ಗೂಗಲ್ ಪ್ಲೇ ಸ್ಟೋರ್ V/S ಪೇಟಿಎಂ; ಅಷ್ಟಕ್ಕೂ Paytm ಜೂಜಿನ ಆ್ಯಪ್ ಆಗಿದ್ದು ಹೇಗೆ?
Team Udayavani, Sep 22, 2020, 8:15 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಣಿಪಾಲ: ಸೆಪ್ಟೆಂಬರ್ 18ರಂದು ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ ಕೆಲವು ಗಂಟೆಗಳ ಕಾಲ ಭಾರತದ ಅತ್ಯಂತ ಜನಪ್ರಿಯ ಪಾವತಿ ಅಪ್ಲಿಕೇಶನ್ ಪೇಟಿಎಂ ಅನ್ನು ತೆಗೆದು ಹಾಕಿತ್ತು. ಪೇಟಿಎಂ ತನ್ನ ಪ್ಲೇ ಸ್ಟೋರ್ ನೀತಿಯನ್ನು ಉಲ್ಲಂ ಸಿದೆ ಎಂದು ಗೂಗಲ್ ಆರೋಪಿಸಿದೆ. Paytm ತನ್ನ ಅಪ್ಲಿಕೇಶನ್ನೊಂದಿಗೆ “ಜೂಜಾಟ’ವನ್ನು ಉತ್ತೇಜಿಸುತ್ತಿದೆ. ಹೀಗಾಗಿ ಅದನ್ನು ಭಾರತೀಯ ಕಾನೂನು ಮತ್ತು ಗೂಗಲ್ ನೀತಿಯಡಿಯಲ್ಲಿ ತೆಗೆದುಹಾಕಲಾಗಿದೆ ಎಂದು ಗೂಗಲ್ ಪ್ಲೆಸ್ಟೋರ್ ಹೇಳಿತ್ತು.
ಈ ಬೆಳವಣಿಗೆಯ ಬಳಿಕ ಗೂಗಲ್ ಮತ್ತು ಪೇಟಿಯಂ ನಡುವೆ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿದ್ದವು. ಗೂಗಲ್ ಯಾವುದೇ ಯುಪಿಐ ಕ್ಯಾಶ್ಬ್ಯಾಕ್ ಅನ್ನು “ಆನ್ಲೈನ್ ಕ್ಯಾಸಿನೊ’ ಎಂದು ಹೇಗೆ ಕರೆಯುತ್ತದೆ ಎಂದು ಪೇಟಿಎಂ ಕೇಳಿದೆ. ಪೇಟಿಎಂನ ಪ್ರತಿಸ್ಪರ್ಧಿಯಾಗಿರುವ ಗೂಗಲ್ ಪೇ ಕೂಡ “ತೇಜ್ ಶಾರ್ಟ್ಸ್’ ಆಟದ ಮೂಲಕ ಇದೇ ರೀತಿಯ ಅಭಿಯಾನವನ್ನು ನಡೆಸುತ್ತಿದೆ ಎಂದು ಪೇಟಿಎಂ ಹೇಳಿದೆ.
ಪೇಟಿಎಂ ನಿಜಕ್ಕೂ ಗುರಿಯಾಯಿತೇ?
ಕ್ಯಾಶ್ಬ್ಯಾಕ್ ಮತ್ತು ಕಾರ್ಡ್ಗಳನ್ನು ನೀಡುವುದರಿಂದ ನಮ್ಮ ಗೂಗಲ್ ಪ್ಲೇ ಜೂಜಿನ ನೀತಿಯನ್ನು ಉಲ್ಲಂ ಸಿದಂತಾಗುವುದಿಲ್ಲ ಎಂದು ಗೂಗಲ್ ಹೇಳಿದೆ. ಕಳೆದ ವಾರ ನಾವು ನಮ್ಮ ಪ್ಲೇ ಸ್ಟೋರ್ ಜೂಜಿನ ನೀತಿಯನ್ನು ಪುನರುಚ್ಚರಿಸಿದ್ದೇವೆ. ನಮ್ಮ ನೀತಿಯು ಆನ್ಲೈನ್ ಕ್ಯಾಸಿನೊಗಳನ್ನು ಅನುಮತಿಸುವುದಿಲ್ಲ. ಕ್ರೀಡಾ ಬೆಟ್ಟಿಂಗ್ಗೆ ಅನುಕೂಲವಾಗುವ ಅನಿಯಂತ್ರಿತ ಜೂಜಾಟದ ಅಪ್ಲಿಕೇಶನ್ಗಳನ್ನು ನಾವು ಬೆಂಬಲಿಸುವುದಿಲ್ಲ. ನಾವು ನಮ್ಮ ನೀತಿಯನ್ನು ಚಿಂತನಶೀಲವಾಗಿ ಕಾರ್ಯಗತಗೊಳಿಸುತ್ತೇವೆ ಮತ್ತು ಗ್ರಾಹಕರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಲು ಪ್ರಯತ್ನಿಸುತ್ತೇವೆ. ನಮ್ಮ ನೀತಿ ಎಲ್ಲ ಡೆವಲಪರ್ಗಳಿಗೆ ಒಂದೇ ಆಗಿರುತ್ತದೆ ಎಂದು ಗೂಗಲ್ ಹೇಳಿದೆ.
