ರೋಗಗ್ರಸ್ತ ಸಮಾಜದೊಳಗೆ ಎಚ್‌ಐವಿ ಸೋಂಕಿತರು; ನಾಗರಿಕರಾಗಿ ನಮ್ಮ ವೈಯಕ್ತಿಕ ನಿಲುವುಗಳೇನು?


Team Udayavani, Mar 30, 2021, 4:59 PM IST

HIV01

ನಾವು ಯಾವಾಗಲೂ ಮೌಲ್ಯಗಳ ಬಗ್ಗೆಯೇ ಆಲೋಚಿಸುತ್ತೇವೆ. ಪ್ರತಿಯೊಂದು ಘಟನೆಗಳನ್ನು ಸಮಾಜ ಅರ್ಥೈಸಿಕೊಳ್ಳುವ ರೀತಿಯ ಬಗ್ಗೆ ನಮಗೊಂದಷ್ಟು ಕುತೂಹಲ.

ಅದು ಸ್ವೀಕರಿಸುವ, ತಿರಸ್ಕರಿಸುವ ಪ್ರಕ್ರಿಯೆಯ ಮೇಲೆ ನಾವು ನಮ್ಮ ನಿಲುವುಗಳನ್ನು ತಾಳುತ್ತಾ, ವರ್ತನಾ ಅಭ್ಯಾಸವನ್ನು ಮಾಡಿಕೊಳ್ಳುತ್ತೇವೆ. ಹಾಗಾದರೆ ನಮ್ಮ ವೈಯಕ್ತಿಕ ನಿಲುವುಗಳಿಗೆ ನಾವು ಕೊಡುವ ಮೌಲ್ಯವೆಷ್ಟು?

ಬಹುಶಃ ಇಲ್ಲವೆನಿಸುತ್ತದೆ. ನಾವು ಕುರಿಮಂದೆಯೊಳಗೊಂದು ಕುರಿಯಾಗಿ, ಸಮಾಜ ಒಪ್ಪಿದ್ದನ್ನು ಒಪ್ಪುತ್ತಾ, ತಿರಸ್ಕರಿಸಿದ್ದನ್ನು ತಿರಸ್ಕರಿ ಸುತ್ತಾ, ವ್ಯಕ್ತಿತ್ವಗಳನ್ನು ಅಳೆದು ತೂಗದೆ,ಕೇವಲ ಗುಂಪೊಂದರ ಅಭಿಪ್ರಾಯದೊಳಗೆ ನಮ್ಮ ಅಸ್ಥಿತ್ವವನ್ನು ಕಳೆದುಕೊಂಡಿದ್ದೇವೆ ಎಂದೆನಿಸುತ್ತದೆ. ಸಮಾಜ ತಿರಸ್ಕರಿಸಿದ ಅದೆಷ್ಟೋ ವಿಚಾರಗಳು ವೈಯಕ್ತಿಕ ನೆಲೆಗಟ್ಟಿನಲ್ಲಿ ಸ್ವೀಕೃತಗೊಳ್ಳುತ್ತವೆ. ಹಾಗಾಗಿಯೇ ಏನೋ ಈ ಸಮಾಜದ ಕೆಲವು ನಿಲುವು, ದೃಷ್ಟಿಕೋನಗಳ ಬಗ್ಗೆ ಖೇದ ಮತ್ತು ಅಸಹಾಯಕ ಮನೋಧೋರಣೆ ನನಗೆ.

