ಗಾಂಧೀಜಿ ನಮ್ಮೊಡನೆ ಇದ್ದಾರೆಯೇ?


Team Udayavani, Oct 2, 2020, 9:15 AM IST

871906-gandhimahatma-030718

ಗಾಂಧೀಜಿ ಎಂಬ ಹೆಸರು ನಮಗೆ ಸದಾ ಪರಿಚಿತ ಮತ್ತು ಬಹಳ ಹತ್ತಿರ. ಆದರೆ ಅವರ ಚಿಂತನೆಗಳಿಂದ ತುಂಬಾ ದೂರ ಸರಿದಿದ್ದೇವೆ. ಪ್ರಸ್ತುತ ದಿನಮಾನದಲ್ಲಿ ಗಾಂಧೀಜಿ ಸಮರ್ಪಕವಾಗಿ ಅರ್ಥವಾಗಲು ಸಾಧ್ಯವೇ ಇಲ್ಲ ಎಂಬಂತಹ ವಾತಾವರಣದಲ್ಲಿ ನಾವಿದ್ದೇವೆ.

ಇಡೀ ದೇಶವೇ ಅವರನ್ನು ಮಹಾತ್ಮಾ, ರಾಷ್ಟ್ರಪಿತ, ಬಾಪೂ ಎಂದು ಕರೆದರೂ ಅವರ ಚಿಂತನೆಗಳು, ತೋರಿಸಿದ ದಾರಿ ಎಲ್ಲವೂ ಪುಸ್ತಕದ ಬದನೆಕಾಯಿಯಾಗಿದೆ.

ಗಾಂಧೀಜಿ ಮನಸ್ಸು ಮಾಡಿದ್ದರೆ ದೇಶದ ಮೊದಲ ಪ್ರಧಾನಿ ಆಗಬಹುದಿತ್ತು. ಒಬ್ಬ ವ್ಯಕ್ತಿ ಯಾವುದೇ ಅಧಿಕಾರ, ಅಂತಸ್ತು ಇಲ್ಲದೆ ಚಿಂತನೆಗಳಿಂದಲೇ ಜಗತ್ತಿಗೆ ಆದರ್ಶವಾಗಬಹುದು ಎಂಬುದಕ್ಕೆ ಗಾಂಧೀಜಿಗಿಂತ ಸ್ಪಷ್ಟ ಉದಾಹರಣೆ ಬೇಕಿಲ್ಲ.

ಅವರು ಯಾವತ್ತೂ ಆಡಂಬರ ಪ್ರಿಯರಾಗಿರಲಿಲ್ಲ. ಮನುಷ್ಯ ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಸಂಗ್ರಹಿಸಿದರೆ ಅದು ಕದ್ದಂತೆ. ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿ ದುರಾಸೆಗೆ ಒಳಗಾಗದೆ ಸರಳ ಜೀವನ ಹೊಂದಬೇಕೆಂದು ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ. ಇಂಥ ಅದ್ಭುತ ಚೇತನ ಇಂದು ಪ್ರಚಾರದ ಸರಕಾಗಿರುವುದು ನೋವಿನ ಸಂಗತಿ. ಸಾವಿರಾರು ಕೋಟಿ ಕೊಳ್ಳೆ ಹೊಡೆದ ವ್ಯಕ್ತಿಗಳಿಂದ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಸರಳತೆಯ ಪಾಠ ಎಂಥ ವಿಚಿತ್ರ! ಇಂಥವರಿಂದ ಲೋಕಕಲ್ಯಾಣ ಸಾಧ್ಯವೇ? ಬದುಕಿನ ಸ್ಥಿತ್ಯಂತರದಲ್ಲಿ ಗಾಂಧಿ ತಮ್ಮದೇ ವ್ಯಕ್ತಿತ್ವವನ್ನು ಕಟ್ಟಿಕೊಂಡರು. ಹೀಗಾಗಿಯೇ ಜಗತ್ತಿನ ಮಹಾನ್‌ ನಾಯಕರೂ ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದಾರೆ.

