UV Fusion: ಅವಳು


Team Udayavani, Mar 22, 2024, 3:32 PM IST

8-uv-fusion

ಸಮಾಜದ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಹೆಣ್ಣು ಸಮಾಜದ ಕಣ್ಣು. ಮಮತೆಗೆ ತಾಯಿಯಾಗಿ, ಅಕ್ಕರೆಗೆ ಅಕ್ಕನಾಗಿ, ಪ್ರೀತಿಗೆ ಮಡದಿಯಾಗಿ, ಗೆಳತಿಯಾಗಿ ಹೀಗೆ ಬದುಕಿನುದ್ದಕ್ಕೂ ಒಂದೆಲ್ಲಾ ಒಂದು ಪಾತ್ರದಲ್ಲಿ ಇದ್ದೇ ಇರುತ್ತಾಳೆ. ಹೆಣ್ಣು ಆಟದ ವಸ್ತು ಅಲ್ಲ ಅವಳಿಗೂ ಭಾವನೆಗಳಿವೆ ಆಸೆಗಳಿವೆ ಸಂಸಾರವೆಂಬ ಸಾಗರದಲ್ಲಿ ಅವಳು ತನ್ನ ಅಂತರಂಗದ ಭಾವನೆಗಳೆಲ್ಲವನ್ನೂ ಕೊಲ್ಲುತ್ತಿದ್ದಾಳೆ.

ಆದರೆ ಆ ಹೆಣ್ಣಿನ ಮನಸ್ಸನ್ನು ಅರಿತವರ್ಯಾರು? ಅವಳ ಅಂತರಂಗವನ್ನು ಅರಿಯದೆ ಅವಳ ಬಹಿರಂಗ ಸೌಂದರ್ಯವನ್ನು ವರ್ಣಿಸುವ ಸಮಾಜದ ಮನಸ್ಥಿತಿ ಬದಲಾಗಬೇಕಿದೆ. ಒಂದು ಹೆಣ್ಣಿನ ಮೇಲೆ ಗಂಡಿಗಿರುವ ಮನಸ್ಥಿತಿ ಬದಲಾಗದ ಹೊರತು ನಮ್ಮ ಸಮಾಜದ ಪರಿಸ್ಥಿತಿ ಬದಲಾಗದು.

ಹುಡುಗರು ವಯಸ್ಸಿಗೆ ಬರುತ್ತಿದ್ದಂತೆ ಕೆಲವೊಂದು ಕಟ್ಟುಪಾಡುಗಳನ್ನು ಹೇರುತ್ತಾರೆ. ಹೆಚ್ಚಾಗಿ ಹೆಂಗಸರೊಂದಿಗೆ ಮಾತನಾಡಬಾರದು, ಅಮ್ಮನ್ನೊಂದಿಗೆ ಮಲಗಬಾರದು, ಪ್ರತ್ಯೇಕವಾಗಿ ಇರಬೇಕು ಹೀಗೆ ಹತ್ತಾರು ನಿಯಮಗಳು. ಆದರೆ, ವಾಸ್ತವದಲ್ಲಿ ಬೆಳವಣಿಗೆ ಆಗಿರುವುದು ದೈಹಿಕ ಸ್ಥಿತಿಯಲ್ಲಿ ಹೊರತು ಬೌದ್ಧಿಕ ಸ್ಥಿತಿಯಲ್ಲ. ಈ ರೀತಿ ನಿಯಮ ಹೇರಿಬಿಟ್ಟಿರೆ ಹೇಗೆ ?

ಮಗಳ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ತಂದೆ ಅರ್ಥ ಮಾಡಿಕೊಳ್ಳಬೇಕು, ತಾಯಿ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಮಗ ಅರ್ಥ ಮಾಡಿಕೊಳ್ಳಬೇಕು, ಹೆಂಡತಿ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಗಂಡ ಅರ್ಥ ಮಾಡಿಕೊಳ್ಳಬೇಕು, ಸೊಸೆ ರೂಪದಲ್ಲಿರುವ ಹೆಣ್ಣಿನ ಭಾವನೆಗಳನ್ನು ಮಾವ ಅರ್ಥ ಮಾಡಿಕೊಳ್ಳಬೇಕು, ಹೆಣ್ಣಿನ ಜೀವನದ ಪ್ರತಿ ಹಂತದ ಭಾವನೆಗಳನ್ನು ಅರ್ಥ ಮಾಡಿಕೊಂಡಾಗ ಮಾತ್ರ ಪುರುಷನ ಬದುಕಿಗೆ ಒಂದು ಅರ್ಥ.

