Tulasi: ಸರ್ವ ರೋಗ ನಿವಾರಿಣಿ ತುಳಸಿ


Team Udayavani, Dec 4, 2023, 2:58 PM IST

11-uv-fusion

ನಮ್ಮ ಹಿಂದೂ ಸಂಪ್ರದಾಯಗಳಲ್ಲಿ ತುಳಸಿ ಗಿಡಕ್ಕೆ, ತುಳಸಿ ಪೂಜೆಗೆ ಬಹಳ ಮಹತ್ವವಿದೆ. ತುಳಸಿ ಗಿಡವನ್ನು ಲಕ್ಷ್ಮೀ ದೇವಿಯ ಸ್ವರೂಪವೆಂದು ಪೂಜಿಸಲಾಗುತ್ತದೆ.

ಮುತ್ತೈದೆಯರು ತುಳಸಿ ಗಿಡವನ್ನು ಪೂಜಿಸುವುದರಿಂದ ಪತಿವ್ರತ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಪುರಾಣಗಳು ಹೇಳುತ್ತವೆ. ತುಳಸಿ ಗಿಡವನ್ನು ಪೂಜಿಸುವ ಮೊದಲು ಶುದ್ಧವಾಗಿ ಸ್ನಾನ ಮಾಡಿ, ಮೊದಲಿಗೆ ಸೂರ್ಯ ದೇವರಿಗೆ ಅರ್ಘ್ಯವನ್ನು ಸಮರ್ಪಿಸಿ ಅನಂತರ ತುಳಸಿ ಗಿಡಕ್ಕೆ ಹಿತ್ತಾಳೆಯ ಕಲಶದಲ್ಲಿ ನೀರನ್ನು ಹಾಕಿ ತುಳಸಿ ಗಿಡದ ಸುತ್ತ ಮೂರು ಪ್ರದಕ್ಷಿಣೆ ಬರಬೇಕು. ಮೊದಲ ಹಾಗೂ ಎರಡನೇ ಸುತ್ತಿನ ಪ್ರದಕ್ಷಿಣೆಯಲ್ಲಿ ತುಳಸಿ ಗಿಡದ ಬುಡಕ್ಕೆ ಹಾಗೂ ಮೂರನೆಯ ಸುತ್ತಿನ ಪ್ರದಕ್ಷಿಣೆಯಲ್ಲಿ ತುಳಸಿ ಗಿಡದ ತುದಿಯಿಂದ ಗಿಡದ ಎಲ್ಲ ಭಾಗಗಳಿಗೂ ನೀರು ಬೀಳುವಂತೆ ನೀರನ್ನು ಹಾಕಬೇಕು.

ತುಳಸಿ ಮಾತೆಗೆ ಮೂರು ಪ್ರದಕ್ಷಿಣೆ ಬಂದ ಅನಂತರ ದೇವಿಗೆ ಆರತಿಯನ್ನು ಎತ್ತಿ, ಹೂ ಮಾಲೆ ಹಾಕಿ, ಸೆಗಣಿ ಸಾರಿಸಿ ನಿರ್ಮಲವಾದ ತುಳಸಿ ಕಟ್ಟೆಯ ಎದುರಿನಲ್ಲಿ ರಂಗೋಲಿ ಬಿಡಿಸಿ, ದೇವಿಗೆ ಸೀರೆಯನ್ನು ಉಡಿಸಿ, ಬಳೆ, ಕಾಲುಂಗುರ, ಕುಂಕುಮ, ತಾಳಿಯನ್ನು ಇಟ್ಟು, ಬಾಳೆದಿಂಡನ್ನು ತುಳಸಿ ಕಟ್ಟೆಯ ಪಕ್ಕದಲ್ಲಿ ಇಟ್ಟು, ನೆಲ್ಲಿಕಾಯಿಯ ಗೆಲ್ಲನ್ನು ತುಳಸಿ ಗಿಡದ ಜತೆಗೆ ಇಟ್ಟು, ತುಳಸಿ ಮಾತೆಗೆ ಆರತಿ ಬೆಳಗಿ ಪೂಜೆ ಮಾಡುತ್ತಾರೆ.

