PG: ವಾರಂಗಲ್‌ ಬಫೆಟ್‌, ಜ್ಞಾನೋದಯ ಹಾಗೂ 1/3


Team Udayavani, Feb 21, 2024, 1:19 PM IST

13-uv-fusion

ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುವ ಅದೆಷ್ಟೋ ಯುವಕರಿಗೆ ಪಿಜಿ (ಪೇಯಿಂಗ್‌ ಗೆಸ್ಟ್‌)ಯೇ ಆಧಾರ. ನಾನಿದಿದ್ದು ಬಹಳ ಜಾತ್ಯಾತೀತ ಪಿಜಿ. ಮಾಲಕರ ಪತ್ನಿ ಮಾಲಕರು ಬೇರೆ ಬೇರೆ ಧರ್ಮದವರು ಹಾಗಾಗಿ ಗೋಡೆಯಲ್ಲಿ ಎಲ್ಲ ದೇವರುಗಳು ವಿಜೃಂಭಿಸುತ್ತಾರೆ. ಎದುರು ಒಂದು ವಿಶಾಲವಾದ ಕೆರೆ. ಚಿಕನ್‌ ಇಲ್ಲದ ಚಿಕನ್‌ ಸಾರು, ಪನ್ನೀರ್‌ ಇಲ್ಲದ ಪನ್ನೀರ್‌ಸಾರು ನಮ್ಮ ಪಿಜಿಯ ವಿಶೇಷತೆ.

ನನ್ನ ಕೊಠಡಿಯಲ್ಲಿ 3 ಬೆಡ್‌ಗಳು. 3ನೇ ವ್ಯಕ್ತಿ ಯಾವಾಗಲೂ ತೆಲುಗಿನವರು ಆಗಿರುತ್ತಿದ್ದರು. ಒಬ್ಬರು ಬಿಟ್ಟು ಹೋದರು ಹೊಸದಾಗಿ ಬರುವ ವ್ಯಕ್ತಿ ಕೂಡ ಆಂಧ್ರದವರೇ ಆಗಿರುತ್ತಿದ್ದರು. ಬಹುಶಃ ಇದು ಬೆಂಗಳೂರಿನ 1/3ರಷ್ಟು ಜನಸಂಖ್ಯೆ ತೆಲುಗಿನವರೇ ಎನ್ನುವುದರ ಸೂಚಕವೋ? ಗೊತ್ತಿಲ್ಲ. ಅದರಲ್ಲಿ ಒಬ್ಬ ಗೆಳೆಯ ವಾರಂಗಲ್‌ ಕಡೆಯವನು. ಯಾವಾಗಲೂ ಹೂಡಿಕೆ, ವ್ಯವಹಾರ, ಸ್ಟಾರ್ಟ್‌ ಅಪ್‌, ಬಿಸಿನೆಸ್‌ ಮೀಟ್‌ ಮುಂತಾದ ವಿಷಯಗಳನ್ನೇ ಮಾತನಾಡುವವನು. ಹಾಗಾಗಿ ಅವನಿಗೆ “ವಾರಂಗಲ್‌ ಬಫೆಟ್‌’ ಎಂದು ನಾನು ನಾಮಕರಣ ಮಾಡಿದ್ದೇ. ಇನ್ನೊಬ್ಬರು ಸಂಗೀತದಲ್ಲಿ ಆಸಕ್ತಿ ಉಳ್ಳವರು. ಮಧ್ಯರಾತ್ರಿಯವರೆಗೂ ನಡೆಯುವ ನಮ್ಮ ಮಾತುಕತೆಗಳ ಪ್ರಮುಖ ಆರೋಪಿಗಳು “ಐಟಿ ಮ್ಯಾನೇಜರ್‌ಗಳೇ.’ ಬಹುಶಃ ಈ ಐಟಿ ಮ್ಯಾನೇಜರ್‌ಗಳು ಸಮಾನತೆಯ ಹರಿಕಾರರು, ಅಸಮಾನತೆಯ ವಿಷಯದಲ್ಲಿ. ಕಚೇರಿಯಲ್ಲಿ ಗೆಳೆಯನಿಗೆ ನೀಡಿದ ಹಣ ಬರದೇ ಬೇಜಾರಿನಲ್ಲಿದ್ದಾಗ, ಕೇಳಲು ಮುಜುಗರ ಎಂದಾಗ ಗೆಳೆಯ ಸೂಚಿಸಿದ ಪರಿಹಾರ ಭಗವದ್ಗೀತೆ ಓದು ಎನ್ನುವುದು. ನಾನು ಇವನು ಭಗವದ್ಗೀತೆಗಿಂತಲೂ ದೊಡ್ಡ ಜ್ಞಾನೋದಯ ನೀಡಿದ ಎಂದು ಮಧ್ಯರಾತ್ರಿ 2ಕ್ಕೆ ನಕ್ಕಿದ್ದು ಇನ್ನೂ ನೆನಪು.

