ಕರಾವಳಿ ಉತ್ಸವ-2020
Team Udayavani, Jan 11, 2020, 6:49 PM IST
ಮಂಗಳೂರು : ಕರಾವಳಿ ಉತ್ಸವದ ಮೂಲಕ ಸಮಗ್ರ ಕರ್ನಾಟಕದ ಕಲೆ, ಸಂಸ್ಕೃತಿಯ ಉದ್ದೀಪನಕ್ಕೆ ವಿಶೇಷ ಪ್ರೋತ್ಸಾಹ ಸಿಗುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚಿತ್ರನಟ ರಿಷಬ್ ಶೆಟ್ಟಿ ಅಭಿಪ್ರಾಯಪಟ್ಟರು.
ದ.ಕ. ಜಿಲ್ಲಾಡಳಿತದ ನೇತೃತ್ವದಲ್ಲಿ ಶುಕ್ರವಾರದಿಂದ ಜ. 19ರ ವರೆಗೆ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಆಯೋಜಿಸಲಾಗಿರುವ “ಕರಾವಳಿ ಉತ್ಸವ’ವನ್ನು ಅವರು ಉದ್ಘಾಟಿಸಿದರು. ಭಾಷೆ ಸಂವಹನಕ್ಕೆ ವೇದಿಕೆ. ಮಾತೃಭಾಷೆಯಲ್ಲಿ ಕಲೆ, ಸಂಸ್ಕೃತಿ, ನಮ್ಮ ನಾಡು, ನುಡಿ, ಜಲ ಎಲ್ಲವೂ ಬೆರೆತುಕೊಂಡಿರುತ್ತದೆ. ಹೀಗಾಗಿ ತಾಯಿ ಭಾಷೆಯ ಮೇಲಿನ ಪ್ರೀತಿ ಅನನ್ಯ. ತುಳುನಾಡಿನಲ್ಲಿ ಈ ಕುರಿತಂತೆ ವಿಶೇಷ ಒಲವು ಇರುವುದು ಶ್ಲಾಘನೀಯ ಎಂದರು.
ವಸ್ತು ಪ್ರದರ್ಶನ ಉದ್ಘಾಟಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕರಾವಳಿಯ ಜಾನಪದ ಸೊಗಡನ್ನು ಅತ್ಯಂತ ಪ್ರೀತಿಯಿಂದ ಪಾಲಿಸಿಕೊಂಡು ಬಂದಿರುವುದು ಈ ನಾಡಿನ ವಿಶೇಷತೆ. ದೇವಾಲಯಗಳ ನಾಡು ಎಂದೇ ಕರಾವಳಿಯನ್ನು ಪರಿಗಣಿಸಲಾಗುತ್ತದೆ. ಹೀಗಾಗಿ ಕರಾವಳಿಯ ಸಂಭ್ರಮಕ್ಕೆ ಕರಾವಳಿ ಉತ್ಸವವು ಅನನ್ಯ ಅನುಭವ ನೀಡುತ್ತದೆ ಎಂದರು.
ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್, ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಸ. ಆಯುಕ್ತ ಮದನ್ ಮೋಹನ್, ಮುಜರಾಯಿ ಆಯುಕ್ತ ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸ್ವಾಗತಿಸಿದರು. ಅಪರ ಡಿಸಿ ಎಂ.ಜೆ. ರೂಪಾ ವಂದಿಸಿದರು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