ಮಾನವೀಯತೆ ಬಲಿಯಾಗದಿರಲಿ

ಸಂಕಷ್ಟ ಕಾಲದಲ್ಲಿ ನಿಸ್ವಾರ್ಥ ಸೇವೆಯ ಮೂಲಕ ಇತರರಿಗೆ ನೆರವಾಗೋಣ...

Team Udayavani, Jul 27, 2020, 8:30 AM IST

Morality

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used.

ಎಲ್ಲೆಲ್ಲೂ ಕೊರೊನಾದ ಮಾತು. ಇದರಿಂದ ಬದುಕಿ ಬಂದವರದ್ದು ಒಂದು ಕಥೆಯಾದರೆ, ಸತ್ತವರ ಇನ್ನೊಂದು ಕಥೆ.

ಭಾರತದಲ್ಲಿ ಸಂಪ್ರದಾಯಗಳ ಆಚರಣೆ ತುಸು ಹೆಚ್ಚು. ಹುಟ್ಟಿನಿಂದ ಹಿಡಿದು ಸಮಾಧಿ ಆಗುವವರೆಗೂ ಕೂಡ ಅನೇಕ ಧಾರ್ಮಿಕ ವಿಧಿವಿಧಾನಗಳನ್ನು ಮಾಡುತ್ತೇವೆ. ಆ ಕಾರ್ಯಗಳನ್ನು ಕ್ರಮಬದ್ಧವಾಗಿ ಮಾಡಿದರೆ ಸತ್ತವರು ಸ್ವರ್ಗಸ್ಥರಾಗುತ್ತಾರೆ ಎಂಬ ನಂಬಿಕೆ.

ಕೊರೊನಾದಿಂದ ಬಲಿಯಾದವರಿಗೆ ಯಾವ ಕಾರ್ಯವೂ ಇಲ್ಲ, ವೈಕುಂಠ ಸಮಾರಾಧನೆಯೂ ಇಲ್ಲ. ಕೇವಲ ಇಪ್ಪತ್ತು ಜನರಿಗೆ ಮಾತ್ರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಅವಕಾಶ. ಹಾಗಿದ್ದರೆ, ಕೊರೊನಾಕ್ಕೆ ಬಲಿಯಾದವರ ಆತ್ಮಕ್ಕೆ ಶಾಂತಿ ಸಿಗದೆ, ಪ್ರೇತಗಳಾಗಿ ನಮ್ಮ ಸುತ್ತ ಸುತ್ತುತ್ತಿರಬೇಕಿತ್ತು.

ಇನ್ನೂ ಹೀನಾಯ ಸ್ಥಿತಿ ಎಂದರೆ, ಕೊರೊನಾದಿಂದಾಗಿ ಸತ್ತವರ ದೇಹವನ್ನು, ನಮ್ಮ ಊರಿಗೆ ತರಬೇಡಿ, ಈ ಜಾಗದಲ್ಲಿ ಅಂತ್ಯಕ್ರಿಯೆ ಮಾಡಬೇಡಿ ಎಂದು ತಡೆಗೋಡೆ ಹಾಕುತ್ತಿದ್ದಾರೆ. ಚೆನ್ನೈಯಲ್ಲೊಂದು ಶೋಚನೀಯ ಘಟನೆ ನಡೆದಿದೆ. ವೈದ್ಯರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ, ತಾವು ಆ ವೈರಸ್‌ಗೆ ತುತ್ತಾಗುತ್ತಾರೆ. ಅವರ ಮೃತದೇಹವನ್ನು ತಮ್ಮ ಊರಿನಲ್ಲಿ ಅಂತ್ಯಕ್ರಿಯೆ ಮಾಡಲು ಬಿಡಲಿಲ್ಲ. ಬರೀ ಚಪ್ಪಾಳೆ ಹೊಡೆದು ಗೌರವ ಸಲ್ಲಿಸಿದರೆ ಸಾಲದು, ತಮ್ಮ ಜೀವಕ್ಕೆ ಕುತ್ತು ಎಂದು ತಿಳಿದಿದ್ದರೂ ಬೇರೆಯವರ ಜೀವಕ್ಕೆ ಬೆಲೆ ಕೊಟ್ಟು ಸೇವೆ ಮಾಡುತ್ತಿರುವವರ ಬಗ್ಗೆ ಮನದಲ್ಲಿಯೂ ಗೌರವವಿರಬೇಕು.

ಇಲ್ಲವಾದಲ್ಲಿ ಅವರ ನಿಸ್ವಾರ್ಥ ಸೇವೆಯ ಬದುಕಿಗೆ ಬೆಲೆಯೇ ಇಲ್ಲದಂತಾಗುತ್ತದೆ. ಮಾನವೀಯತೆ ಮರೆತು ಸ್ವಾರ್ಥರಾಗುತ್ತಿದ್ದಾರೆ. ಹುಟ್ಟಿದಾಗಿನಿಂದ ನಾನು ನನ್ನದು ಎಂದು ತನ್ನವರ ಜತೆ ಗೂಡಿನಲ್ಲಿ ಬದುಕುವ ಮನುಷ್ಯ, ಕೊರೊನಾಕ್ಕೆ ಒಳಗಾಗಿ, 14 ದಿನ ಅಜ್ಞಾತವಾಸ ಅನುಭವಿಸಿ, ತನ್ನವರನ್ನೂ ಕಾಣದೆ, ಯಾರೋ ಹೊತ್ತು ಮಣ್ಣು ಸೇರಿಸುತ್ತಿದ್ದಾರೆ. ಜೀವನದುದ್ದಕ್ಕೂ ಕೂಡಿಟ್ಟ ಹಣ ಯಾವ ಸಹಾಯಕ್ಕೂ ಬರಲಿಲ್ಲ! ಕೊರೊನಾದ ಎದುರು ಹಣದ ಬಲವೂ ಸ್ತಬ್ಧ. ಕೊರೊನಾ ಮಾನವನನ್ನು ಬಲಿ ತೆಗೆದುಕೊಳ್ಳುವುದರ ಜತೆಗೆ ಮಾನವೀಯತೆಯನ್ನೂ ಬಲಿ ತೆಗೆದುಕೊಳ್ಳದಿರಲಿ.

ಡಿವಿಜಿ ಅವರ ಈ ಮಾತು ಎಂದಿಗೂ ಪ್ರಸ್ತುತ
ಮರಣದಿಂ ಮುಂದೇನು? ಪ್ರೇತವೋ? ಭೂತವೋ? |
ಪರಲೋಕವೋ? ಪುನರ್ಜನ್ಮವೋ? ಅದೇನೋ! ||
ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ |
ಧರೆಯ ಬಾಳ್ಗದರಿನೇಂ?- ಮಂಕುತಿಮ್ಮ ||

ಮೇದಿನಿ ಎಚ್‌.ಆರ್‌., ವಿಶ್ವವಿದ್ಯಾನಿಲಯ, ಮೈಸೂರು

 

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.