ಬೆಂಗಳೂರಿನ ಒಂದು ಪಿಜಿ ಎನ್ನುವುದು ವಿವಿಧತೆಯಲ್ಲಿ ಏಕತೆಯಾಗಿರುವ ಭಾರತದ ಪ್ರತಿನಿಧಿ, ಪ್ರತೀಕ. ಇಲ್ಲಿ ಎಲ್ಲ ರಾಜ್ಯದ ಜನರು ಕಾಣ ಸಿಗುತ್ತಾರೆ. ಎಲ್ಲ ಹವ್ಯಾಸದ ಜನರು ಗಿಟಾರ್‌, ಹಾರ್ಮೋನಿಯಂ, ಫಿಟ್ನೆಸ್‌ ಫ್ರೀಕ್‌, ಮದ್ಯದ ಅಮಾಲಿನವರು, ಸಿನೆಮಾ ರಸಿಕರು, ರಾಜಕೀಯ-ಕ್ರೀಡಾ ವಿಶ್ಲೇಷಕರು, ಸ್ಥಳೀಯ ಸುದ್ದಿ ವರದಿಗಾರರು. ಊಟದ ಸಮಯದಲ್ಲಿ ನಡೆಯುವ ನಮ್ಮ ಚರ್ಚೆಗಳು ಯಾವ ಟಿವಿ ಡಿಬೇಟ್‌ಗೂ ಕಮ್ಮಿ ಇಲ್ಲ. ಪಿಜಿ ಎಂದರೆ ಪೆಯಿಂಗ್‌ ಗೆಸ್ಟ್‌ ಮಾತ್ರವಲ್ಲ, ಪ್ಯೂರ್‌ ಗಾಸಿಪ್‌ ಕೂಡ ಹೌದು.

21 ವರ್ಷದ ವಿದ್ಯಾರ್ಥಿ ಜೀವನದಲ್ಲಿ ಕಾಣದಂತಹ ವೈವಿಧ್ಯಮಯ ವ್ಯಕ್ತಿತ್ವಗಳು 6 ತಿಂಗಳ ಪಿಜಿ ಅನುಭವದಲ್ಲಿ ಕಾಣಬಹುದು ಎಂದರೆ ಅತಿಶಯೋಕ್ತಿಯಾಗಲಾರದು. ಹೊಸ ಹೊಸ ಸ್ನೇಹಿತರನ್ನು ನೀಡಿ ಒಂದೇ ಮನೆಯ ನಿವಾಸಿಗಳಂತೆ ಭಾವನೆ ನೀಡಿದ್ದು ಸತ್ಯ, ಪಿಜಿ ನೀ ಧನ್ಯ.

-ಪ್ರಖ್ಯಾತ್‌

ಕೆಂಚನೂರು

ಟಾಪ್ ನ್ಯೂಸ್

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

Hassan ವೀಡಿಯೋ ಪ್ರಕರಣ ಎಸ್‌ಐಟಿ ತನಿಖೆಗೆ

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

Hassan ವೀಡಿಯೋ ಪ್ರಕರಣ ಎಸ್‌ಐಟಿ ತನಿಖೆಗೆ

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.