ತನ್ನ ತಾನ


Team Udayavani, Jan 15, 2017, 3:45 AM IST

tana.jpg

ನನ್ನ ದೇಹದ ಬೂದಿ- ಗಾಳಿಯಲಿ ತೂರಿ ಬಿಡಿ ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ; 
ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ ಧನ್ಯವಾಯಿತು ಹುಟ್ಟು ಸಾವಿನಲ್ಲಿ

ಚುಟುಕುಗಳ ಬ್ರಹ್ಮ ದಿನಕರ ದೇಸಾಯಿಯವರ ಈ ಹಾಡು ನಮಗೆ ಹೈಸ್ಕೂಲಿನಲ್ಲಿತ್ತು. ಆವರೆಗೂ ನನಗೆ ಸಾವನ್ನೂ ಇಷ್ಟು ಸುಂದರಗೊಳಿಸಬಹುದೆಂಬ ಕಲ್ಪನೆಯೇ ಇರಲಿಲ್ಲ. ಈಗಲೂ ನಾನು ಈ ಹಾಡನ್ನು ಅಮ್ಮ ಕಲಿಸಿದ ರಾಗದಲ್ಲಿ ಗುನುಗುನಿಸುತ್ತಿರುತ್ತೇನೆ. ಎಂಥ ಅದ್ಭುತ ಪರಿಕಲ್ಪನೆ! ನಾವೋ ಬದುಕಿನÇÉೇನಾದರೂ ಸಾಧಿಸಬೇಕೆಂದು ಬಯಸಿದರೆ, ಕವಿತೆ ಸಾವಿನ ನಂತರದ ಸಫ‌ಲತೆಗೆ ತುಡಿಯುತ್ತದೆ.