ನಿಷೇಧಕ್ಕೆ “ಪೇಟಿಎಂ ಕ್ರಿಕೆಟ್ ಲೀಗ್’ ಕಾರಣವೇ?
ಸೆಪ್ಟೆಂಬರ್ 11ರಂದು ತನ್ನ ಅಪ್ಲಿಕೇಶನ್ಲ್ಲಿ “ಪೇಟಿಎಂ ಕ್ರಿಕೆಟ್ ಲೀಗ್’ ಅನ್ನು ಪ್ರಾರಂಭಿಸಲಾಗಿದೆ. ಈ ಕಾರಣಕ್ಕಾಗಿ ಗೂಗಲ್ ಅದನ್ನು ಗೂಗಲ್ ಪ್ಲೇ ಸ್ಟೋರ್ನಿಂದ ತೆಗೆದುಹಾಕಿದೆ ಎಂದು ಪೇಟಿಎಂ ಹೇಳಿದೆ. Paytm ಪ್ರಕಾರ, ಪೇಟಿಎಂ ಕ್ರಿಕೆಟ್ ಲೀಗ್ ಒಂದು ಅಭಿಯಾನವಾಗಿದ್ದು, ಬಳಕೆದಾರರು ಕ್ರಿಕೆಟ್ ಸ್ಟಿಕ್ಕರ್ಗಳನ್ನು ಮತ್ತು ಸ್ಕ್ರ್ಯಾಚ್ ಕಾರ್ಡ್ಗಳನ್ನು ಸಂಗ್ರಹಿಸಬಹುದು. ಅದರಿಂದ ನೀವು ಯುಪಿಐ ಕ್ಯಾಶ್ಬ್ಯಾಕ್ ಪಡೆಯಬಹುದು. ರೀಚಾರ್ಜ್, ಯುಟಿಲಿಟಿ ಪಾವತಿ, ಯುಪಿಐ ಹಣ ವರ್ಗಾವಣೆ ಮತ್ತು ಹಣವನ್ನು ಪೇಟಿಎಂ ವ್ಯಾಲೆಟ್ಗೆ ಹಣ ವರ್ಗಾಯಿಸುವುದು ಈ ಆಫರ್ಗಳಲ್ಲಿ ಸೇರಿದ್ದವು.
ಪೇಟಿಎಂ ಕ್ರಿಕೆಟ್ ಲೀಗ್ ಕ್ಯಾಶ್ಬ್ಯಾಕ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಪೇಟಿಎಂ ಪ್ರಕಾರ, ಬಳಕೆದಾರರು ರೀಚಾರ್ಜ್, ಹಣ ವರ್ಗಾವಣೆ, ಬಿಲ್ ಪಾವತಿ ಮುಂತಾದ ಪಾವತಿಗಳ ಮೇಲೆ ಕ್ರಿಕೆಟ್ ಆಧಾರಿತ ಸ್ಟಿಕ್ಕರ್ಗಳನ್ನು ಸಂಗ್ರಹಿಸುತ್ತಾರೆ. ಸ್ಟಿಕ್ಕರ್ಗಳನ್ನು ಸಂಗ್ರಹಿಸುವ ಮೂಲಕ ಬಳಕೆದಾರರು ಸ್ವೀಪ್ಸ್ಟೇಕ್ ಕ್ಯಾಶ್ಬ್ಯಾಕ್ ಗೆಲ್ಲಬಹುದು. ಬಳಕೆದಾರರು ಈ ಸ್ಟಿಕ್ಕರ್ಗಳನ್ನು ತಮ್ಮ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಬಹುದು.
ಸೂಚನೆ ನೀಡದೇ ಪೇಟಿಎಂ ಅನ್ನು ತೆಗೆದು ಹಾಕಿದ ಗೂಗಲ್?
ಪೇಟಿಎಂ ಹೇಳುವಂತೆ ಗೂಗಲ್ನಿಂದ ಯಾವುದೇ ಎಚ್ಚರಿಕೆ ಅಥವಾ ಸೂಚನೆ ಬಂದಿಲ್ಲ. ನಮ್ಮ ಕ್ಯಾಶ್ಬ್ಯಾಕ್ ಅಭಿಯಾನವು ಈ ದೇಶದ ಕಾನೂನುಗಳಲ್ಲಿ ತಿಳಿಸಲಾದ ಮಾರ್ಗಸೂಚಿಗಳನ್ನು ಆಧರಿಸಿದೆ. ನಾವು ಯಾವುದೇ ನಿಯಮಗಳನ್ನು ಮುರಿಯಲಿಲ್ಲ ಮತ್ತು ಕಾನೂನನ್ನು ಉಲ್ಲಂಘಿಸಿಲ್ಲ. ಇದು ಯಾವುದೇ ರೀತಿಯಲ್ಲಿ ಜೂಜಾಟದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಪೇಟಿಎಂ ಬ್ಲಾಗ್ನಲ್ಲಿ ಹೇಳಿಕೊಂಡಿದೆ.
