YOUTHS: ಕಾಪಾಡಬೇಕಿದೆ ಯುವಭಾರತದ ಭವಿಷ್ಯ


Team Udayavani, Dec 6, 2023, 8:00 AM IST

13-uv-fusion

ಯುವ ಸಮುದಾಯವನ್ನು ದೇಶದ ಭವಿಷ್ಯ ಎನ್ನಲಾಗುತ್ತದೆ. ಅಂಥ ಯುವಕರೇ ಧೂಮಪಾನ, ಮಧ್ಯಪಾನ, ಮಾದಕ ದ್ರವ್ಯ ಸೇವನೆ ಸೇರಿದಂತೆ ನಾನಾ ರೀತಿಯಲ್ಲಿ ಹಾದಿ ತಪ್ಪುತ್ತಿರುವುದು ತೀರಾ ಭಯ ಪಡುವ ರೀತಿಯಲ್ಲಿ ಭಾರತವನ್ನು ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸುತ್ತದೆ. ಜೀವನದಲ್ಲಿ ಹಲವಾರು ಸಮಸ್ಯೆಗಳಿಂದಲೋ ಅಥವಾ ಸಹವಾಸದಿಂದಲೋ ಈ ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವ ಸಮುದಾಯವನ್ನು ಪರಿವರ್ತಿಸುವ ಕಾರ್ಯ ತೀರಾ ಅಗತ್ಯವಾಗಿದೆ.

ಆಘಾತಕಾರಿ ಸಂಗತಿಯೆಂದರೆ ಈ ವರ್ಷದ ಮೊದಲ 74 ದಿನಗಳಲ್ಲಿ ಕರ್ನಾಟಕವು ದಿನಕ್ಕೆ ಸರಾಸರಿ 16 ಮಾದಕ ದ್ರವ್ಯ ಪ್ರಕರಣಗಳನ್ನು ಕಂಡಿದೆ. ಮಾದಕ ದ್ರವ್ಯ ಸೇವನೆ, ಸ್ವಾಧೀನ ಮತ್ತು ವ್ಯವಹಾರದಿಂದ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಸಂತೋಷ ಮಾರ್‌ ಬಿ. ವರದಿ ಮಾಡಿದ್ದಾರೆ. ರಾಜ್ಯ ಗೃಹ ಇಲಾಖೆಯ ಅಂಕಿಅಂಶಗಳಿಂದ 2017ರ ಜನವರಿ 1ರಿಂದ 2022ರ ಮಾರ್ಚ್‌ 15ರ ನಡುವೆ ರಾಜ್ಯವು 14,832 ಪ್ರಕರಣಗಳನ್ನು ಕಂಡಿದೆ ಎಂದು ತಿಳಿದು ಬರುತ್ತದೆ.

ಯಾಕೆ ಯುವ ಸಮುದಾಯ ಡ್ರಗ್ಸ್‌ಗಳ ಮೊರೆ ಹೋಗುತ್ತಿದೆ ಎಂಬುದನ್ನು ನೋಡುವುದಾದರೆ, ಈಗ ಹೆಚ್ಚಾಗಿ ತಂದೆತಾಯಿಗಳಿಬ್ಬರೂ ಕೆಲಸಕ್ಕೆ ಹೋಗುವುದರಿಂದ ಚಿಕ್ಕ ವಯಸ್ಸಿನಲ್ಲಿ ಒಂದು ಮಗುವಿಗೆ ಅವಶ್ಯವಾಗಿ ಸಿಗಬೇಕಾದ ಗಮನ ಸಿಗುತ್ತಿಲ್ಲ. ಆದ್ದರಿಂದ ಸಹಜವಾಗಿಯೇ ಅವರು ಅನೇಕ ಅಡ್ಡದಾರಿಗಳನ್ನು ಹಿಡಿಯುತ್ತಿದ್ದಾರೆ. ದೈಹಿಕ ಚಟುವಟಿಕೆಯೂ ಬೇಕಿರುವಷ್ಟಿಲ್ಲ; ದೇಹದ ಫಿಟ್ನೆಸ್‌ ಅನ್ನು ಆನಂದಿಸದಿದ್ದಾಗ, ಆತ ಆನಂದಿಸುವುದು ನಶೆ ಏರಿಸಿಕೊಳ್ಳುವುದನ್ನು ಮಾತ್ರ. ನಿಮ್ಮ ಜೀವದ ಉತ್ಸಾಹ, ಲವಲವಿಕೆಯನ್ನು ನೀವು ಆನಂದಿಸದಿದ್ದರೆ ಮತ್ತು ನಶೆ ಏರಿಸಿ ಕೊಳ್ಳುವುದೊಂದೇ ದಾರಿಯಾ ಗುತ್ತದೆ. ಮತ್ತೀಗ ಡ್ರಗ್ಸ್‌ ಗಳು ಕೇವಲ ನಶೆಯನ್ನು ಏರಿಸು ವುದಿಲ್ಲ, ಅವು ಕೆಲ ಗಂಟೆಗಳ ಕಾಲ ಹುರುಪನ್ನೂ ಕೊಡುತ್ತದೆ. ಹಾಗಾಗಿ ದೊಡ್ಡ ಮಟ್ಟಿನಲ್ಲಿ ಈ ಪೀಳಿಗೆಯು ಆ ದಿಕ್ಕಿನಲ್ಲಿ ಹೋಗುತ್ತಿದೆ.