“ದೇಹಕ್ಕೆ ಮಾತ್ರ ಸಾವು… ಆತ್ಮಕ್ಕಿಲ್ಲ’ ಎಂದು ಗೀತೆಯಲ್ಲಿ ಕೃಷ್ಣನೂ ಹೇಳಿ¨ªಾನೆ. ಹುಟ್ಟಿದ ಮೇಲೆ ಸಾವು ಅನಿವಾರ್ಯ. ಅದಕ್ಕೆಲ್ಲ ಹೆದರೋದುಂಟಾ? ಎಂದು ಹಿರಿಯರೂ ಆಡುತ್ತಿರುತ್ತಾರೆ. ಆದರೆ ನಾವೆಷ್ಟೇ ಇಂಥಾ ಮಾತುಗಳನ್ನು ಕೇಳಲಿ, ಓದಲಿ, ಸಾವೆಂದಾಕ್ಷಣ ಅರೆಕ್ಷಣವಾದರೂ ನಮ್ಮೊಳಗೆ ತಲ್ಲಣ ಉಂಟಾಗಿಯೇ ಆಗುವುದು. ನನ್ನ ಪ್ರಕಾರ, ನಾವು ನಮ್ಮ ಸಾವಿಗಿಂತಲೂ ನಮ್ಮವರ ಸಾವಿಗೆ, ನಮ್ಮ ಸಾವಿನಾನಂತರ ಅಳುವ ನಮ್ಮವರ ದುಃಖಕ್ಕೆ ಹೆದರುವುದು! ಜೀವನದಲ್ಲಿ ಎದುರಾಗುವ ಸಣ್ಣ ಪುಟ್ಟ , ತುಸು ದೊಡ್ಡ ಸಂಕಷ್ಟಗಳಿಗೆÇÉಾ ನಾವೆÇÉಾ “ಸಾಕಪ್ಪಾ ಈ ಜೀವನ… ಒಮ್ಮೆ ಮುಕ್ತಿ ಕಂಡರೆ ಸುಖ’ ಎಂದು ಹಲುಬುವುದಿದೆ. ಆದರೆ ಇದು ಯಾರ ಮನದಾಳದ ಬಯಕೆಯೂ ಆಗಿರುವುದಿಲ್ಲ. ಅಜ್ಜಿ ಸದಾ ಹೇಳುತ್ತಿದ್ದಳು- “ತಾನು ಸಾಯೆºàಕು ಸತ್ತು ಸ್ವರ್ಗ ಪಡೀಬೇಕು’ ಎಂದು. ಇದರರ್ಥ- ಕಷ್ಟವೋ ಸುಖವೋ ನಮ್ಮ ಬದುಕ ನಾವು ಜೀವಿಸಿಯೇ ಮುಕ್ತಿ ಪಡೆಯಬೇಕೇ ವಿನಾ ಬದುಕೊಡ್ಡುವ ಸವಾಲಿಗೆ ಬೆದರಿ, ಬೆನ್ನು ತೋರಿ ಜೀವನದಿಂದ ವಿಮುಖತೆ ಹೊಂದುವುದು ಸಲ್ಲ ಎಂದು. ಆದರೆ, ಇತ್ತೀಚಿಗೆ ಹರೆಯದ ಹುಡುಗರೇ ಹೆಚ್ಚಾಗಿ ಕಡಿಮೆ ಅಂಕಗಳಂಥ ಕ್ಷುಲ್ಲಕ ಕಾರಣಗಳಿಗೋಸ್ಕರ ತಮ್ಮ ತುಂಬು ಬದುಕನ್ನೇ ಬಲಿಗೊಟ್ಟು, ಆತ್ಮಹತ್ಯೆಯಂಥ ಹೇಡಿ ಕೃತ್ಯಕ್ಕೆ ಮುನ್ನುಗ್ಗುತ್ತಿರುವುದನ್ನು ಕಂಡಾಗ ನಿಜಕ್ಕೂ ಖೇದವೆನಿಸುತ್ತದೆ. ಕೆ. ಎಸ್‌. ನರಸಿಂಹ ಸ್ವಾಮಿಯವರ ಕವಿತೆಯೊಂದರ ಸಾಲು ಸದಾ ಸ್ಮರಣೀಯ- “ಪರೀಕ್ಷೆ ಎಂದರೆ ಹೂವಿನ ಚೆಂಡೆ? ಚಿಂತಿಸಬಾರದು ದುರ್ಗತಿಗೆ’ 
ಎÇÉೋ ಓದಿದ್ದ ನೆನಪು… ನಾವು ಏನನ್ನು ಬಯಸುತ್ತೇವೋ ಅದು ನಮಗೆ ಸಿಗದಿರಬಹುದು. ಆದರೆ, ನಮಗೆ ಏನು ಸಿಗಬೇಕೋ ಅದು ಸಿಕ್ಕೇ ಸಿಗುತ್ತದೆ. ಹುಟ್ಟುತ್ತಲೇ ಬದುಕು ನನ್ನ ಮುಂದೆ ಒಡ್ಡಿದ ಸವಾಲುಗಳ ಮೂಟೆಗೆ ನನ್ನ ಮನೆಯವರೆಂದೂ ನನ್ನ ಸೋಲಗೊಡಲೇ ಇಲ್ಲ. ಇದಕ್ಕೆ ನನ್ನೊಳಗಿನ ಜೀವನ ಪ್ರೀತಿಯೂ ಅಷ್ಟೇ ಕಾರಣವಿದ್ದಿರಬಹುದು. ನಾನಾಗ ಪ್ರçಮರಿಯಲ್ಲಿ¨ªೆ. ನಾವೆÇÉಾ ತಪ್ಪದೇ ಬುನಿಯಾದ್‌ ಎಂಬ ಧಾರಾವಾಹಿಯನ್ನು ನೋಡುತ್ತಿ¨ªೆವು. ಅಲ್ಲಿನ ಪಾತ್ರಗಳ ಸುಖ-ದುಃಖಗಳಲ್ಲಿ ಒಂದಾಗಿ ಹೋಗಿ¨ªೆವು. ಹೀಗಿರುವಾಗ ಇದರ ನಾಯಕನಿಗೆ ಮಾರಕ ರೋಗವೊಂದು ತಗುಲಿದ ಸೂಚನೆ ಬರುತ್ತದೆ. ಆತನ ಬಾಯಿಯಿಂದ ರಕ್ತ ಒಸರತೊಡಗುತ್ತದೆ. ಡಾಕ್ಟರರು ಅವನಿಗೆ ಅಂತಿಮವಾಗಿ ಕ್ಯಾನ್ಸರ್‌ ಎಂದು ಘೋಷಿಸಿ ಕೈಚೆಲ್ಲಲು, ಅವನ ಮನೆಯವರೆಲ್ಲ ಗೋಳಾಡುತ್ತಾರೆ. ಆತನ ಮೊಗದಲ್ಲೂ ವಿಷಾದ. ಅದನ್ನು ನೋಡಿದ್ದೇ, ನನಗೂ ಕ್ಯಾನ್ಸರ್‌ ಬಂದರೆ ಏನಪ್ಪಾ ಗತಿ… ಎಂದು ವಿಪರೀತ ಭಯಗೊಂಡಿ¨ªೆ. ಇದಕ್ಕೆ ಸರಿಯಾಗಿ ಎರಡು ದಿವಸದ ಮೇಲೆ ಬ್ರಶ್‌ ಮಾಡುವಾಗ, ಇನ್ನೇನು ಬೀಳಲಿದ್ದ ಹಲ್ಲಿನ ಎಡೆಯಿಂದ ರಕ್ತ ಒಸರಿ, ನೀರಿನೊಂದಿಗೆ ಮಿಶ್ರಣವಾಗಿ ಬೇಸಿನ್‌ಗೆ ಬೀಳಬೇಕೆ ! ಅಷ್ಟೇ… ಅತ್ತೂ ಅತ್ತೂ… ಸುಸ್ತಾಗಿದ್ದ ನನ್ನನ್ನು ಅಪ್ಪ ಸಮಾಧಾನಿಸಲಾಗದೇ ತತ್‌ಕ್ಷಣ ನಮ್ಮ ಫ್ಯಾಮಿಲಿ ಡಾಕ್ಟರ್‌ ಆಗಿದ್ದ (ಈಗ ವಿಧಿವಶರಾಗಿರುವ) ಡಾ. ಮಾಧವ ಭಂಡಾರಿಯವರ ಬಳಿ ಕರೆದೊಯ್ದಿದ್ದರು. ಅವರು ನಗುತ್ತ ಚೆಕ್‌ಅಪ್‌ ಮಾಡಿದಂತೆ ಮಾಡಿ, “ಏನೂ ಆಗಿಲ್ಲಮ್ಮ… ಗಟ್ಟಿಯಾಗಿದ್ದೀಯಾ… ಕ್ಯಾನ್ಸರೂ ಇಲ್ಲ ಮಣ್ಣೂ ಇಲ್ಲ… ಅವೆಲ್ಲ ಹಾಗೆ ಬರುವುದಿಲ್ಲ. ಭಯ ಬೇಡ’ ಎಂದು ಧೈರ್ಯ ತುಂಬಿ, ನನ್ನ ಸಮಾಧಾನಕ್ಕೆಂದು ಒಂದು ಟಾನಿಕ್‌ ಬಾಟಿÉಯನ್ನು ಫ್ರೀಯಾಗಿ ಕೊಟ್ಟು ಕಳುಹಿಸಿದ್ದರು. 
ಸಾವೆಂದರೆ ಅದು ಕ್ಯಾನ್ಸರ್‌ ! ದೊಡ್ಡ ರೋಗಗಳು ತಗುಲಿದರೆ ಬದುಕಲ್ಲಿಗೇ ಮುಗಿದಂತೇ ಎಂದೇ ಭಾವಿಸಿ¨ªೆ.