ನಮ್ಮ ಹಾಗೆ ಗೂಗಲ್ ಕೂಡ ಮಾಡುತ್ತಿದೆ?
ಗೂಗಲ್ ಪೇ ಇದೇ ರೀತಿಯ ಕ್ಯಾಶ್ಬ್ಯಾಕ್ ನೀಡುತ್ತಿದೆ ಎಂದು ಪೇಟಿಎಂ ಆರೋಪಿಸಿದೆ. ಗೂಗಲ್ ಪೇ ಕ್ರಿಕೆಟ್ ಆರಂಭದಲ್ಲಿ ವೇಗದ ಕಿರುಚಿತ್ರ ಅಭಿಯಾನವನ್ನು ಪ್ರಾರಂಭಿಸಿತು. ರನ್ ಗಳಿಸಿ ಒಂದು ಲಕ್ಷ ರೂಪಾಯಿಗಳ ಬಹುಮಾನ ಪಡೆಯಿರಿ ಎಂದು ಅದು ಹೇಳಿತ್ತು. ಬಳಕೆದಾರರು ಚೀಟಿಗಳನ್ನು ಗಳಿಸುತ್ತಾರೆ. ತಮ್ಮ ಸಾಧನೆಯ ಬಳಿಕ ಅವರು ಅದನ್ನು ಅನ್ಲಾಕ್ ಮಾಡಬಹುದಾಗಿದೆ. ಲಕ್ಕಿ ಡ್ರಾದ ಮೂಲಕ ಅವರು 1 ಲಕ್ಷ ರೂ.ಗಳವರೆಗೆ ಟಿಕೆಟ್ ಪಡೆಯಬಹುದಾಗಿದೆ. ಸ್ಕೋರರ್ಗಳಿಗೆ ಬಹುಮಾನ ಮತ್ತು ರಿಯಾಯಿತಿಯನ್ನು ಸಹ ಪಡೆಯಬಹುದು. ಗೂಗಲ್ ಪೇನಲ್ಲಿ ಈ ರೀತಿಯ ಕ್ಯಾಶ್ಬ್ಯಾಕ್ ಅಭಿಯಾನವು ಪ್ಲೇ ಸ್ಟೋರ್ ನೀತಿಯನ್ನು ಉಲ್ಲಂ ಸುವುದಿಲ್ಲ. ಏಕೆಂದರೆ ಗೂಗಲ್ ತನ್ನ ಅಪ್ಲಿಕೇಶನ್ಗಳಿಗೆ ಪ್ರತ್ಯೇಕ ಕಾನುನನ್ನು ವಿಧಿಸುತ್ತದೆ ಎಂದು ಪೇಟಿಎಂ ಆರೋಪಿಸಿದೆ.
ಫ್ಯಾಂಟಸಿ ಆಟಗಳು ನಿಜವಾಗಿಯೂ ಜೂಜಾಟವೇ?
ಅನ್ಲೈನ್ ಜೂಜು ಬಹಳ ಸಂಕೀರ್ಣ ವಿಷಯವಾಗಿದೆ. ಕೌಶಲ, ಅವಕಾಶ ಮತ್ತು ಕಟ್ಟುನಿಟ್ಟಾದ ನಿಯಂತ್ರಣವನ್ನೂ ಮಾಡಲಾಗುತ್ತದೆ. ಪೋಕರ್ ಮತ್ತು ರಮ್ಮಿಯಂತಹ ಆಟಗಳಲ್ಲಿ ಕೌಶಲವು ತುಂಬಾ ಇದೆ ಎಂದು 1960ರಿಂದ ಸುಪ್ರೀಂ ಕೋರ್ಟ್ ತೀರ್ಪು ಹೇಳುತ್ತಿದೆ. ಎರಡೂ ಆಟಗಳನ್ನು ಕೌಶಲ ಆಧಾರಿತ ಕಾರ್ಡ್ ಆಟಗಳು ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಈ ಆಟಗಳನ್ನು ಸರಿಯಾಗಿ ಆಡಿದಾಗ ಅದು ಜೂಜು ಎಂದು ಕರೆಯಲು ಬರುವುದಿಲ್ಲ ಎಂದು ಪೇಟಿಎಂ ಹೇಳಿದೆ. ಈ ಜೂಜಾಟವು ರಾಜ್ಯಗಳ ವಿಷಯವಾಗಿದೆ. ಇದಕ್ಕೆ ವಿವಿಧ ರಾಜ್ಯಗಳು ವಿಭಿನ್ನ ನಿಯಮಗಳನ್ನು ಹೊಂದಿವೆ. ತೆಲಂಗಾಣ ಮತ್ತು ಒಡಿಶಾ ಸೇರಿದಂತೆ ಕೆಲವು ರಾಜ್ಯಗಳು ರೂಪಾಯಿ ಒಳಗೊಂಡ ಕಾರ್ಡ್ ಆಟಗಳನ್ನು ನಿಷೇಧಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