ದುಬೈನಿಂದ ಬಂದ ಅನಿವಾಸಿ ಭಾರತೀಯರನ್ನು ನಿರ್ಲಕ್ಷ್ಯ ಮಾಡಿದ ಆರೋಪ; D.K DC ಸ್ಪಷ್ಟನೆ
Team Udayavani, May 13, 2020, 9:39 PM IST
ಮಂಗಳೂರು: ದುಬೈನಿಂದ ಬಂದ ಅನಿವಾಸಿ ಭಾರತೀಯರನ್ನು ನಿರ್ಲಕ್ಷ್ಯ ಮಾಡಿದ ಆರೋಪ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಸ್ಪಷ್ಟನೆ. ಸರ್ಕಾರದ ನಿಯಮದ ಪ್ರಕಾರ ಕ್ರಮ ಕೈಗೊಂಡಿದ್ದೇವೆ, ಹೊಟೇಲ್ ಗಳನ್ನು ಪ್ರಯಾಣಿಕರೇ ಆಯ್ಕೆ ಮಾಡಿದ್ದಾರೆ, ಹೊಟೇಲ್ ಗಳ ರೇಟ್ ಗಳನ್ನು ಮೊದಲೇ ಎಲ್ಲಾ ಪ್ರಯಾಣಿಕರಿಗೂ ಮಾಹಿತಿ ನೀಡಿದ್ದೇವೆ, ನಿನ್ನೆಯ ವಿಮಾನದಲ್ಲಿ 40 ಮಂದಿ ಗರ್ಭಿಣಿಯರಿದ್ದರು, ನಿನ್ನೆ ರಾತ್ರಿ ಮತ್ತು ಇವತ್ತು ಬೆಳಗ್ಗೆಯೂ ಎಲ್ಲರ ಆರೋಗ್ಯ ತಪಾಸಣೆ ಮಾಡಲಾಗಿದೆ ಸರ್ಕಾರ ಅನಿವಾಸಿ ಭಾರತೀಯ ರ ವಿಚಾರ ನಿಯಮ ಸಡಿಲಿಕೆ ಮಾಡಿದೆ, ಗರ್ಭಿಣಿ, ಮಕ್ಕಳು,ಮಹಿಳೆಯರು,ವೃದ್ಧರಿಗೆ ರಿಯಾಯಿತಿ ನೀಡಲಾಗಿದೆ. ಸ್ವಾಬ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದರೆ ಅವರನ್ನು ಹೋಮ್ ಕ್ವಾರೆಂಟೈನ್ ಗೆ ಕಳುಹಿಸಲಾಗುತ್ತದೆ, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಸ್ಪಷ್ಟನೆ.