ಅತಿಯಾದ ಭೀತಿಯೂ ನಮ್ಮ ಕಣRಟ್ಟಿಸಿಬಿಡುತ್ತದೆ. ಕೇವಲ ಸಾವಿನ ಬಗ್ಗೆಯೇ ಚಿಂತಿಸದೇ, ನಮ್ಮ ಸುತ್ತಮುತ್ತಲಿರುವ ಜೀವನಪ್ರೀತಿಯನ್ನು ಕಣ್ತುಂಬಿಕೊಂಡರೆ, ಅದು ನಮಗೆ ದಾರಿ ತೋರುವುದು, ಸ್ಪಷ್ಟತೆ ನೀಡುವುದು, ಭ್ರಮೆ ಕಳಚುವುದು. ನನಗೆ ಅಂಥ ಹಲವು ಜೀವನ್ಮುಖೀಗಳ ಸಾಂಗತ್ಯ ದೊರಕಿದೆ. ಕ್ಯಾನ್ಸರ್‌ ಬಂದರೂ, ಅದಕ್ಕೂ ಚೆಕ್‌ವೆುàಟ್‌ ಕೊಟ್ಟು ಓಡಿಸಿ, ಸಂತೋಷದಿಂದ ಜೀವನ ಸಾಗಿಸುತ್ತಿರುವ, ಸಾವನ್ನು ದೂರವಿರಿಸಿ ಬದುಕನ್ನು ಪ್ರೀತಿಯಿಂದ ಜೀವಿಸುತ್ತಿರುವ ಅನೇಕಾನೇಕರನ್ನು ಬಲು ಹತ್ತಿರದಿಂದ ನೋಡುತ್ತಿರುವೆ. ಅವರೆಲ್ಲ ನನಗೆ ಮತ್ತಷ್ಟು ಸ್ಥೈರ್ಯ, ಸ್ಫೂರ್ತಿ, ಪ್ರೇರಣೆಯನ್ನು ತುಂಬಿ¨ªಾರೆ. 