ಕಾಂಕ್ರೀಟು ರಸ್ತೆಗಳ ಸಿಗ್ನಲ್‌ಗ‌ಳಲ್ಲಿ ಭಿಕ್ಷೆ ಬೇಡುವ ಮಂಗಳಮುಖೀಯರಲ್ಲಿ ನಿರುದ್ಯೋಗಿಗಳನ್ನೂ, ಸಂಜೆ ಬೀದಿ ದೀಪಗಳ ನಡುವೆ ಅರೆಬೆತ್ತಲಾದ ವೇಶ್ಯೆಯರಲ್ಲಿ ಆರ್ಥಿಕ ಸಮತೋಲನ ತೂಗಿಸಲಾಗದೆ. ಬದುಕು ಕಟ್ಟಿಕೊಳ್ಳುವಲ್ಲಿ ಎಡವಿದವರ ಅಸಹಾಯಕತೆಯನ್ನೂ, ನಾವೆಂದಾದರು ಕಂಡಿದ್ದೇವಾ? ಖಂಡಿತ ಇಲ್ಲ. ಸಮಾಜ ಒಪ್ಪದ ಈ ಎಲ್ಲ ಸಂದರ್ಭಗಳನ್ನು ವಾಸ್ತವದಲ್ಲಿ ಅವಲೋಕಿಸಿದರೆ, ಅವರೆಲ್ಲ ತಮ್ಮದಲ್ಲದ ತಪ್ಪಿಗೆ ಬಲಿಪಶುಗಳಾದವರಲ್ಲವೇ?

ಕೊರೊನಾ ಬಂದು ಹೋದ ಮೇಲಂತೂ, ಅಸಹಾಯಕರಿಗೆ ಸಹಾಯಹಸ್ತ ಚಾಚುವುದು ಒಂದು ಪ್ರವೃತ್ತಿಯಾಗಿ ಮಾರ್ಪ ಟ್ಟಿದೆ. ಇದೊಂದು ಧನಾತ್ಮಕ ಬದಲಾವಣೆ ಮತ್ತು ಖುಷಿಯ ವಿಚಾರವೇ. ಆದರೆ ರೋಗಕ್ಕೆ ತುತ್ತಾದವರಿಗೆ ನಾವು ಯಾವುದೇ ರೀತಿ ಯಲ್ಲೂ,ಮಾನಸಿಕ ಸಾಂತ್ವಾನ ನೀಡಲಿಲ್ಲ ಎಂಬುದು ದುರದೃಷ್ಟಕರ ಸಂಗತಿ. ಅದಕ್ಕೊಂದು ಉತ್ತಮ ಉದಾಹರಣೆಯೆಂದರೆ 80ರ ದಶಕದಲ್ಲಿ ಕಾಣಿಸಿಕೊಂಡ ಎಚ್‌.ಐ.ವಿ(ಏಐV) ಸೋಂಕು ಅಥವಾ ಏಡ್ಸ್‌ ಎಂಬ ಮಾರಿ. ವ್ಯಕ್ತಿಯ “ರೋಗ ನಿರೋಧಕ’ ಶಕ್ತಿಯನ್ನು ಕುಗ್ಗಿಸುತ್ತಾ ತನ್ನ ಅಧಿಪಥ್ಯ ಸಾಧಿಸುವಲ್ಲಿ ಈ ರೋಗ ಬಹುತೇಕ ಯಶಸ್ವಿಯಾಗಿದೆ. ಇದೆಲ್ಲ ರೋಗಿಯ ಬೌತಿಕ ಅಸ್ಥಿತ್ವಕ್ಕೆ ಸಂಬಂಧಿಸಿದ್ದು.ಆದರೆ ಸೋಂಕಿತರ ಮಾನಸಿಕ ಸ್ಥಿತಿಗತಿ!.

ಸೋಂಕಿತರ ಬೌದ್ಧಿಕ ಆತ್ಮವಿಶ್ವಾಸವನ್ನು ಕುಗ್ಗಿಸಿದ್ದು, ಅಲುಗಾಡಿಸಿದ್ದು ಮಾತ್ರ ರೋಗವಲ್ಲ, ಬದಲಿಗೆ ನಾವೇ. ಕಾಯಿಲೆಗೆ ತುತ್ತಾದವನಿಗಷ್ಟೆ ಗೊತ್ತು ಅವನ ದೈಹಿಕ ಆಯಾ ಮಗಳು, ಆಯಾಸ ಬೇನೆಗಳು; ಆದರೆ ಆತನ ಮಾನಸಿಕ ನೆಮ್ಮದಿಗಳನ್ನು ನಿರ್ಧ ರಿಸುವವರು ಮಾತ್ರ ಮೌಲ್ಯಗಳ ಬಗ್ಗೆ ಮಾತನಾಡುವ ನಾವುಗಳೇ.

