ಸಮಾನತೆ, ಸಮೃದ್ಧಿಯ ರೂಪ ಓಣಂ


Team Udayavani, Aug 31, 2020, 2:51 PM IST

College students celebrate Onam festival

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತದೆ. ನಿಸರ್ಗದೊಂದಿಗೆ ನಂಟು ನಮ್ಮದು ಅದ್ಭುತವೇ ಸರಿ.

ಪ್ರಕೃತಿಯನ್ನು ಆರಾಧಿಸುತ್ತಾ ನಾವು ಹಲವು ಹಬ್ಬಗಳನ್ನು ಆಚರಿಸುತ್ತೇವೆ.

ಪ್ರತಿ ಋತುಗಳಿಗೆ ಅದರದ್ದೇ ಆಗಿರುವ ಮಹತ್ವ ಇದೆ.

ಪರಶುರಾಮನ ಸೃಷ್ಟಿಯ ಭೂಮಿಯಲ್ಲಿ ಆಚರಿಸುವ ಒಂದು ವಿಶೇಷವಾದ ಹಬ್ಬವಿದು, ಅದುವೇ ಓಣಂ.

ಕೇರಳ ನಾಡಿನ ಸುಪ್ರಸಿದ್ಧನಾದ ರಾಜ ಮಹಾಬಲಿಯು ತನ್ನ ಪ್ರಜೆಗಳನ್ನು ಕಾಣಲು ಬರುವನೆಂಬ ನಂಬಿಕೆ. ಇದು ಅತಮ್‌, ಚಿತ್ರ, ಚೋದಿ, ವಿಶಾಖಂ, ಅನೀಷಮ್‌, ತ್ರಿಕಿಟಾ, ಮೂಲಂ ಪೂರಾಡಂ, ಉತ್ರಾಡಂ ಹಾಗೂ ತಿರುವೋಣಂ ಎಂದು ಹತ್ತು ದಿನಗಳ ಸಂಭ್ರಮ.

ತಿರುವೋಣಂ ಅತಿ ವಿಶೇಷವಾಗಿ ಆಚರಿಸುತ್ತಾರೆ. ಮಹಾರಾಜನ ಆಗಮನವನ್ನು ಸ್ವಾಗತಿಸಲು ಮನೆಯಂಗಳದಲ್ಲಿ ಪೂಕಳಂ ಸಜ್ಜಾಗುತ್ತದೆ. ಮಹಾರಾಜನು ಅತಿಶ್ರೇಷ್ಟನು, ದಯೆ ಹಾಗೂ ಕರುಣೆಯಿಂದ ಕೂಡಿದವನಾಗಿದ್ದು, ಪ್ರಜೆಗಳ ಸುಖ ಹಾಗೂ ಸಂತೋಷಕ್ಕಾಗಿ ಸೇವೆ ಮಾಡುತ್ತಿದ್ದನು. ಮಹಾಬಲಿಯ ಆಳ್ವಿಕೆಯ ಕಾಲಘಟ್ಟದಲ್ಲಿ ತನ್ನ ಸಾಮ್ರಾಜ್ಯದಲ್ಲಿ ಕಳ್ಳರು, ಕೊಲೆಗಾರರು ಇರಲಿಲ್ಲ, ಎಲ್ಲರೂ ಸೌಹಾರ್ದದಿಂದ ಬಾಳುತ್ತಿದ್ದರು. ಸಮಾನತೆ ಹಾಗೂ ಸಹಬಾಳ್ವೆಯೂ ನೆಲೆಯಾಗಿತ್ತು ಎನ್ನುತ್ತಾರೆ ಹಿರಿಯರು.

ರಾಜನನ್ನೇ ದೇವರಿಗೆ ಸಮಾನವಾಗಿ ಪೂಜಿಸುತ್ತಿದ್ದ ಪ್ರಜೆಗಳು, ಇದರಿಂದಾಗಿ ದೇವತೆಗಳು ಅದೆಲ್ಲಿ ತಮ್ಮ ಅಧಿಕಾರವು ಮಹಾಬಲಿಯ ಕೈಸೇರುತ್ತದೆ ಎಂದು ಭಯಭೀತರಾಗಿ ಮಹಾವಿಷ್ಣುವಿನ ಮೊರೆ ಹೋದರು. ನಾರಾಯಣನು ಮಹಾಬಲಿಯ ಕೆಲಸ ಕಾರ್ಯಗಳನ್ನು ಅರಿತವನೇ ತಾನೇ ಸ್ವತಃ ವಾಮನ ರೂಪವನ್ನು ತಾಳಿ ಮಹಾಬಲಿನ್ನು ಪರೀಕ್ಷಿಸಲು ಮುಂದಾಗುತ್ತಾನೆ. ಒಂದು ತುಂಡು ಭೂಮಿಯನ್ನು ಕೇಳಲು ಬರುವ ಒರ್ವ ಕುಬ್ಜ ಬ್ರಾಹ್ಮಣನ ರೂಪದಲ್ಲಿ ಹರಿಯೂ ಪ್ರತ್ಯಕ್ಷವಾಗುವುದಲ್ಲೇ ತನ್ನ ಮೂರು ಪಾದಗಳಿಗೆ ಬೇಕಾದಷ್ಟು ಜಾಗವನ್ನು ನೀಡುವಂತೆ ವಿನಂತಿಸಿಕೊಳ್ಳುತ್ತಾನೆ.

