ಆಂಗ್ಲಭಾಷೆಗೆ ಅನುವಾದಗೊಂಡ ತುಳು ಕಾದಂಬರಿ


Team Udayavani, Feb 25, 2018, 8:15 AM IST

s-4.jpg

ತುಳುವಿನ ಮಹತ್ವದ ನಾಟಕಕಾರ, ಕಾದಂಬರಿಕಾರ ಡಾ. ಡಿ.ಕೆ.ಚೌಟರ ತುಳು ಕಾದಂಬರಿ ಮಿತ್ತಬೈಲ್‌ ಯಮುನಕ್ಕೆ  ಇದೀಗ ಮಿತ್ತಬೈಲ್‌ ಯಮುನಕ್ಕ  ಎ ಟೇಲ್‌ ಆಫ್ ಎ ಲ್ಯಾಂಡ್‌ಲಾರ್ಡ್ಸ್ ಹೌಸ್‌ಹೋಲ್ಡ್‌ ಎಂದು ಆಂಗ್ಲಭಾಷೆಗೆ ಅನುವಾದಗೊಂಡು ಬಿಡುಗಡೆಯಾಗಿದೆ. 

ತುಳು ಸಾಹಿತ್ಯ ಪುನರುಜ್ಜೀವನದ ಎರಡನೆಯ ಕಾಲಘಟ್ಟಕ್ಕೆ ಸೇರಿರುವ ಡಿ.ಕೆ. ಚೌಟ ಅವರು ತಮ್ಮ ಕರಿಯವಜ್ಜೆರೆನ ಕತೆಕುಲು, ಪಿಲಿಪತ್ತಿ ಗಡಸ್‌, ಪತ್ತ್ ಪಜ್ಜೆಲು, ಮೂಜಿಮೊಟ್ಟು ಮೂಜಿ ಲೋಕ ಮೊದಲಾದ ತುಳುಕೃತಿಗಳ ಮೂಲಕ ತುಳು ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಮಿತ್ತಬೈಲ್‌ ಯಮುನಕ್ಕೆ  ಅವರ ಮಹತ್ವದ ತುಳು ಕಾದಂಬರಿ. ಎಸ್‌.ಯು. ಪಣಿಯಾಡಿ ಪ್ರಶಸ್ತಿ ವಿಜೇತ ಈ ಕಾದಂಬರಿಯು ಈಗಾಗಲೇ ಕನ್ನಡಕ್ಕೆ ಅನುವಾದಗೊಂಡಿದ್ದು, ತುಳು ಮಾತ್ರವಲ್ಲ , ಕನ್ನಡ ಓದುಗರು ಮತ್ತು ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿದೆ. 

ಆಧುನಿಕ ಕಾಲಘಟ್ಟದ 69 ಕವಿಗಳ 114 ತುಳು ಕವನಗಳನ್ನು ಇಂಗ್ಲೀಷಿಗೆ ಅನುವಾದ ಮಾಡಿ ಲ್ಯಾಡ್ಲ್ ಇನ್‌ ಎ ಗೋಲ್ಡನ್‌ ಬೌಲ್‌ ಸಂಪುಟವನ್ನು ಪ್ರಕಟಿಸಿರುವ ಬಿ. ಸುರೇಂದ್ರ ರಾವ್‌ ಮತ್ತು ಕೆ. ಚಿನ್ನಪ್ಪ ಗೌಡ ಈ ಕಾದಂಬರಿಯನ್ನು ಅತ್ಯಂತ ಸಮರ್ಪಕವಾಗಿ ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಈ ಕೃತಿಯು ವಿಸ್ತಾರವಾದ ಪ್ರಸ್ತಾವನೆ ಮತ್ತು ಸಾಂಸ್ಕೃತಿಕ ಪದಕೋಶವನ್ನು ಹೊಂದಿದ್ದು, ಎ. ಕೆ. ರಾಮಾನುಜನ್‌ ಹೇಳುವ ಅನುವಾದದ ಚೌಕಟ್ಟು ಹೊಂದಿರಬೇಕಾದ ಲಕ್ಷಣಗಳಿಗೆ ಅನುಸಾರವಾಗಿ ಅನುವಾದಗೊಂದಿದೆ. ಕುಂಬಳೆ ಸೀಮೆಯ ಸುಮಾರು 150 ವರ್ಷಗಳ ಕಾಲಾವಧಿಯ ಕೃಷಿ, ಸಂಸ್ಕೃತಿ ಮತ್ತು ರಾಜಕೀಯ ಪಲ್ಲಟಗಳನ್ನು ಈ ಕಾದಂಬರಿ ಬಹಳ ಎಚ್ಚರದಿಂದ ದಾಖಲಿಸಿದೆ. ಚಾರಿತ್ರಿಕ ಕಾಲಘಟ್ಟದ ಗುತ್ತುಕೇಂದ್ರಿತ ಬಂಟ ಸಮಾಜದ ಕೌಟುಂಬಿಕ ಬಿಕ್ಕಟ್ಟುಗಳನ್ನು ಬಿಚ್ಚಿಡುತ್ತ ಒಳಗಿನ ಮತ್ತು ಹೊರಗಿನ ಸಮಾಜಶಾಸ್ತ್ರೀಯ ಶಕ್ತಿಗಳು ಗುತ್ತಿನ ನಿರ್ಮಾಣ, ಪತನ ಮತ್ತು ಮರುಕಟ್ಟುವಿಕೆಗೆ ಕಾರಣವಾಗುವ ಬಹುಮುಖೀ ನೆಲೆಗಳನ್ನು ಕಾದಂಬರಿಕಾರರು ಈ ಕಾದಂಬರಿಯಲ್ಲಿ ನಿರೂಪಿಸಿದ್ದಾರೆ. ಸ್ಥಳೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಜೊತೆಗೆ ಗಾಂಧೀ ನೇತೃತ್ವದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಮತ್ತು ಗಾಂಧೀ ಚಿಂತನೆಗಳ  ಪ್ರಭಾವವನ್ನು ಈ ಕಾದಂಬರಿಯಲ್ಲಿ ಸೆರೆಹಿಡಿಯಲಾಗಿದೆ. ಕಾಸರಗೋಡು, ಮಂಜೇಶ್ವರ, ಕುಂಬಳೆ ಸೀಮೆಯು ಆಧುನಿಕತೆಗೆ ತೆರೆದುಕೊಳ್ಳುವ ಸಂದರ್ಭದಲ್ಲಿ ಈ ಭಾಗದ ಜನರ ಸಂಭ್ರಮ ಮತ್ತು ಸಂಕಟಗಳನ್ನು ಈ ಕಾದಂಬರಿ ಚಿತ್ರಿಸುತ್ತದೆ. ವಿಮರ್ಶಕ ಸಿ. ಎನ್‌. ರಾಮಚಂದ್ರನ್‌ ಹೇಳುವಂತೆ- “ಗಂಡಸಿನ ಕ್ರೌರ್ಯ ಮತ್ತು ಹೆಣ್ಣಿನ ಶೋಷಣೆಯನ್ನು ಎದೆ ನಡುಗುವ ಹಾಗೆ ಈ ಕಾದಂಬರಿ ಪ್ರಸ್ತುತಪಡಿಸುತ್ತದೆ’. 