2009ರಲ್ಲಿ ಅಮೆರಿಕದ ಅಧ್ಯಕ್ಷರಾದ ಹೊಸತರಲ್ಲಿ ಒಬಾಮ ಒಂದು ಶಾಲೆಗೆ ಭೇಟಿ ನೀಡಿದ್ದಾಗ ಅಲ್ಲಿನ ವಿದ್ಯಾರ್ಥಿ ಕೇಳಿದ ಒಂದು ಪ್ರಶ್ನೆ ಕುತೂಹಲಕರವಾದುದು. “ನೀವು ಜತೆಗೆ ಡಿನ್ನರ್‌ ಮಾಡಬಯಸುವ ಒಬ್ಬನೇ ಒಬ್ಬ ವ್ಯಕ್ತಿ ಇದ್ದರೆ ಯಾರದು?’ ಎಂದಾಗ ಒಬಾಮ ಕೊಟ್ಟ ಉತ್ತರ ಅದ್ಭುತವಾದದ್ದು. ಅವರ ಉತ್ತರ “ಮಹಾತ್ಮ ಗಾಂಧೀಜಿಯವರೊಡನೆ ಡಿನ್ನರ್‌ ಮಾಡಲು ಅವಕಾಶ ಸಿಕ್ಕಿದ್ದರೆ ನನ್ನ ಜನ್ಮ ಸಾರ್ಥಕವಾಗುತ್ತಿತ್ತು’ ಎಂದಾಗಿತ್ತು. ಒಬಾಮರ ಮೇಲೆಯೇ ಇಂಥ ಪ್ರಭಾವವನ್ನು ಬೀರಿದ್ದಾರೆಂದರೆ ಅವರೊಬ್ಬ ಅದ್ಭುತ ವ್ಯಕ್ತಿಯೆಂದು ಎಂಥವರಿಗೂ ವೇದ್ಯವಾಗುತ್ತದೆ.

ಮನುಕುಲದ ಹೋರಾಟದಲ್ಲೇ ಗಾಂಧಿ ತನ್ನ ಬದುಕಿನ ಸಾರ್ಥಕ್ಯವನ್ನು ಕಂಡುಕೊಂಡದ್ದು ಈಗ ಇತಿಹಾಸ. ಪತ್ರಕರ್ತ, ವಕೀಲ, ದಾರ್ಶನಿಕ, ಚಿಂತಕ, ಲೇಖಕ ಹೀಗೆ ಹಲವು ಬಗೆಯಲ್ಲಿ ಗಾಂಧಿಯನ್ನು ಕಂಡುಕೊಳ್ಳುವುದು ಸಾಧ್ಯ. ದೇಶದ ಹಲವು ರೋಗ, ವ್ಯಸನ, ಮನೋವಿಕಾರಗಳಿಗೆ ಅವರ ಚಿಂತನೆಯಲ್ಲಿ, ತತ್ವ, ಸಿದ್ಧಾಂತಗಳಲ್ಲಿ ಮದ್ದುಗಳಿವೆ. ಗಾಂಧೀಜಿ ಕುರಿತಂತೆಯೂ ರಾಜಕೀಯ ವಲಯದಲ್ಲಿ ಒಂದಷ್ಟು ಟೀಕೆ-ಟಿಪ್ಪಣಿಗಳು, ಭಿನ್ನಾಭಿಪ್ರಾಯಗಳು, ಕೇಳಿ ಬರುತ್ತವೆ. ಏನೇ ಆದರೂ ಅವರ ಮೌಲ್ಯಗಳು ನಮಗೆಲ್ಲ ಅನುಕರಣೀಯ.

ಇಂದಿನ ಜೀವನ ಶೈಲಿಯಲ್ಲಿ ಪೂರ್ಣಪ್ರಮಾಣದಲ್ಲಿ ಗಾಂಧೀಜಿ ಬದುಕನ್ನು ಅನುಕರಿಸಲು ಸಾಧ್ಯವಿಲ್ಲವೇನೋ! ಆದರೆ ದೈನಂದಿನ ಬದುಕಿನ ಅಗತ್ಯಗಳಾದ ಆಹಾರದಲ್ಲಿ ಮಿತವ್ಯಯ, ಕಡಿಮೆ ಖರ್ಚಿನ ಬದುಕಿನ ನಿರ್ವಹಣೆ, ಅನಗತ್ಯದ ದುಂದುವೆಚ್ಚದಲ್ಲಿ ಕಡಿವಾಣ, ಶಾಂತಿ ಸಹಬಾಳ್ವೆ, ಪರಿಸರ ನೈರ್ಮಲ್ಯಕ್ಕೆ ಒತ್ತು, ಶ್ರಮ ಸಂಸ್ಕೃತಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವತ್ಛತೆ ಹೀಗೆ ಬದುಕಿನ ವಿವಿಧ ಸಂದರ್ಭಗಳಲ್ಲಿ ಅವರ ಮೌಲ್ಯಗಳನ್ನು ರೂಢಿಸಿಕೊಂಡರೆ ನಿಜಕ್ಕೂ ಗಾಂಧಿ ಜಯಂತಿ ಅರ್ಥಪೂರ್ಣವಾಗುತ್ತದೆ.

 ಗಿರಿಜಾಶಂಕರ್‌ ಜಿ.ಎಸ್‌., ಇಡೇಹಳ್ಳಿ, ಹೊಳಲ್ಕೆರೆೆ ತಾ|,ಚಿತ್ರದುರ್ಗ ಜಿಲ್ಲೆ 

 

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.