ಮಹಾದಾನಿಯಾಗಿದ್ದ ಮಹಾಬಲಿಯು ಅದಕ್ಕೆ ಸಮ್ಮತಿಯನ್ನು ನೀಡುತ್ತಾನೆ. ಮೊದಲ ಹೆಜ್ಜೆಯಲ್ಲಿ ಭೂಮಿಯನ್ನು, ಎರಡನೆಯ ಹೆಜ್ಜೆಯಲ್ಲಿ ಆಕಾಶವನ್ನು ತನ್ನದಾಗಿಸಿಕೊಳ್ಳುತ್ತಾನೆ ವಾಮನ. ಮೂರನೆಯ ಹೆಜ್ಜೆ ಎಲ್ಲಿಡಲು ಎಂದು ಪ್ರಶ್ನಿಸಿದಾಗ ತನ್ನ ಶಿರವನ್ನು ತೋರಿಸಿದಾಗ ವಾಮನನು ಮಹಾಬಲಿಯನ್ನು ಪಾತಾಳಕ್ಕೆ ನೂಕುತ್ತಾನೆ.ಪದ್ಮನಾಭನ ಪರಮ ಭಕ್ತನಾದ ಮಹಾಬಲಿಯೂ ತನ್ನ ಪ್ರಜೆಗಳನ್ನು ಕಾಣಲು ಭುವಿಗೆ ವರ್ಷದಲ್ಲಿ ಒಂದು ದಿನ ಅವಕಾಶವನ್ನು ನೀಡಬೇಕೆಂಬ ವರವನ್ನು ಕೇಳುತ್ತಾನೆ. ಅದಕ್ಕೆ ಅಸ್ತು ಎಂದ ಮಹಾವಿಷ್ಣು. ಇದರಿಂದಲೇ ಪ್ರತಿ ವರ್ಷ ಓಣಂ ಹಬ್ಬದ ದಿನ ಮಹಾಬಲಿಯೂ ಪ್ರಜೆಗಳನ್ನು ಕಾಣಲು ತನ್ನ ಸಾಮ್ರಜ್ಯಕ್ಕೆ ಬರುತ್ತಾನೆ ಎಂದು ವಿಜೃಂಭಣೆಯಿಂದ ಆಚರಿಸುತ್ತಾರೆ.

ವೆಳ್ಳಂಕಳಿ, ಓಣಪ್ರೋಟಂ, ಪುಲಿಕಳಿ, ಕೈಕೊಟ್ಟಿಕಳಿ ಸೇರಿದಂತೆ ಸಂಪ್ರದಾಯಿಕವಾದ “ಸದ್ಯ” ಯೊಂದಿಗಿನ ಸಂಭ್ರಮ. ಮನೆಯವರಿಗೆಲ್ಲಾ ಹೊಸ ಬಟ್ಟೆ, ಹಾಗೂ ಎಲ್ಲರೂ ಜತೆಯಲ್ಲಿ ಸೇರಿ ಮಾಡುವ ಬಾಳೆಲೆ ಊಟ. ಚಮ್ಮಂದಿ, ರಸಂ, ಪಾಯಸಂ, ಪಪ್ಪಡಂ, ಪುಳಿಶ್ಶೆರಿ ಸೇರಿದಂತೆ ಇಪ್ಪಾತ್ತಾರಕ್ಕೂ ಹೆಚ್ಚಿನ ಬಗೆಯ ತಿಂಡಿ ತಿನಿಸುಗಳನ್ನು ತಯಾರಿ ಕುಟುಂಬ ಸಮೇತವಾಗಿ ಸವಿಯುವುದೇ ಹಬ್ಬದ ವಿಶೇಷತೆ.

ಆದರೆ ಕಳೆದ ಎರಡು ವರ್ಷವೂ ಅತಿವೃಷ್ಟಿಯಿಂದಾಗಿ ಉಂಟಾಗ ಜಲಪ್ರಳಯದಿಂದಾಗಿ ಈ ಹಬ್ಬದ ಸಂಭ್ರಮವನ್ನು ಮರೆತು ಪರಸ್ಪರ ಸಹಾಯ ಹಸ್ತ ಚಾಚಿದರು. ಈ ವರುಷ ಕೋವಿಡ್‌ ಸೋಂಕಿನಿಂದ ಈ ಹಬ್ಬವು ತನ್ನ ಮೆರುಗನ್ನು ಮಂದಗೊಳಿಸಿದರೂ, ಜನರು ಮನೆಗಳಲ್ಲೇ ಇದ್ದುಕೊಂಡು ಮಹಾಬಲಿಯನ್ನು ಸ್ವಾಗತಿಸುತ್ತಿದ್ದಾರೆ.

ಯಾವುದೇ ಹೆಚ್ಚಿನ ಆಡಂಬರಗಳಿಲ್ಲದಿದ್ದರೂ ಮನೆಯಲ್ಲೇ ಆಗಿರುವ ಜೈವಿಕ ತರಕಾರಿಗಳೂ ಈ ಬಾರಿ ಹಬ್ಬಕ್ಕೆ ಸಾಥ್‌ ನೀಡಿದೆ ಎನ್ನುವುದು ಶ್ಲಾಘನೀಯ. ಪ್ರಕೃತಿಯನ್ನು ಆರಾಧಿಸಲು ಅದೆಲ್ಲೋ ಮರೆತು ಹೋಗಿದ್ದ ಜನರಿಗೆ ಈ ಹಬ್ಬ ಮತ್ತೊಂದು ಅವಕಾಶವನ್ನು ನೀಡುತ್ತಿದೆ.

 ಎಲ್ಲರಿಗೂ ಸಮಾನತೆ ಹಾಗೂ ಸಮೃದ್ಧಿ ತುಂಬಿದ ಓಣಂ ಹಬ್ಬ ಹಾರ್ದಿಕ ಶುಭಾಶಯಗಳು. 

 ಅನಘಾ ಶಿವರಾಮ್‌, ವಿವೇಕಾನಂದ ಕಾಲೇಜು ಪುತ್ತೂರು 

 

 

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.