Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Team Udayavani, Mar 29, 2024, 4:12 PM IST
ಸ್ನೇಹಿತರ ಅತಿರೇಕದ ಹುಚ್ಚಾಟ; ತಮಾಷೆಗೆಂದು ಏರ್ಪ್ರಷರ್ನಿಂದ ಗುದದ್ವಾರಕ್ಕೆ ಗಾಳಿ; ಕರುಳು, ಇತರ ಅಂಗಾಗ ಸ್ಫೋಟದಿಂದ ಯುವಕ ಸಾವು
ಬೆಂಗಳೂರು: ಇಬ್ಬರು ಸ್ನೇಹಿತರ ನಡುವಿನ ಹುಚ್ಚಾಟದಲ್ಲಿ ಒಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಹೈ ಏರ್ ಪ್ರಷರ್ ಪೈಪ್ನಿಂದ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದರಿಂದ ಹೊಟ್ಟೆಯೊಳಗಿನ ಕರುಳು ಹಾಗೂ ಇತರೆ ಅಂಗಗಳು ಸ್ಫೋಟಗೊಂಡು ಯುವಕ ಮೃತಪಟ್ಟಿರುವ ದಾರುಣ ಘಟನೆ ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಂಪಿಗೇಹಳ್ಳಿ ನಿವಾಸಿ ಯೋಗೀಶ್ (28) ಮೃತ ಯುವಕ. ಈ ಸಂಬಂಧ ಆತನ ಸ್ನೇಹಿತ ಮುರಳಿ(25) ಎಂಬಾತನನ್ನು ಬಂಧಿಸಲಾಗಿದೆ. ಮಾ.25ರಂದು ಬೈಕ್ ರಿಪೇರಿಗಾಗಿ ಸಂಪಿಗೆಹಳ್ಳಿಯ ಸಿಎನ್ಎಸ್ ಕಾರ್ ಸ್ಪಾ ಕಾರ್ ಸರ್ವಿಸ್ ಸೆಂಟರ್ಗೆ ಬಂದಾಗ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದರು.
ಆರೋಪಿ ಮುರಳಿ ಸಿಎನ್ಎಸ್ ಕಾರ್ ಸ್ಪಾ ಸರ್ವೀಸ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ. ದೇವನ ಹಳ್ಳಿಯ ವಿಜಯಪುರ ಮೂಲದ ಯೋಗೀಶ್ ಈವೆಂಟ್ ಮ್ಯಾನೆಜ್ಮೆಂಟ್ ಕಂಪನಿ ಹಾಗೂ ಡೆಲಿವರಿ ಏಜೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸಹೋದರಿಯ ಮದುವೆ ಕಾರ್ಯಕ್ರಮ ಹಿನ್ನೆಲೆಯಲ್ಲಿ 15 ದಿನಗಳಿಂದ ಕೆಲಸಕ್ಕೆ ಹೋಗಿರಲಿಲ್ಲ. ಮಾ.25ರಂದು ಸ್ನೇಹಿತನ ಕಾರ್ ಸ್ಪಾ ಸರ್ವಿಸ್ ಸೆಂಟರ್ಗೆ ಬೈಕ್ ವಾಶ್ಗೆ ಬಂದಿದ್ದಾನೆ. ಆಗ ನೀರಿನಿಂದ ತೊಳೆದ ಕಾರುಗಳನ್ನು ಅಧಿಕ ಏರ್ ಪ್ರಷರ್ ಪೈಪ್ನಿಂದ ಆರಿಸುತ್ತಿದ್ದ. ಈ ವೇಳೆ ತಮಾ ಷೆಗಾಗಿ ನಿಂತಿದ್ದ ಯೋಗೇಶ್ನ ಮುಖ, ತಲೆಗೆ ಗಾಳಿ ಬಿಟ್ಟಿದ್ದಾನೆ. ಹೆಚ್ಚು ಗಾಳಿ ಬಂದಿದ್ದರಿಂದ ಯೋಗೇಶ್, ಹಿಮ್ಮುಖವಾಗಿ ನಿಂತಿದ್ದಾನೆ.
ಆಗ ಮುರಳಿ, ಯೋಗೇಶ್ ಗುದದ್ವಾರದ ಕಡೆ ಗಾಳಿ ಬಿಟ್ಟಿದ್ದು, ಕೆಲ ಕ್ಷಣಗಳಲ್ಲೇ ಯೋಗೇಶ್ನ ಹೊಟ್ಟೆ ಊದಿಕೊಂಡು ಒಳಭಾಗದಲ್ಲೇ ಕರಳು ಸ್ಫೋಟಗೊಂಡು ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾನೆ. ಈ ಸಂಬಂಧ ಯೋಗೇಶ್ನ ಸಹೋದರಿ ಜಯಶ್ರೀ ಎಂಬವರು ನೀಡಿದ್ದು, ಈ ಹಿನ್ನೆಲೆಯಲ್ಲಿ ಐಪಿಸಿ 304 ಅಡಿ (ನರಹತ್ಯೆ) ಪ್ರಕರಣ ದಾಖಲಿಸಿಕೊಂಡು ಮುರಳಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಹೈ ಪ್ರಷರ್ ಏರ್ಪೈಪ್ನಿಂದ ಯೋಗೇಶ್ನ ಗುದದ್ವಾರಕ್ಕೆ ಗಾಳಿ ಬಿಟ್ಟ ಪರಿಣಾಮ ಆತನ ದೇಹದ ಒಳಭಾಗಗಳು ಸ್ಫೋಟಗೊಂಡು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾನೆ. ಈ ಸಂಬಂಧ ಮುರಳಿ ಎಂಬಾತನನ್ನು ಬಂಧಿಸಲಾಗಿದೆ. ●ಲಕ್ಷ್ಮೀಪ್ರಸಾದ್, ಈಶಾನ್ಯ ವಿಭಾಗ ಡಿಸಿಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು