ಸೇಡಂ: ಮರಳು ತರಲೆಂದು ನದಿಗೆ ಇಳಿದು, ಪ್ರವಾಹದಲ್ಲಿ ಸಿಲುಕಿದ್ದ ಎಂಟು ಜನರ ರಕ್ಷಣೆ
Team Udayavani, Jul 3, 2020, 2:50 PM IST
ಕಲಬುರಗಿ: ತುಂಬಿ ಹರಿದ ಕಾಗಿಣಾ ನದಿಯಲ್ಲಿ ಸಿಲುಕಿದ್ದ ಎಂಟು ಜನರನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಬುಬ್ಬಳ್ಳಿ ಗ್ರಾಮದ ಸಮೀಪ ಶುಕ್ರವಾರ ನಡೆದಿದೆ.
ಇಂದು ಬೆಳಿಗ್ಗೆ ಮರಳು ತರಲೆಂದು ಗ್ರಾಮದ ಎಂಟು ಜನರು ನದಿಗೆ ಇಳಿದಿದ್ದರು. ಆದರೆ, ಮಳೆ ನೀರು ದಿಢೀರನೆ ನದಿಗೆ ಹರಿದು ಬಂದಿದ್ದು, ನದಿಯಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಇದರಿಂದ ಮರಳು ತರಲು ಇಳಿದವರು ನದಿ ಮಧ್ಯದಲ್ಲಿ ದಿಕ್ಕು ತೋಚದ ಸ್ಥಿತಿಗೆ ಸಿಲುಕಿದ್ದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿ ಸೇಡಂ ಠಾಣೆಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಎಂಟು ಜನರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.