Uv Fusion: ನಿತ್ಯ ಜೀವನದಲ್ಲಿ ಶಿಸ್ತು, ಸಂಯಮದ ಅಗತ್ಯ


Team Udayavani, Oct 2, 2023, 4:07 PM IST

20–fusion-time-discipline

ಜೀವನವೆನ್ನುವ ಯಾನವನ್ನು ಯಶಸ್ವಿಯಾಗಿ ಮುನ್ನಡೆಸಬೇಕಾದರೆ ಶಿಸ್ತು, ಸಂಯಮ ಅತೀ ಅಗತ್ಯ. ಬದುಕೆನ್ನುವುದು ಒಂದು ಸುಂದರ ಹೂದೋಟವಿದ್ದಂತೆ. ಹೂದೋಟದಲ್ಲಿರುವ ಕಳೆಗಳನ್ನು ಕಿತ್ತು ಹೇಗೆ ಸ್ವತ್ಛಗೊಳಿಸುತ್ತೇವೆಯೋ ಅದೇ ರೀತಿ ನಮ್ಮ ಬದುಕಲ್ಲಿ ಬರುವ ತೊಂದರೆ ತಾಪತ್ರಯಗಳನ್ನು ಬುದ್ದಿವಂತಿಕೆಯಿಂದ ನಿವಾರಿಸಿಕೊಂಡು ಮುನ್ನಡೆಯಬೇಕು.

ದಾರಿಯಲ್ಲಿ ಸಿಗುವ ಕಲ್ಲುಮುಳ್ಳುಗಳನ್ನು ಹೇಗೆ ಬದಿಗೆ ಸರಿಸಿ ಅಥವಾ ದಾಟಿ ಮುಂದೆ ಸಾಗುತ್ತೇವೆಯೋ ಅದೇ ರೀತಿ ಜೀವನದಲ್ಲಿ ಎದುರಾಗುವ ಕಷ್ಟ ನೋವುಗಳೆಂಬ ಕಲ್ಲುಮುಳ್ಳುಗಳನ್ನು ದಾಟಿ ಸಾಗಬೇಕು. ಕಷ್ಟ ಬಂದಾಗ ಕುಗ್ಗದೆ ಸುಖ ಬಂತೆಂದು ಹಿಗ್ಗದೇ ಎರಡನ್ನು ತಾಳ್ಮೆಯಿಂದ ಸರಿಸಮಾನವಾಗಿ ತೂಗಿಸಿಕೊಂಡು ಹೋಗುವ ಕಲೆಯನ್ನು ಕರಗತ ಮಾಡಿಕೊಂಡಾಗ ನಮ್ಮ ಜೀವನ ಸಸೂತ್ರವಾಗಿ  ಸಾಗುತ್ತದೆ.

ತಾಳಿದವನು ಬಾಳಿಯಾನು ಎನ್ನುವ ತಿಳಿದವರ  ನುಡಿಮುತ್ತುಗಳು ನಿಜವಾಗಿಯೂ ಸತ್ಯ. ಜೀವನದಲ್ಲಿ ಶಿಸ್ತು, ತಾಳ್ಮೆ ಅಥವಾ ಸಂಯಮ ಎನ್ನುವ ಶಕ್ತಿ ನಮ್ಮ ಜತೆಗಿದ್ದರೆ ಜಗತ್ತನ್ನೇ ಗೆಲ್ಲಬಹುದೆನ್ನುವುದು. ಹಿರಿಯರ ಅನುಭವದ ಮಾತುಗಳು. ಜೀವನವೆನ್ನುವ ಮೂರಕ್ಷರದ ಪದದಲ್ಲಿ ಎಷ್ಟೋ ಕಷ್ಟಸುಖ, ನೋವುನಲಿವು, ಸುಖದುಃಖ ಅಡಗಿದೆ. ಬದುಕಿನಲ್ಲಿ ಎಲ್ಲರೂ ಒಂದೇ ರೀತಿಯ ಬದುಕನ್ನು ನಡೆಸಲು ಸಾಧ್ಯವಿರುವುದಿಲ್ಲ. ಬದುಕನ್ನು ಬಂದಂತೆ ಸ್ವೀಕರಿಸಿ ಶಿಸ್ತು, ಸಂಯಮದಿಂದ ಮುನ್ನುಗ್ಗಿದಾಗ ನಿಜವಾಗಿಯೂ ಗೆಲುವು ನಮ್ಮದೇ.

