ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆಗೆ ಔಷಧಿಗಾಗಿ ಬಂದಲ್ಲಿ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿ
Team Udayavani, Apr 22, 2020, 7:45 PM IST
ಬಜಪೆ : ಬಜಪೆ ಪ್ರಾಥಮಿಕ ಆರೋಗ್ಯ ಸಹಾಯಕಿಯರು,ಆಶಾ ಕಾರ್ಯಕರ್ತೆಯರು ಬುಧವಾರದಂದು ವ್ಯಾಪ್ತಿಯ ಎಲ್ಲಾ ಮೆಡಿಕಲ್ ಸ್ಟೋರ್ ಗಳಿಗೆ ಹಾಗೂ ಖಾಸಗಿ ವೈದ್ಯರಲ್ಲಿ ಗೆ ತೆರಳಿ ಜ್ವರ,ಕೆಮ್ಮು,ನೆಗಡಿ,ಶೀತ ಔಷಧ ಹಾಗೂ ಮಾತ್ರೆಗಳನ್ನು ಪಡೆಯುವವರ ಹೆಸರು,ವಿಳಾಸ,ಮೊಬೆೈಲ್ ನಂಬರ್ ಸಂಗ್ರಹಿಸಿ,ಈ ಬಗ್ಗೆ ಆರೋಗ್ಯಾಧಿಕಾರಿ ತಿಳಿಸುವಂತೆ ಮನವಿ ಮಾಡಿದರು.ಬಜಪೆ ಪೊಲೀಸ್ ಇನ್ಸ್ಪೆಕ್ಟರ್ ಕೆ.ಆರ್.ನಾಯ್ಕ ದಾರಿಯಲ್ಲಿ ಉಗುಳದಂತೆ ಹಾಗೂ ಅನಾವಶ್ಯಕವಾಗಿ ವಾಹನಗಳಲ್ಲಿ ತಿರುಗುದಂತೆ ಧ್ವನಿ ವರ್ಧಕ ಮೂಲಕ ಸೂಚನೆ ನೀಡಿದರು.