“ಈ ಕಾದಂಬರಿಗೆ ಪುರಾಣದ ಗುಣ ಮತ್ತು ವ್ಯಾಪ್ತಿ ಇದೆ. ಹೋರಾಟ, ಮಹತ್ವಾಕಾಂಕ್ಷೆ, ಅಸಹನೆ, ತಾಯ್ತನದ ಪ್ರೀತಿ- ಇವುಗಳು ಮುಖಾಮುಖೀಯಾಗುವ ಸಂಕೀರ್ಣ ಜಗತ್ತನ್ನು ಈ ಕಾದಂಬರಿಯಲ್ಲಿ ಕಾಣಬಹುದು’ ಎಂದು ಯು.ಆರ್‌. ಅನಂತಮೂರ್ತಿ ಹೇಳಿ¨ªಾರೆ. “ತುಳುವ ಜಗತ್ತಿನ ಜಾನಪದ ಮತ್ತು ಚಾರಿತ್ರಿಕ ಅನುಭವಗಳನ್ನು ಸೆರೆ ಹಿಡಿಯುವ ಈ ಕಾದಂಬರಿಯಲ್ಲಿ ಹಿಂಸೆ ಮತ್ತು ಅಹಿಂಸೆಗಳ ಪರಸ್ಪರ ಮುಖಾಮುಖೀಯಿದೆ. ಶಕ್ತಿ ರಾಜಕೀಯದ ಪರಿಣಾಮಗಳನ್ನು ಚಿಕಿತ್ಸಕವಾಗಿ ಮತ್ತು ವಿಮಶಾìತ್ಮಕವಾಗಿ ಈ ಕಾದಂಬರಿಯು ವಿವೇಚಿಸುತ್ತದೆ’ ಎಂದು ಬಿ. ಎ. ವಿವೇಕ ರೈ ಅವರು ಅಭಿಪ್ರಾಯಪಟ್ಟಿದ್ದಾರೆ. 

ಕಾದಂಬರಿಯ ಕಥನಶಕ್ತಿ ಮತ್ತು ಕಾದಂಬರಿಕಾರರ ರಾಜಕೀಯ ಸೂಕ್ಷ್ಮ ಸಂವೇದನೆಯನ್ನು ಗಮನಿಸಿ, ಇದರ ಅನುಭವವು ಜಗತ್ತಿನ ಇಂಗ್ಲಿಶ್‌ ಓದುಗರಿಗೆ ಆಗಲಿ ಎಂಬ ಆಶಯದಿಂದ ಹಲವು ಸವಾಲುಗಳ ನಡುವೆಯೂ ಈ ಕಾದಂಬರಿಯನ್ನು ಅನುವಾದ ಮಾಡಿರುವುದಾಗಿ ಅನುವಾದಕರು ಹೇಳಿಕೊಂಡಿದ್ದಾರೆ. 

ಮಿತ್ತಬೈಲ್‌ ಯಮುನಕ್ಕ
(ಎ ಟೇಲ್‌ ಆಪ್‌ ಲ್ಯಾಂಡ್‌ಲಾರ್ಡ್ಸ್‌ ಹೌಸ್‌ಹೋಲ್ಡ್‌)
ತುಳುಮೂಲ: ಡಿ. ಕೆ. ಜೌಟ
ಇಂಗ್ಲಿಶ್‌ ಅನುವಾದ : ಬಿ. ಸುರೇಂದ್ರ ರಾವ್‌, ಕೆ. ಚಿನ್ನಪ್ಪ ಗೌಡ
ಪ್ರ.: ಆಕೃತಿ ಆಶಯ ಪಬ್ಲಿಕೇಶನ್ಸ್‌ , ಲೈಟ್‌ಹೌಸ್‌ ಹಿಲ್‌ ರೋಡ್‌, ಮಂಗಳೂರು-1    ಸಂಪರ್ಕ :  9448254976

ಸಿರಿ

ಟಾಪ್ ನ್ಯೂಸ್

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.