ರಾಜ್ಯದಲ್ಲಿ ಮತ್ತೆ 24 ಸೋಂಕಿತರು: ಮಂಡ್ಯ – ಹಾಸನಕ್ಕೆ ಮುಂಬೈ ಸಂಕಷ್ಟ
Team Udayavani, May 15, 2020, 6:25 PM IST
ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 24 ಜನರಿಗೆ ಸೋಂಕು ತಾಗಿರುವುದು ದೃಢವಾಗಿದೆ. ಇದರೊಂದಿಗೆ ರಾಜ್ಯದಲ್ಲಿ 24 ಗಂಟೆಯಲ್ಲಿ 69 ಜನರಿಗೆ ಸೋಂಕು ತಾಗಿದ್ದು, ಇದು ಒಂದು ದಿನದಲ್ಲಿ ಇದುವರೆಗೆ ದಾಖಲಾದ ಅತೀ ಹೆಚ್ಚಿನ ಸೋಂಕಿತರ ಸಂಖ್ಯೆಯಾಗಿದೆ.
ಮಂಡ್ಯ ಮತ್ತು ಹಾಸನ ಜಿಲ್ಲರಗಳಿಗೆ ಮುಂಬೈನಿಂದ ಬಂದವರ ಸಂಕಷ್ಟ ಎದುರಾಗಿದೆ. ಮಂಡ್ಯದಲ್ಲಿ ಒಟ್ಟು 13 ಸೋಂಕು ಪ್ರಕರಣ ದೃಢವಾಗಿದ್ದು, ಅವೆಲ್ಲವೂ ಮುಂಬೈನಿಂದ ಬಂದವರೇ ಆಗಿದೆ.
ಹಾಸನದಲ್ಲಿ ಮತ್ತೆ ನಾಲ್ವರಿಗೆ ಸೋಂಕು ತಾಗಿದ್ದು, ಈ ನಾಲ್ಕೂ ಜನರಿಗೆ ಮುಂಬೈನಿಂದ ಬಂದವರಾಗಿದ್ದಾರೆ. ಕಲಬುರಗಿಯಲ್ಲಿ ಮೂರು ಪ್ರಕರಣ ದೃಢವಾಗಿದ್ದು, ಓರ್ವ ಮುಂಬೈನಿಂದ ಬಂದವರಾಗಿದ್ದಾರೆ. ಮತ್ತೋರ್ವ ಕಂಟೈನ್ ಮೆಂಟ್ ಝೋನ್ ಗೆ ಭೇಟಿ ನೀಡಿದ್ದಾರೆ. ಮತ್ತೋರ್ವ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧನಿಗೆ ಸೋಂಕು ತಾಗಿದೆ.
ರಾಜ್ಯದಲ್ಲಿ ಒಟ್ಟು 69 ಸೋಂಕು ಪ್ರಕರಣಗಳು ದೃಢವಾಗಿದೆ. ಇದರಿಂದ ರಾಜ್ಯದ ಸೋಂಕಿತರ ಸಂಖ್ಯೆ 1056ಕ್ಕೆ ಏರಿದೆ. 480 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 36 ಜನ ಸಾವನ್ನಪ್ಪಿದ್ದಾರೆ.