ಯೆ ನೀರಿನ ಸಮಸ್ಯೆಯಾಗುತ್ತದೆ’ ಎಂದು ನೇಶನಲ್‌ ಜಿಯೋಗ್ರಫಿಕಲ್‌ ಚಾನೆಲ್‌ ಎಚ್ಚರಿಸುತ್ತಿದೆ. 

ಪರ್ಜನ್ಯ, ಋಷ್ಯಶೃಂಗರ ಮಂತ್ರವಲ್ಲದಿದ್ದರೂ ಮನೆಮನೆಗಳಲ್ಲಿ ಗಿಡ ನೆಟ್ಟಾದರೂ ಪರಿಸರಮಂತ್ರ ಜಪಿಸುವುದನ್ನು ಮರೆಯಬಾರದು, ಈ ಮಂತ್ರಕ್ಕೆ ಸರಕಾರ (ಅರಣ್ಯ ಇಲಾಖೆ) ಸಹಕರಿಸುತ್ತಿದೆ. ಕಳೆದ ವರ್ಷದಂತೆ ರಾಜ್ಯದಲ್ಲಿ ಕೋಟಿ ಸಸಿಗಳನ್ನು ನೆಡುವ ಯೋಜನೆ ಈ ವರ್ಷವೂ ಇದೆ. ಅನೇಕ ಸಂಸ್ಥೆಗಳು ಸೀಡ್‌ಬಾಲ್‌ ತಯಾರಿಸಿ ವಿತರಿಸುತ್ತಿವೆ. ಇವುಗಳಲ್ಲಿ ಹಣ್ಣು ಬಿಡುವ, ಹೂವು ಬಿಡುವ, ಮೋಪು ಇತ್ಯಾದಿಗಳಿಗೆ ಬಳಕೆಯಾಗುವ ತರಹೇವಾರಿ ಜಾತಿ ಗಿಡಗಳಿವೆ. ಒಂದು ಗಿಡ ನೆಟ್ಟು ಮೂರು ವರ್ಷದವರೆಗೆ ಬದುಕಿಸಿದರೆ ನಾಲ್ಕೈದು ವರ್ಷಗಳಿಂದ 45 ರೂ. ಇನಾಮು ಕೊಡುತ್ತಿದ್ದರೆ ಈ ವರ್ಷ 100 ರೂ. ಇನಾಮು ಕೊಡುವ ಯೋಜನೆ ಅರಣ್ಯ ಇಲಾಖೆಯಿಂದ ನಡೆಯುತ್ತಿದೆ. ಇದಕ್ಕಾಗಿ ಸಮೀಪದ ಇಲಾಖೆಯ ವಲಯ ಕಚೇರಿಗಳನ್ನು ಸಂಪರ್ಕಿಸಬೇಕು. ಕೇವಲ ಜಾಗದ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದರೆ ಸಾಕು. ಇಂತಹ ಯೋಜನೆಗಳನ್ನು ಸ್ವಾರ್ಥಕ್ಕಾಗಿಯಾದರೂ ಉಪಯೋಗಿಸಬೇಕು. 

– ಮಟಪಾಡಿ ಕುಮಾರಸ್ವಾಮಿ


ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.