ಮಾವಿಗೆ ಎರವಾದ ಅಕಾಲಿಕ ಮಳೆ
Team Udayavani, Apr 21, 2021, 4:54 PM IST
ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ: “ಹಣ್ಣುಗಳ ರಾಜ’ ಮಾವಿನ ಫಸಲು ಇಳುವರಿ ಈ ವರ್ಷ ಕಡಿಮೆಯಾಗುವ ಸಾಧ್ಯತೆ ಇದ್ದು, ಅಕಾಲಿಕ ಮಳೆಯ ಹೊಡೆತಕ್ಕೆ ನೆಲ ಕಚ್ಚುವಂತಾಗಿದೆ. ರೈತನ ಬದುಕನ್ನು ಮುಂಗಾರಿನ ಜತೆಗಿನ ಜೂಜಾಟ ಎನ್ನಲಾಗುತ್ತದೆ. ಒಂದು ವರ್ಷ ಅತಿವೃಷ್ಟಿ, ಮತ್ತೂಂದು ವರ್ಷ ಅನಾವೃಷ್ಟಿ, ಗಾಳಿ, ಮಳೆ, ಆಲಿಕಲ್ಲು ಸೇರಿದಂತೆ ನಾನಾ ಕಾರಣಗಳಿಗೆ ರೈತ ಸಮಸ್ಯೆಗೆ ಸಿಲುಕುತ್ತಾನೆ.
ವಿಶೇಷವಾಗಿ ಮಾವು ಬೆಳೆ ಬಹಳ ಸೂಕ್ಷ್ಮ. ಮರ ಹೂವಾಗಿ ಈಚಾಗಿ ಕಾಯಿ ಕಟ್ಟುವ ಸಮಯ ಬಹಳ ಮುಖ್ಯವಾದುದು. ಆದರೆ ಈ ವರ್ಷದ 12 ತಿಂಗಳಲ್ಲಿ ಸರಾಸರಿ ಒಂದೆರಡು ಮಳೆ ಬಂದಿದ್ದರಿಂದ ಅಕಾಲಿಕ ಮಳೆ ಕಾರಣಕ್ಕೆ ಜಿಲ್ಲೆಯ ಶೇ. 50 ರಷ್ಟು ಬೆಳೆ ನಷ್ಟವಾಗಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಸುರಿದ ಮಳೆಯಿಂದಾಗಿ ಹೂವು ಕಟ್ಟುವ ಹಂತದಲ್ಲಿದ್ದ ಮಾವು ತೊಂದರೆಗೀಡಾಗಿದೆ.
ಮಳೆಗೆ ಹೂವು ಉದುರಿದ್ದು, ಮತ್ತೆ ಹೂವಾಗಿ ಕಾಯಿ ಕಟ್ಟುವುದರಲ್ಲಿ ವಿಪರೀತ ಬಿಸಿಲು ಆವರಿಸಿ ವ್ಯತಿರಿಕ್ತ ವಾತಾವರಣ ನಿರ್ಮಾಣವಾಗಿದೆ. ಇದೆಲ್ಲದರ ಪರಿಣಾಮ ಮಾರುಕಟ್ಟೆಗೆ ಮಾವು ಲಗ್ಗೆ ಇಡುವುದು ತಡವಾಗಿದೆ. ಇದರೊಟ್ಟಿಗೆ ಬೆಲೆ ಹೆಚ್ಚಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಹೊಳಲ್ಕೆರೆಯಲ್ಲಿ ಅತಿ ಹೆಚ್ಚು ಮಾವು ಬೆಳೆ: ಜಿಲ್ಲೆಯಲ್ಲಿ ಹೆಚ್ಚು ಮಾವು ಬೆಳೆಯುವ ತಾಲೂಕುಗಳ ಪೈಕಿ ಹೊಳಲ್ಕೆರೆ ಮೊದಲ ಸ್ಥಾನದಲ್ಲಿದೆ. ಇಲ್ಲಿ 1354 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದ್ದು, ಪ್ರತಿ ವರ್ಷ 12,188 ಮೆಟ್ರಿಕ್ ಟನ್ ಇಳುವರಿ ಲಭ್ಯವಾಗುತ್ತಿದೆ. ಕೆಲ ಸಂದರ್ಭದಲ್ಲಿ ಇದು ಹೆಚ್ಚು ಅಥವಾ ಕಡಿಮೆ ಆಗುವುದು ಇದೆ. ಹೊಸ ತೋಟಗಳ ಸೇರ್ಪಡೆಯಾದರೆ, ಕೆಲ ರೈತರು ರೈ ಸುಟ್ಟುಕೊಂಡು ಬೆಳೆ ಬದಲಾಯಿಸಿದ್ದೂ ಇದೆ. ಜಿಲ್ಲೆಯಲ್ಲಿ 2545 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದೆ.
ಇದರಿಂದ ಕಳೆದ ವರ್ಷ 25,306 ಮೆಟ್ರಿಕ್ ಟನ್ ಇಳುವರಿ ಬಂದಿದೆ. ಇಡೀ ಜಿಲ್ಲೆಯ ಬೆಳೆಗೆ ಹೋಲಿಕೆ ಮಾಡಿದಾಗ ಹೊಳಲ್ಕೆರೆಯ ಪಾಲು ಅರ್ಧದಷ್ಟಿದೆ. ಹಿರಿಯೂರು ತಾಲೂಕನ್ನು “ಫ್ರೂಟ್ಸ್ ಬೌಲ್’ ಎಂದು ಕರೆದರೂ, ಅಲ್ಲಿ ಮಾವಿಗಿಂತ ಇತರೆ ಹಣ್ಣಿನ ಬೆಳೆಗಳೇ ಪ್ರಾಮುಖ್ಯ ಪಡೆದುಕೊಂಡಿವೆ. ಮಲ್ಲಿಕಾ, ಅಲಾ ನ್ಸಾ, ಬಂಗನ್ಪಲ್ಲಿ, ನೀಲಂ, ತೋತಾಪುರಿ, ಮಲ್ಗೊವಾ, ಕೇಸರ್, ಬೇನಿಷಾ, ರಸಪೂರಿ, ದಸೇರಿ ಮತ್ತಿತರ ತಳಿಗಳನ್ನು ಜಿಲ್ಲೆಯಲ್ಲಿ ಬೆಳೆಯಲಾಗಿದೆ. ಆದರೆ ಅಕಾಲಿಕ ಮಳೆ ಈ ವರ್ಷದ ಮಾವು ಬೆಳೆಗಾರರ ಕನಸಿಗೆ ಕೊಳ್ಳಿ ಇಟ್ಟಿದ್ದು ಸುಳ್ಳಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