ಸಮಾಜದ ಈ ಕೆಲವು ಧೋರಣೆಗಳ ಬಗ್ಗೆ ನನಗಿನ್ನು ಸೋಜಿಗವೆನಿಸುತ್ತದೆ. “ಶವಕ್ಕೆ’ ಪೂಜೆ ಮಾಡಿ ದೈವ ಸಮಾನ ಎಂದು ಭಾವಿಸುತ್ತಾ, ಸಾವಿನ ಅಂಚಿನಲ್ಲಿರುವವರ ಬಗ್ಗೆ ಅಸಹ್ಯ ಭಾವ ತಾಳುವ ಸಮಾಜದ ವರ್ತನೆ ಅರ್ಥೈಸಿಕೊಳ್ಳುವುದಾದರೂ ಹೇಗೆ? ಆದರೆ ಬದಲಾವಣೆ ಮಾತ್ರ ನಮ್ಮಿಂದಲೇ ಆಗಬೇಕಾದ ಅಗತ್ಯವಿದೆ. ಒಮ್ಮೆ ಸರಕಾರಿ ಎಚ್‌.ಐ.ವಿ ಸೋಂಕಿತರ ಆಪ್ತಸಮಾಲೋಚನ ಕೇಂದ್ರಕ್ಕೆ ಭೇಟಿ ನೀಡಿ, ಸರದಿಯಲ್ಲಿ ನಿಂತ ರೋಗಿಗಳನ್ನು ವೀಕ್ಷಿಸಿ. ಅಲ್ಲಿ ಗರ್ಭದಲ್ಲೇ ಎಚ್‌.ಐ.ವಿ ಸೋಂಕು ಹೊದ್ದುಬಂದ ಶಿಶು ಕಾಣಸಿಗುತ್ತದೆ. ಕೇವಲ ಸ್ನೇಹಿತರ ಪ್ರೋತ್ಸಾಹದಿಂದ ಕ್ಷಣಕಾಲ ವೇಶ್ಯೆ ಮನೆ ಬಾಗಿಲು ತಟ್ಟಿದ 20ರ ಹರೆಯದ ಯುವಕ ಸಿಗುತ್ತಾನೆ. ತನ್ನ 21ರ ಪ್ರಾಯದಲ್ಲಿ ದೃಢಪಟ್ಟ ತನ್ನ ಸೋಂಕಿನ ಮೂಲ ತನ್ನ ತಂದೆ-ತಾಯಿ ಎಂದು ತಿಳಿದ ಯುವತಿಯ ಪರಿಸ್ಥಿತಿ ಮನಕಲುಕುತ್ತದೆ.