ಸುಮಾರು ಇಪತ್ತೈದು ವರ್ಷಗಳ ಹಿಂದೆಯೇ ಕ್ಯಾನ್ಸರ್‌ ಕಾಣಿಸಿಕೊಂಡಿದ್ದರೂ, ಧೃತಿಗೆಡದೇ ತಮ್ಮ ಕಟ್ಟುನಿಟ್ಟಿನ ಜೀವನಕ್ರಮದಿಂದ ಅದರ ಪ್ರಭಾವವನ್ನು ತಗ್ಗಿಸಿಕೊಂಡು, ಸಂಘದ ಹಿರಿಯ ಪ್ರಚಾರಕರಾಗಿ ಎಡೆಬಿಡದೆ ಪ್ರಯಾಣಿಸುತ್ತ¤, ಸಿಕ್ಕಾಗಲೆಲ್ಲ ನನಗೆ ಪ್ರೋತ್ಸಾಹದ ನುಡಿಗಳಿಂದ ಬೆನ್ನು ತಟ್ಟುತ್ತ ಕುಟುಂಬದ ಆತ್ಮೀಯರಾಗಿದ್ದ, ಕೆಲವು ಸಮಯದ ಹಿಂದಷ್ಟೇ ಅಗಲಿದ ನಾ. ಕೃಷ್ಣಪ್ಪನವರು ನೆನಪಾಗುತ್ತಾರೆ. ಆಸ್ಟಿಯೋ ಸರ್ಕೊàಮಾ ಎಂಬ ವಿರಳ ಬೋನ್‌ ಕ್ಯಾನ್ಸರ್‌ ಹದಿವಯಸ್ಸಿನÇÉೇ ತನ್ನನ್ನಾವರಿಸಿದರೂ, ಛಲದಿಂದ, ಅದನ್ನೆದುರಿಸಿ, ಹೋರಾಡಿ, ಇಂದು ಸಂಪೂರ್ಣ ಗುಣಮುಖಳಾಗಿ ಗೆದ್ದು, ನೆಮ್ಮದಿಯ ಬದುಕ ಜೀವಿಸುತ್ತಿರುವ ಗೆಳತಿ ಶ್ರುತಿ ಬಿ. ಎಸ್‌. ಕಣ್ಣೆದುರು ಬರುತ್ತಾರೆ. ಸ್ತನದ ಕ್ಯಾನ್ಸರ್‌ ಧುತ್ತನೆ ಎದುರಾದರೂ, ತಮ್ಮೊಳಗಿನ ಚೈತನ್ಯವನ್ನು ಸೋಲಗೊಡದೇ, ನಗು ನಗುತ್ತಲೇ, ತಮ್ಮ ಹಾಸ್ಯದಿಂದ ಕ್ಯಾನ್ಸರನ್ನೂ ನಗಿಸಿ, ಮಣಿಸಿ, ಈಗ ಸ್ವಸ್ಥರಾಗಿ ನಗುತ್ತಿರುವ ಸ್ನೇಹಿತೆ ಭಾರತಿ ಬಿ. ವಿ. ಮನಸ್ಸಿಗೆ ಬರುತ್ತಾರೆ. ವೃದ್ಧಾಪ್ಯದಲ್ಲಿ ಕಾಡಿದ ಸ್ತನದ ಕ್ಯಾನ್ಸರಿನಿಂದ ತುಸು ಕುಗ್ಗಿದರೂ, ಇÇÉಾ ತಾನು ಬದುಕಿಯೇ ತೀರುವೆನೆಂಬ ಛಲದಿಂದ ಇನ್ನಿಲ್ಲದ ಪ್ರತಿರೋಧ ತೋರಿ, ಕೊನೆಗೆ ನಮ್ಮಿಂದಗಲಿದ ನನ್ನಜ್ಜಿ ಸರಸ್ವತಮ್ಮ ಸ್ಮತಿಪಟಲದಲ್ಲಿ ಮೂಡುತ್ತಾರೆ. ಇವರೆಲ್ಲರೂ ನನಗೆ ಬಹು ದೊಡ್ಡ ಮಾದರಿಯಾಗಿದ್ದಾರೆ, ಸೋತೆನೆಂದಾಗೆಲ್ಲ ಬಡಿದೆಬ್ಬಿಸಿಕೊಳ್ಳುವ ಛಲವ ನೀಡಿ¨ªಾರೆ. ಸಾವೇ ಮನೆಯ ಬಾಗಿಲಿಗೆ ಬಂದರೂ “ಎಲೆ ಸಾವೇ… ನಿಲ್ಲÇÉೇ ಎಂದು ನಿಲ್ಲಿಸಿ, ಇವರೆಲ್ಲ ಬದುಕುತ್ತಿರುವಾಗ, ಈ ಅಂಗವೈಕಲ್ಯ ಒಡ್ಡುವ ಸವಾಲಿಗೆ ಬೆದರಿ ಮಣಿಯುವುದೆ?’ ಎಂದು ಅಡಗಿರುವ ಚೇತನವನ್ನು ಛಾಟಿ ಬೀಸಿ ಎಬ್ಬಿಸುತ್ತಿರುತ್ತೇನೆ. 

