ತೀವ್ರಗತಿಯ ನಡಿಗೆಯಲ್ಲಿ ರಶ್ಮಿಕಾ ಮಂದಣ್ಣ


Team Udayavani, Jan 8, 2017, 3:45 AM IST

SAP-1.jpg

ಕೆಲವರಿಗೆ ಮೊದಲ ಸಿನೆಮಾ ಬಿಡುಗಡೆಯಾಗಿ ವರ್ಷಾಗಟ್ಟಲೇ ಕಳೆದರೂ ಎರಡನೇ ಸಿನೆಮಾದ ಅವಕಾಶವಾಗಲಿ, ಮತ್ತೆ ಬಣ್ಣ ಹಚ್ಚುವ ಯೋಗವಾಗಲಿ ಇರೋದಿಲ್ಲ. ಆದರೆ ರಶ್ಮಿಕಾ ಮಾತ್ರ ಆ ವಿಚಾರದಲ್ಲಿ ಅದೃಷ್ಟವಂತೆ. ಯಾರು ಈ ರಶ್ಮಿಕಾ ಮಂದಣ್ಣ ಎಂದು ಆಶ್ಚರ್ಯವಾಗಬಹುದು. ರಕ್ಷಿತ್‌ ಶೆಟ್ಟಿ ಅಭಿನಯದ ಕಿರಿಕ್‌ ಪಾರ್ಟಿಯಲ್ಲಿ ತಮ್ಮ ಮುಗ್ಧತೆ ಮತ್ತು ಚೆಲುವಿನಿಂದ ಎಲ್ಲರನ್ನೂ ಬೋಲ್ಡ್‌ ಮಾಡಿದ ಚೆಲುವೆಯೇ ಈ ರಶ್ಮಿಕಾ ಮಂದಣ್ಣ.

ಕೊಡಗಿಗೂ, ಕನ್ನಡ ಚಿತ್ರರಂಗಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಮಂದಿ ನಾಯಕಿಯರನ್ನು ಕೊಟ್ಟಿದೆ. ಈಗ ಅದಕ್ಕೆ ಹೊಸ ಸೇರ್ಪಡೆ ರಶ್ಮಿಕಾ ಎಂದರೆ ತಪ್ಪಲ್ಲ. ವೀರಾಜಪೇಟೆಯ ಹುಡುಗಿ ರಶ್ಮಿಕಾ ಕಾಲೇಜು ಓದುವ ಸಲುವಾಗಿ ಬೆಂಗಳೂರಿಗೆ ಬರುತ್ತಾರೆ. ಓದೋಕೆ ಬಂದ ಹುಡುಗಿ ಮೊದಲು ಮಾಡೆಲಿಂಗ್‌ನಿಂದ ಆಕರ್ಷಿರಾಗುತ್ತಾರೆ. ಮಾಡೆಲಿಂಗ್‌ ಮಾಡುತ್ತಾ, ಮುಂದಿನ ಕನಸು ಕಾಣುತ್ತಿದ್ದ ರಶ್ಮಿಕಾ “ಫ್ರೆಶ್‌ ಫೇಸ್‌’ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. “ಫ್ರೆಶ್‌ ಫೇಸ್‌’ನಲ್ಲಿ ಭಾಗವಹಿಸಿದಾಕ್ಷಣ ರಶ್ಮಿಕಾಗೆ ಇಷ್ಟು ಬೇಗ ತನ್ನ ಅವಕಾಶದ ಬಾಗಿಲು ತೆರೆಯುತ್ತದೆಂದು ಗೊತ್ತಿರಲಿಲ್ಲ. ತಮ್ಮ ಚಿತ್ರಕ್ಕೂ “ಫ್ರೆಶ್‌ ಫೇಶ್‌’ವೊಂದನ್ನು ಹುಡುಕುತ್ತಿದ್ದ ರಿಷಭ್‌ ಹಾಗೂ ರಕ್ಷಿತ್‌ ಶೆಟ್ಟಿಗೆ ರಶ್ಮಿಕಾ ಫೋಟೋ ಸಿಗುತ್ತದೆ. ಫೊಟೋ ನೋಡಿದ ಇಬ್ಬರಿಗೂ ಈ ಹುಡುಗಿ ತಮ್ಮ ಸಿನಿಮಾಕ್ಕೆ ಹೇಳಿಮಾಡಿಸಿದಂತಿದೆ ಎಂದು ಆಡಿಷನ್‌ಗೆ ಕರೆಯುತ್ತಾರೆ. ಇಷ್ಟು ಬೇಗ ಸಿನಿಮಾ ಆಫ‌ರ್‌ ಸಿಗಬಹುದೆಂದು ಕನಸಲ್ಲೂ ಭಾವಿಸಿರದ ರಶ್ಮಿಕಾ ಅಚ್ಚರಿಯೊಂದಿಗೆ ಆಡಿಷನ್‌ ಕೊಡುತ್ತಾರೆ. ಹಾಗಂತ ಅವರಿಗೆ ಈ ಸಿನಿಮಾಕ್ಕೆ ಆಯ್ಕೆಯಾಗುತ್ತೇನೆಂಬ ಯಾವ ನಂಬಿಕೆಯೂ ಇರಲಿಲ್ಲವಂತೆ. 