ಹೇಗೆ ಇದನ್ನು ನಿಯಂತ್ರಿಸಬಹುದು ಅನ್ನೋದಾದರೆ. ತಂದೆತಾಯಿಗಳು ಶ್ರೀಮಂತರಾಗಿದ್ದರೂ ಮಕ್ಕಳೊಂದು ವಯಸ್ಸಿಗೆ ಬರುವ ತನಕ ಅವರಿಗೆ ಸಂಪತ್ತಿನ ಅರಿವಿರಬಾರದು. ಈ ಸಂಸ್ಕೃತಿಯಲ್ಲಿ, ರಾಜರು ಕೂಡ ತಮ್ಮ ಮಕ್ಕಳನ್ನು ಗುರುಕುಲಕ್ಕೆ ಕಳಿಸುತ್ತಿದ್ದರು – ಅಲ್ಲಿ ಅವರು ಬೇರೆ ಮಕ್ಕಳ ಜತೆ ಓದುತ್ತಿದ್ದರು. ಎಲ್ಲರೂ ಕನಿಷ್ಠ ಅಗತ್ಯಗಳೊಂದಿಗೆ ಬದುಕುತ್ತಿದ್ದರು. ಸಂಪತ್ತು ಜೀವನದೊಳಗೆ ಬರುವುದಕ್ಕಿಂತ ಮೊದಲೇ, ಶಿಸ್ತು, ತೊಡಗಿಸಿಕೊಳ್ಳುವಿಕೆ ಮತ್ತು ಜೀವನದಲ್ಲಿ ಪಾಲ್ಗೊಳ್ಳುವಿಕೆಯ ಪ್ರಜ್ಞೆ ಬರಬೇಕು. ಇಲ್ಲದಿದ್ದರೆ ಸಂಪತ್ತು ನೀವು ತಲೆಯ ಮೇಲೆ ಹೊತ್ತುಕೊಳ್ಳುವ ಹೊರೆಯಾಗುತ್ತದೆ. ಈ ಪೀಳಿಗೆಗೆ ಆಗುತ್ತಿರುವುದು ಇದೇ.

ತಂದೆ ತಾಯಿಯ ಪಾಲನೆ, ಕಠಿನ ಕಾನೂನುಗಳ ಅನುಷ್ಟಾನದಿಂದ ಈ ಜಾಲ ಭೇದಿಸುವಲ್ಲಿ ಮತ್ತು ನಿರ್ಮೂಲನೆ ಮಾಡುವಲ್ಲಿ ಪೊಲೀಸ್‌ ಇಲಾಖೆ ಇನ್ನಷ್ಟು ಹೆಚ್ಚಿನ ಗಮನಗಳ ಹರಿಸುವ ಮೂಲಕ ಸುಸ್ಥಿರ ಸಮಾಜ ಮತ್ತು ಯುವಕರ ಭವಿಷ್ಯಕ್ಕೆ ಮಾರಕವಾಗಿರುವ ಈ ಹುಳುಕನ್ನು ನಾಶಮಾಡಬಹುದು.

-ಹಣಮಂತ ಎಂ.ಕೆ.

ತುಮಕೂರು

ಟಾಪ್ ನ್ಯೂಸ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.