ಐ ಫೋನ್ 14 ಖರೀದಿಗಾಗಿ ಕೊಚ್ಚಿಯಿಂದ ದುಬೈಗೆ ಪಯಣ: ಈತ ಹೀಗೆ ಮಾಡಿರುವುದು ಇದೇ ಮೊದಲಲ್ಲ!
Team Udayavani, Sep 19, 2022, 2:11 PM IST
ದುಬೈ: ಮೊಬೈಲ್ ಗಳಲ್ಲಿ ಅತ್ಯಂತ ದುಬಾರಿ ಫೋನ್ ಎಂದು ಕರೆಯಲ್ಪಡುವ ಐ-ಫೋನ್ 14 ನೇ ಆವೃತ್ತಿ ಬಿಡುಗಡೆಯಾಗಿದೆ. 4 ಮಾಡೆಲ್ ಗಳಾದ ಐಪೋನ್ 14, ಐಪೋನ್ ಪ್ಲಸ್, ಐಫೋನ್ 14 ಪ್ರೋ, ಐ ಫೋನ್ 14 ಪ್ರೋ ಮ್ಯಾಕ್ಸ್ ಮಾರುಕಟ್ಟೆಗೆ ಬಂದಿದೆ. ಈ ನಾಲ್ಕು ಮಾಡೆಲ್ ಗಳಿಗೆ ಭಿನ್ನವಾದ ಬೆಲೆ ನಿಗದಿಯಾಗಿದೆ.
ಐ ಫೋನ್ ಕೊಳ್ಳಬೇಕೆನ್ನುವುದು ಎಷ್ಟೋ ಜನರಿಗೆ ಒಂದು ಕ್ರೇಜ್. ಕೊಚ್ಚಿಯ ಉದ್ಯಮಿಯೊಬ್ಬರು ಐಫೋನ್ ಕೊಳ್ಳಲು ವಿಮಾನವೇರಿ ದುಬೈಗೆ ಪಯಣ ಬೆಳೆಸಿದ್ದಾರೆ. ಐಫೋನ್ 14 ಪ್ರೋಗಾಗಿ ಉದ್ಯಮಿ ಧೀರಜ್ ಪಲ್ಲಿಯಿಲ್ ದುಬೈಗೆ ಹೋಗಿ ಮೊಬೈಲ್ ಖರೀದಿಸಿದ್ದಾರೆ.
ಭಾರತದಲ್ಲಿ ಐಫೋನ್ 14 ಪ್ರೋಗೆ 1,59,900 ( 512GB) ಬೆಲೆಯಿದೆ. ಭಾರತಕ್ಕಿಂತ ದುಬೈ ನಲ್ಲಿ 14ನೇ ಆವೃತ್ತಿಯ ಐಫೋನ್ ಮೊದಲೇ ರಿಲೀಸ್ ಆಗಿದೆ. ದುಬೈನ ಬೆಲೆಯಲ್ಲಿ ಐಫೋನ್ 14 ಪ್ರೋಗೆ 5,949 AED (1,29,000) ಬೆಲೆಯಿದೆ. ಈ ಕಾರಣಕ್ಕಾಗಿ ಭಾರತದಲ್ಲಿ ಐಫೋನ್ ಖರೀಸುವರರಲ್ಲಿ ನಾನು ಮೊದಲಿಗನಾಗಬೇಕೆಂದು ಧೀರಜ್ ದುಬೈನಲ್ಲಿ ಐಫೋನ್ 14 ಪ್ರೋ ( (512GB) ಖರೀದಿಸಿದ್ದಾರೆ.
ಧೀರಜ್ ಐಫೋನ್ 14 ಪ್ರೋಗೆ ಭಾರತದಲ್ಲಿ ಇರುವ ಬೆಲೆಗಿಂತ 10 ಸಾವಿರ ರೂ. ಜಾಸ್ತಿ ಖರ್ಚು ಮಾಡಿದ್ದಾರೆ. ( 1,69,900 ಲ.ರೂ) ಅದಕ್ಕೆ ಕಾರಣ ಧೀರಜ್ ವಿಮಾನದ ಟಿಕೆಟ್ ಗಾಗಿ 40 ಸಾವಿರ ರೂ. ವ್ಯಯಿಸಿರುವುದು.
ಇನ್ನು ಧೀರಜ್ ಈ ರೀತಿ ಐಫೋನ್ ಖರೀದಿಸಲು ದುಬೈಗೆ ಪ್ರಯಾಣಿಸಿರುವುದು ಇದೇ ಮೊದಲಲ್ಲ. ಈ ಹಿಂದೆ 2017 ರಲ್ಲಿ ಐಫೋನ್ 8 ಖರೀದಿಸಲು ದುಬೈಗೆ ತೆರಳಿದ್ದರು.ಹಾಗೆ ಐ ಫೋನ್ 11 ಪ್ರೋಮ್ಯಾಕ್ಸ್ ಗಾಗಿ 2019 ರಲ್ಲಿ ಭಾರತದಲ್ಲಿ ಬಿಡುಗಡೆ ಆಗುವ ಒಂದು ವಾರಕ್ಕಿಂತ ಮೊದಲು ದುಬೈನಲ್ಲಿ ಖರೀದಿಸಿದ್ದೆ. ದುಬೈನಲ್ಲಿ ಐ ಫೋನ್ 12, 13 ಮಾರಾಟ ಆರಂಭವಾದಾಗ ನಾನು ಮೊದಲ ಗ್ರಾಹಕನಾಗಿದ್ದೆ ಎಂದು ಧೀರಜ್ ಹೇಳಿದ್ದಾರೆ.
ದುಬೈನ ಮಿರ್ಡಿಫ್ ಸಿಟಿ ಸೆಂಟರ್ನಲ್ಲಿರುವ ಪ್ರಿಮಿಯಂ ಆ್ಯಪಲ್ ಸ್ಟೋರ್ ನಲ್ಲಿ ಐಫೋನ್ 14 ಪ್ರೋ ( 512GB) ಖರೀದಿಸಿದ್ದಾರೆ. ಧೀರಜ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಐಫೋನ್ ಖರೀದಿಸಿದ ಬಗ್ಗೆ ಪೋಟೋ ಹಂಚಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