“ಫ್ರೆಶ್‌ ಫೇಸ್‌’ನಲ್ಲಿ ಆಯ್ಕೆಯಾದ ನನ್ನ ಫೋಟೋ ನೋಡಿ ಕಿರಿಕ್‌ ಪಾರ್ಟಿ ಆಡಿಷನ್‌ಗೆ ಹೋದೆ. ಆಡಿಷನ್‌ ಕೊಟ್ಟೆ. ಹಾಗಂತ ನಾನು ಈ ಸಿನೆಮಾಕ್ಕೆ ನಾಯಕಿಯಾಗಿ ಆಯ್ಕೆಯಾಗುತ್ತೇನೆಂಬ ನಂಬಿಕೆ ಇರಲಿಲ್ಲ. ಆದರೆ, ಶ್ರದ್ಧೆಯಿಂದ ಆಡಿಷನ್‌ನಲ್ಲಿ ಭಾಗವಹಿಸಿದ ಖುಷಿ ಇತ್ತು’ ಎಂದು ತಾವು ಕಿರಿಕ್‌ ಪಾರ್ಟಿ ಸಿನೆಮಾಕ್ಕೆ ಆಯ್ಕೆಯಾದ ಬಗ್ಗೆ ಹೇಳುತ್ತಾರೆ. ಸದ್ಯ ಅಂತಿಮ ವರ್ಷದ ಬಿ.ಎ. ಓದುತ್ತಿರುವ ರಶ್ಮಿಕಾಗೆ ವಿದ್ಯಾಭ್ಯಾಸ ಕೂಡಾ ಮುಂದುವರೆಸುವ ಆಸೆ ಇದೆ. ಸಿನೆಮಾ ಜೊತೆಗೆ ಶಿಕ್ಷಣ ಕೂಡಾ ಮುಖ್ಯ ಎನ್ನುವ ರಶ್ಮಿಕಾ ಕಾಲೇಜಿನಲ್ಲೂ ಒಳ್ಳೆಯ ವಿದ್ಯಾರ್ಥಿಯಂತೆ.

ರಶ್ಮಿಕಾ ಅಭಿನಯಿಸಿದ ಮೊದಲ ಚಿತ್ರ ಈಗಷ್ಟೇ ಬಿಡುಗಡೆಯಾಗಿದೆ. ಹೀಗಿರುವಾಗಲೇ ರಶ್ಮಿಕಾಗೆ ಹೊಸ ಸಿನಿಮಾವೊಂದರಿಂದ ಅವಕಾಶ ಸಿಕ್ಕಿದೆ. ಅದು ದರ್ಶನ್‌ ನಾಯಕರಾಗಿರುವ ಹೊಸ ಚಿತ್ರದಲ್ಲಿ. ಮಿಲನ  ಪ್ರಕಾಶ್‌, ದರ್ಶನ್‌ಗೊಂದು ಸಿನೆಮಾ ಮಾಡುತ್ತಾರೆಂಬ ಸುದ್ದಿಯನ್ನು ನೀವು ಕೇಳಿರಬಹುದು. ಆ ಸಿನೆಮಾಕ್ಕೆ ಇತ್ತೀಚೆಗೆ ಮುಹೂರ್ತವಾಗಿದೆ. ರಶ್ಮಿಕಾಗೆ ಆ ಸಿನೆಮಾದಲ್ಲಿ ಅವಕಾಶ ಕೂಡಾ ಸಿಕ್ಕಿದೆ. ಅದು ನಾಯಕಿಯಾಗಿ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಅದರಲ್ಲಿ ರಶ್ಮಿಕಾ ಕೂಡಾ ಒಬ್ಬರು. ಎರಡನೇ ಚಿತ್ರಕ್ಕೆ ಸ್ಟಾರ್‌ ಸಿನಿಮಾದಲ್ಲಿ ಅವಕಾಶ ಸಿಕ್ಕಿರುವುದರಿಂದ ರಶ್ಮಿಕಾ ಕೂಡಾ ಖುಷಿಯಾಗಿದ್ದಾರೆ. ದರ್ಶನ್‌ ಸಿನಿಮಾ ಮೂಲಕ ರಶ್ಮಿಕಾ ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾಗಳಿಗೆ ತೆರೆದುಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಏನು ಪಾತ್ರ, ಯಾವ ರೀತಿ ಕಾಣಿಸಿಕೊಳ್ಳುತ್ತೀರಿ ಎಂದರೆ ರಶ್ಮಿಕಾ ಅದಕ್ಕೆ ಈಗಲೇ ಉತ್ತರಿಸಲು ಸಿದ್ಧರಿಲ್ಲ. ಅವೆಲ್ಲವನ್ನು ಈಗಲೇ ಹೇಳುವಂತಿಲ್ಲ ಎಂಬ ಉತ್ತರ ಅವರಿಂದ ಬರುತ್ತದೆ.

ದರ್ಶನ್‌ ಅಭಿನಯದ ಚಿತ್ರದಲ್ಲಿ ರಶ್ಮಿಕಾ ಹೇಗೆ ಕಾಣಿಸುತ್ತಾರೆ ಮತ್ತು ಅವರ ಪಾತ್ರವೇನು ಎಂಬಂತಹ ಪ್ರಶ್ನೆಗಳಿಗೆ, ಉತ್ತರಬೇಕೆಂದರೆ ಈ ವರ್ಷದ ಕೊನೆಯವರೆಗೂ ಕಾಯಬೇಕು.

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.