ಇಂತಹ ಅನೇಕ “ಸೋಂಕಿನ’ ತೆರೆ ಹಿಂದಿನ ಕಾರಣಗಳು ಸಿಗುತ್ತವೆ. ಆದರೆ ನಾವು ಮಾತ್ರ ವಿಚಾರವನ್ನು ಸಂಪೂರ್ಣವಾಗಿ ತಿಳಿಯದೆ ಎಚ್‌.ಐ.ವಿ. ಸೋಂಕಿತರನ್ನು ತಿರಸ್ಕರಿಸುತ್ತಾ, ಅವರು ಮುಖ್ಯವಾಹಿನಿಗೆ ಬಾರದಂತೆ ಮಾನಸಿಕ ಹಿಂಸೆ ನೀಡುತ್ತಿದ್ದೇವೇನೋ ಎಂದು ಅನಿಸುತ್ತದೆ. ಅವರದಲ್ಲದ ಮತ್ತು ಅವರೇ ನೇರವಾಗಿ ಎದುರಿಸುವ ಸಮಸ್ಯೆಗೆ ತೀರ್ಮಾನ ಕೊಡಲು ನಾವು ಯಾರು? ನಮ್ಮ ಸುತ್ತಲೂ ಅನೇಕ ಸೋಂಕಿತರಿ¨ªಾರೆ. ಆದರೆ ಅವರ್ಯಾರು ತಮ್ಮ ದೈಹಿಕ ಸ್ಥಿತಿಗತಿಗಳನ್ನು ಹಂಚಿಕೊಳ್ಳಲಾರದಷ್ಟು ಸನ್ನಿವೇಶವನ್ನು ನಾವು ಬಿಗಿಗೊಳಿಸಿದ್ದೇವೆ. ರೋಗವೇನೇ ಇರಲಿ, ಕಾಯಿಲೆ ಬಂದರೂ,ಬಾರದಿದ್ದರೂ, ಬದುಕುವುದು ಮಾತ್ರ ನೂರು ವರ್ಷಕ್ಕಿಂತ ಕಡಿಮೆಯೆ.

2020ರ ವರದಿಯ ಪ್ರಕಾರ ಭಾರತದಲ್ಲಿ ನಿರೀಕ್ಷಿತ ಜೀವಿತಾವಧಿಯು ಶೇ. 69.73ರಷ್ಟಿದೆ. ಅಂದರೆ ರೋಗ ಬಂದಿಲ್ಲವೆಂದರೂ ನಾವು ಬದುಕುವ ಅವಧಿಯ ಗಡಿರೇಖೆಯಂತೂ ಅಷ್ಟೆ ಅಲ್ಲವೇ? ಹೀಗಿರುವಾಗ ಬೇರೆಯವರಿಗೆ ಬರಬಹುದಾದ ಕಾಯಿಲೆ- ಸೋಂಕುಗಳ ಬಗ್ಗೆ ತಾತ್ಸಾರ-ತಿರಸ್ಕಾರ ಭಾವನೆಗ ಳೇಕೆ? ನಮ್ಮ ಆರೋಗ್ಯದ ಕುರಿತು ಎಚ್ಚರವಿದ್ದರೆ ಸಾಕು; ಇತರರ ದೈಹಿಕ ಆರೋಗ್ಯದ ಕುರಿತು ಸಾಮಾಜಿಕ “ನಿಲುವು’ಗಳ ಪ್ರಮಾಣ ಪತ್ರ ನೀಡುವ ಅಗತ್ಯ ಇಲ್ಲವೆನಿಸುತ್ತದೆ. “ಸೋಂಕು ಪೀಡಿತ’ರನ್ನು ಗೌರವಿಸದಿದ್ದರೂ ಪರವಾಗಿಲ್ಲ; ಕನಿಷ್ಟ ಅವರು ಇದ್ದಂತೆಯೇ ಒಪ್ಪಿಕೊಳ್ಳೋಣ ಮತ್ತು ಸಂದರ್ಭವನ್ನು ಸ್ವೀಕರಿಸೋಣ. ಇದರಿಂದ ನಮಗೇನೂ ನಷ್ಟವಾಗುವುದಿಲ್ಲ ಆದರೆ, ಸೋಂಕಿಗೆ ತುತ್ತಾದವರಿಗೆ ಕನಿಷ್ಟ ಬದುಕಿರುವವರೆಗೂ “ತಾನು ಜೀವಿಸುತ್ತಿರುವ ಸಮಾಜದಲ್ಲಿ ತಾನು ಪರಕೀಯರಲ್ಲ’ ಎಂಬ ಭಾವ ಒಂದಿಷ್ಟು ಸಮಾಧಾನವನ್ನಾದರೂ ನೀಡುತ್ತದೆ.


ಶಕುಂತಲಾ ವಿನಯ್‌, ಬೆಂಗಳೂರು 

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.