NSS Camp: ನೆನಪುಗಳ ಶಿಖರ- ಎನ್‌ಎಸ್‌ಎಸ್‌ ಶಿಬಿರ


Team Udayavani, Dec 6, 2023, 7:45 AM IST

9-uv-fusion

ಅದೊಂದು ಚೈತ್ರ ಮಾಸದ ಮುಂಜಾವು.  ಎಂದಿನಂತೆ ಅಲರಾಂ ಇಟ್ಟು ಏಳುವ ದಿನವಲ್ಲ. ಯಾಕೆಂದರೆ ಇದೊಂದು ಸೇವಾ ಶಿಬಿರದಲ್ಲಿ ಆರಂಭವಾಗುವ ದಿನ. ಬೆಳ್ಳಂಬೆಳಗ್ಗೆ ಎದ್ದು ರಂಗೋಲಿ ಇಟ್ಟು, ಧ್ವಜವಂದನೆ, ಪ್ರಾರ್ಥನೆ, ಕವಾಯತು, ನನಗಾಗಿ ಅಲ್ಲ ನಿನಗಾಗಿ ಎಂದು ಮನೆ ಮನವನ್ನು ಪರಿಸರವನ್ನು ಹಸನುಗೊಳಿಸುವ ಕೆಲಸವದು. ವ್ಯಕ್ತಿಗೆ ಮನಸ್ಸಿನ ಸೌಂದರ್ಯ ಮುಖ್ಯವೆಂದು ತಿಳಿಸುವ ಎನ್‌ಎಸ್‌ಎಸ್‌ ಶಿಬಿರವದು. ಶಿಬಿರ ಮುಗಿದು ಆರೇಳು ತಿಂಗಳುಗಳು ಉರುಳಿದರೂ ಅಲ್ಲಿ ಕಲಿತ ಪಾಠ, ಹೊಸ ಸ್ನೇಹಿತರ ಬಳಗ, ಶಿಬಿರದ ದಿನಗಳ ನೆನಪುಗಳು ಮನಸ್ಸಿನಲ್ಲಿ ಮರೆಯಾಗದೆ ಉಳಿದಿವೆ.

ಹೊಸ ಪರಿಚಯ, ಹೊಸ ವಿಷಯ ಎಲ್ಲವೂ ಹೊಸತು. ಕ್ಯಾಂಪಸ್‌ನಲ್ಲಿ ನಡೆಯುವ ಕಾರ್ಯಕ್ರಮಗಳು, ಶಿಬಿರಾರ್ಥಿಗಳೊಂದಿಗಿನ ಹೊಂದಾಣಿಕೆ, ಎಲ್ಲರೂ ಒಂದಾಗಿ ಮಾಡಿದ ದ್ವಜಾರೋಹಣ, ಚುಮು ಚುಮು ಚಳಿಯಲ್ಲೂ ಹಾಡಿದ ಎನ್‌ಎಸ್‌ಎಸ್‌ ಗೀತೆಗಳು, ಘೋಷವಾಕ್ಯಗಳು, ನಾವೇ ನಮ್ಮವರಿಗೆ ಬಡಿಸಿ ತಿಂದ ಊಟ, ಉಪಾಹಾರಗಳು, ಒಂದಾಗಿ ಮಾಡಿದ ಶ್ರಮದಾನ, ನಿದ್ದೆಗಣ್ಣಿನಲ್ಲಿ ಆಲಿಸಲಾಗದಿದ್ದರೂ ಆಲಿಸಿದ ಶೈಕ್ಷಣಿಕ ಕಾರ್ಯಕ್ರಮ, ಅತ್ಯಂತ ಕಡಿಮೆ ಸಮಯದಲ್ಲಿ ತಯಾರಿ ನಡೆಸಿದ ಸಾಂಸ್ಕೃತಿಕ ಕಾರ್ಯಕ್ರಮ, ಎಲ್ಲರೊಂದಿಗೆ ಸೇರಿ ಆ ದಿನವನ್ನು ಅವಲೋಕಿಸಿದ ಕ್ಷಣ, ನಮ್ಮಿಂದಾದ ತಪ್ಪುಗಳನ್ನು ತಿದ್ದಿ ನಮ್ಮ ಒಳ್ಳೆಯ ಕೆಲಸ ಕಾರ್ಯಗಳಿಗೆ ನೀಡಿದ ಎನ್‌ಎಸ್‌ಎಸ್‌ ಚಪ್ಪಾಳೆಗಳು, ನಾವು ಮಲಗದೆ, ಶಿಬಿರಾರ್ಥಿಗಳಿಗೂ ಮಲಗಲು ಬಿಡದೆ ಕೊಟ್ಟ ತೊಂದರೆಗಳು, ಒಬ್ಬೊಬ್ಬರ ಮುಖದಲ್ಲಿ ಮೂಡಿಸಿದ ನಗು, ಅಳು. ಶಿಬಿರಜ್ಯೋತಿ, ಭಾರತ ನಕಾಶೆ ರಚಿಸಿ ನಾವೆಲ್ಲರೂ ಒಂದೇ ಎಂದೂ; ಭಾರತವು ಹೊರ ಜಗತ್ತಿಗೆ ಪ್ರಕಾಶಿಸಲೆಂದು ಹಚ್ಚಿದ ಹಣತೆಗಳ ಬೆಳಕು, ಬೆಳಕಿನ ಜತೆಗೆ ಕಂಬನಿ, ಕೊನೆಯ ಬಾರಿಗೆ ಕ್ಯಾಂಪಿನಲ್ಲಿ ಎಲ್ಲರೂ ಒಂದಾಗಿ ಫೋಟೋಗಳನ್ನು ತೆಗೆದು ಒಬ್ಬರನ್ನೊಬ್ಬರು ಬಿಗಿದಪ್ಪಿ ಕಣ್ಣೀರು ಸುರಿಸಿದ ಕ್ಷಣಗಳು ಇಂದಿಗೂ ಮರೆಯಲಾಗದ ನೆನಪುಗಳು.

ಮೊದಲ ದಿನ ಅಪರಿಚಿತರಾಗಿ, ಭೇಟಿಯಾಗಿ, ಹೊಸಬರ ಪರಿಚಯವಾಗಿ ಆ ಪರಿಚಯ ಸ್ನೇಹವಾಗಿ, ಆ ಸ್ನೇಹ ಬಿಟ್ಟಿರಲಾಗದ ಬಂಧವಾಗಿ, ಆ ಬಂಧ ಒಂದು ಪರಿವಾರವಾಗಿ ನಾವೆಲ್ಲರೂ ಒಂದೇ ಎನ್ನುವ ಭಾವನೆಗಳು ಇಂದಿಗೂ ಪ್ರಸ್ತುತವಾಗಿವೆ.

ಕೆ.ಎಂ. ಪವಿತ್ರಾ

ಎಂಜಿಎಂ ಕಾಲೇಜು, ಉಡುಪಿ

ಟಾಪ್ ನ್ಯೂಸ್

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.