ಈ ರೀತಿ ಪ್ರತೀ ದಿನವೂ ಪೂಜೆ ಮಾಡಿದರೆ ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ವೃದ್ಧಿಗೊಳ್ಳುತ್ತದೆ ಹಾಗೂ ದುಷ್ಟ ಶಕ್ತಿಗಳು ನಿರ್ನಾಮವಾಗಿ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತದೆ. ಹಾಗೂ ಮನೆಯ ವಾಸ್ತು ದೋಷಗಳು ಕೂಡ ಪರಿಹಾರ ವಾಗುತ್ತವೆ.

ತುಳಸಿ ಗಿಡವನ್ನು ನೆಡುವಾಗ ಶುದ್ಧ ಮಣ್ಣಿನಲ್ಲಿ ನೆಡಬೇಕು. ಮನೆಯ ಯಜಮಾನನು ಸೋಮವಾರ, ಬುಧವಾರ, ಗುರುವಾರಗಳಂದು ತುಳಸಿ ಗಿಡವನ್ನು ನೆಟ್ಟರೆ ಶುಭ ಎನ್ನುತ್ತಾರೆ. ತುಳಸಿ ಗಿಡಕ್ಕೆ ನೀರು ಹಾಕಿ ಪೂಜಿಸಿದ ಅನಂತರ ತುಳಸಿ ದಳದಲ್ಲಿ ಬಿದ್ದ ನೀರನ್ನು ತೀರ್ಥವೆಂದು ಸ್ವೀಕರಿಸಿದರೆ ಸರ್ವ ರೋಗ ನಿವಾರಣೆಯಾಗುತ್ತದೆ.

ತುಳಸಿ ಗಿಡವನ್ನು ಸೂರ್ಯ ದೇವರ ಕಿರಣಗಳು ತುಳಸಿ ಗಿಡದ ಅಭಿಮುಖವಾಗಿ ಬೀಳುವಂತೆ ಶುದ್ಧ ಮಣ್ಣಿನಲ್ಲಿ ನೆಡಬೇಕು ಹಾಗೂ ಮನೆಯ ಈಶಾನ್ಯ ಭಾಗದಲ್ಲಿ ನೆಟ್ಟರೆ ಶುಭ.

ನೆಟ್ಟ ತುಳಸಿ ಗಿಡವು ಒಣಗಿದರೆ ಸಕಲ ವಿಘ್ನಗಳು ನಿವಾರಣೆಯಾಯಿತು, ಮನೆಯಲ್ಲಿ ಏನಾದರೂ ವಾಸ್ತು ದೋಷಗಳು ಇದ್ದರೆ ಅವುಗಳೆಲ್ಲಾ ಪರಿಹಾರವಾಗಿ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಯೂರಿತು ಎಂದು ಭಾವಿಸಬೇಕೇ ವಿನಃ ನೆಟ್ಟ ಗಿಡ ಒಣಗಿ ಹೋಯಿತಲ್ಲಾ ಎಂದು ಮರುಕಪಡಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಸರ್ವ ರೋಗ ನಿವಾರಿಣಿ, ಸರ್ವ ಪಾಪ ಪರಿಹಾರಿಣಿಯಾದ ತುಳಸಿ ಕಟ್ಟೆಯ ಸಮೀಪ ಪ್ರತಿನಿತ್ಯ ಮುಸ್ಸಂಜೆಯ ಹೊತ್ತು ದೀಪವಿಟ್ಟರೆ ತುಂಬಾ ಒಳಿತು ಹಾಗೂ ದುಷ್ಟ ಶಕ್ತಿಗಳನ್ನು ನಿಗ್ರಹಿಸುವ ಶಕ್ತಿ ನಾವು ದೇವಿಯ ಬಳಿ ಇಡುವ ದೀಪಕ್ಕಿದೆ.

-ಪ್ರಜ್ಞಾ ರವೀಶ್‌

ಕಾಸರಗೋಡು

 

ಟಾಪ್ ನ್ಯೂಸ್

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.