ಮೊದಲಿನಿಂದಲೂ ವಿಭಿನ್ನ ಕಾರ್ಯಕ್ರಮದ ಮೂಲಕ ಗುರುತಿಸಿಕೊಂಡಿದೆ ನಮ್ಮ ಕಾಲೇಜು. ನಮ್ಮಲ್ಲಿ ಯಾವ್ರದೇ ಕಾರ್ಯಕ್ರಮ ಕೇವಲ ಆಡಂಭರದ, ಹೊಗಳಿಕೆಯ, ನೆಪ ಮಾತ್ರದ ಆಚರಣೆಯಾಗದೆ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಮುಟ್ಟಬೇಕು ಎನ್ನುವ ದಿಟ್ಟ ಮತ್ತು ಸ್ವಷ್ಟ ನಿಲುವು ನಮ್ಮದು.

ಮಹಿಳಾ ದಿನಾಚರಣೆ ಕಾರ್ಯಕ್ರಮ ಎಂದರೆ ಕೇವಲ ಮಾತಿಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿಯೂ ಒಂದು ಭಿನ್ನತೆ ಇದೆ. ಒಂದಿಷ್ಟು ಸ್ಪರ್ಧೆಗಳ ಮೂಲಕ ಮಹಿಳಾ ದಿನಾಚರಣೆ ವಿಶೇಷವಾಗಿ ಇತ್ತು. ಮಹಿಳಾ ದಿನಾಚರಣೆ ಅಂಗವಾಗಿ ಅವಳು ಎನ್ನುವ ವಿಷಯದ ಭಾಷಣ ಸ್ಪರ್ಧೆಯನ್ನು ಕೇವಲ ಗಂಡು ಮಕ್ಕಳಿಗೆ ಮಾತ್ರ ಏರ್ಪಡಿಸಲಾಗಿತ್ತು. ಕಾರಣವೇನೆಂದರೆ ಸಮಾಜದಲ್ಲಿ ಹೆಣ್ಣಿನ ಸಮಸ್ಯೆ ಹೆಣ್ಣಿಗೆ ಅರಿವಿದೆ. ಆದರೆ ಗಂಡಿಗೂ ಹೆಣ್ಣಿನ ಮನಸ್ಥಿತಿ ಅರಿಯಬೇಕು  ಎನ್ನುವ ಉದ್ದೇಶವಿತ್ತು. ಇನ್ನು ಅವಳು ವಿಷಯದ ಕುರಿತು ರಂಗೋಲಿ ಸ್ಪರ್ಧೆಯು ಬಹಳ ಉತ್ತಮವಾಗಿ ಮೂಡಿ ಬಂದಿದೆ. ಅವಳು ಬಿಂದುವಿನ ಮೂಲಕ ಬಣ್ಣ ಬಣ್ಣಗಳ ಚಿತ್ರಗಳ ರಂಗೋಲಿ ಅಲ್ಲಿ ಮೂಡಿ ಬಂದಿದ್ದಾಳೆ. ಇನ್ನೊಂದು ವಿಶೇಷ ಸ್ಪರ್ಧೆ ನೀ ನಾಯಕಿ ಎನ್ನುವ ಕುರಿತು ವಿಡಿಯೋ ಮೇಕಿಂಗ್‌ ಸ್ಪರ್ಧೆ.

ಸುಮಾರು 20 ತಂಡಗಳು ಭಾಗವಹಿಸಿದ್ದವು. ದೃಶ್ಯಗಳಲ್ಲಿ ಸೆರೆಹಿಡಿದ ತುಣುಕು ನೀ ನಾಯಕಿ ಎನ್ನುವ ಸಂದೇಶವನ್ನು ಚಿತ್ರದಲ್ಲಿ ಮಾತ್ರವಲ್ಲದೇ ಬದುಕಿನಲ್ಲಿ ವ್ಯಕ್ತವಾಗಿದೆ ಎನ್ನುವುದು ನನ್ನ ಭಾವನೆ. ಅಲ್ಲದೇ ಕಾಲೇಜಿನಲ್ಲಿ ಕ್ರೀಡೆ, ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಸಮ್ಮಾನಿಸಲಾಯಿತು.

ಕಾಲೇಜೊಂದರಲ್ಲಿ ಮಹಿಳಾ ದಿನಾಚರಣೆಯನ್ನು ಹೀಗೂ ಆಚರಿಸಬಹುದು ಎಂದು ಸಾಬೀತುಪಡಿಸಿದೆ ನಮ್ಮ ಕಾಲೇಜು. ಇಡೀ ಕಾರ್ಯಕ್ರಮದ ಉದ್ದೇಶ ಇಷ್ಟೇ, ಹೆಣ್ಣಿನ ಜೀವನದ ಭಾವನೆಗಳನ್ನು ಪುರುಷ ಅರ್ಥ ಮಾಡಿಕೊಳ್ಳಬೇಕೆಂದು.

- ಸುಜಯ್‌ ಶೆಟ್ಟಿ

ಡಾ| ಬಿ.ಬಿ. ಹೆಗ್ಡೆ ಫ‌ಸ್ಟ್‌ ಗ್ರೇಡ್‌ ಕಾಲೇಜು

ಟಾಪ್ ನ್ಯೂಸ್

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.