ಬಂದದ್ದೆಲ್ಲಾ ಬರಲಿ ಭಗವಂತನ ದಯೆವೊಂದಿರಲಿ ಎನ್ನುವಂತೆ ಎಲ್ಲವನ್ನು ಎದುರಿಸಿ ಸೆಟೆದು ನಿಲ್ಲುವುದಕ್ಕೆ ಸಂಯಮ ಅತೀ ಅಗತ್ಯ.ನಮ್ಮ ಬಾಳಿನಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಸಂಯಮದಿಂದಿದ್ದರೆ ಬಾಳು ಸುಂದರ ಪಯಣ. ಚಿಕ್ಕಪುಟ್ಟ ಸಮಸ್ಯೆಗಳು ಎದುರಾದಾಗ ದೊಡ್ಡದು ಮಾಡದೇ ತಾಳ್ಮೆಯಿಂದ ಅವಲೋಕಿಸಿದರೆ ಅದಕ್ಕೊಂದು ಪರಿಹಾರ ಖಂಡಿತಾವಾಗಿಯೂ ದೊರೆಯುತ್ತದೆ.

ಇಲ್ಲವಾದರೆ ಚಿಕ್ಕ ಸಮಸ್ಯೆಗಳು ದೊಡ್ಡದಾಗಿ ಪರಿಣಮಿಸುವ ಸಾಧ್ಯತೆಯೇ ಹೆಚ್ಚು. ಹಿರಿಯರಲ್ಲಿರುವ ತಾಳ್ಮೆ, ಶಿಸ್ತು ಇವತ್ತಿನ ಯುವಜನಾಂಗದಲ್ಲಿ ಮರೆಯಾಗುತ್ತಿದೆ. ವೇಗದ ಜೀವನದಲ್ಲಿ ಎಲ್ಲವೂ ತ್ವರಿತವಾಗಿಯೇ ಆಗಬೇಕೆನ್ನುವ ಹಂಬಲ ಅತಿಯಾಗುತ್ತಿದೆ. ಅವಸರವೇ ಅಪಘಾತಕ್ಕೆ ಕಾರಣವೆನ್ನುವಂತೆ ಶಿಸ್ತುಬದ್ಧವಿಲ್ಲದ ಜೀವನವು ಅದೇ ದಿಕ್ಕಿನತ್ತ ಸಾಗುತ್ತದೆ.

ಶಿಸ್ತು, ತಾಳ್ಮೆ, ಸಂಯಮಗಳನ್ನಿಟ್ಟುಕೊಂಡು ಜೀವಿಸಿದರೆ ಮನುಷ್ಯ ಸದಾ ನೆಮ್ಮದಿ, ಸುಖ, ಸಂತೋಷದಿಂದಿರಬಹುದು ಎನ್ನುವುದು ನನ್ನ ಅನಿಸಿಕೆ.  ತಾಳ್ಮೆ, ಸಂಯಮ, ಶಿಸ್ತು ಗಳನ್ನು ನಾವು ಅಳವಡಿಸಿಕೊಂಡು ಇವುಗಳ ಬಗ್ಗೆ ಮಕ್ಕಳಿಗೆ  ತಿಳಿಹೇಳಿ ಒಳ್ಳೆಯ ಮಾರ್ಗದಲ್ಲಿ ನಡೆಯುವಂತೆ ದಾರಿದೀಪವಾಗೋಣ.

-ಸರಿತಾ ಅಂಬರೀಷ್‌ ಭಂಡಾರಿ

ಕುತ್ಪಾಡಿ

ಟಾಪ್ ನ್ಯೂಸ್

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-uv-fusion

UV Fusion: ಮಿತಿಯೊಳಗಿನ ಬದುಕು ನೆನಪಾದಾಗ

5-vitla

Vitla Palace: ಶತಮಾನಗಳ ಇತಿಹಾಸದ ವಿಟ್ಲ ಅರಮನೆ

4-uv-fusion

UV Fusion: ಬಿರು ಬೇಸಿಗೆಯ ಸ್ವಾಭಾವಿಕ ಚಪ್ಪರ ಈ ಹೊಂಗೆ ಮರ

3-uv-fusion

Devotion: ಭಕ್ತಿಯ ಅರ್ಥವಾದರೂ ಏನು?

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

6-uv-fusion

UV Fusion: ಮಿತಿಯೊಳಗಿನ ಬದುಕು ನೆನಪಾದಾಗ

5-vitla

Vitla Palace: ಶತಮಾನಗಳ ಇತಿಹಾಸದ ವಿಟ್ಲ ಅರಮನೆ

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.