ಶಾಲಾ, ಕಾಲೇಜುಗಳ ಪರೀಕ್ಷೆಗಳು, ಅಂಕಗಳು, ಹು¨ªೆಗಳು, ಸೀಟುಗಳು ಇವೆಲ್ಲ ಎಷ್ಟು ಕ್ಷುಲ್ಲಕ ಸಂಗತಿಗಳು- ಈ ವಿರಾಟ್‌ ಬದುಕಿನ ಮುಂದೆ ! ನಮ್ಮ ಎಳೆಯ ಪೀಳಿಗೆಗಳಿಗೆ ಇದನ್ನು ಮನದಟ್ಟು ಮಾಡುವ ಪೋಷಕರು, ಶಿಕ್ಷಕರು ಇಂದು ಅತ್ಯಗತ್ಯವಾಗಿ¨ªಾರೆ. ಗೆಲುವಿರುವುದು ನಮಗೆ ದಕ್ಕಿರುವ ಬದುಕನ್ನು ಜೀವಿಸುವುದರÇÉೇ ವಿನಾ, ಎಂದೋ ಅನಿವಾರ್ಯವಾಗಿರುವ ನಮ್ಮ ಸಾವನ್ನು ಇಂದೇ ಎಳೆದುಕೊಂಡು ಕಣ್ಮುಚ್ಚಿ ಸೋಲುವುದರಲ್ಲಲ್ಲ.

– ತೇಜಸ್ವಿನಿ ಹೆಗಡೆ

ಟಾಪ್ ನ್ಯೂಸ್

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.