Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
Team Udayavani, Apr 18, 2024, 8:59 PM IST
ಮಲ್ಪೆ: ಮಲ್ಪೆ ಬೀಚ್ಗೆ ಬಂದು ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಮೂವರು ಸಮುದ್ರದ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋಗಿದ್ದು, ಈ ಪೈಕಿ ಓರ್ವ ಮೃತಪಟ್ಟಿದ್ದು, ಮತ್ತಿಬ್ಬರನ್ನು ರಕ್ಷಣೆ ಮಾಡಿದ ಘಟನೆ ಬುಧವಾರ ಮದ್ಯಾಹ್ನ ಮಲ್ಪೆ ಬೀಚ್ನಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರು ನಿವಾಸಿ ಗಿರೀಶ್ (26) ಮೃತಪಟ್ಟವರು. ಸಂತೋಷ್ (24) ಮತ್ತು ಹರೀಶ್ (30) ಅವರನ್ನು ರಕ್ಷಿಸಲಾಗಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಸನ ದಾಬೆ ಬೇಲೂರಿನಿಂದ 20 ಜನರ ತಂಡ ಮಲ್ಪೆ ಬೀಚ್ಗೆ ಪ್ರವಾಸಕ್ಕೆ ಬಂದಿದ್ದರು. ಶೃಂಗೇರಿ, ಆಗುಂಬೆ ನೋಡಿ ಮಧ್ಯಾಹ್ನ ಮಲ್ಪೆಗೆ ಬಂದಿದ್ದರು, ಮಲ್ಪೆ ಬೀಚ್ನಲ್ಲಿ ಈ ಮೂವರು ಸಮುದ್ರಕ್ಕಿಳಿದು ಸ್ನಾನ ಮಾಡುತ್ತಿದ್ದಾಗ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆ. ತತ್ಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ತಂಡದವರು ಮೂವರನ್ನು ರಕ್ಷಿಸಿ ದಡಕ್ಕೆ ತಂದಿದ್ದಾರೆ.
ಈ ಮೂವರ ಪೈಕಿ ಗಂಭೀರ ಸ್ಥಿತಿಯಲ್ಲಿದ್ದ ಗಿರೀಶ್ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಉಳಿದಿಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರಿಯ ನೀರಿನ ಸೆಳೆತ :
ಪ್ರಸ್ತುತ ಸಮಯ ಸಮುದ್ರದ ಅಲೆಗಳ ಆಬ್ಬರವೂ ತುಸು ಜಾಸ್ತಿಯಾಗಿದೆ. ಬೀಚ್ನ ಸಮುದ್ರ ತೀರದ ಅಡಿಯಲ್ಲಿ ಅಲ್ಲಲ್ಲಿ ಮಾರಿಯ ನೀರಿನ ಸೆಳೆತ (ತೋಡಿನ ಆಕಾರದಲ್ಲಿರುವ ನೀರಿನ ಸೆಳೆತ) ಇರುತ್ತದೆ. ಇದರಲ್ಲಿ ಸಿಲುಕಿಕೊಂಡವರಿಗೆ ದಡ ಸೇರಲು ಅಸಾಧ್ಯವಾಗುತ್ತದೆ. ಇದರಲ್ಲಿ ಸಿಕ್ಕಿಹಾಕಿ ಬಹುತೇಕ ಮಂದಿ ಮೇಲೆ ಬಾರದೆ ಸಮುದ್ರ ಪಾಲಾಗುವ ಪ್ರಸಂಗ ಎದುರಾಗುತ್ತದೆ. ಇದು ಹೆಚ್ಚಿನ ಊರಿನವರಿಗೇ ಗೊತ್ತಿರುವುದಿಲ್ಲ. ಅಂತಹದರಲ್ಲಿ ಅನ್ಯ ಜಿಲ್ಲೆ/ರಾಜ್ಯದ ಪ್ರವಾಸಿಗರು ಸಮುದ್ರಕ್ಕೆ ಇಳಿಯುವಾಗ ಎಚ್ಚರ ವಹಿಸಬೇಕಾಗಿದೆ ಎನ್ನುತ್ತಾರೆ ಈಶ್ವರ್ ಮಲ್ಪೆ ಅವರು.
ಪ್ರವಾಸಿಗರ ಜೀವಕ್ಕೆ ರಕ್ಷಣೆ ಇಲ್ಲ:
ಮಲ್ಪೆ ಬೀಚ್ನಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರರಿಗೆ ಸೂಕ್ತ ರಕ್ಷಣೆಯೇ ಇಲ್ಲ. ಸಮುದ್ರ ಪಾಲಾಗುವ ಪ್ರವಾಸಿಗರ ಜೀವವನ್ನು ರಕ್ಷಣೆ ಮಾಡಲು ಜೀವರಕ್ಷಕರ ತಂಡ ಕಾರ್ಯಾಚರಣೆಯಲ್ಲಿ ಇಲ್ಲ ಎಂದು ಸ್ಥಳೀಯರಾದ ಅನಿಲ್ ಬೀಚ್ ಆರೋಪಿಸಿದ್ದಾರೆ. ಪಾರ್ಕಿಂಗ್ ಚಾರ್ಚ್ ಸೇರಿದಂತೆ ಇತರ ಶುಲ್ಕವನ್ನು ವಸೂಲು ಮಾಡುತ್ತಾರೆ. ಆದರೆ ಪ್ರವಾಸಿಗರ ಜೀವಕ್ಕೆ ಇಲ್ಲಿ ಸೂಕ್ತ ರಕ್ಷಣೆ ನೀಡುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಆಡಳಿತ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